/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಅಶ್ವಿನಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ಸ್ನೇಹಿತರಿಗೆ, ಬಂಧುಗಳಿಗೆ ಉತ್ತಮ ಭೋಜನವನ್ನು ನೀಡಬೇಕೆಂಬುದು ನಿಮ್ಮ ಆಸೆ
- ಆಹಾರದ ಅಗತ್ಯವಿರುವವರಿಗೆ ಅನ್ನದಾನವನ್ನು ಮಾಡಿ
- ಈ ದಿನ ಸಂತೋಷದಿಂದ ಇರುತ್ತೀರಿ
- ಪೂಜೆ,ಹೋಮ ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ಮಾಡುವ ಬಗ್ಗೆ ಚರ್ಚೆ ನಡೆಸುತ್ತೀರಿ
- ಈ ದಿವಸ ಅವಕಾಶವಾಗುವಂತಹ ಸೂಚನೆಗಳಿವೆ
- ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ
ವೃಷಭ
- ಮಕ್ಕಳ ವಿದ್ಯಾಭ್ಯಾಸ ಮತ್ತು ಬೇರೆ ಚಟುವಟಿಕೆಗಳಿಗೆ ಹಣವನ್ನು ಒದಗಿಸಬೇಕಾಗುತ್ತದೆ
- ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು
- ಕೂಡಿಟ್ಟಿದ್ದ ಹಣದ ಪ್ರಸ್ತಾಪ ಮಾಡಿ ನಿಷ್ಠೂರವಾಗುವ ಸಾಧ್ಯತೆ
- ಈ ದಿನ ಸ್ವಲ್ಪ ಮನಸ್ಸಿಗೆ ಸಮಾಧಾನ ಸಿಗಲಿದೆ
- ವಾರದ ಕೊನೆಯಲ್ಲಿ ಸಾಲವನ್ನು ಮಾಡಬೇಕಾದ ಪರಿಸ್ಥಿತಿ ಒದಗಿಬರಬಹುದು
- ವೃತ್ತಿಗೆ, ನೌಕರಿಗೆ ಸಂಬಂಧಿಸಿದಂತೆ ಬೇರೆ ಬೇರೆ ಆಲೋಚನೆಗಳು ಬರಬಹುದು
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ
ಮಿಥುನ
- ಈ ರಾಶಿಯ ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು ಜಾಗ್ರತೆವಹಿಸಿ
- ವ್ಯಾವಹಾರಿಕ ವಿಚಾರವನ್ನು ಸರಿಯಾಗಿ ನಿಭಾಯಿಸುವುದು ಒಳ್ಳೆಯದು
- ಕಹಿ ಸನ್ನಿವೇಶಗಳು ಸಂಬಂಧಿಕರಲ್ಲಿ ಕಾಣಬಹುದು ಗಮನವಿರಲಿ
- ನಿಮ್ಮ ಮಾತುಗಳಲ್ಲಿ ಮೃದುತ್ವ ಇರಲಿ
- ಬಂಧುಗಳು ಹಳೆ ವಿಷಯವನ್ನು ಹೇಳಿ ನಿಮ್ಮ ಮನಸ್ಸನ್ನು ಹಾಳು ಮಾಡಬಹುದು
- ಇಂದು ನೀವು ತಾಳ್ಮೆ ಕಳೆದುಕೊಳ್ಳುವುದು ಸೂಕ್ತವಲ್ಲ
- ಸ್ನೇಹಿತರ ನಡುವೆ ದೊಡ್ಡ ಗಲಾಟೆಯೇ ಆಗುವ ಸಾಧ್ಯತೆ ಕಾಣಬಹುದು
