ಬಾಂಧವ್ಯ ಗಟ್ಟಿ ಮಾಡಿಕೊಳ್ಳಿ.. ಹೊಸ ವ್ಯಾಪಾರಕ್ಕೆ ಸಂಬಂಧಿಕರ ಬೆಂಬಲ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

ಸಂಬಳ ಪಡೆಯುವ ಖಾಸಗಿ ನೌಕರರಿಗೆ ಸ್ವಲ್ಪ ಹಿನ್ನಡೆ, ಗೊಂದಲಗಳಾಗುತ್ತವೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನಿರೀಕ್ಷೆ ಮಾಡಬಹುದಾದ ದಿನವಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಗುಣಮಟ್ಟದ ಕೆಲಸ ಮಾಡಿ ಸಮರ್ಥರು ಎಂದು ಕರೆಸಿಕೊಳ್ಳುತ್ತೀರಿ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ  3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ವ್ಯಾಯಾಮದಿಂದ ದೇಹಕ್ಕೂ, ಧ್ಯಾನದಿಂದ ಮನಸ್ಸಿಗೂ ನೆಮ್ಮದಿ ಸಿಗಬಹುದು
  • ಬೇರೆಯವರನ್ನು ತೃಪ್ತಿ ಪಡಿಸಲು ಹಣ ಖರ್ಚಾಗಬಹುದು
  • ನಿಮ್ಮ ಶಕ್ತಿ ಮೀರಿದ ವ್ಯವಹಾರ,ಸಂಬಂಧ,ಸಂಪರ್ಕಗಳಿಂದ ಅವಮಾನ ಸಾಧ್ಯತೆ ಇದೆ
  • ವೈಯಕ್ತಿಕ ವಿಚಾರಕ್ಕೆ ಮನೆಯವರಿಗೆಲ್ಲಾ ಅವಮಾನ ಮಾಡುವ ಸಂದರ್ಭವಿರಬಹುದು
  • ಕುಟುಂಬದಲ್ಲೂ ಕೂಡ ಸಣ್ಣಪುಟ್ಟ ಸಮಸ್ಯೆಗಳು ಉದ್ಭವವಾಗಬಹುದು
  • ಹಳೆ ಶತ್ರುಗಳ ಕಾಟ ಇಂದು ತಲೆದೋರಬಹುದು
  •  ಶತ್ರು ಸಂಹಾರಕ ಹಿಡುಂಬ ಮಂತ್ರ ಜಪ ಮಾಡಿ

ವೃಷಭ

RASHI_BHAVISHA_VRSHABA

  • ಕಾರ್ಯಕ್ಷೇತ್ರಗಳಲ್ಲಿ, ವ್ಯಾಪಾರಗಳಲ್ಲಿ ಪೈಪೋಟಿಯಿಂದ ತೊಂದರೆಯ ಸೂಚನೆ ಇದೆ
  • ಆರೋಗ್ಯ  ಮುಖ್ಯ ನಂತರ ವ್ಯವಹಾರ ಅನ್ನೋದನ್ನ ಅರಿಯಬೇಕಾಗುತ್ತದೆ
  • ಶರೀರದ ನೋವು ನಿಮ್ಮನ್ನು ಕಾಡಬಹುದು
  • ಮಾನಸಿಕವಾಗಿ ನೀವು ತುಂಬಾ ಕುಗ್ಗಿ ಹೋಗುತ್ತೀರಿ
  • ಮನಸ್ಸಿಗೆ ಯಾವುದೇ ರೀತಿಯ ಆಯಾಸ ಕಾಣುವುದಿಲ್ಲ
  •  ವ್ಯಾವಹಾರಿಕವಾಗಿಯೇ ಚಿಂತೆ ಮಾಡುತ್ತಿರುತ್ತೀರಿ 
  • ನಿಯಮಿತ ಆಹಾರ ಸೇವನೆ ಒಳಿತು
  •  ಬಿಳಿ ಎಕ್ಕದ ಗಿಡವನ್ನು ಪೂಜಿಸಿ

