/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
- ವ್ಯಾಯಾಮದಿಂದ ದೇಹಕ್ಕೂ, ಧ್ಯಾನದಿಂದ ಮನಸ್ಸಿಗೂ ನೆಮ್ಮದಿ ಸಿಗಬಹುದು
- ಬೇರೆಯವರನ್ನು ತೃಪ್ತಿ ಪಡಿಸಲು ಹಣ ಖರ್ಚಾಗಬಹುದು
- ನಿಮ್ಮ ಶಕ್ತಿ ಮೀರಿದ ವ್ಯವಹಾರ,ಸಂಬಂಧ,ಸಂಪರ್ಕಗಳಿಂದ ಅವಮಾನ ಸಾಧ್ಯತೆ ಇದೆ
- ವೈಯಕ್ತಿಕ ವಿಚಾರಕ್ಕೆ ಮನೆಯವರಿಗೆಲ್ಲಾ ಅವಮಾನ ಮಾಡುವ ಸಂದರ್ಭವಿರಬಹುದು
- ಕುಟುಂಬದಲ್ಲೂ ಕೂಡ ಸಣ್ಣಪುಟ್ಟ ಸಮಸ್ಯೆಗಳು ಉದ್ಭವವಾಗಬಹುದು
- ಹಳೆ ಶತ್ರುಗಳ ಕಾಟ ಇಂದು ತಲೆದೋರಬಹುದು
- ಶತ್ರು ಸಂಹಾರಕ ಹಿಡುಂಬ ಮಂತ್ರ ಜಪ ಮಾಡಿ
ವೃಷಭ
- ಕಾರ್ಯಕ್ಷೇತ್ರಗಳಲ್ಲಿ, ವ್ಯಾಪಾರಗಳಲ್ಲಿ ಪೈಪೋಟಿಯಿಂದ ತೊಂದರೆಯ ಸೂಚನೆ ಇದೆ
- ಆರೋಗ್ಯ ಮುಖ್ಯ ನಂತರ ವ್ಯವಹಾರ ಅನ್ನೋದನ್ನ ಅರಿಯಬೇಕಾಗುತ್ತದೆ
- ಶರೀರದ ನೋವು ನಿಮ್ಮನ್ನು ಕಾಡಬಹುದು
- ಮಾನಸಿಕವಾಗಿ ನೀವು ತುಂಬಾ ಕುಗ್ಗಿ ಹೋಗುತ್ತೀರಿ
- ಮನಸ್ಸಿಗೆ ಯಾವುದೇ ರೀತಿಯ ಆಯಾಸ ಕಾಣುವುದಿಲ್ಲ
- ವ್ಯಾವಹಾರಿಕವಾಗಿಯೇ ಚಿಂತೆ ಮಾಡುತ್ತಿರುತ್ತೀರಿ
- ನಿಯಮಿತ ಆಹಾರ ಸೇವನೆ ಒಳಿತು
- ಬಿಳಿ ಎಕ್ಕದ ಗಿಡವನ್ನು ಪೂಜಿಸಿ
ಮಿಥುನ
- ಪ್ರಾಮಾಣಿಕ ಪ್ರಯತ್ನ ಮಾಡಿ ಶುಭವಾಗುತ್ತದೆ
- ಈ ದಿನ ಕರ್ತವ್ಯ ಲೋಪ ಮಾಡಬೇಡಿ
- ಉನ್ನತ ಹುದ್ದೆಯಲ್ಲಿರುವವರ ದಾಕ್ಷಿಣ್ಯಕ್ಕೆ ಕೆಲಸ ಮಾಡಬೇಕಾಗುತ್ತದೆ ಜಾಗ್ರತೆ ಇರಲಿ
- ಹತ್ತು ಹಲವು ಆಲೋಚನೆಗಳು ಬೇಡ, ಒಂದು ತೀರ್ಮಾನಕ್ಕೆ ಬದ್ಧರಾಗಿರಿ
- ಹಣ ಅಥವಾ ದ್ರವ್ಯಕ್ಕೆ ಆಸೆ ಪಟ್ಟು ಅವಮಾನವಾಗುವ ಸಾಧ್ಯತೆ ಇದೆ
- ಸಂಬಂಧಿಕರು ಮತ್ತು ಸ್ನೇಹಿತರ ಒತ್ತಡ ಕೆಲಸ ನಿಮಿತ್ತ ಹೆಚ್ಚಾಗಿರುತ್ತದೆ
- ಮನಸ್ಸಿಗೆ ಒಪ್ಪುವಂತಹ ಕೆಲಸವನ್ನು ಮಾಡಿ
- ಚೌಡೇಶ್ವರಿ ದೇವಿಯನ್ನು ಆರಾಧಿಸಿ
ಕಟಕ
- ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ಸೃಷ್ಟಿಯಾಗಬಹುದು