- ಧ್ಯಾನಕ್ಕೆ ಮೊರೆ ಹೋಗಿ
ಕಟಕ
- ನಿಮ್ಮ ಹಳೆಯ ಖಾಯಿಲೆಯಿಂದ ಮುಕ್ತರಾಗುತ್ತೀರಿ
- ಈ ದಿನ ಹೊಸ ವಾಹನ ಖರೀದಿಗೆ ಅವಕಾಶವಿದೆ
- ಪ್ರೀತಿ ಪ್ರೇಮ ವಿಚಾರದಲ್ಲಿ ತುಂಬಾ ಭಾವುಕರಾಗಿ ನೋವನ್ನು ಅನುಭವಿಸಬೇಕಾದ ದಿನ
- ಸಹೋದ್ಯೋಗಿಗಳು, ಅಕ್ಕ ಪಕ್ಕದವರು ನಿಮಗೆ ಸಮಾಧಾನ ಹೇಳುವಂತಹ ಕೆಲಸ ಮಾಡುತ್ತಾರೆ
- ಇಂದು ಪ್ರಯಾಣವು ಅಷ್ಟು ಶುಭಕರವಾಗಿರುವುದಿಲ್ಲ
- ವಿದ್ಯಾರ್ಥಿಗಳಿಗೆ ಬೇಸರವಾಗುವ ದಿನ
- ಮಾನಸಿಕ ಒತ್ತಡದಿಂದ ಹೊರಬಂದ್ರೆ ನಿಮ್ಮ ಸಮಸ್ಯೆ ದೂರವಾಗಬಹುದು
- ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು ಜಾಗ್ರತೆವಹಿಸಿ
- ಈ ದಿನ ನಿಮ್ಮ ಪಾಲಿಗೆ ಬೇಸರನ್ನುಂಟು ಮಾಡುವಂತದ್ದು
- ಕುಟುಂಬದವರಿಗೆ, ಸಂಬಂಧಿಕರಿಗೆ ನಿಮ್ಮ ಆರೋಗ್ಯದ ಬಗ್ಗೆ ಆತಂಕ ಉಂಟಾಗಬಹುದು
- ನಿಮ್ಮ ಪರವಾಗಿ ಶಕ್ತಿ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿ
- ನಂತರದಲ್ಲಿ ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು
- ಇಂದು ತಾಳ್ಮೆಯನ್ನು ಕಳೆದುಕೊಳ್ಳವ ಅಗತ್ಯವಿಲ್ಲ
- ಶ್ರೀರಾಮನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಹಲವು ದಿನಗಳಿಂದ ನಿಮ್ಮನ್ನು ಕಾಡುತ್ತಿರುವ ಜಟಿಲ ಸಮಸ್ಯೆಗಳು ಪರಿಹಾರ ಆಗಲಿದೆ
- ಸಾಮಾಜಿಕ ಮಟ್ಟದಲ್ಲಿ ನಿಮ್ಮ ಗೌರವ ಪ್ರತಿಷ್ಠೆಗಳು ಹೆಚ್ಚಾಗಬಹುದು
- ವ್ಯವಹಾರದ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚು ಮಹತ್ವ ಪಡೆಯುವ ಸಾಧ್ಯತೆ
- ಆಕಸ್ಮಿಕವಾಗಿ ಸ್ನೇಹಿತರನ್ನ ಭೇಟಿ ಮಾಡುವ ಸಾಧ್ಯತೆಗಳಿವೆ
- ಸಂಬಂಧಿಕರೊಂದಿಗೆ ಸಂತೋಷವನ್ನು ಹಂಚಿಕೊಳ್ಳುತ್ತೀರಿ
- ಪ್ರೇಮಿಗಳಲ್ಲಿ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ
- ದಂಪತಿಗಳ ಜೀವನ ಸುಖಮಯವಾಗಿರುತ್ತದೆ
