ಕ್ರಿಕೆಟ್​ ಆಟಗಾರರಿಗೆ ತುಂಬಾ ಒಳ್ಳೆ ದಿನ.. ಯಾವುದೇ ಕೆಲಸ ಮಾಡಲು ಭಯ ಬೇಡ; ಇಲ್ಲಿದೆ ಇಂದಿನ ಭವಿಷ್ಯ!

ಸಂಬಂಧಿಕರು ಹಾಗೂ ಸ್ನೇಹಿತರೊಂದಿಗಿನ ನಿಮ್ಮ ಸಂಬಂಧವನ್ನು ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬೇಡಿ. ನಿಮ್ಮ ಹಠದ ಸ್ವಭಾವದಿಂದ ವೃತ್ತಿ, ನೌಕರಿ, ವಿದ್ಯಾಕ್ಷೇತ್ರದಲ್ಲಿ ಹಿನ್ನಡೆ ಸಾಧ್ಯತೆ ಇರುತ್ತದೆ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಉತ್ತರಾಭಾದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಕಿರಿಕಿರಿಯಾಗಬಹುದು
  •  ದಿನ ಪೂರ್ತಿ ಕುಟುಂಬದ ಸದಸ್ಯರೊಂದಿಗೆ ವಿರಸ ಇರಲಿದೆ
  • ಇಂದು ಪ್ರಭಾವಿ ವ್ಯಕ್ತಿಗಳು ಮನೆಗೆ ಬರಬಹುದು
  •  ನಿಮ್ಮ ಯೋಚನೆಯಲ್ಲಿಯೇ ನೀವು ಹೆಚ್ಚು ಮಗ್ನರಾಗಿರುತ್ತೀರಿ
  •  ನೀವು ಮನೆಯಿಂದ ಹೊರಗೆ ಹೋಗುವುದು ಮನೆಯವರಿಗೆ ಬೇಸರ ಆಗಲಿದೆ
  •  ವೃಥಾ ಹಣದ ಖರ್ಚು, ಮಾನಸಿಕ ಸಮಾಧಾನವಿರುವುದಿಲ್ಲ
  •  ಅನಗತ್ಯ ವಾದ-ವಿವಾದಗಳಲ್ಲಿ ಭಾಗಿಯಾಗಬಾರದು
  • ಐಕ್ಯಮತ್ಯ ಮಂತ್ರ ಶ್ರವಣ ಮಾಡಿ

ವೃಷಭ

RASHI_BHAVISHA_VRSHABA

  • ಕುಟುಂಬದ ಸದಸ್ಯರಿಗಾಗಿ ಹಣವ್ಯಯ ಮಾಡುವ ಸಾಧ್ಯತೆ
  •  ಕುಟುಂಬದಲ್ಲಿ ನಿಮ್ಮ ಪ್ರಾಬಲ್ಯದಿಂದಲೇ ಎಲ್ಲ ಸಮಸ್ಯೆ ನಿವಾರಣೆಯಾಗಲಿದೆ
  • ಇಂದು ದೂರದಿಂದ ಬರುವ ಅತಿಥಿಗಳ ಬಗ್ಗೆ ತುಂಬಾ ಜಾಗ್ರತೆವಹಿಸಿ
  • ವ್ಯವಹಾರದ ದೃಷ್ಟಿಯಿಂದ ಉ್ತತಮ ದಿನ, ಪ್ರಗತಿ ಸಾಧ್ಯತೆ
  • ಭೂಮಿ ಅಥವಾ ಜಮೀನಿಗೆ ಸಂಬಂಧಿಸಿದ ಹಳೆಯ ವಿವಾದಗಳಿದ್ದರೆ ಇಂದು ಇತ್ಯರ್ಥ ಆಗಲಿದೆ
  • ಆಂಜನೇಯ ಅಷ್ಟೋತ್ತರವನ್ನು ಪಠಿಸಿ

