/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಧನಿಷ್ಠಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ಕೆಲಸಗಾರರ ಪ್ರಾಮಾಣಿಕ ದುಡಿಮೆ, ತ್ಯಾಗದಿಂದ ಉತ್ತಮ ಲಾಭ
- ನಿಮ್ಮ ಕೆಲಸಗಾರರಿಗೆ ಅವಶ್ಯಕವಾದ ವಸ್ತುಗಳನ್ನು ನೀಡಿ ಸಂತೋಷ ಪಡಿಸಿ
- ಇಂದು ಕೆಲಸಗಾರರು ನಿಮಗೆ ಸಂಪೂರ್ಣ ಸಹಕಾರವನ್ನು ನೀಡುತ್ತಾರೆ
- ಕಬ್ಬಿಣದ ವ್ಯಾಪಾರಿಗಳಿಗೆ ತುಂಬಾ ಬೇಡಿಕೆ, ಅಧಿಕ ಲಾಭ ಸಾಧ್ಯತೆ
- ಇಂದು ಶೀತ ಸಂಬಂಧಿ ಕಾಯಿಲೆಗಳು ಕಾಡಬಹುದು
- ನಭೋ ದೇವನನ್ನು ಪ್ರಾರ್ಥಿಸಿ
ವೃಷಭ
- ಕೆಲ ದುಷ್ಟರಿಂದ ಕಿರುಕುಳ ಸಾಧ್ಯತೆ ಎಚ್ಚರ
- ವ್ಯಾಪಾರಸ್ಥರು ಪೊಲೀಸರ ವಿಚಾರಣೆಗೆ ಒಳಪಡುವ ಸಾಧ್ಯತೆ
- ಇಂದು ವಿದ್ಯಾರ್ಥಿಗಳಿಗೆ ಆತಂಕ, ಅತಿಯಾದ ನಿದ್ರೆ ಕಾಡಬಹುದು
- ರಫ್ತು ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಹಿನ್ನಡೆ, ನಷ್ಟ ಸಾಧ್ಯತೆ
- ನಿಮ್ಮ ವಸ್ತುಗಳು, ಹಣದ ಬಗ್ಗೆ ಎಚ್ಚರಿಕೆ ಇರಲಿ ಕಳುವಾಗಬಹುದು
- ಔಷಧಿ ವ್ಯಾಪಾರಸ್ಥರಿಗೆ ಶುಭ ದಿನ
- ಇಂದು ಕೆಲಸದಲ್ಲಿ ಹೆಚ್ಚು ಒತ್ತಡ ಸಾಧ್ಯತೆ
- ಕಾಮಧೇನುವನ್ನು ಸ್ಮರಿಸಿ
ಮಿಥುನ
- ಹತ್ತಿ ಮತ್ತು ತೆಂಗು ಬೆಳೆಗಾರರಿಗೆ ಅಧಿಕ ಲಾಭ ಸಾಧ್ಯತೆ
- ಇಂದು ಹಿರಿಯ ದಂಪತಿಗಳಲ್ಲಿ ವಿರಸ ಸಾಧ್ಯತೆ
- ನಿಮ್ಮ ಮಾತುಗಳಿಂದ ಸಂಬಂಧ ಮುರಿಯಬಹುದು, ಸರಿಯಾಗಿ ವ್ಯವಹರಿಸಿ
- ವಕೀಲರು, ನ್ಯಾಯಮೂರ್ತಿಗಳಿಗೆ ವಿಶೇಷವಾದ ಶುಭದಿನ
- ವಿವಾಹ ಉತ್ಸುಕರಿಗೆ ಸಿಹಿ ಸುದ್ದಿ, ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆ
- ದಿವ್ಯರೂಪವಾದ ಜ್ಯೋತಿಯನ್ನು ಪ್ರಾರ್ಥಿಸಿ
ಕಟಕ
- ಜಲ ಕಂಟಕ ಸೂಚನೆಯಿದೆ ಎಚ್ಚರಿಕೆ ಇರಲಿ
- ಇಂದು ಆಲಸ್ಯ ಬಿಟ್ಟು ಕೆಲಸ ಮಾಡಿ
- ಹೈನುಗಾರಿಕೆ ಮತ್ತು ಜಲಸಂಬಂಧಿ ವಸ್ತುಗಳ ಮಾರಾಟಗಾರರಿಗೆ ಹೆಚ್ಚು ಲಾಭ
- ತಮ್ಮ ಬಳಿಯಿರುವ ಪದಾರ್ಥಗಳಿಗೆ ಅತೀವ ಬೇಡಿಕೆ ಬರುವ ಸಾಧ್ಯತೆ
- ರಾಸಾಯನಿಕ ವಸ್ತುಗಳ ವ್ಯಾಪಾರಸ್ಥರಿಗೆ ಶುಭ ದಿನ
- ಈ ದಿನ ಅನಾರೋಗ್ಯ ಕಾಡಬಹುದು ಎಚ್ಚರ