- ಹೆಣ್ಣು ಮಕ್ಕಳಿಗೆ ಸಾಯಂಕಾಲ ಹೊತ್ತಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು ಎಚ್ಚರಿಕೆ
- ಅಲಂಕಾರಿಕ ಸಾಮಗ್ರಿಗಳಿಗೆ,ಉಡುಗೊರೆಗಳಿಗೆ ತುಂಬಾ ಹಣ ಖರ್ಚು ಮಾಡುತ್ತೀರಿ
- ಪ್ರೇಮಿಗಳಿಗೆ ತುಂಬಾ ಕುತೂಹಲಕರ ಸಮಯ ಎಂದು ಹೇಳಬಹುದು
- ಆಸಕ್ತಿಗನುಗುಣವಾಗಿ ಕೆಲಸಗಳು ಸಿಗಬಹುದು
- ಮನೆಯಲ್ಲಿರುವ ಹಿರೀಕರ ಮಾರ್ಗದರ್ಶನ ಪಡೆಯಿರಿ
- ಉದ್ಯೋಗಿಗಳು ತಮ್ಮ ಮೇಲಾಧಿಕಾರಿಗಳ ವಿಶ್ವಾಸಕ್ಕೆ ಭಾಜನರಾಗುತ್ತೀರಿ
- ರೇಣುಕಾಂಬಾ ದೇವಿಯನ್ನು ಪ್ರಾರ್ಥಿಸಿ
ಸಿಂಹ
- ಮಾಡಬೇಕಾದ ಕರ್ತವ್ಯದಲ್ಲಿ, ಕೆಲಸದಲ್ಲಿ ಬಲಹೀನರಾಗಬಹುದು
- ಇಂದು ನಿಮ್ಮ ಮನಸ್ಸು ಅತೃಪ್ತಿಯಿಂದ ಕೂಡಿರುತ್ತದೆ
- ಚಿಕ್ಕ ಮಕ್ಕಳು ಅಥವಾ ವಿದ್ಯಾರ್ಥಿಗಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು ನಿಗಾವಹಿಸಿ
- ಈ ದಿನ ಸಮಾಧಾನ, ತಾಳ್ಮೆ ಬೇಕಾಗುತ್ತದೆ
- ನಕಾರಾತ್ಮಕ ವಿಷಯಗಳೇ ಹೆಚ್ಚು ಗಮನ ಸೆಳೆಯುವಂತಹದ್ದು
- ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗಬಹುದು
- ರಕ್ತೇಶ್ವರೀ ಮಂತ್ರ ಶ್ರವಣ ಮಾಡಿ
ಕನ್ಯಾ
- ಮನಸ್ಸಿನಲ್ಲಿ ಕಲ್ಮಶಗಳಿಲ್ಲದಿದ್ದರೂ ಹೊಸದಾಗಿ ಹುಟ್ಟುವ ಸಾಧ್ಯತೆಗಳಿರುತ್ತವೆ
- ಯುವ ಪ್ರೇಮಿಗಳಿಗೆ ತೊಂದರೆಯಿದೆ ಜಾಗ್ರತೆ
- ಬೇರೆಯವರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಗೆ ಸಿಲುಕಿಕೊಳ್ಳುತ್ತೀರಿ
- ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಡೆತಡೆ ಕಾಣಬಹುದು
- ಎಲ್ಲದಕ್ಕೂ ಜಗಳವೇ ಪರಿಹಾರವಲ್ಲ ಎಂಬುದನ್ನು ಅರಿಯಬೇಕಾಗುತ್ತದೆ
- ಸಣ್ಣ ಸಣ್ಣ ವಿಚಾರಗಳಿಗೆ ಮನಸ್ಸು ವಿಕೃತವಾಗುವುದು
- ಮನೋಭವ ಮಂತ್ರ ಜಪಿಸಿ
ತುಲಾ
- ಸಂಬಂಧಿಕರ ಬಾಂಧವ್ಯ ಗಟ್ಟಿ ಮಾಡಿಕೊಳ್ಳಿ, ವಿರೋಧ ಬೇಡ
- ಹಳೆಯ ನೆನಪು ಮತ್ತೆ ಕಾಡಬಹುದು
