ಹೊಸ ಪ್ಲಾನ್ ಬೇಡ.. ಈ ದಿನ ಸ್ನೇಹಿತರು, ಬಂಧುಗಳು ಸಹಾಯ ಮಾಡುತ್ತಾರೆ; ಇಲ್ಲಿದೆ ಇಂದಿನ ಭವಿಷ್ಯ!

ಹಳೆಯ ಕಹಿ ನೆನಪುಗಳು ನಿಮ್ಮನ್ನು ಕಾಡಬಹುದು, ಅಸಭ್ಯವಾಗಿ ವರ್ತನೆ ಮಾಡಿದರೆ ಅವಮಾನ ಅಥವಾ ಶಿಕ್ಷೆಗೆ ಒಳಗಾಗುತ್ತೀರಿ. ಹಣದ ಚಿಂತೆ ಕಾಡಬಹುದು ಆದರೆ ತೊಂದರೆಯಾಗದೇ ಹಣ ಸಿಗುವ ಅವಕಾಶ ಇದೆ. ನಿಮ್ಮ ವ್ಯವಹಾರ, ವ್ಯಾಪಾರ, ವೃತ್ತಿಯಲ್ಲಿ ಸಭ್ಯರಾಗಿರಬೇಕು.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಮೃಗಶಿರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಈ ದಿನ ಸ್ನೇಹಿತರು,ಬಂಧುಗಳು ನಿಮಗೆ ಸಹಾಯ ಮಾಡುತ್ತಾರೆ
  • ಈ ರಾಶಿಯ ಸ್ತ್ರೀಯರು ಸ್ವಉದ್ಯೋಗ ಪ್ರಾರಂಭಿಸಲು ಶುಭದಿನ
  • ವಿದ್ಯಾರ್ಥಿಗಳಿಗೆ ಹೊರಗಿನಿಂದ ಮೆಚ್ಚುಗೆಯ ಮಾತು ಬರುತ್ತದೆ 
  • ದುಡ್ಡಿನ ಬಗ್ಗೆ ಹೆಚ್ಚಿನ ಆಸಕ್ತಿಯಿರುವುದಿಲ್ಲ 
  • ಇಷ್ಟವಾದ ಮಿತ್ರರ ಮಾತು ಬಹಳ ಹಿತವೆನಿಸುತ್ತದೆ
  • ನಿಮ್ಮ ವಿನಮ್ರ ಭಾವನೆ ನಿಮಗೆ ಯಶಸ್ಸು ಕೊಡುತ್ತದೆ
  • ಮಾನಸಿಕ ಸ್ಥಿರತೆಯಿಂದ ನಿಮ್ಮ ಉದ್ಯೋಗ, ವೃತ್ತಿಯಲ್ಲಿ ಸಾಧನೆ ಮಾಡುತ್ತೀರಿ
  •  ಲಲಿತಾ ಸಹಸ್ರನಾಮ ಶ್ರವಣ ಮಾಡಿ 

ವೃಷಭ

RASHI_BHAVISHA_VRSHABA

  • ಹಳೆಯ ವಿಚಾರಗಳು ಪ್ರಸ್ತಾಪವಾಗಿ ನಿಮಗೆ ತೊಂದರೆ ಉಂಟಾಗಬಹುದು
  • ತಾಳ್ಮೆಯಿರಲಿ,ನಾಟಕೀಯ ಜೀವನ ಬೇಡವೆಂದೇ ಹೇಳಬೇಕಾಗುತ್ತದೆ
  • ಧನಬಲ ನಿಮಗೆ ಕೆಲಸ ಮಾಡುವುದಿಲ್ಲವೆಂದು ಗೊತ್ತಾಗುತ್ತದೆ
  • ಅಪರಾಧಭಾವ ನಿಮ್ಮನ್ನ ಹೆಚ್ಚಾಗಿ ಕಾಡಬಹುದು  
  • ಅಧಿಕಾರಿಗಳ ವಿಚಾರಣೆಗೆ ಒಳಪಡಬಹುದು
  • ರಿಯಲ್​ ಎಸ್ಟೇಟ್​ ಉದ್ಯಮಿಗಳಿಗೆ ಹಿನ್ನಡೆಯಾಗಬಹುದು
  • ಅಪಘಾತ ಸಂಭವಿಸುವ ಸೂಚನೆ ಇದೆ ಎಚ್ಚರಿಕೆ ಇರಲಿ
  • ದುರ್ಗಾದೇವಿಯನ್ನು ಆರಾಧಿಸಿ 