- ಭವಿಷ್ಯದ ಬಗ್ಗೆ ಯಾವ ಚಿಂತೆಯನ್ನು ಮಾಡದೆ ಇರುವ ದಿನವಾಗಿರುತ್ತದೆ
- ಶನೈಶ್ವರನನ್ನು ಪೂಜಿಸಿ
ತುಲಾ
- ದಿನಚರಿಯಲ್ಲಿ ಸಣ್ಣ ಪುಟ್ಟ ಬದಲಾವಣೆಯಾಗಬಹುದು
- ನಿರೀಕ್ಷಿತ ಸಾಧನೆ ಮಾಡಲು ಆಗಲಿಲ್ಲ ಅಂತ ನಿಮಗೆ ಕೋಪ ಹೆಚ್ಚಾಗಬಹುದು
- ಇಂದು ತಾಳ್ಮೆಯಿಂದ ವರ್ತಿಸಿ
- ಸಾಲದ ವಿಚಾರವಾಗಿ ಒಳ್ಳೆಯ ವಾತಾವರಣ ಇರುವುದಿಲ್ಲ
- ಕುಟುಂಬದಲ್ಲಿಯೂ ಅಸಮಾಧಾನ ವಾತಾವರಣ ಉಂಟಾಗಬಹುದು
- ಋಣಾತ್ಮಕವಾದ ಸಂದರ್ಭಗಳಲ್ಲಿ ನಿಮ್ಮ ಮನಸ್ಸು ಹೊಂದಿಕೊಳ್ಳಲು ಧೃತಿಗೆಡಬಹುದು
- ದಕ್ಷಿಣಾಮೂರ್ತಿಯನ್ನು ಸ್ಮರಿಸಿ
ವೃಶ್ಚಿಕ
- ಕುಟುಂಬದಲ್ಲಿ ಮಂಗಳ ಕಾರ್ಯದ ವಿಚಾರವನ್ನು ಪ್ರಸ್ತಾಪ ಮಾಡುತ್ತೀರಿ
- ವ್ಯಾಪಾರ, ವ್ಯವಹಾರಗಳನ್ನು ವಿಚಾರ ಮಾಡುತ್ತಾ ಎಲ್ಲರೂ ಖುಷಿಯಿಂದ ಇರುವ ದಿನ
- ಸಂಬಂಧಿಕರು, ಸ್ನೇಹಿತರು ತಮ್ಮ ಮನೆಗೆ ಬರುವುದರಿಂದ ಮನಸ್ಸಿಗೆ ಸಮಾಧಾನವಾಗುತ್ತದೆ
- ಇತ್ಯರ್ಥ ಆಗದೆ ಉಳಿದಿರೋ ಒಂದು ವ್ಯವಹಾರ ಇಂದು ಸುಖಾಂತ್ಯಗೊಳ್ಳಲಿದೆ
- ದೂರದ ಸಂಬಂಧಿಕರು ಜೊತೆಯಲ್ಲಿರುತ್ತಾರೆ
- ದೂರದಿಂದ ಶುಭ ಸುದ್ಧಿ ಬರುವಂತಹ ಸಾಧ್ಯತೆ
- ಕುಲದೇವರನ್ನ ಪ್ರಾರ್ಥನೆ ಮಾಡಿ
ಧನುಸ್ಸು
- ಇಂದು ನಿಮ್ಮ ಮಗಳ ಮದುವೆಯ ವಿಚಾರದಲ್ಲಿನ ಅಡ್ಡಿಗಳು, ಸಮಸ್ಯೆಗಳು ದೂರವಾಗಲಿದೆ
- ಈ ದಿನ ನಿಮ್ಮ ಆದಾಯ ಹೆಚ್ಚಾಗುವ ಸೂಚನೆಗಳಿವೆ
- ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯುವಂತಹ ಅವಕಾಶಗಳಿವೆ
- ಇಂದು ಸಾಧುಗಳ ಅಥವಾ ಯೋಗಿಗಳ ದರ್ಶನವಾಗಬಹುದು
- ಸಾಧುಗಳ ಮಾತಿನಿಂದ ನಿಮ್ಮ ಜೀವನದಲ್ಲಿ ಪರಿವರ್ತನೆಯಾಗಲಿದೆ
- ನಿಮ್ಮ ಗುರುಗಳನ್ನು ಸ್ಮರಿಸಿ
ಮಕರ
- ಇಂದು ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ
- ಬಲವಂತವಾಗಿ ಮಾಡಿದ ಕೆಲಸಗಳಿಂದ ಯಶಸ್ಸಿರುವುದಿಲ್ಲ
- ಕೆಲಸವನ್ನು ನಿರ್ಧಾರ ಮಾಡಬೇಕಾದರೆ ಬಹಳ ಯೋಚನೆ ಮಾಡಿ
