/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ಮಕ್ಕಳ ವಿದ್ಯಾಭ್ಯಾಸ, ಪ್ರಗತಿ ನಿಮ್ಮ ಮನಸ್ಸಿಗೆ ಸಮಾಧಾನ ನೀಡುವ ದಿನ
- ಈ ದಿನ ನಿಮ್ಮ ಗುರಿಯನ್ನು ತಲುಪುತ್ತೇನೆಂಬ ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳಿ
- ಈ ದಿವಸ ಎಚ್ಚರಿಕೆಯಿಂದ ಹೆಜ್ಜೆಗಳನ್ನಿಟ್ಟರೆ ಒಳ್ಳೆಯದು
- ಇಂದು ಅಪರಾಧ,ಆತಂಕ,ಅನಾಹುತ,ಸೋಲುಗಳಿಗೆ ನೀವು ಕಾರಣೀಭೂತರಾಗಬೇಡಿ
- ಮಕ್ಕಳ ಭವಿಷ್ಯಕ್ಕೋಸ್ಕರ ನೀವು ಅನಿವಾರ್ಯವಾಗಿ ಕೆಲಸವನ್ನು ಮಾಡಲೆಬೇಕಾಗುವ ದಿನ
- ನಿಮ್ಮ ಪ್ರಯತ್ನ ಕಾರ್ಯ ವಿಳಂಬದಲ್ಲೇ ಕೂಡಿರುತ್ತದೆ
- ತ್ರಿಶಕ್ತಿ ಲಕ್ಷ್ಯಾಂಬ ದೇವಿಯನ್ನು ಆರಾಧಿಸಿ
ವೃಷಭ
- ತಂದೆಯವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು
- ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದವರು ಮುಂದುವರೆಸಿದರೆ ಒಳ್ಳೆಯದು
- ನೀವು ಬೇರೆಯವರಿಗೆ ಕೊಟ್ಟ ಹಣ ವಾಪಸ್ಸು ಬರುವುದಿಲ್ಲ
- ಉತ್ಪಾದಿಸಿ ಮಾರಾಟ ಮಾಡುವ ವಸ್ತುಗಳಿಗೆ ಬೆಲೆ ಕುಸಿತದ ಭೀತಿ ಕಾಡಬಹುದು
- ಮುಖ್ಯಾ ಸರಸ್ವತಿಯನ್ನು ಆರಾಧನೆ ಮಾಡಿ
ಮಿಥುನ
- ರಾಜಕೀಯ ವ್ಯಕ್ತಿಗಳಿಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ
- ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ ಶುಭದಿನವಾಗಿದೆ
- ಇಂದು ಯಂತ್ರಗಳನ್ನು, ವಾಹನಗಳನ್ನು ಖರೀದಿಸುವ ಯೋಗವಿದೆ
- ಮೇಲಾಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ ಕಷ್ಟವನ್ನು ಎದುರಿಸುತ್ತೀರಿ
- ನಿಮ್ಮ ಕ್ಷೇತ್ರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ
- ರಮಾವಿದ್ಯಾ ಮಂತ್ರವನ್ನು ಪಠಿಸಿ
ಕಟಕ
- ಹೊಸ ಖರೀದಿಗೆ ತೀರ್ಮಾನ ಮಾಡುವ ದಿನವಾಗಿದೆ
- ಮಧ್ಯವರ್ತಿಗಳಿಗೆ ಬೇಡಿಕೆ ಹೆಚ್ಚಾಗಿ ಲಾಭವೂ ಉಂಟಾಗುತ್ತದೆ
- ಸಾಧನೆ ಮಾಡುತ್ತೇನೆಂಬ ಹುಮ್ಮಸ್ಸು ನಿಮಗೆ ಹಿನ್ನಡೆಯಾಗಬಹುದು ಎಚ್ಚರಿಕೆವಹಿಸಿ
- ನಿಮಗಾಗುವ ಅನುಕೂಲದಲ್ಲಿ ತಾರತಮ್ಯ ಇದೆ ಎಂಬ ಅನುಮಾನ ಉದ್ವೇಗಕ್ಕೆ ಒಳಗಾಗಬಹುದು