ಮಿಥುನ

RASHI_BHAVISHA_MITHUNA

  • ವೃತ್ತಿ ಜೀವನದ ಬಗ್ಗೆ ಸಮಾಧಾನವಿರುತ್ತದೆ
  • ಮಕ್ಕಳ ಆರೋಗ್ಯ,ವಿದ್ಯಾಭ್ಯಾಸ ಮನಸ್ಸಿಗೆ ಬೇಸರ ಉಂಟುಮಾಡಬಹುದು
  • ಬೇರೆಯವರಿಂದ ನಿಮ್ಮ ತಪ್ಪು ತಿಳಿದಾಗ ನಿಮ್ಮ ಮೇಲಿರುವ ನಂಬಿಕೆ ಉಳಿಯುವುದಿಲ್ಲ
  • ತಪ್ಪುಗಳನ್ನು ಮುಚ್ಚಿಡಬೇಡಿ ಒಪ್ಪಿಕೊಳ್ಳಿ
  • ಆತ್ಮ ಪ್ರಶಂಸೆ ಹಲವರಿಗೆ ಆಶ್ಚರ್ಯ ಉಂಟುಮಾಡಬಹುದು
  • ಪ್ರೇಮಿಗಳು ಈ ದಿನ ಸುಳ್ಳು ಹೇಳಬೇಡಿ
  • ದಿನದ ಎಲ್ಲಾ ಕೆಲಸಗಳು ನೆರವೇರುವ ಆತ್ಮ ವಿಶ್ವಾಸ ನಿಮ್ಮದಾಗಿರುತ್ತದೆ
  •  ಇಷ್ಟದೇವತಾ ಪ್ರಾರ್ಥನೆ ಮಾಡಿ

ಕಟಕ

RASHI_BHAVISHA_KATAKA

  • ರಾಜಕೀಯ ವ್ಯಕ್ತಿಗಳು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭ
  • ಹೊಸ ಯೋಜನೆಗಳನ್ನು ಮಾಡಬೇಡಿ ಅಂತ ಹೇಳಬೇಕಾಗುತ್ತದೆ
  • ಇಂದು  ರೋಗ ಉಲ್ಬಣವಾಗಬಹುದು
  • ಕೃಷಿ ಕಾರ್ಮಿಕರಿಗೆ ಆದಾಯ ಹೆಚ್ಚಳವಾಗಬಹುದು
  • ಮಧುಮೇಹಿಗಳು ಸ್ವಲ್ಪ ಎಚ್ಚರಿಕೆವಹಿಸಿ 
  • ವೈಯಕ್ತಿಕ ಆರೋಗ್ಯ ಸಮಸ್ಯೆಗೆ ಪರಿಹಾರ ದೊರಕಬಹುದು
  • ಫಲ ನೀಡದ ಕೆಲಸಗಳನ್ನು ಸದ್ಯಕ್ಕೆ ಮುಂದೂಡುವುದು ಒಳಿತು
  •  ಹರೇ ಶ್ರೀನಿವಾಸ ಎಂದು ಪ್ರಾರ್ಥಿಸಿ