ಮಿಥುನ

RASHI_BHAVISHA_MITHUNA

  • ಪ್ರಾಮಾಣಿಕ ಪ್ರಯತ್ನ ಮಾಡಿ ಶುಭವಾಗುತ್ತದೆ
  • ಈ ದಿನ ಕರ್ತವ್ಯ ಲೋಪ ಮಾಡಬೇಡಿ
  • ಉನ್ನತ ಹುದ್ದೆಯಲ್ಲಿರುವವರ ದಾಕ್ಷಿಣ್ಯಕ್ಕೆ ಕೆಲಸ ಮಾಡಬೇಕಾಗುತ್ತದೆ ಜಾಗ್ರತೆ ಇರಲಿ
  •  ಹತ್ತು ಹಲವು ಆಲೋಚನೆಗಳು ಬೇಡ, ಒಂದು ತೀರ್ಮಾನಕ್ಕೆ ಬದ್ಧರಾಗಿರಿ
  • ಹಣ ಅಥವಾ ದ್ರವ್ಯಕ್ಕೆ ಆಸೆ ಪಟ್ಟು ಅವಮಾನವಾಗುವ ಸಾಧ್ಯತೆ ಇದೆ
  • ಸಂಬಂಧಿಕರು ಮತ್ತು ಸ್ನೇಹಿತರ ಒತ್ತಡ ಕೆಲಸ ನಿಮಿತ್ತ ಹೆಚ್ಚಾಗಿರುತ್ತದೆ
  •  ಮನಸ್ಸಿಗೆ ಒಪ್ಪುವಂತಹ ಕೆಲಸವನ್ನು ಮಾಡಿ
  • ಚೌಡೇಶ್ವರಿ ದೇವಿಯನ್ನು ಆರಾಧಿಸಿ

ಕಟಕ

RASHI_BHAVISHA_KATAKA

  • ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ಸೃಷ್ಟಿಯಾಗಬಹುದು
  • ಹೆಣ್ಣು ಮಕ್ಕಳಿಗೆ ಸಾಯಂಕಾಲ ಹೊತ್ತಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು ಎಚ್ಚರಿಕೆ
  • ಅಲಂಕಾರಿಕ ಸಾಮಗ್ರಿಗಳಿಗೆ,ಉಡುಗೊರೆಗಳಿಗೆ ತುಂಬಾ ಹಣ ಖರ್ಚು ಮಾಡುತ್ತೀರಿ
  • ಪ್ರೇಮಿಗಳಿಗೆ ತುಂಬಾ ಕುತೂಹಲಕರ ಸಮಯ ಎಂದು ಹೇಳಬಹುದು
  • ಆಸಕ್ತಿಗನುಗುಣವಾಗಿ ಕೆಲಸಗಳು ಸಿಗಬಹುದು
  • ಮನೆಯಲ್ಲಿರುವ ಹಿರೀಕರ ಮಾರ್ಗದರ್ಶನ ಪಡೆಯಿರಿ
  • ಉದ್ಯೋಗಿಗಳು ತಮ್ಮ ಮೇಲಾಧಿಕಾರಿಗಳ ವಿಶ್ವಾಸಕ್ಕೆ ಭಾಜನರಾಗುತ್ತೀರಿ
  •  ರೇಣುಕಾಂಬಾ ದೇವಿಯನ್ನು ಪ್ರಾರ್ಥಿಸಿ

ಸಿಂಹ 

RASHI_BHAVISHA_SIMHA

  • ಮಾಡಬೇಕಾದ ಕರ್ತವ್ಯದಲ್ಲಿ, ಕೆಲಸದಲ್ಲಿ ಬಲಹೀನರಾಗಬಹುದು
  • ಇಂದು ನಿಮ್ಮ ಮನಸ್ಸು ಅತೃಪ್ತಿಯಿಂದ ಕೂಡಿರುತ್ತದೆ 
  • ಚಿಕ್ಕ ಮಕ್ಕಳು ಅಥವಾ ವಿದ್ಯಾರ್ಥಿಗಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು ನಿಗಾವಹಿಸಿ
  • ಈ ದಿನ ಸಮಾಧಾನ, ತಾಳ್ಮೆ ಬೇಕಾಗುತ್ತದೆ
  • ನಕಾರಾತ್ಮಕ ವಿಷಯಗಳೇ ಹೆಚ್ಚು ಗಮನ ಸೆಳೆಯುವಂತಹದ್ದು
  • ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗಬಹುದು
  • ರಕ್ತೇಶ್ವರೀ ಮಂತ್ರ ಶ್ರವಣ ಮಾಡಿ

ಕನ್ಯಾ

RASHI_BHAVISHA_KANYA

  • ಮನಸ್ಸಿನಲ್ಲಿ ಕಲ್ಮಶಗಳಿಲ್ಲದಿದ್ದರೂ ಹೊಸದಾಗಿ ಹುಟ್ಟುವ ಸಾಧ್ಯತೆಗಳಿರುತ್ತವೆ
  •  ಯುವ ಪ್ರೇಮಿಗಳಿಗೆ ತೊಂದರೆಯಿದೆ ಜಾಗ್ರತೆ
  • ಬೇರೆಯವರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಗೆ ಸಿಲುಕಿಕೊಳ್ಳುತ್ತೀರಿ
  •  ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಡೆತಡೆ ಕಾಣಬಹುದು
  •  ಎಲ್ಲದಕ್ಕೂ ಜಗಳವೇ ಪರಿಹಾರವಲ್ಲ ಎಂಬುದನ್ನು ಅರಿಯಬೇಕಾಗುತ್ತದೆ
  • ಸಣ್ಣ ಸಣ್ಣ ವಿಚಾರಗಳಿಗೆ ಮನಸ್ಸು ವಿಕೃತವಾಗುವುದು
  • ಮನೋಭವ ಮಂತ್ರ ಜಪಿಸಿ