- ಶಿಂಶುಮಾರನನ್ನು ಪ್ರಾರ್ಥಿಸಿ
ಸಿಂಹ
- ಮಿತ್ರರು, ಸಹೋದ್ಯೋಗಿಗಳ ಜೊತೆಗೆ ಔತಣ ಕೂಟಕ್ಕೆ ಹೋಗುವ ಸಾಧ್ಯತೆ
- ಇಂದು ಉನ್ನತ ಶಿಕ್ಷಣ ಕ್ಷೇತ್ರದವರಿಗೆ ಶುಭ ದಿನ
- ಕಲಾವಿದರಿಗೆ ಗೌರವ, ಸನ್ಮಾನ, ಪುರಸ್ಕಾರ ದೊರೆಯುವ ಸಾಧ್ಯತೆ
- ಸ್ತ್ರೀಯರಿಗೆ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಕಾಡಬಹುದು ಆಲಸ್ಯ ಬೇಡ
- ಇಂದು ನಿಮ್ಮ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳ್ಳೆಯದು
- ಮಹಾಲಕ್ಷ್ಮೀ ಕೈಯಲ್ಲಿರುವ ಪದ್ಮವನ್ನು ಸ್ಮರಣೆ ಮಾಡಿ
ಕನ್ಯಾ
- ಇಂದು ತೈಲ ವ್ಯಾಪಾರಿಗಳಿಗೆ ಧನಲಾಭ
- ಸಹೋದರರಲ್ಲಿ ಜಗಳ ಸಾಧ್ಯತೆ ಹೆಚ್ಚು ಗಮನವಿರಲಿ
- ವ್ಯಾಪಾರ, ವ್ಯವಹಾರಕ್ಕೆ ಶುಭ ದಿನ, ಉತ್ತಮ ಜನರ ಸಂಪರ್ಕ ಸಾಧ್ಯತೆ
- ಸಣ್ಣ ಪುಟ್ಟ ಗಾಯಗಳಾಗಬಹುದು ಎಚ್ಚರಿಕೆ ಇರಲಿ
- ಸಾಯಂಕಾಲ ಮನಸ್ಸಿಗೆ ಸ್ವಲ್ಪ ಸಮಾಧಾನ ಸಾಧ್ಯತೆ, ಸಹೋದರನನ್ನು ಕ್ಷಮಿಸಿದರೆ ಒಳಿತು
- ಹೋಟೆಲ್ ಉದ್ದಿಮೆದಾರರಿಗೆ ಸ್ವಲ್ಪ ಕಿರಿಕಿರಿ, ನಷ್ಟ ಸಾಧ್ಯತೆ
- ದಕ್ಷಿಣಾವರ್ತ ಶಂಖವನ್ನು ಪ್ರಾರ್ಥನೆ ಮಾಡಿ
ತುಲಾ
- ಸಂಶೋಧನಾ ವಿಚಾರದಲ್ಲಿ ಮನಸ್ಸು ಸ್ಥಿರ ಸಾಧ್ಯತೆ
- ಸಾಧಾರಣ ಆರ್ಥಿಕ ಅಭಿವೃದ್ಧಿ, ಕೆಲಸ ಕಾರ್ಯಗಳಲ್ಲಿ ಚಂಚಲ ಮನಸ್ಸು
- ಇಂದು ತುಂಬಾ ಓಡಾಟ ಸಾಧ್ಯತೆ, ಆದಷ್ಟು ಮೌನವಾಗಿರುವುದು ಉತ್ತಮ
- ಜ್ಞಾನಿಗಳು, ಅನುಭವಿಗಳ ಭೇಟಿಗೆ ಅವಕಾಶ ಸಿಗಬಹುದು
- ಷೇರು ವ್ಯವಹಾರದಲ್ಲಿ ಮಿಶ್ರಫಲ ಸಾಧ್ಯತೆ
- ಇಂದು ಜ್ಞಾನಾರ್ಜನೆಯಲ್ಲಿ ಹೆಚ್ಚು ಆಸಕ್ತಿ ವಹಿಸಬಹುದು
- ಮಹಾಶಾಸ್ತಾರ ಮಂತ್ರ ಶ್ರವಣ ಮಾಡಿ
ವೃಶ್ಚಿಕ
- ರಿಯಲ್ ಎಸ್ಟೇಟ್ನವರಿಗೆ ಶುಭ ದಿನ
- ಕಾರ್ಮಿಕ ವರ್ಗದವರಿಗೆ ಯಂತ್ರೋಪಕರಣಗಳಿಂದ ತೊಂದರೆ ಸಾಧ್ಯತೆ
- ಅತೀವ ಶತ್ರುಭಯ ಅಪನಿಂದನೆ ಸಾಧ್ಯತೆ
- ಇಂದು ಅನಗತ್ಯ ವಿಚಾರ, ಚರ್ಚೆಗಳಲ್ಲಿ ಭಾಗಿಯಾಗಬೇಡಿ, ಸಹನೆ ಇರಲಿ
- ಕಸೂತಿ ಕೆಲಸ ಕಲಾಕಾರರು, ಚಿತ್ರ ಬಿಡಿಸುವವರಿಗೆ ಉತ್ತಮ ದಿನ
- ಇಂದು ಕುಟುಂಬದಲ್ಲಿ ಸಾಮರಸ್ಯ ಕಾಪಾಡಿ
- ಬ್ರಹ್ಮನನ್ನು ಪ್ರಾರ್ಥಿಸಿ
ಧನುಸ್ಸು
- ಕುಟುಂಬದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಸಾಧ್ಯತೆ
- ಕೃಷಿಕರಿಗೆ ಲಾಭದ ದಿನ, ಮಾನಸಿಕ ಒತ್ತಡ ಸಾಧ್ಯತೆ
- ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ, ತಾಳ್ಮೆ ತುಂಬಾ ಮುಖ್ಯ
- ಇಲಾಖಾ ಪರೀಕ್ಷೆಗಳು ಪ್ರಾಯಶಃ ಮುಂದೂಡಲ್ಪಡಬಹುದು
- ಇಂದು ಮಿತ್ರರಿಂದ ವಿರೋಧ ಎದುರಿಸುವ ಸಾಧ್ಯತೆ
- ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ
- ಕಣ್ಣಿನ ಸಮಸ್ಯೆ ಕಾಡಬಹುದು ವೈದ್ಯರ ಸಲಹೆ ಪಡೆಯಿರಿ
- ಹರಿಹರ ಪುತ್ರನನ್ನು ಸ್ಮರಿಸಿ
ಮಕರ
- ಇಂದು ನಿಮ್ಮ ಪ್ರತಿಭೆಗೆ ತಕ್ಕ ಮನ್ನಣೆ, ಗೌರವ ಸಿಗುವ ಸಾಧ್ಯತೆ
- ಕಮೀಷನ್ ವ್ಯಾಪಾರದಾರರಿಗೆ ಲಾಭದ ದಿನ
- ಹಣಕಾಸಿನ ವಿಚಾರದಲ್ಲಿ ಜಾಗ್ರತೆವಹಿಸಿ, ಆದಷ್ಟೂ ಉಳಿತಾಯ ಮಾಡಿ
- ಶಿಕ್ಷಕ ವರ್ಗದವರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ
- ವಾಹನ ಅಪಘಾತ ಸಾಧ್ಯತೆ ಎಚ್ಚರಿಕೆ ಇರಲಿ
- ವಿದ್ಯಾರ್ಥಿಗಳಿಗೆ, ಗುತ್ತಿಗೆದಾರರಿಗೆ ಶುಭ ದಿನ
- ಈ ದಿನ ಬೇರೆಯವರಿಂದ ಸಾಲವನ್ನ ಅಪೇಕ್ಷಿಸಬೇಡಿ
- ಗುರುಪಾದುಕಾ ಸ್ತೋತ್ರ ಪಠಿಸಿ
ಕುಂಭ
- ಕೋರ್ಟ್, ಕಚೇರಿ ವಿಚಾರದಲ್ಲಿ ಜಯ ನಿಮ್ಮ ಪರವಾಗಲಿದೆ
- ವೈದ್ಯರಿಗೆ ಕೆಲಸದಲ್ಲಿ ಒತ್ತಡ, ನಿದ್ರಾಭಂಗ ಸಾಧ್ಯತೆ
- ಇಂದು ಅಧಿಕ ವರಮಾನದಿಂದ ನೆಮ್ಮದಿ ಸಾಧ್ಯತೆ
- ಮನೆಯಲ್ಲಿ ಶುಭಕಾರ್ಯ ಸಂಭ್ರಮ
- ಮಕ್ಕಳ ಸಾಧನೆ ವಿಚಾರದಲ್ಲಿ ಶುಭ ಸುದ್ದಿ
- ಅಷ್ಟಾಕ್ಷರೀ ದತ್ತಮಂತ್ರ ಪಠಿಸಿ
ಮೀನ
- ರೇಷ್ಮೆ ಮತ್ತು ಅಡಿಕೆ ಬೆಳೆಗಾರರಿಗೆ ಅಧಿಕ ಲಾಭ
- ಯಾವುದೇ ರೀತಿಯ ತೊಂದರೆಗಳಿದ್ದರೆ ಅವುಗಳಿಂದ ಮುಕ್ತಿ ಸಾಧ್ಯತೆ
- ನಿಮ್ಮ ಪ್ರಾಮಾಣಿಕ ಕೆಲಸದಿಂದ ಹೆಚ್ಚು ಯಶಸ್ಸು ಸಿಗಲಿದೆ
- ಇಂದು ಮಂಗಳ ಕಾರ್ಯಗಳಲ್ಲಿ ಭಾಗಿಯಾಗಬಹುದು
- ಈ ದಿನ ಋಣವಿಮೋಚನೆ ಯೋಗವಿದೆ
- ಇಂದು ವಿನಾಕಾರಣ ಕೋಪಕ್ಕೆ ಒಳಗಾಗದಿದ್ದರೆ ಒಳ್ಳೆಯದು
- ಋಣವಿಮೋಚನೆ ಮಂಗಳ ಸ್ತೋತ್ರ ಪಠಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