ಸಿಂಹ 

RASHI_BHAVISHA_SIMHA

  •  ಸ್ನೇಹಿತರ ಕೆಲಸವನ್ನು ನೀವು ಮಾಡಿಕೊಡುವುದರಿಂದ ಬೇಸರ ಉಂಟಾಗಬಹುದು
  • ಅಮೂಲ್ಯವಾದ ಗ್ರಂಥ ಸಂಪಾದನೆ ಅಥವಾ ಓದಿನ ಕಡೆಗೆ ಹೆಚ್ಚು ಗಮನಕೊಡಿ
  • ನಿಮ್ಮ ಒತ್ತಡಗಳು ಇದ್ದರೂ ಕೂಡ ಮುಖ್ಯವಾಗಿ ಆಗಬೇಕಾದ ಕೆಲಸಕ್ಕೆ ಗಮನಹರಿಸಿ
  • ಪ್ರೇಮಿಗಳಿಗೆ ಸುದಿನ ಆದರೆ ದುರುಪಯೋಗ ಮಾಡಿಕೊಳ್ಳಬಾರದು
  • ಹಣ, ವಸ್ತ್ರ ಮನಸ್ಸಿಗೆ ಸಮಾಧಾನ ಕೊಡುವ ಸಂದರ್ಭ
  •  ಕುಟುಂಬದಲ್ಲಿ ಹಲವಾರು ದಿನಗಳಿಂದ ನೆರವೇರದ ಕೆಲಸ ಇಂದು ಪೂರ್ಣವಾಗುತ್ತದೆ
  • ಈಶ್ವರ ಆರಾಧನೆ ಮಾಡಿ

ಕನ್ಯಾ

RASHI_BHAVISHA_KANYA

  •  ಹಿರಿಯರ ಮತ್ತು ಸಂಗಾತಿಯ ಮಾತಿಗೆ ಬೆಲೆ ಕೊಡಬೇಕಾಗುತ್ತದೆ
  • ಶತ್ರುಗಳ ಆಕ್ರಮಣದ ಸೂಚನೆಯಿದೆ ತಾಳ್ಮೆಯಿರಲಿ
  • ಪ್ರಯಾಣವು ತುಂಬಾ ಆಯಾಸವನ್ನುಂಟು ಮಾಡುತ್ತದೆ
  • ನಷ್ಟ ಹೊಂದಿರುವುದಕ್ಕೆ ಪರಿಹಾರ ಮಾರ್ಗವನ್ನು ಹುಡುಕಿಕೊಳ್ಳಿ
  • ಉದ್ಧಟತನದಿಂದ ಮಾತನ್ನು ತಿರಸ್ಕಾರ ಮಾಡಿದರೆ ತೊಂದರೆಯಾಗಬಹುದು
  • ನೀವು ಆಡುವ ಮಾತು ನಿಮಗೆ ತೊಂದರೆಯನ್ನು ಮಾಡಬಹುದು
  • ಭಾವನಾತ್ಮಕ ಸಂಬಂಧ ಹೊಂದಿರುವವರಿಗೆ ಆಘಾತವಾಗಬಹುದು
  • ದೇವರನ್ನು ದೂಷಿಸುವ ಸ್ಥಿತಿಗೆ ನಿಮ್ಮ ನೋವು ಕಾಡಬಹುದು 

ತುಲಾ

RASHI_BHAVISHA_TULA

  • ಸಣ್ಣ ಪುಟ್ಟ ಆಸ್ತಿಯ ವಿಚಾರಕ್ಕೆ ಮನಸ್ತಾಪ ಉಂಟಾಗುವ ಸಾಧ್ಯತೆ
  • ಸುಖವಿದ್ದರೂ ಅನುಭವಿಸಲು ಯೋಗವಿಲ್ಲ ಎಂದು ಹೇಳಬೇಕಾದ ದಿನ 
  • ಮಾನಸಿಕ ಕಿರಿಕಿರಿ,ಹಣದ ತೊಂದರೆ,ಬೇಸರ,ಸಂಬಂಧದಲ್ಲಿ ಒಡಕು ಉಂಟಾಗಬಹುದು 
  • ಮನೆಯಲ್ಲಿ ಶಾಂತಿಯ ವಾತಾವರಣ ಕದಡಿ ಹೋಗಿ ಆತಂಕ ಉಂಟಾಗುತ್ತದೆ 
  • ಇಂದು ವಾಹನವನ್ನು ಖರೀದಿಸಬಹುದು
  • ಆದ್ದರಿಂದ ಈ ಸಮಸ್ಯೆಯನ್ನು ಮಾತಿನಲ್ಲಿ ಬಗೆಹರಿಸಿದರೆ ಒಳ್ಳೆಯದು
  • ಹಿಂದೆ ಹೂಡಿಕೆ ಮಾಡಿದ್ದ ಹಣ ಈ ದಿನ ಲಾಭವನ್ನು ನೀಡುವ ಸೂಚನೆಯಿದೆ
  • ಕಲಾಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಉತ್ತಮ ಸ್ಥಾನಮಾನಗಳು ದೊರೆಯಲಿದೆ
  • ಅಶಕ್ತರಿಗೆ, ರೋಗಿಗಳಿಗೆ ಹಣ್ಣುಗಳನ್ನು ಕೊಡಿ