ತುಲಾ

RASHI_BHAVISHA_TULA

  • ಸಂಬಂಧಿಕರ ಬಾಂಧವ್ಯ ಗಟ್ಟಿ ಮಾಡಿಕೊಳ್ಳಿ, ವಿರೋಧ ಬೇಡ
  • ಹಳೆಯ ನೆನಪು ಮತ್ತೆ ಕಾಡಬಹುದು
  • ಹೊಸ ವ್ಯಾಪಾರ ಮಾಡಲು ಸಂಬಂಧಿಕರ ಬೆಂಬಲ ಸಿಗಲಿದೆ
  • ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ
  • ರಾಜಕೀಯ ವ್ಯಕ್ತಿಗಳು ತಮ್ಮ ಶಕ್ತಿ ಸಾಮಥ್ರ್ಯವನ್ನು ತಮ್ಮ ಕ್ಷೇತ್ರದಲ್ಲಿ ಪ್ರದರ್ಶಿಸುತ್ತಾರೆ
  • ರಾಯಭಾರೀ ಕೆಲಸ ಮಾಡುವವರಿಗೆ ಫಲವಿದೆ
  • ಅವಕಾಶಗಳ ಲಾಭವನ್ನು ಪಡೆಯಲು ಮುಂದಾಗಬೇಡಿ  ಅವಮಾನವಾಗುವ ಸೂಚನೆಗಳಿರುತ್ತದೆ
  • ಸುಮುಚೀ ದೇವಿಯನ್ನು ಪ್ರಾರ್ಥಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಸಾಯಂಕಾಲ ಚೆನ್ನಾಗಿರುವ ವಾತಾವರಣ ಇರುವುದಿಲ್ಲ
  • ಮುಖ್ಯವಾಗಿ ಮಾಡಬೇಕಾದ ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ
  • ನಿಮ್ಮ ಸಹಪಾಠಿಗಳಿಗೆ, ಸ್ನೇಹಿತರಿಗೆ ವಸ್ತು ಅಥವಾ ಹಣವನ್ನು ದಾನ ಮಾಡುವುದಕ್ಕೆ ಮುಂದಾಗುತ್ತೀರಿ
  •  ಬರಬೇಕಾದ ಸಾಲ ಇಂದು ನಿಮ್ಮ ಹಣ ಕೈ ಸೇರಬಹುದು
  • ಈ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ 
  • ಕುಂಭ ಕಂಠನೀ ಮಂತ್ರ ಜಪ ಪಠಿಸಿ

ಧನುಸ್ಸು

RASHI_BHAVISHA_DHANASU

  • ನಿಮ್ಮ ಕಾರ್ಯವೈಖರಿಯ ಗುಟ್ಟನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ 
  • ಸ್ನೇಹಿತರ ಕೆಲವು ವಿಚಾರಗಳು,ಸ್ವಬಾವಗಳನ್ನು ಕೇಳಿ ನೋವನ್ನು ಅನುಭವಿಸುತ್ತೀರಿ
  • ಆತುರದಲ್ಲಿ ಯಾವುದೇ ನಿರ್ಧಾರಗಳು ಬೇಡ 
  • ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ 
  •  ತುಂಬಾ ಒತ್ತಡವಿದ್ದರೂ ಮನೆಯವರಿಗೆ ನಿಮ್ಮ ಸಮಯವನ್ನು ಮೀಸಲಿಡಬೇಕು
  • ಇಂದು ನಿಮಗೆ ತುಂಬಾ ವಿಶ್ರಾಂತಿಯ ಅಗತ್ಯವಿರುತ್ತದೆ
  • ಕುಟುಂಬದವರ ಸಂತೋಷಕ್ಕಾಗಿ ನೀವು ತ್ಯಾಗ ಮಾಡಬೇಕಾಗಬಹುದು
  • ಏಕಾಕ್ಷರ ಮಂತ್ರವನ್ನು ಪಠನೆ ಮಾಡಿ