- ಇಂದು ನಷ್ಟ ಆಗುವ ಸಾಧ್ಯತೆ ಇದೆ ಗಮನವಿರಲಿ
- ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಿಗುವ ಸೂಚನೆ ಇದೆ
- ಅಷ್ಟಾಕ್ಷರೀ ಮಹಾಲಕ್ಷ್ಮೀ ಧ್ಯಾನವನ್ನು ಮಾಡಿ
ಸಿಂಹ
- ಅಪರಿಚಿತ ವ್ಯಕ್ತಿಗಳ ಮೇಲೆ ಹೆಚ್ಚು ಗಮನವಿರಲಿ
- ರಹಸ್ಯ ಯೋಜನೆಗಳು ನಿಮ್ಮ ಮನಸ್ಸಿಗೆ ಬರಬಹುದು
- ಚಿತ್ರೋದ್ಯಮ, ನಾಟಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ದಿನ ಉತ್ತಮವಾಗಿದೆ
- ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಗೌರವ, ಪುರಸ್ಕಾರ ದೊರೆಯುವ ದಿನ
- ಭುವನೇಶಿಯ ಉಪಾಸನೆ ಮಾಡಿ
ಕನ್ಯಾ
- ಮಹಿಳಾ ಉದ್ಯಮಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು
- ಕುಟುಂಬದಲ್ಲಿ, ಕಾರ್ಯಕ್ಷೇತ್ರದಲ್ಲಿ ಬೇಸರ ಉಂಟಾಗುವ ದಿನ
- ಆವೇಶ, ಉದ್ವೇಗಗಳ ವರ್ತನೆ ಬೇಡ, ತಾಳ್ಮೆ ಇರಲಿ
- ರಾಜಕೀಯ ವ್ಯಕ್ತಿಗಳಿಗೆ ಹಿನ್ನಡೆ ಉಂಟಾಗಿ ಶತ್ರುಕಾಟ ಹೆಚ್ಚಾಗುವ ಸಾಧ್ಯತೆ
- ಭೂ ವ್ಯವಹಾರದಿಂದ ಶುಭ ಸುದ್ಧಿ ಸಿಗುವ ದಿನ
- ವಾಗ್ವಾದಿನೀ ಮಂತ್ರ ಶ್ರವಣ ಮಾಡಿ
ತುಲಾ
- ನಿಮ್ಮ ಶಿಸ್ತು ಬೇರೆಯವರನ್ನ ಪ್ರಭಾವಿತರನ್ನಾಗಿ ಮಾಡುತ್ತದೆ
- ಮಕ್ಕಳ ವಿಚಾರದಲ್ಲಿ ಗಮನವಿರಲಿ
- ಆಂತರಿಕವಾಗಿ ಸಣ್ಣ-ಪುಟ್ಟ ಸಮಸ್ಯೆಗಳು ಉಂಟಾಗಬಹುದು
- ಕೆಲಸದ ಹೊರೆ ಜಾಸ್ತಿಯಾಗುವ ಸಾಧ್ಯತೆ ಇದೆ
- ಇಂದು ನೀವು ಮಾಡಿರುವ ಸಾಲಗಳು ತೀರುತ್ತದೆ
- ಹೊಸ ಸಾಲ ಮಾಡಲು ಮುಂದಾಗುತ್ತೀರಿ
- ನಿಮ್ಮ ವ್ಯವಹಾರ ಶೈಲಿ ಚಿಕ್ಕವರಿಗೆ ಮಾರ್ಗದರ್ಶನವಾಗುವ ದಿನ
- ಈ ದಿನ ಜವಾಬ್ದಾರಿ ಹೆಚ್ಚಾಗುತ್ತದೆ
- ಕಾತ್ಯಾಯಿನಿ ದೇವಿಯನ್ನು ಆರಾಧನೆ ಮಾಡಿ
ವೃಶ್ಚಿಕ
- ಅಕ್ಕಪಕ್ಕದವರಿಂದ ಮಾನಸಿಕ ಕಿರಿಕಿರಿ ಉಂಟಾಗುವ ದಿನ
- ಇಂದು ನಿಮ್ಮ ಮನಸ್ಸು ಭಯದಿಂದ ಕೂಡಿರುವ ದಿನವಾಗಿರುತ್ತದೆ
- ಇದರಿಂದ ಕುಟುಂಬದವರು ಆತಂಕಕ್ಕೆ ಈಡಾಗುತ್ತಾರೆ
- ಗೃಹೋಪಕರಣವನ್ನು ಖರೀದಿಸಲು ಇಂದು ಒಳ್ಳೆಯ ದಿನ
- ಉಡುಪು ವಿನ್ಯಾಸ ಮಾಡುವವರಿಗೆ ಶುಭದಿನ
- ಕೈಗಾರಿಕೋದ್ಯಮದವರಿಗೆ ಉತ್ತಮ ದಿನ
- ಇಂದು ಕೋರ್ಟ್-ಕಚೇರಿ ವಿಚಾರಕ್ಕೆ ಅಲೆದಾಟ