ಮಿಥುನ

RASHI_BHAVISHA_MITHUNA

  • ಕುಟುಂಬದ ಸದಸ್ಯರು, ಬಂಧುಗಳು ಸೌಹಾರ್ದಯುತವಾಗಿ ಮಾತುಕತೆ ನಡೆಸುತ್ತಾರೆ
  • ಇಂದು ಮನೆಗೆ ಹೊಸ ಅತಿಥಿ ಬರುವ ಸಾಧ್ಯತೆಯಿದೆ
  • ದೂರದ ಪ್ರಯಾಣಕ್ಕೆ ಅವಕಾಶ ಸಿಗುವ ಸೂಚನೆಯಿದೆ 
  • ಉದ್ಯೋಗದಲ್ಲಿ ನಿರೀಕ್ಷಿತ ಫಲತಾಂಶಗಳಿಂದ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ
  • ಈ ದಿನ ಲಾಭದ ಅವಕಾಶಗಳು ಹೆಚ್ಚಾಗುವ ಸಾಧ್ಯತೆಗಳಿವೆ
  • ವೈವಾಹಿಕ ಜೀವನದ ಒತ್ತಡ ದೂರವಾಗುವ ಸಾಧ್ಯತೆಯಿದೆ
  •  ನಿಮ್ಮ ಮೂಲದೇವರನ್ನು ಪ್ರಾರ್ಥಿಸಿ

ಕಟಕ

RASHI_BHAVISHA_KATAKA

  • ನಾನು ಎಂಬ ಅಹಂಕಾರ ನಿಮಗೆ ಹಿನ್ನಡೆ ಉಂಟುಮಾಡಬಹುದು 
  • ಕುಟುಂಬದವರ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಅನಗತ್ಯ ಗೊಂದಲಗಳಲ್ಲಿ ಸಿಲುಕಬಹುದು, ಸ್ಥಿರ ಮನಸ್ಸಿನಿಂದ ಎಲ್ಲವನ್ನು ಎದುರಿಸಬಹುದು
  • ನೌಕರಿಯ ವಿಚಾರದಲ್ಲಿ ಹಲವಾರು ಸವಾಲುಗಳು ಎದುರಾಗಬಹುದು
  • ನಿಮ್ಮ ಅಹಂಕಾರ ಇಂದಿನ ಎಲ್ಲಾ ಕೆಲಸಗಳಿಗೆ ಅಡಚಣೆಯಾಗಬಹುದು
  •  ಮಹಾವಿಷ್ಣುವನ್ನು ಸ್ಮರಿಸಿ

ಸಿಂಹ 

RASHI_BHAVISHA_SIMHA

  • ನಿಮ್ಮ ವ್ಯಾಪಾರಿ ಬುದ್ಧಿಯಿಂದ ಹೊರಬಂದು ಮಾನಸಿಕ ಸಮಾಧಾನ ಪಡೆದುಕೊಳ್ಳಿ
  • ಇಂದು ಕುಟುಂಬದವರ ಜೊತೆಯಲ್ಲಿ ಸಮಯ ಕಳೆಯಿರಿ
  • ಕ್ಷೇತ್ರಗಳಿಗೆ ಹೋದಾಗ ನಿಮ್ಮ ಮನಸ್ಸು ಶುದ್ಧವಾಗಿರಲಿ
  • ವ್ಯವಹಾರ ವಿಷಯವನ್ನು ಬದಿಗಿಟ್ಟು ಭಗವಂತನ ಸೇವೆಯಲ್ಲಿ ತೊಡಗಿಸಿಕೊಳ್ಳಿ
  • ಕುಟುಂಬದವರು ಬೇಸರವನ್ನು ವ್ಯಕ್ತಪಡಿಸಬಹುದು
  • ಇಂದು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತೀರಿ
  • ಕ್ಷೇತ್ರ ದೇವತೆಗೆ ನಿಮ್ಮ ಶಕ್ತಿಗೆ ಅನುಸಾರವಾಗಿ ಸೇವೆ ಮಾಡಿ

ಕನ್ಯಾ

RASHI_BHAVISHA_KANYA

  •  ಮಾನಸಿಕ ಬೇಸರ ಉಂಟಾಗುವ ಸಾಧ್ಯತೆಯಿದೆ
  • ಕೆಲಸದಲ್ಲಿ ಹಲವು ಅಡಚಣೆಯಾಗಬಹುದು
  • ಆಟಗಾರರಿಗೆ ಅದರಲ್ಲೂ ಕ್ರಿಕೆಟ್​ ಆಟಗಾರರಿಗೆ ತುಂಬಾ ಒಳ್ಳೆಯ ದಿನ
  • ಯಾವುದೇ ಕೆಲಸ ಮಾಡಲು ಭಯ ಪಡಬೇಡಿ
  • ಇಂದು ಉತ್ತಮವಾದ ವಾತಾವರಣ ಇರಲಿದೆ
  • ನಿಮ್ಮ ಕೌಶಲ್ಯ ಹೊರಗಡೆ ಪ್ರಚಾರ ಆಗದೆ ಇರೋದಕ್ಕೆ ನಿಮ್ಮ ಆಲಸ್ಯವೇ ಕಾರಣ
  • ಕಾರ್ಯಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತೀರಿ
  • ತಾಪಸ ಮನ್ಯುವನ್ನು ಸ್ಮರಿಸಿ

