ಹಣ, ಅಧಿಕಾರದಿಂದ ಅಹಂಕಾರ ಹೆಚ್ಚಾಗಬಹುದು.. ಇತರರ ಮನಸ್ಥಿತಿ ಅರ್ಥೈಸಿಕೊಳ್ಳಿ; ಇಲ್ಲಿದೆ ಇಂದಿನ ಭವಿಷ್ಯ!

ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವ ಕಾಲ ಕೂಡಿ ಬಂದಿದೆ, ವಿದ್ಯಾಭ್ಯಾಸಕ್ಕೆ ಸಾಲ ದೊರೆಯಬಹುದು, ಸರಿಯಾಗಿ ವ್ಯವಹಾರ ಮಾಡಿ. ಪ್ರೇಮಿಗಳಿಗೆ ಇಂದು ಉತ್ತಮವಾದ ದಿನವಾಗಿದ್ದರಿಂದ ಸುಳ್ಳು ಹೇಳಬಾರದು.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣ  ಪಕ್ಷ, ಸಪ್ತಮಿ ತಿಥಿ, ರೋಹಿಣಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಸಣ್ಣಪುಟ್ಟ ವ್ಯಾಪಾರಿಗಳಿಗೆ ಮತ್ತು ಕಮಿಷನ್ ಏಜೆಂಟ್ಸ್ ಗಳಿಗೆ ಲಾಭವಿದೆ
  • ಕುಟುಂಬದಲ್ಲಿ ಚಿಕ್ಕ ವಯಸ್ಸಿನ ಮಕ್ಕಳ ಜೊತೆ ಸೌಹಾರ್ದತೆಯಿಂದ ವರ್ತಿಸಿ
  • ವಾಹನಗಳ ವಿಚಾರದಲ್ಲಿ ಜಾಗ್ರತೆವಹಿಸಿ
  • ಹಣದ ಖರ್ಚಿಗೆ ಹಿನ್ನಡೆ ಹೊಂದುತ್ತೀರಿ ಅಥವಾ ಅವಮಾನಕ್ಕೀಡಾಗುತ್ತೀರಿ
  • ಮಗುವಿಗೆ ತೊಂದರೆಯಾದರೆ ನಿಮಗೆ ಅವಮಾನವಾಗುವ ಸಾಧ್ಯತೆಗಳಿವೆ
  • ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತೀರಿ
  •  ಆಂಜನೇಯ ಸ್ವಾಮಿಯನ್ನು ಸ್ಮರಿಸಿ

ವೃಷಭ

RASHI_BHAVISHA_VRSHABA

  • ಸಮಾಜದಲ್ಲಿ ನಿಮ್ಮನ್ನು ಗೌರವಿಸಿ. ಸನ್ಮಾನಿಸುತ್ತಾರೆ
  • ಇಂದು ಯಾವುದಾದ್ರೂ ಸಂದರ್ಶನಗಳಿದ್ದರೆ ಶುಭದಿನ
  • ಮೇಲಾಧಿಕಾರಿಗಳಿಗೆ ಮನೆಯವರ ಜೊತೆಯಲ್ಲಿ ಅನ್ಯೋನತೆ ಇರಲಿ
  • ಮಕ್ಕಳ ಬಗ್ಗೆ ಪೋಷಕರಿಗೆ ಎಚ್ಚರವಿರಲಿ
  • ಕೆಲಸದಲ್ಲಿ ನಿಮ್ಮ ಗುಣಮಟ್ಟ ಸುಧಾರಣೆಯಾಗುತ್ತದೆ
  • ಈ ರಾಶಿಯ ಚಿಕ್ಕ ಮಕ್ಕಳಿಗೆ ಸಮಸ್ಯೆಯಾಗಬಹುದು
  • ಮಹಾ ಗಣಪತಿಯನ್ನು ಆರಾಧಿಸಿ