- ಮೂಳೆ ಅಥವಾ ನರಗಳಿಗೆ ಸಂಬಂಧಿಸಿದ ತೊಂದರೆಗಳು ಕಾಣಬಹುದು ಜಾಗ್ರತೆ
- ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಶುಭದಾಯಕವಾಗಿ ಕಾಣುವುದಿಲ್ಲ
- ನಿಮ್ಮ ಸ್ವಭಾವ ಶಾಂತತೆಯಿಂದ ಕೂಡಿರುತ್ತದೆ
- ಮನೆಯಲ್ಲಿ ಚಿಕ್ಕ ಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ
- ನೀವು ಬೇಡದಿರುವ ಅಪವಾದಗಳಿಗೆ ಒಳಗಾಗುತ್ತೀರಿ
- ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ
ಕುಂಭ
- ನಿಮ್ಮ ಜೀವನದ ಶೈಲಿ, ಸ್ವಭಾವವನ್ನು ಸ್ವಲ್ಪ ಬದಲಾಯಿಸಿಕೊಂಡರೆ ಒಳ್ಳೆಯದು
- ಇಂದು ನಿಮಗೆ ಹೊಟ್ಟೆನೋವಿನ ಸಮಸ್ಯೆ ಕಾಡಬಹುದು ಎಚ್ಚರಿಕೆ
- ಅಪರಿಚಿತ ವ್ಯಕ್ತಿಗಳ ಮೇಲೆ ನಂಬಿಕೆ ಇಟ್ಟರೆ ತೊಂದರೆ ಉಂಟಾಗುವ ಸಾಧ್ಯತೆ
- ನಿಮ್ಮ ಮಾತು ಗೌರವವನ್ನು ಹೆಚ್ಚಿಸಬಹುದು ಅಥವಾ ಅವಮಾನವನ್ನು ಮಾಡಬಹುದು
- ನಿಮ್ಮ ಕೆಲಸ ತೋರಿಕೆಯ ಕೆಲಸ ಆಗಬಾರದು
- ಸಾಕು ಪ್ರಾಣಿಗಳ ಆರೋಗ್ಯದಲ್ಲಿ ಏರುಪೇರಾಗಬಹುದು ಚಿಕಿತ್ಸೆಯನ್ನು ಕೊಡಿಸಿ
- ಕುಲದೇವತಾ ಪ್ರಾರ್ಥನೆ ಮಾಡಿ
ಮೀನ
- ಹೆಚ್ಚು ಅನುಭವಿಗಳ ಮಾರ್ಗದರ್ಶನದಿಂದ ಉತ್ತಮ ಕೆಲಸಗಳನ್ನು ಮಾಡುತ್ತೀರಿ
- ಕುಟುಂಬದ ವಾತಾವರಣವು ಬಹಳ ಚೆನ್ನಾಗಿರುತ್ತದೆ
- ದುಬಾರಿ ವಸ್ತುಗಳ ಖರೀದಿಗೆ ಅವಕಾಶ ಒದಗಿ ಬರಲಿದೆ
- ಅಪರಿಚಿತ ವ್ಯಕ್ತಿಯು ನಿಮಗೆ ಮೋಸಮಾಡಲು ಕಾಯ್ತಾ ಇರುತ್ತಾರೆ ಎಚ್ಚರಿಕೆ
- ವ್ಯವಹಾರ ಮಾಡುವಾಗ ಬಹಳ ಎಚ್ಚರಿಕೆಯಿಂದಿರಿ
- ಸ್ತ್ರೀಯರು ಮೋಸಕ್ಕೆ, ವಂಚನೆಗೆ ಒಳಗಾಗುವ ಸಂದರ್ಭಗಳು ಏರ್ಪಡುತ್ತದೆ ಜಾಗ್ರತೆ
- ವಿದ್ಯಾರ್ಥಿಗಳು ತಮ್ಮ ವಿದ್ಯೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವ ದಿನವಾಗಿರುತ್ತದೆ
- ಮಹಾವಿಷ್ಣುವನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