- ಅನ್ನಪೂರ್ಣಾ ಕಾಮದುಘಾಂಬ ಮಂತ್ರ ಜಪ ಮಾಡಿ
ಧನುಸ್ಸು
- ವೃತ್ತಿಯಲ್ಲಿ ಪ್ರಗತಿ ಕಾಣುವ ದಿನವಾದರೂ ವಿಘ್ನಭೀತಿ ಕಾಡುವ ಸಾಧ್ಯತೆ
- ಮನೆಯಲ್ಲಿರುವ ಸ್ತ್ರೀಯರಿಗೆ ಅಶುಭದ ದಿನ
- ಹೊಸ ಬದುಕನ್ನು ಆರಂಭಿಸಲು ಶುಭದಿನ
- ದಾಂಪತ್ಯದಲ್ಲಿ, ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯಬೇಡ
- ಇಂದು ಭವಿಷ್ಯ ಉಜ್ವಲವಾಗುವ ದಿನ
- ಅಮೂಲ್ಯ ವಸ್ತಗಳನ್ನು ಖರೀದಿಸಲು ಈ ದಿನ ಶುಭದಿನ
- ಆವಹಂತೀ ಮಂತ್ರ ಪಠಿಸಿ
ಮಕರ
- ಮಕ್ಕಳಿಗೆ ಒತ್ತಡ ಹಾಕದೆ ಮಾರ್ಗದರ್ಶನ ಮಾಡಿ
- ಬಾಡಿಗೆ ಹಣ ಸಿಕ್ಕುವುದರಿಂದ ಆರ್ಥಿಕ ಅಭಿವೃಧ್ಧಿಯಿದೆ
- ನೆರೆಹೊರೆಯವರಿಂದ, ಸಹೋದ್ಯೋಗಿಗಳಿಂದ ಉತ್ತಮ ಭರವಸೆ ದೊರೆಯುವ ದಿನ
- ಪರ್ವತಾರೋಹಿಗಳಿಗೆ ಯಶಸ್ಸು ಸಿಗುವ ಶುಭದಿನ
- ಸಾಧನೆ ಮಾಡಲು ಹೊರಟವರಿಗೆ ಉತ್ತಮ ಮಾರ್ಗದರ್ಶನ ಸಿಗುವಂತ ದಿನ
- ಹಿರಿಯರ ಮಾರ್ಗದರ್ಶನದಿಂದ ಉತ್ತಮ ವ್ಯವಸ್ಥೆಯಾಗುವ ದಿನ
- ಶಕ್ತಿ ಪಂಚಾಕ್ಷರಿ ಮಂತ್ರವನ್ನು ಪಠಿಸಿ
ಕುಂಭ
- ಆರ್ಥಿಕ ಅನುಕೂಲ, ಮಿತ್ರರ ಸಹಕಾರ ನಿಮಗೆ ದೊರೆಯಲಿದೆ
- ಒತ್ತಡದಿಂದ ಮನಸ್ಸಿಗೆ ಸಮಾಧಾನವಿರುವುದಿಲ್ಲ
- ಆಹಾರ ಮತ್ತು ನಿದ್ರೆಯ ಬಗ್ಗೆ ಹೆಚ್ಚು ಗಮನಹರಿಸಿ
- ಹೂಡಿಕೆಯಲ್ಲಿ ಯಶಸ್ಸು ನಿಮ್ಮದಾಗುತ್ತದೆ
- ಸಹೋದರ-ಸಹೋದರಿಯರ ನಡುವೆ ಇರುವ ಮನಸ್ತಾಪ ದ್ವೇಷಕ್ಕೆ ತಿರುಗದಂತೆ ನೋಡಿಕೊಳ್ಳಿ
- ವ್ಯವಹಾರದಲ್ಲಿ ತುಂಬಾ ಜಾಗರೂಕರಾಗಿರಿ
- ಇಂದು ಅನಿರೀಕ್ಷಿತ ಲಾಭ ಸಿಗುತ್ತದೆ
- ಅಶ್ವಾರೂಢ ಪಾರ್ವತಿಯ ಮಂತ್ರ ಶ್ರವಣ ಮಾಡಿ
ಮೀನ
- ಆಧ್ಯಾತ್ಮಿಕ ಚಿಂತನೆ, ತತ್ವದ ಬಗ್ಗೆ ಹೆಚ್ಚು ಗಮನ ಕೊಡುವ ಅವಕಾಶಗಳಿವೆ
- ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಶುಭದಿನ
- ಕುಟುಂಬದ ಸದಸ್ಯರ ಜೊತೆ ಸಮಯವನ್ನು ಕಳೆಯಿರಿ
- ಶುಭ ಕಾರ್ಯಗಳಿಗೆ ಅತಿಯಾದ ಖರ್ಚು ಸಾಧ್ಯತೆ
- ಸಹೋದ್ಯೋಗಿಗಳು, ಸ್ನೇಹಿತರ ಜೊತೆ ಕಾಲಹರಣ ಮಾಡುವ ದಿನ
- ದೂರದ ಪ್ರಯಾಣದ ಚಿಂತನೆಯ ದಿನವಾಗಿದೆ
- ಧಾರಣಾಸರಸ್ವತಿಯನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