ಮಿಥುನ

RASHI_BHAVISHA_MITHUNA

  • ಹಳೆಯ ಸಾಲವನ್ನು ಮರುಪಾವತಿಸಲು ತೊಂದರೆಯಾಗಬಹುದು
  • ತಾಯಿಯ ಆರೋಗ್ಯದ ಬಗ್ಗೆ ಗಮನಹರಿಸಿ
  • ಗ್ರಹಗತಿಯಿಂದ ನೌಕರಿಯಲ್ಲಿ, ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಆಯಾಸವಾಗುತ್ತದೆ
  • ವ್ಯಾವಹಾರಿಕವಾಗಿ ಸಾಲ ಮಾಡಬೇಡಿ
  • ನೌಕರಿಯಲ್ಲಿ, ವಿದ್ಯಾಭ್ಯಾಸದಲ್ಲಿ ಅತೀವ ಉನ್ನತಿಗೆ ಅವಕಾಶ ಮಾಡಿಕೊಡುತ್ತದೆ
  • ನಿಮ್ಮ ಪೂರ್ವಿಕರು ಮಾಡಿರುವ ಪುಣ್ಯದಿಂದ ನಿಮ್ಮ ಜೀವನ ಹಸನಾಗಿರುತ್ತದೆ  
  • ಮಾತಾ ಲಲಿತಾ ಪರಮೇಶ್ವರಿಯನ್ನು ಆರಾಧಿಸಿ

ಕಟಕ

RASHI_BHAVISHA_KATAKA

  • ಕಾರ್ಯಕ್ಷೇತ್ರದಲ್ಲಿ ಉತ್ತಮ ದಕ್ಷತೆ, ಪ್ರತಿಭೆಯನ್ನು ತೋರಿ ಜಯಶೀಲರಾಗುತ್ತೀರಿ
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ನಿಮ್ಮ ಗುರಿಯ ಬಗ್ಗೆ ನಿಮಗೇ ಆಶ್ಚರ್ಯ ಕಾಣಬಹುದು
  • ನಿಮ್ಮ ಪ್ರಗತಿಯಲ್ಲಿ ನಿಮ್ಮ ಪೂರ್ವ ಸುಕೃತವೇ ಸರಿ
  • ನಿಮ್ಮ ನಿರಂತರ ಪ್ರಯತ್ನ, ಹಿರಿಯರ ಆಶೀರ್ವಾದ ಈಗ ಫಲಿಸಿದೆ
  • ಮನೆಯ ಸದಸ್ಯರೊಂದಿಗೆ ಪ್ರೀತಿ ವಿಶ್ವಾಸ ಹೆಚ್ಚು ಮಾಡಿಕೊಳ್ಳಿ
  •  ಗುರು ದತ್ತಾತ್ರೇಯರನ್ನು ಆರಾಧಿಸಿ

ಸಿಂಹ 

RASHI_BHAVISHA_SIMHA

  •  ಪ್ರಕೃತಿ ಮತ್ತು ಪ್ರಾಣಿ ಸಂಕುಲವನ್ನು ವೀಕ್ಷಿಸಲು ಪ್ರವಾಸ ಕೈಗೊಳ್ಳಬಹುದು
  • ಮನೆಯಲ್ಲಿ ಮಕ್ಕಳಿಗೆ ಆರೋಗ್ಯದ ಸಮಸ್ಯೆ ಕಾಡಬಹುದು ಆತಂಕ ಬೇಡ
  •  ವೈದ್ಯರ ಸಲಹೆ ಪಡೆಯಿರಿ ತಾತ್ಸಾರ ಬೇಡ
  •  ಕಾನೂನಾತ್ಮಕ ವಿಷಯಗಳಲ್ಲಿ ಹಲವು ತೊಡಕುಗಳು ಕಾಣಬಹುದು
  •  ಸಂಶೋಧಕರಿಗೆ ಮತ್ತು ವಿಜ್ಞಾನಿಗಳಿಗೆ ಬಹಳ ವಿಶೇಷವಾದ ಶುಭದಿನ
  • ಇಂದ್ರಾಕ್ಷೀ ದೇವಿಯನ್ನು ಪ್ರಾರ್ಥಿಸಿ

ಕನ್ಯಾ

RASHI_BHAVISHA_KANYA

  •  ದೃಢವಾದ ನಂಬಿಕೆ ಮಾತ್ರ ಕೆಲಸ ಮಾಡುವುದೆಂದು ಅರಿಯಬೇಕು
  •  ಆಸ್ತಿಕತೆಯ ಬಗ್ಗೆ ಪ್ರಶ್ನೆ ಮಾಡುವ ಮನಸ್ಥಿತಿ ಹೆಚ್ಚಾಗುವ ಸಾಧ್ಯತೆಯಿದೆ
  •  ಪರನಿಂದೆ, ಆತ್ಮಪ್ರಶಂಸೆ ಎರಡೂ ಈ ದಿನ ಬೇಡ
  •  ಹಣ್ಣು ಬೆಳೆಗಾರರಿಗೆ ಮತ್ತು ವ್ಯಾಪಾರಿಗಳಿಗೆ ಶುಭವಿದೆ
  •  ಷೇರುಪೇಟೆಯಲ್ಲಿ ಮಾತ್ರ ಹಣ ಹೂಡಿಕೆ ಮಾಡಬೇಡಿ
  •  ವ್ಯಾವಹಾರಿಕವಾಗಿ ಉತ್ತಮ ಲಾಭ, ಹಣ ಸಿಗಬಹುದು
  •  ಇಷ್ಟ ದೇವತಾ ಪ್ರಾರ್ಥನೆ ಮಾಡಿ