ತುಲಾ

RASHI_BHAVISHA_TULA

  • ಇಂದು ಪ್ರೇಮಿಗಳಿಗೆ ಉತ್ತಮ ದಿನ
  •  ಮನಸ್ಸು ನಿಮ್ಮ ಹಿಡಿತಕ್ಕೆ ಸಿಗದೆ ಹಲವು ತೊಂದರೆಗಳಿಗೆ ನೀವೇ ಕಾರಣರಾಗುತ್ತೀರಿ
  • ಮಾನಸಿಕ ಬೇಸರವು ನಿಮಗೆ ದಿನಪೂರ್ತಿ ಕಾಡಬಹುದು
  • ಸಂಬಂಧಿಕರು ಹಾಗೂ ಸ್ನೇಹಿತರೊಂದಿಗಿನ ನಿಮ್ಮ ಸಂಬಂಧವನ್ನು ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬೇಡಿ
  • ನಿಮ್ಮ ಹಠದ ಸ್ವಭಾವದಿಂದ ವೃತ್ತಿ, ನೌಕರಿ, ವಿದ್ಯಾಕ್ಷೇತ್ರದಲ್ಲಿ ಹಿನ್ನಡೆ ಸಾಧ್ಯತೆ
  • ಆದಿತ್ಯ ಹೃದಯ ಸ್ತೋತ್ರವನ್ನು ಪಠಣೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ವಿವಾದಿತ ವಿಷಯಗಳು ಇತ್ಯರ್ಥವಾಗುತ್ತವೆ
  • ಕುಟುಂಬ ಸದಸ್ಯರ ನಿರೀಕ್ಷೆಗಳನ್ನು, ಆಸೆಗಳನ್ನು ಪೂರೈಸಲು ಉತ್ತಮ ದಿನ
  • ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳಿ
  • ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನ ಹಾಗೂ ಕೆಲವು ವಿಚಾರಗಳು ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ
  • ಮಕ್ಕಳೇನಾದರೂ ಸಲಹೆ ಕೊಟ್ಟರೆ, ಅದನ್ನು ನಿರ್ಲಕ್ಷಿಸಬೇಡಿ
  • ಇಂದು ವ್ಯರ್ಥವಾಗಿ ಸಮಯ ಹೋಗಲು ಬಿಡಬೇಡಿ
  • ಶ್ರೀ ಪಂಚಮುಖಿ ಆಂಜನೇಯನನ್ನು ಪಾರ್ಥಿಸಿ

ಧನುಸ್ಸು

RASHI_BHAVISHA_DHANASU

  • ಹಳೆಯ ಕೇಸುಗಳಿದ್ದರೆ ತೀರ್ಮಾನವಾಗಿ ಜಯಶೀಲರಾಗುವ ಯೋಗವಿದೆ
  •  ಮಧ್ಯಾಹ್ನದ ನಂತರ ಸಮಯ ಚೆನ್ನಾಗಿರುವುದಿಲ್ಲ ಎಚ್ಚರ
  • ಬೇರೆ ವ್ಯವಹಾರಗಳನ್ನು ಬದಿಗಿಟ್ಟು ಕಾನೂನಿನ ಚೌಕಟ್ಟಿನೊಳಗೆ ಬರುವ ಕೆಲಸಕ್ಕೆ ಹೆಚ್ಚು ಗಮನಕೊಡಿ
  • ನಿಮ್ಮ ಕೋರ್ಟ್​ ಕೆಲಸಕ್ಕೆ ಇಂದು ವಿಶೇಷ ತಿರುವು ಸಿಗುವ ಸಾಧ್ಯತೆ 
  • ಕಾನೂನಿನ ದೃಷ್ಟಿಯಿಂದ ಮಾನಸಿಕವಾಗಿ ಬೇಸತ್ತವರಿಗೆ ಸಮಾಧಾನ ಸಿಗಬಹುದು
  • ದೇವಿಯನ್ನು ಆರಾಧಿಸಿ

