/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ರೋಹಿಣಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ಸಣ್ಣಪುಟ್ಟ ವ್ಯಾಪಾರಿಗಳಿಗೆ ಮತ್ತು ಕಮಿಷನ್ ಏಜೆಂಟ್ಸ್ ಗಳಿಗೆ ಲಾಭವಿದೆ
- ಕುಟುಂಬದಲ್ಲಿ ಚಿಕ್ಕ ವಯಸ್ಸಿನ ಮಕ್ಕಳ ಜೊತೆ ಸೌಹಾರ್ದತೆಯಿಂದ ವರ್ತಿಸಿ
- ವಾಹನಗಳ ವಿಚಾರದಲ್ಲಿ ಜಾಗ್ರತೆವಹಿಸಿ
- ಹಣದ ಖರ್ಚಿಗೆ ಹಿನ್ನಡೆ ಹೊಂದುತ್ತೀರಿ ಅಥವಾ ಅವಮಾನಕ್ಕೀಡಾಗುತ್ತೀರಿ
- ಮಗುವಿಗೆ ತೊಂದರೆಯಾದರೆ ನಿಮಗೆ ಅವಮಾನವಾಗುವ ಸಾಧ್ಯತೆಗಳಿವೆ
- ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತೀರಿ
- ಆಂಜನೇಯ ಸ್ವಾಮಿಯನ್ನು ಸ್ಮರಿಸಿ
ವೃಷಭ
- ಸಮಾಜದಲ್ಲಿ ನಿಮ್ಮನ್ನು ಗೌರವಿಸಿ. ಸನ್ಮಾನಿಸುತ್ತಾರೆ
- ಇಂದು ಯಾವುದಾದ್ರೂ ಸಂದರ್ಶನಗಳಿದ್ದರೆ ಶುಭದಿನ
- ಮೇಲಾಧಿಕಾರಿಗಳಿಗೆ ಮನೆಯವರ ಜೊತೆಯಲ್ಲಿ ಅನ್ಯೋನತೆ ಇರಲಿ
- ಮಕ್ಕಳ ಬಗ್ಗೆ ಪೋಷಕರಿಗೆ ಎಚ್ಚರವಿರಲಿ
- ಕೆಲಸದಲ್ಲಿ ನಿಮ್ಮ ಗುಣಮಟ್ಟ ಸುಧಾರಣೆಯಾಗುತ್ತದೆ
- ಈ ರಾಶಿಯ ಚಿಕ್ಕ ಮಕ್ಕಳಿಗೆ ಸಮಸ್ಯೆಯಾಗಬಹುದು
- ಮಹಾ ಗಣಪತಿಯನ್ನು ಆರಾಧಿಸಿ
ಮಿಥುನ
- ಹಳೆಯ ಸಾಲವನ್ನು ಮರುಪಾವತಿಸಲು ತೊಂದರೆಯಾಗಬಹುದು
- ತಾಯಿಯ ಆರೋಗ್ಯದ ಬಗ್ಗೆ ಗಮನಹರಿಸಿ
- ಗ್ರಹಗತಿಯಿಂದ ನೌಕರಿಯಲ್ಲಿ, ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಆಯಾಸವಾಗುತ್ತದೆ
- ವ್ಯಾವಹಾರಿಕವಾಗಿ ಸಾಲ ಮಾಡಬೇಡಿ
- ನೌಕರಿಯಲ್ಲಿ, ವಿದ್ಯಾಭ್ಯಾಸದಲ್ಲಿ ಅತೀವ ಉನ್ನತಿಗೆ ಅವಕಾಶ ಮಾಡಿಕೊಡುತ್ತದೆ
- ನಿಮ್ಮ ಪೂರ್ವಿಕರು ಮಾಡಿರುವ ಪುಣ್ಯದಿಂದ ನಿಮ್ಮ ಜೀವನ ಹಸನಾಗಿರುತ್ತದೆ
- ಮಾತಾ ಲಲಿತಾ ಪರಮೇಶ್ವರಿಯನ್ನು ಆರಾಧಿಸಿ