- ಹೊಸ ವ್ಯಾಪಾರ ಮಾಡಲು ಸಂಬಂಧಿಕರ ಬೆಂಬಲ ಸಿಗಲಿದೆ
- ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ
- ರಾಜಕೀಯ ವ್ಯಕ್ತಿಗಳು ತಮ್ಮ ಶಕ್ತಿ ಸಾಮಥ್ರ್ಯವನ್ನು ತಮ್ಮ ಕ್ಷೇತ್ರದಲ್ಲಿ ಪ್ರದರ್ಶಿಸುತ್ತಾರೆ
- ರಾಯಭಾರೀ ಕೆಲಸ ಮಾಡುವವರಿಗೆ ಫಲವಿದೆ
- ಅವಕಾಶಗಳ ಲಾಭವನ್ನು ಪಡೆಯಲು ಮುಂದಾಗಬೇಡಿ ಅವಮಾನವಾಗುವ ಸೂಚನೆಗಳಿರುತ್ತದೆ
- ಸುಮುಚೀ ದೇವಿಯನ್ನು ಪ್ರಾರ್ಥಿಸಿ
ವೃಶ್ಚಿಕ
- ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಸಾಯಂಕಾಲ ಚೆನ್ನಾಗಿರುವ ವಾತಾವರಣ ಇರುವುದಿಲ್ಲ
- ಮುಖ್ಯವಾಗಿ ಮಾಡಬೇಕಾದ ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ
- ನಿಮ್ಮ ಸಹಪಾಠಿಗಳಿಗೆ, ಸ್ನೇಹಿತರಿಗೆ ವಸ್ತು ಅಥವಾ ಹಣವನ್ನು ದಾನ ಮಾಡುವುದಕ್ಕೆ ಮುಂದಾಗುತ್ತೀರಿ
- ಬರಬೇಕಾದ ಸಾಲ ಇಂದು ನಿಮ್ಮ ಹಣ ಕೈ ಸೇರಬಹುದು
- ಈ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ
- ಕುಂಭ ಕಂಠನೀ ಮಂತ್ರ ಜಪ ಪಠಿಸಿ
ಧನುಸ್ಸು
- ನಿಮ್ಮ ಕಾರ್ಯವೈಖರಿಯ ಗುಟ್ಟನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
- ಸ್ನೇಹಿತರ ಕೆಲವು ವಿಚಾರಗಳು,ಸ್ವಬಾವಗಳನ್ನು ಕೇಳಿ ನೋವನ್ನು ಅನುಭವಿಸುತ್ತೀರಿ
- ಆತುರದಲ್ಲಿ ಯಾವುದೇ ನಿರ್ಧಾರಗಳು ಬೇಡ
- ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ
- ತುಂಬಾ ಒತ್ತಡವಿದ್ದರೂ ಮನೆಯವರಿಗೆ ನಿಮ್ಮ ಸಮಯವನ್ನು ಮೀಸಲಿಡಬೇಕು
- ಇಂದು ನಿಮಗೆ ತುಂಬಾ ವಿಶ್ರಾಂತಿಯ ಅಗತ್ಯವಿರುತ್ತದೆ
- ಕುಟುಂಬದವರ ಸಂತೋಷಕ್ಕಾಗಿ ನೀವು ತ್ಯಾಗ ಮಾಡಬೇಕಾಗಬಹುದು
- ಏಕಾಕ್ಷರ ಮಂತ್ರವನ್ನು ಪಠನೆ ಮಾಡಿ
ಮಕರ
- ಎಲ್ಲಾ ವ್ಯಾವಹಾರಿಕ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು
- ಅಗತ್ಯ ಬಿದ್ದರೆ ದಾಖಲೆಗಳನ್ನು ತಿದ್ದುಪಡಿ ಮಾಡಿಸಬೇಕು
- ಸಂಬಳ ಪಡೆಯುವ ಖಾಸಗಿ ನೌಕರರಿಗೆ ಸ್ವಲ್ಪ ಹಿನ್ನಡೆ, ಗೊಂದಲಗಳಾಗುತ್ತವೆ
- ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನಿರೀಕ್ಷೆ ಮಾಡಬಹುದಾದ ದಿನ
- ಕಡಿಮೆ ಸಮಯದಲ್ಲಿ ಹೆಚ್ಚು ಗುಣಮಟ್ಟದ ಕೆಲಸ ಮಾಡಿ ಸಮರ್ಥರು ಅಂತ ಕರೆಸಿಕೊಳ್ಳುತ್ತೀರಿ
- ತಂದೆಗೆ ಹೃದಯ ಸಂಬಂಧಿ ತೊಂದರೆ ಕಾಣಬಹುದು ತಾತ್ಸಾರ ಮಾಡಬೇಡಿ
- ಪರಂಜೋತ್ಯಿ ಕೋಶಾಂಬಾ ಮಂತ್ರ ಪಡಿಸಿ
ಕುಂಭ
- ಕುಟುಂಬ ಸದಸ್ಯರ ಸಹಕಾರ ತುಂಬಾ ಅಗತ್ಯವಿರುತ್ತದೆ
- ವ್ಯಾಪಾರಸ್ಥರಿಗೆ ಶುಭ -ಲಾಭಗಳಾಗುವ ದಿನ
- ಬೇರೆಯವರ ಕೆಲಸದಲ್ಲಿ ತಪ್ಪು ಹುಡುಕಬೇಡಿ
- ಇಂದು ಮಾನಸಿಕವಾಗಿ ಬೇಸರ ಉಂಟಾಗಬಹುದು
- ಮನೆಯಲ್ಲಿಯೂ ನಿಮ್ಮ ಕೆಲಸದಲ್ಲಿಯೂ ನೆಮ್ಮದಿ ಇರೋದಿಲ್ಲ
- ಕೆಲವು ನಿರ್ಧಾರಗಳಿಂದ ಬೇರೆ ಬೇರೆ ರೀತಿಗಳಲ್ಲಿ ದೋಷಗಳುಂಟಾಗಬಹುದು
- ತುಂಬಾ ಅಗತ್ಯವಿರುವ ಕೆಲಸಗಳು ವಿಳಂಬವಾಗಬಹುದು
- ಸಣ್ಣ ಸಣ್ಣ ವಿಚಾರಗಳಿಗೆ ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
- ತುಂಬಾ ಅನಗತ್ಯ ವಿಚಾರಕ್ಕೆ ಜಗಳ ಮಾಡಿಕೊಳ್ಳುತ್ತೀರಿ
- ಮಹಾದಹರ ಮಂತ್ರ ಶ್ರವಣ ಮಾಡಿ
ಮೀನ
- ಅವಿವಾಹಿತ ಹೆಣ್ಣು ಮಕ್ಕಳಿಗೆ ಶುಭ ಸೂಚನೆ ಇದೆ
- ಮಾಧ್ಯಮದಲ್ಲಿ ಕೆಲಸ ನಿರ್ವಹಿಸುವವರಿಗೆ ಲಾಭವಿದೆ ಜೊತೆಗೆ ಸ್ಥಾನಪಲ್ಲಟ ಆಗಬಹುದು
- ವ್ಯವಹಾರವನ್ನು ವಿಸ್ತರಣೆ ಮಾಡಿಕೊಳ್ಳಲು ಚಿಂತನೆ ಮಾಡಬಹುದು
- ಕೌಟುಂಬಿಕವಾಗಿ ಉತ್ತಮ ವಾತಾವರಣವಿರುತ್ತದೆ
- ಅನಾರೋಗ್ಯ ಪೀಡಿತರಿಗೆ ಈ ದಿನ ಚೇತರಿಕೆ ಕಾಣಲಿದೆ
- ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಅವಕಾಶವಿದೆ
- ಮಂಗಳ ಕಾರ್ಯದ ಸೂಚನೆ ಈ ದಿನ ಕಾಣುತ್ತದೆ
- ಭಗವತೀ ಉಪಾಸನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