ವೃಶ್ಚಿಕ

RASHI_BHAVISHA_VRUSHCHIKA

  • ಉನ್ನತ ವಿದ್ಯಾಭ್ಯಾಸಕ್ಕಾಗಿ ನಗರಗಳಿಗೊ ಅಥವಾ ವಿದೇಶಗಳಿಗೊ ಹೋಗುವವರಿಗೆ ಅನುಕೂಲದ ದಿನ
  • ನಿವೃತ್ತರಾದ ಸರ್ಕಾರಿ ನೌಕರರಿಗೆ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ
  • ಬೆನ್ನು ನೋವಿನ ಸಮಸ್ಯೆಯಿಂದ ನೀವು ಬಳಲಬಹುದು
  • ಕುಟುಂಬ ಮತ್ತು ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು
  • ಕಮಿಷನ್​ ಏಜೆಂಟ್ಸ್​ಗಳಿಗೆ ಶುಭ ಮತ್ತು ಲಾಭದಾಯಕವಾಗುವ ದಿನ
  • ಮನೆಯಲ್ಲಿ ಎಲ್ಲರೂ ಉತ್ಸಾಹ ಭರಿತರಾಗಿರುತ್ತಾರೆ
  • ಮನೆಯಲ್ಲಿ ಏನೋ ಸಂತಸದ ವಾತಾವರಣವಿರುತ್ತದೆ
  •  ವಿಘ್ನೇಶ್ವರನನ್ನು ಪ್ರಾರ್ಥಿಸಿ

ಧನುಸ್ಸು

RASHI_BHAVISHA_DHANASU

  • ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಬಹುದು
  • ಕಾನೂನು ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ
  •  ಹಿರಿಯರ ಮಾರ್ಗದರ್ಶನ ಪಡೆಯಿರಿ
  • ವಕೀಲರಿಗೆ ಶುಭದಿನ, ಲಾಭವೂ ದೊರೆಯುವಂತ ದಿನ
  • ಕಬ್ಬಿಣ ವ್ಯಾಪಾರ ಮಾಡುವವರಿಗೆ ಲಾಭವಿದ್ರೂ ಕೂಡ ದಂಡ ಕಟ್ಟಬೇಕಾಗಬಹುದು
  •  ಹಣ ಹೂಡಿಕೆ ಮತ್ತು ಹ ಹಣ ಖರ್ಚು ಮಾಡಬೇಡಿ
  • ಶನೈಶ್ವರನನ್ನು ದರ್ಶನ ಮಾಡಿ, ಎಳ್ಳೆಣ್ಣೆ  ದಾನ ಮಾಡಿ 