ಕಟಕ
- ಕಾರ್ಯಕ್ಷೇತ್ರದಲ್ಲಿ ಉತ್ತಮ ದಕ್ಷತೆ, ಪ್ರತಿಭೆಯನ್ನು ತೋರಿ ಜಯಶೀಲರಾಗುತ್ತೀರಿ
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ನಿಮ್ಮ ಗುರಿಯ ಬಗ್ಗೆ ನಿಮಗೇ ಆಶ್ಚರ್ಯ ಕಾಣಬಹುದು
- ನಿಮ್ಮ ಪ್ರಗತಿಯಲ್ಲಿ ನಿಮ್ಮ ಪೂರ್ವ ಸುಕೃತವೇ ಸರಿ
- ನಿಮ್ಮ ನಿರಂತರ ಪ್ರಯತ್ನ, ಹಿರಿಯರ ಆಶೀರ್ವಾದ ಈಗ ಫಲಿಸಿದೆ
- ಮನೆಯ ಸದಸ್ಯರೊಂದಿಗೆ ಪ್ರೀತಿ ವಿಶ್ವಾಸ ಹೆಚ್ಚು ಮಾಡಿಕೊಳ್ಳಿ
- ಗುರು ದತ್ತಾತ್ರೇಯರನ್ನು ಆರಾಧಿಸಿ
ಸಿಂಹ
- ಪ್ರಕೃತಿ ಮತ್ತು ಪ್ರಾಣಿ ಸಂಕುಲವನ್ನು ವೀಕ್ಷಿಸಲು ಪ್ರವಾಸ ಕೈಗೊಳ್ಳಬಹುದು
- ಮನೆಯಲ್ಲಿ ಮಕ್ಕಳಿಗೆ ಆರೋಗ್ಯದ ಸಮಸ್ಯೆ ಕಾಡಬಹುದು ಆತಂಕ ಬೇಡ
- ವೈದ್ಯರ ಸಲಹೆ ಪಡೆಯಿರಿ ತಾತ್ಸಾರ ಬೇಡ
- ಕಾನೂನಾತ್ಮಕ ವಿಷಯಗಳಲ್ಲಿ ಹಲವು ತೊಡಕುಗಳು ಕಾಣಬಹುದು
- ಸಂಶೋಧಕರಿಗೆ ಮತ್ತು ವಿಜ್ಞಾನಿಗಳಿಗೆ ಬಹಳ ವಿಶೇಷವಾದ ಶುಭದಿನ
- ಇಂದ್ರಾಕ್ಷೀ ದೇವಿಯನ್ನು ಪ್ರಾರ್ಥಿಸಿ
ಕನ್ಯಾ
- ದೃಢವಾದ ನಂಬಿಕೆ ಮಾತ್ರ ಕೆಲಸ ಮಾಡುವುದೆಂದು ಅರಿಯಬೇಕು
- ಆಸ್ತಿಕತೆಯ ಬಗ್ಗೆ ಪ್ರಶ್ನೆ ಮಾಡುವ ಮನಸ್ಥಿತಿ ಹೆಚ್ಚಾಗುವ ಸಾಧ್ಯತೆಯಿದೆ
- ಪರನಿಂದೆ, ಆತ್ಮಪ್ರಶಂಸೆ ಎರಡೂ ಈ ದಿನ ಬೇಡ
- ಹಣ್ಣು ಬೆಳೆಗಾರರಿಗೆ ಮತ್ತು ವ್ಯಾಪಾರಿಗಳಿಗೆ ಶುಭವಿದೆ
- ಷೇರುಪೇಟೆಯಲ್ಲಿ ಮಾತ್ರ ಹಣ ಹೂಡಿಕೆ ಮಾಡಬೇಡಿ
- ವ್ಯಾವಹಾರಿಕವಾಗಿ ಉತ್ತಮ ಲಾಭ, ಹಣ ಸಿಗಬಹುದು
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ತುಲಾ
- ಮಕ್ಕಳಿಗೆ ಶುಭಫಲವಿರುವ ದಿನ
- ನಿಮ್ಮ ಮೇಲಾಧಿಕಾರಿಗಳು ನಿಮಗೆ ಹೆಚ್ಚಿನ ಜವಾಬ್ದಾರಿ ಕೊಡಬಹುದು
- ಮನೆಯಲ್ಲಿ ರಾತ್ರಿಯ ಸಮಯ ಸಮಾಧಾನಕರವಾಗಿರುತ್ತದೆ