ಮಕರ

RASHI_BHAVISHA_MAKARA

  •  ಎಲ್ಲಾ ವ್ಯಾವಹಾರಿಕ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು
  • ಅಗತ್ಯ ಬಿದ್ದರೆ ದಾಖಲೆಗಳನ್ನು ತಿದ್ದುಪಡಿ ಮಾಡಿಸಬೇಕು
  • ಸಂಬಳ ಪಡೆಯುವ ಖಾಸಗಿ ನೌಕರರಿಗೆ ಸ್ವಲ್ಪ ಹಿನ್ನಡೆ, ಗೊಂದಲಗಳಾಗುತ್ತವೆ
  • ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನಿರೀಕ್ಷೆ ಮಾಡಬಹುದಾದ ದಿನ
  •  ಕಡಿಮೆ ಸಮಯದಲ್ಲಿ ಹೆಚ್ಚು ಗುಣಮಟ್ಟದ ಕೆಲಸ ಮಾಡಿ ಸಮರ್ಥರು ಅಂತ ಕರೆಸಿಕೊಳ್ಳುತ್ತೀರಿ
  • ತಂದೆಗೆ ಹೃದಯ ಸಂಬಂಧಿ ತೊಂದರೆ ಕಾಣಬಹುದು ತಾತ್ಸಾರ ಮಾಡಬೇಡಿ
  •  ಪರಂಜೋತ್ಯಿ ಕೋಶಾಂಬಾ ಮಂತ್ರ ಪಡಿಸಿ

ಕುಂಭ

RASHI_BHAVISHA_KUMBHA

  • ಕುಟುಂಬ ಸದಸ್ಯರ ಸಹಕಾರ ತುಂಬಾ ಅಗತ್ಯವಿರುತ್ತದೆ
  • ವ್ಯಾಪಾರಸ್ಥರಿಗೆ ಶುಭ -ಲಾಭಗಳಾಗುವ ದಿನ 
  • ಬೇರೆಯವರ ಕೆಲಸದಲ್ಲಿ ತಪ್ಪು ಹುಡುಕಬೇಡಿ
  • ಇಂದು ಮಾನಸಿಕವಾಗಿ ಬೇಸರ ಉಂಟಾಗಬಹುದು
  • ಮನೆಯಲ್ಲಿಯೂ ನಿಮ್ಮ ಕೆಲಸದಲ್ಲಿಯೂ ನೆಮ್ಮದಿ ಇರೋದಿಲ್ಲ
  • ಕೆಲವು ನಿರ್ಧಾರಗಳಿಂದ ಬೇರೆ ಬೇರೆ ರೀತಿಗಳಲ್ಲಿ ದೋಷಗಳುಂಟಾಗಬಹುದು
  • ತುಂಬಾ ಅಗತ್ಯವಿರುವ ಕೆಲಸಗಳು ವಿಳಂಬವಾಗಬಹುದು 
  • ಸಣ್ಣ ಸಣ್ಣ ವಿಚಾರಗಳಿಗೆ ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
  • ತುಂಬಾ ಅನಗತ್ಯ ವಿಚಾರಕ್ಕೆ ಜಗಳ ಮಾಡಿಕೊಳ್ಳುತ್ತೀರಿ
  •  ಮಹಾದಹರ ಮಂತ್ರ ಶ್ರವಣ ಮಾಡಿ

ಮೀನ

RASHI_BHAVISHA_MEENA

  • ಅವಿವಾಹಿತ ಹೆಣ್ಣು ಮಕ್ಕಳಿಗೆ ಶುಭ ಸೂಚನೆ ಇದೆ
  • ಮಾಧ್ಯಮದಲ್ಲಿ ಕೆಲಸ ನಿರ್ವಹಿಸುವವರಿಗೆ ಲಾಭವಿದೆ ಜೊತೆಗೆ ಸ್ಥಾನಪಲ್ಲಟ ಆಗಬಹುದು
  •  ವ್ಯವಹಾರವನ್ನು ವಿಸ್ತರಣೆ ಮಾಡಿಕೊಳ್ಳಲು ಚಿಂತನೆ ಮಾಡಬಹುದು
  •  ಕೌಟುಂಬಿಕವಾಗಿ ಉತ್ತಮ ವಾತಾವರಣವಿರುತ್ತದೆ
  • ಅನಾರೋಗ್ಯ ಪೀಡಿತರಿಗೆ ಈ ದಿನ ಚೇತರಿಕೆ ಕಾಣಲಿದೆ
  • ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಅವಕಾಶವಿದೆ
  • ಮಂಗಳ ಕಾರ್ಯದ ಸೂಚನೆ ಈ ದಿನ ಕಾಣುತ್ತದೆ 
  • ಭಗವತೀ ಉಪಾಸನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope Kannada News
Advertisment