ತುಲಾ

RASHI_BHAVISHA_TULA

  • ಮಕ್ಕಳಿಗೆ ಶುಭಫಲವಿರುವ ದಿನ
  • ನಿಮ್ಮ ಮೇಲಾಧಿಕಾರಿಗಳು ನಿಮಗೆ ಹೆಚ್ಚಿನ ಜವಾಬ್ದಾರಿ ಕೊಡಬಹುದು
  • ಮನೆಯಲ್ಲಿ ರಾತ್ರಿಯ ಸಮಯ ಸಮಾಧಾನಕರವಾಗಿರುತ್ತದೆ
  •  ಕಠಿಣ ಪರಿಶ್ರಮಕ್ಕೆ ಪೂರ್ಣ ಪ್ರತಿಫಲ ಸಿಗದೆ ಇರಬಹುದು
  •  ಕಾರ್ಯಕ್ಷೇತ್ರದಲ್ಲಿ ಹೊಸ ಸಮಸ್ಯೆ ಉದ್ಭವವಾಗುವ ಸಾಧ್ಯತೆಯಿದೆ
  •  ಹಿತೈಷಿಗಳು ಮತ್ತು ಸ್ನೇಹಿತರು ನಿಮ್ಮ ನ್ಯೂನತೆಗಳನ್ನು ಗುರುತಿಸಿ ತೋರಿಸುವ ಸಾಧ್ಯತೆಯಿದೆ 
  •  ನಿಮ್ಮ ಅಸುಯಾ ಪರವಾದ ಬುದ್ಧಿಯನ್ನ ದೂರ ಮಾಡಿಕೊಳ್ಳಬೇಕು
  •  ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ವಾತಾವರಣ ವ್ಯತ್ಯಾಸದಿಂದ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು 
  •  ಹಣ, ಅಧಿಕಾರ, ವ್ಯವಸ್ಥೆಗಳಿಂದ ಅಹಂಕಾರ ಹೆಚ್ಚಾಗಬಹುದು
  •  ಬೇರೆಯವರ ಆಲೋಚನೆ, ಮನಸ್ಥಿತಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ
  •  ನಿರ್ದಿಷ್ಟವಾದ ವಿಚಾರಗಳಿಗೆ ಸ್ನೇಹಿತರು, ಕುಟುಂಬದ ಮಧ್ಯೆ ಜಗಳವಾಗಬಹುದು 
  •  ಕಡಿಮೆ ರಕ್ತದೊತ್ತಡ ಇರುವವರು ಜಾಗ್ರತೆವಹಿಸಿ, ವೈದ್ಯರ ಸಲಹೆ ಪಡೆಯಿರಿ
  •  ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸಿ
  •  ಚಂಡಿಕಾ ಪರಮೇಶ್ವರಿಯನ್ನು ಆರಾಧಿಸಿ 

ಧನುಸ್ಸು

RASHI_BHAVISHA_DHANASU

  • ತಂದೆಯವರ ಮಾತು ಮಾರ್ಗದರ್ಶನ ಪಡೆಯಿರಿ, ತಾತ್ಸಾರ ಬೇಡ
  • ಸಹೋದ್ಯೋಗಿಗಳಿಗೆ ನಿಮ್ಮ ಪರಿಸ್ಥಿತಿ ಅರ್ಥವಾದ್ರೂ ಪ್ರಯೋಜನಕ್ಕೆ ಬರುವುದಿಲ್ಲ 
  • ವಿದ್ಯೆ, ಬುದ್ಧಿಗೂ ಮೀರಿ ಮಾನವೀಯತೆ ಮೆರೆಯಬೇಕಾದ ಸಂದರ್ಭ
  • ಮೇಲಾಧಿಕಾರಿಗಳ ವರ್ತನೆ ಮನಸ್ಸಿಗೆ ನೋವುಂಟು ಮಾಡಬಹುದು
  • ಹೊಸ ಕೆಲಸಗಳನ್ನು ಮಾಡಲು ಆತ್ಮವಿಶ್ವಾಸದ ಕೊರತೆ ಕಾಡಬಹುದು
  • ಬೇರೆಯವರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ
  • ಕಾಳಿದೇವಿಯನ್ನು ಆರಾಧನೆ ಮಾಡಿ