- ಕಠಿಣ ಪರಿಶ್ರಮಕ್ಕೆ ಪೂರ್ಣ ಪ್ರತಿಫಲ ಸಿಗದೆ ಇರಬಹುದು
- ಕಾರ್ಯಕ್ಷೇತ್ರದಲ್ಲಿ ಹೊಸ ಸಮಸ್ಯೆ ಉದ್ಭವವಾಗುವ ಸಾಧ್ಯತೆಯಿದೆ
- ಹಿತೈಷಿಗಳು ಮತ್ತು ಸ್ನೇಹಿತರು ನಿಮ್ಮ ನ್ಯೂನತೆಗಳನ್ನು ಗುರುತಿಸಿ ತೋರಿಸುವ ಸಾಧ್ಯತೆಯಿದೆ
- ನಿಮ್ಮ ಅಸುಯಾ ಪರವಾದ ಬುದ್ಧಿಯನ್ನ ದೂರ ಮಾಡಿಕೊಳ್ಳಬೇಕು
- ಕುಲದೇವತಾ ಆರಾಧನೆ ಮಾಡಿ
ವೃಶ್ಚಿಕ
- ವಾತಾವರಣ ವ್ಯತ್ಯಾಸದಿಂದ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
- ಹಣ, ಅಧಿಕಾರ, ವ್ಯವಸ್ಥೆಗಳಿಂದ ಅಹಂಕಾರ ಹೆಚ್ಚಾಗಬಹುದು
- ಬೇರೆಯವರ ಆಲೋಚನೆ, ಮನಸ್ಥಿತಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ
- ನಿರ್ದಿಷ್ಟವಾದ ವಿಚಾರಗಳಿಗೆ ಸ್ನೇಹಿತರು, ಕುಟುಂಬದ ಮಧ್ಯೆ ಜಗಳವಾಗಬಹುದು
- ಕಡಿಮೆ ರಕ್ತದೊತ್ತಡ ಇರುವವರು ಜಾಗ್ರತೆವಹಿಸಿ, ವೈದ್ಯರ ಸಲಹೆ ಪಡೆಯಿರಿ
- ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸಿ
- ಚಂಡಿಕಾ ಪರಮೇಶ್ವರಿಯನ್ನು ಆರಾಧಿಸಿ
ಧನುಸ್ಸು
- ತಂದೆಯವರ ಮಾತು ಮಾರ್ಗದರ್ಶನ ಪಡೆಯಿರಿ, ತಾತ್ಸಾರ ಬೇಡ
- ಸಹೋದ್ಯೋಗಿಗಳಿಗೆ ನಿಮ್ಮ ಪರಿಸ್ಥಿತಿ ಅರ್ಥವಾದ್ರೂ ಪ್ರಯೋಜನಕ್ಕೆ ಬರುವುದಿಲ್ಲ
- ವಿದ್ಯೆ, ಬುದ್ಧಿಗೂ ಮೀರಿ ಮಾನವೀಯತೆ ಮೆರೆಯಬೇಕಾದ ಸಂದರ್ಭ
- ಮೇಲಾಧಿಕಾರಿಗಳ ವರ್ತನೆ ಮನಸ್ಸಿಗೆ ನೋವುಂಟು ಮಾಡಬಹುದು
- ಹೊಸ ಕೆಲಸಗಳನ್ನು ಮಾಡಲು ಆತ್ಮವಿಶ್ವಾಸದ ಕೊರತೆ ಕಾಡಬಹುದು
- ಬೇರೆಯವರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ
- ಕಾಳಿದೇವಿಯನ್ನು ಆರಾಧನೆ ಮಾಡಿ
ಮಕರ
- ತಪ್ಪು ಮಾಹಿತಿ ದುಷ್ಪರಿಣಾಮ ಉಂಟು ಮಾಡಬಹುದು
- ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವ ಕಾಲ ಕೂಡಿ ಬಂದಿದೆ
- ವಿದ್ಯಾಭ್ಯಾಸಕ್ಕೆ ಸಾಲ ದೊರೆಯಬಹುದು, ಸರಿಯಾಗಿ ವ್ಯವಹರಿಸಿ
- ಪ್ರೇಮಿಗಳಿಗೆ ಉತ್ತಮವಾದ ದಿನ, ಆದರೆ ಸುಳ್ಳು ಹೇಳಬಾರದು
- ವಿದೇಶದಲ್ಲಿ ಅಧ್ಯಯನ ಮಾಡಬೇಕೆನ್ನುವ ವಿದ್ಯಾರ್ಥಿಗಳಿಗೆ ಅನುಕೂಲವಿದೆ
- ವಿವಾದಿತ ವಿಷಯಗಳಿದ್ದರೆ ಇಂದು ಇತ್ಯರ್ಥವಾಗುವ ಸಾಧ್ಯತೆಯಿದೆ
- ಪಾರಿಜಾತ ಸರಸ್ವತಿಯನ್ನು ಆರಾಧಿಸಿ
ಕುಂಭ
- ಧೂಳು ಮತ್ತು ಸೂರ್ಯನ ಬೆಳಕಿನಿಂದ ಸಮಸ್ಯೆ ಉಂಟಾಗಬಹುದು
- ಯೋಗಾಭ್ಯಾಸ ಮಾಡುವ ಬಗ್ಗೆ ಚಿಂತಿಸಿ ಒಳ್ಳೆಯದಾಗುತ್ತದೆ
- ಯಾವುದೇ ಕೆಲಸದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗದೆ ಇರಬಹುದು
- ಬೇರೆಯವರ ಭರವಸೆಯ ಮಾತುಗಳು ನಿಮಗೆ ಉಪಯೋಗಕ್ಕೆ ಬರುವುದಿಲ್ಲ
- ಹಳೆಯ ಸಂಪರ್ಕಗಳಿಂದಾಗಿ ಸಮಸ್ಯೆಗಳು ಉಲ್ಬಣವಾಗುವ ಸಾಧ್ಯತೆಯಿದೆ
- ತಲೆನೋವು ಅಥವಾ ಮೈಗ್ರೇನ್ಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
- ನಾರಾಯಣನನ್ನು ಪ್ರಾರ್ಥಿಸಿ
ಮೀನ
- ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ
- ಸಾಯಂಕಾಲ ಕಾಲಿಗೆ ಪೆಟ್ಟು ಬೀಳುವ, ನೋವಾಗುವ ಸಾಧ್ಯತೆಯಿದೆ
- ಈ ದಿನ ನಿಮ್ಮ ಇಮೇಜ್ ಹೆಚ್ಚಾಗುವ ಸಾಧ್ಯತೆಯಿದೆ
- ನಿಮ್ಮಲಿರುವ ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಲಾಭವಿದೆ
- ನಿಮ್ಮ ಆತ್ಮವಿಶ್ವಾಸದಿಂದ ಎಲ್ಲ ಕೆಲಸಗಳಲ್ಲಿ ಜಯಪ್ರದವಾಗಲಿದೆ
- ಮನೆಯವರ ಸಲಹೆ ತುಂಬಾ ಗಣನೀಯವಾಗಿರುತ್ತದೆ
- ಚಾಮುಂಡೇಶ್ವರಿಯನ್ನು ಆರಾಧಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