ಮಕರ

RASHI_BHAVISHA_MAKARA

  • ಅಧಿಕಾರಿ ವರ್ಗದಿಂದ ಕೆಲವು ತೊಂದರೆಗಳಾಗಬಹುದು, ತಾತ್ಸಾರ ಮಾಡಬೇಡಿ
  • ಕುಟುಂಬದ ಜವಾಬ್ದಾರಿಗಳು ಹೆಚ್ಚಿನ ಒತ್ತಡ ತರಬಹುದು
  • ಇಂದು ಹಣಕಾಸಿನ ವಿಚಾರದಲ್ಲಿ ಏರುಪೇರಾಗಬಹುದು
  • ವ್ಯಾಪಾರ, ವ್ಯವಹಾರ, ಉದ್ಯೋಗ, ವಿದ್ಯೆ ವಿಚಾರಗಳಲ್ಲಿ ಮಂದಗತಿಯಿರುತ್ತದೆ
  • ಗಂಟಲಿಗೆ ಸಂಬಂಧಿಸಿದ ಸೋಂಕು ತಗಲುವ ಸಾಧ್ಯತೆಯಿದೆ
  • ಒಪ್ಪಂದಗಳಿಗೆ ಸಹಿ ಮಾಡುವ ಸನ್ನಿವೇಶ ಬಂದರೆ, ಸ್ವಲ್ಪ ಆಲೋಚಿಸಿ ತೀರ್ಮಾನ ಮಾಡಿ 
  • ನಿಮ್ಮ ಆರೋಗ್ಯದ ವಿಚಾರದಲ್ಲಿ ಗಮನ ಕೊಡಿ
  • ಸಕಾಲಕ್ಕೆ ಸೂಕ್ತ ಔಷಧೋಪಚಾರ ಮಾಡಿಕೊಂಡರೆ ಒಳ್ಳೆಯದು
  • ಈಶ್ವರನ ದೇವಸ್ಥಾನಕ್ಕೆ ಬಿಲ್ವಪತ್ರೆ  ಕೊಡಿ

ಕುಂಭ

RASHI_BHAVISHA_KUMBHA

  • ನಿಮ್ಮ ಮಾರ್ಗದರ್ಶನ ಪಡೆಯುವ ಹಲವರ ಸಮಸ್ಯೆಗಳು ಬಗೆಹರಿಯುತ್ತವೆ
  • ಕುಟುಂಬದಲ್ಲಿ ಉತ್ತಮ ಸಮಯ ಕಳೆಯುತ್ತೀರಿ
  • ನಿಮ್ಮ ಉಪಕಾರ ಪಡೆದವರು ಸದಾ ನಿಮ್ಮನ್ನು ಗೌರವಿಸುತ್ತಾರೆ
  • ಜಟಿಲ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗಬಹುದು
  • ನೌಕರರು ತಮ್ಮ ಉದ್ಯೋಗವನ್ನು ಬದಲಾಯಿಸಲು ಈ ದಿನ ಶುಭವಾಗಿದೆ
  • ಬೇರೆ ಕಡೆ ಉದ್ಯೋಗ ಅವಕಾಶ ದೊರಕಬಹುದು
  • ನಿಮ್ಮ ದಿನಚರಿ ಈ ದಿನ ಬಹಳ ವ್ಯವಸ್ಥಿತವಾಗಿರುವುದರಿಂದ ಯಶಸ್ಸು ಸಿಗಲಿದೆ
  • ಹಿರಿಯರ ಆಶೀರ್ವಾದ ಪಡೆಯಿರಿ

ಮೀನ

RASHI_BHAVISHA_MEENA

  • ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಸಂಪೂರ್ಣ ಪ್ರಯತ್ನವಿರಲಿ
  • ವಿದೇಶ ಪ್ರಯಾಣವು ಕೂಡ ಸಂತೋಷ ತರಲಿದೆ
  • ನಿಮ್ಮ ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸಬೇಡಿ
  • ವ್ಯಾಪಾರ ಮತ್ತು ವ್ಯವಹಾರ ದೃಷ್ಟಿಯಿಂದ ಪ್ರಯಾಣಕ್ಕೆ ಅನುಕೂಲಕರ ದಿನ
  • ನಿಮ್ಮ ಪ್ರತಿಭೆ ಮತ್ತು ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಉತ್ತಮ ದಿನ
  • ಯಾವುದಾದರು ವ್ಯವಹಾರದಿಂದ ಬರಬೇಕಾದ ಬಾಕಿ ಹಣ ಇಂದು ಕೈ ಸೇರಬಹುದು
  • ಭವಿಷ್ಯದ ಯೋಜನೆಗಳನ್ನು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಾ ತುಂಬಾ ಆಕರ್ಷಿತರಾಗಬಹುದು
  • ನಾಗದೇವತೆಗಳನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Rashi Bhavishya Horoscope
Advertisment