ಮಕರ

RASHI_BHAVISHA_MAKARA

  • ತಪ್ಪು ಮಾಹಿತಿ ದುಷ್ಪರಿಣಾಮ ಉಂಟು ಮಾಡಬಹುದು
  • ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವ ಕಾಲ ಕೂಡಿ ಬಂದಿದೆ
  •  ವಿದ್ಯಾಭ್ಯಾಸಕ್ಕೆ ಸಾಲ ದೊರೆಯಬಹುದು, ಸರಿಯಾಗಿ ವ್ಯವಹರಿಸಿ
  •  ಪ್ರೇಮಿಗಳಿಗೆ ಉತ್ತಮವಾದ ದಿನ, ಆದರೆ ಸುಳ್ಳು ಹೇಳಬಾರದು
  • ವಿದೇಶದಲ್ಲಿ ಅಧ್ಯಯನ ಮಾಡಬೇಕೆನ್ನುವ ವಿದ್ಯಾರ್ಥಿಗಳಿಗೆ ಅನುಕೂಲವಿದೆ
  • ವಿವಾದಿತ ವಿಷಯಗಳಿದ್ದರೆ ಇಂದು ಇತ್ಯರ್ಥವಾಗುವ ಸಾಧ್ಯತೆಯಿದೆ
  • ಪಾರಿಜಾತ ಸರಸ್ವತಿಯನ್ನು ಆರಾಧಿಸಿ

ಕುಂಭ

RASHI_BHAVISHA_KUMBHA

  •   ಧೂಳು ಮತ್ತು ಸೂರ್ಯನ ಬೆಳಕಿನಿಂದ ಸಮಸ್ಯೆ ಉಂಟಾಗಬಹುದು 
  • ಯೋಗಾಭ್ಯಾಸ ಮಾಡುವ ಬಗ್ಗೆ ಚಿಂತಿಸಿ ಒಳ್ಳೆಯದಾಗುತ್ತದೆ
  • ಯಾವುದೇ ಕೆಲಸದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗದೆ ಇರಬಹುದು
  •  ಬೇರೆಯವರ ಭರವಸೆಯ ಮಾತುಗಳು ನಿಮಗೆ ಉಪಯೋಗಕ್ಕೆ ಬರುವುದಿಲ್ಲ
  •  ಹಳೆಯ ಸಂಪರ್ಕಗಳಿಂದಾಗಿ ಸಮಸ್ಯೆಗಳು ಉಲ್ಬಣವಾಗುವ ಸಾಧ್ಯತೆಯಿದೆ
  •  ತಲೆನೋವು ಅಥವಾ ಮೈಗ್ರೇನ್​ಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು 
  • ನಾರಾಯಣನನ್ನು ಪ್ರಾರ್ಥಿಸಿ 

ಮೀನ

RASHI_BHAVISHA_MEENA

  • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ
  • ಸಾಯಂಕಾಲ ಕಾಲಿಗೆ ಪೆಟ್ಟು ಬೀಳುವ, ನೋವಾಗುವ ಸಾಧ್ಯತೆಯಿದೆ
  •  ಈ ದಿನ ನಿಮ್ಮ ಇಮೇಜ್ ಹೆಚ್ಚಾಗುವ ಸಾಧ್ಯತೆಯಿದೆ
  • ನಿಮ್ಮಲಿರುವ ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಲಾಭವಿದೆ
  • ನಿಮ್ಮ ಆತ್ಮವಿಶ್ವಾಸದಿಂದ ಎಲ್ಲ ಕೆಲಸಗಳಲ್ಲಿ ಜಯಪ್ರದವಾಗಲಿದೆ
  • ಮನೆಯವರ ಸಲಹೆ ತುಂಬಾ ಗಣನೀಯವಾಗಿರುತ್ತದೆ
  • ಚಾಮುಂಡೇಶ್ವರಿಯನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Horoscope Rashi Bhavishya
Advertisment