ಮಕರ

RASHI_BHAVISHA_MAKARA

  • ಹಳೆಯ ಕಹಿ ನೆನಪುಗಳು ನಿಮ್ಮನ್ನು ಕಾಡಬಹುದು
  • ಅಸಭ್ಯವಾಗಿ ವರ್ತನೆ ಮಾಡಿದರೆ ಅವಮಾನ ಅಥವಾ ಶಿಕ್ಷೆಗೆ ಒಳಗಾಗುತ್ತೀರಿ
  • ಹಣದ ಚಿಂತೆ ಕಾಡಬಹುದು ಆದರೆ ತೊಂದರೆಯಾಗದೆ ಹಣ ಸಿಗುವ ಅವಕಾಶ
  • ನಿಮ್ಮ ವ್ಯವಹಾರ,ವ್ಯಾಪಾರ,ವೃತ್ತಿಯಲ್ಲಿ ಸಭ್ಯರಾಗಿರಬೇಕು
  • ತಾವು ಜೀವನದಲ್ಲಿ ನಡೆದು ಬಂದ ಹಾದಿ ನೆನಪಿಗೆ ಬರುತ್ತದೆ
  • ವ್ಯಾಪಾರ - ವ್ಯವಹಾರದಲ್ಲಿ ಜಾಗ್ರತೆಯಿಂದ ಹಣವನ್ನು ಹೂಡಿಕೆ ಮಾಡಿ
  • ಹೊಸದಾಗಿ ಯಾವುದೇ ರೀತಿಯ ವ್ಯವಹಾರ ಮಾಡಲು ಇಂದು ಶುಭದಿನವಲ್ಲ
  • ಇಷ್ಟ ದೇವತಾ ಧ್ಯಾನ ಮಾಡಿ

ಕುಂಭ

RASHI_BHAVISHA_KUMBHA

  • ಮನೆಯಲ್ಲಿ ಎಲ್ಲರ ವಿಶ್ವಾಸ,ಪ್ರೀತಿ,ನಂಬಿಕೆಗಳಿಗೆ ಬದ್ಧರಾಗಿರುತ್ತೀರಿ
  • ವಿದ್ಯಾರ್ಥಿಗಳು ದುಂದುವೆಚ್ಚ,ಕಾಲಾಹರಣವನ್ನು ಮಾಡಬಹುದು 
  • ಕೆಲವೇ ಕೆಲವರು ಮಾತ್ರ ನಿಮ್ಮಿಂದ ಸ್ಫೂರ್ತಿ ಪಡೆಯಬಹುದು
  • ಇದರಿಂದ ಮನಸ್ಸಿಗೆ ಬೇಸರ ಹಾಗೂ ನೋವಾಗುವ ಸಾಧ್ಯತೆ ಹೆಚ್ಚು
  • ಮನೆಯ ಹೊರಗೆ ಹಾಗೂ ನೌಕರಿಯ ಸ್ಥಳದಲ್ಲಿ ಉಹಾಪೋಹಗಳಿರಬಹುದು
  • ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ
  • ಮನೆಯಲ್ಲಿ ಉತ್ತಮವಾದ ವಾತಾವರಣ 
  • ಕುಲದೇವರನ್ನು ಪ್ರಾರ್ಥಿಸಿ

ಮೀನ

RASHI_BHAVISHA_MEENA

  • ಮಾನಸಿಕವಾಗಿ ತುಂಬಾ ಒತ್ತಡ ಹಾಗೂ ಕಿರಿಕಿರಿ ಇರುವ ದಿನ
  •  ಉನ್ನತವಾದ ಅಧಿಕಾರಿಗಳ ಸಂಬಂಧ ಈ ಸಂದರ್ಭದಲ್ಲಿ ಏರ್ಪಾಟಾಗುತ್ತದೆ
  • ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಸಾಲದ ಅವಶ್ಯಕತೆ ಕಾಣಬಹುದು
  • ಮನಸ್ಸು ತುಂಬಾ ಗಾಸಿಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ
  • ನೌಕರಿಯ ದೃಷ್ಟಿಯಿಂದ ದೂರ ಪ್ರಯಾಣದ ಸೂಚನೆಗಳಿವೆ
  • ತುಂಬಾ ಆಲೋಚನೆಗಳನ್ನು ಮಾಡುವ ದಿನವಾಗಿರುತ್ತದೆ
  • ಸಾಲಿಗ್ರಾಮ ಮಹಾವಿಷ್ಣುವನ್ನು ಧ್ಯಾನ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Horoscope Rashi Bhavishya
Advertisment