/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ, ಚತುರ್ದಶಿ ತಿಥಿ, ಮಖಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ಕೆಲವು ಕೆಲಸಗಳಿಗೆ ಹಣವನ್ನು ಮುಂಗಡಕೊಟ್ಟು ಮೋಸಹೋಗಬಹುದು.
- ಅನರ್ಥಗಳಿಂದ ಮಾನಹಾನಿಯಾಗುವ ಸಾಧ್ಯತೆಗಳಿವೆ
- ಭೂಮಿ ಖರೀದಿ ಮಾಡಲು ಉತ್ತಮವಾದ ದಿನ
- ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಬಗ್ಗೆ ಚಿಂತನೆ
- ಹಿಂದಿನ ದಿನಗಳ ವಿಚಾರದಲ್ಲಿ ಆತ್ಮಾವಲೋಕನದಿಂದ ಉತ್ತರ ಸಿಗುವುದು
- ಮಾರುತಿಯನ್ನು ಆರಾಧನೆ ಮಾಡಿ
ವೃಷಭ
- ಕೌಟುಂಬಿಕ ಸಂಬಂಧಗಳು ಗಟ್ಟಿಯಾಗಿದ್ದರೂ ಬೇರೆಯವರ ಮಾತಿನಿಂದ ಬಿರುಕು
- ವ್ಯವಹಾರದಲ್ಲಿ, ಆರೋಗ್ಯದ ವಿಚಾರದಲ್ಲಿ ಶುಭವಿದೆ
- ಈ ದಿನ ಶತ್ರುನಾಶ ಉತ್ತಮ ಭೋಜನ
- ಬೇರೆಯವರನ್ನು ದೂಷಿಸುವುದರಿಂದ ನಿಮಗೆ ತೊಂದರೆಯಾಗಬಹುದು
- ಮದುವೆಯ ವಿಚಾರದತ್ತ ಗಮನಹರಿಸಿ
- ಅನಿರೀಕ್ಷಿತವಾಗಿ ಯಾವುದೋ ಶುಭಸುದ್ದಿಯಿಂದ ಸಂತೋಷ ಉಂಟಾಗಲಿದೆ
- ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಪಿತ್ರ್ರಾರ್ಜಿತ ಆಸ್ತಿಯನ್ನು ನೀವೇ ಖರೀದಿಸಲು ಮುಂದಾಗುತ್ತೀರಿ
- ಸರಳ ಜೀವನದ ಕಡೆ ಮನಸ್ಸು ಹೋಗಬಹುದು
- ಉನ್ನತ ಅಧಿಕಾರ ಪ್ರಾಪ್ತಿಯಾಗಬಹುದು
- ಸಾಮಾಜಿಕ ಬದುಕಿನಲ್ಲಿ ಬದಲಾವಣೆ ಗಾಳಿಬೀಸುತ್ತದೆ
- ಸಾಲ ಪಡೆಯುವುದರ ಬಗ್ಗೆ ಚಿಂತಿಸುವಿರಿ ಶುಭವಿದೆ
- ಸಹೋದರರ ಕಿರಿ ಕಿರಿಯನ್ನು ಸಹಿಸಬೇಕಾಗುತ್ತದೆ ನೆಮ್ಮದಿಯಿರುವುದಿಲ್ಲ
- ತಾಪಸಮನ್ಯುವನ್ನು ಪ್ರಾರ್ಥಿಸಿ
ಕಟಕ
- ಇಂದು ಚಿಕ್ಕ ಮಕ್ಕಳ ಬಗ್ಗೆ ಗಮನವಿರಲಿ
- ವೈವಾಹಿಕ ಸಂಬಂಧಗಳಿಂದ ದೂರವಾಗಲು ಯತ್ನಿಸುತ್ತೀರಿ
- ಇಂದು ಶಸ್ತ್ರ ಚಿಕಿತ್ಸೆಯ ಸಂಭವವಿದೆ
- ಧನನಷ್ಟ ಆಗುವುದರಿಂದ ಮಾನಸಿಕ ಚಿಂತನೆ ಕಾಡಲಿದೆ
- ಮನೆಯಲ್ಲಿ ಕಳ್ಳತನ ಆಗಬಹುದು
- ವಿಚಿತ್ರ ಸನ್ನಿವೇಶಗಳಿಂದ ನಿಮಗೆ ಅಚ್ಚರಿಯುಂಟಾಗಬಹುದು
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಇಂದು ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತೀರಿ
- ಹತ್ತಿ ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗಬಹುದು
- ಲೆಕ್ಕಾಧಿಕಾರಿಗಳಿಗೆ ಶುಭ ಲಾಭವಿದೆ
- ನಿಮ್ಮ ಆಲಸ್ಯ ಅಥವಾ ಕೆಲಸವನ್ನು ಮುಂದೂಡುವಿಕೆಯಿಂದ ನಷ್ಟವಾಗುತ್ತದೆ
- ಮಕ್ಕಳ ವಿದ್ಯಾಭ್ಯಾಸಕ್ಕೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲು ಯೋಚಿಸುತ್ತೀರಿ
- ಹಣ ಕೈಯಲ್ಲಿದ್ದರೂ ಮಾನಸಿಕ ನೆಮ್ಮದಿಯಿರುವುದಿಲ್ಲ
- ತುಂಬಾ ದಿನಗಳಿಂದ ಬರಬೇಕಾದ ಹಣ ಸಾಯಂಕಾಲ ಕೈ ಸೇರಬಹುದು
- ಚಾಮುಂಡೇಶ್ವರಿಯ ದರ್ಶನ ಮಾಡಿ
ಕನ್ಯಾ
- ಹಲವರಲ್ಲಿ ಮೈಮನಸ್ಸು ಬೆಳೆಯಬಹುದು
- ಹಿರಿಯರಿಗೆ ಗೌರವವನ್ನು ನೀಡಿ
- ಆಹಾರ ವ್ಯತ್ಯಾಸದಿಂದ ತುಂಬಾ ಆತಂಕ ಉಂಟಾಗಬಹುದು
- ನಿಮ್ಮ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
- ನಿಮ್ಮ ಪ್ರಯತ್ನ ಸಫಲವಾಗುವ ದಿನ
- ಸ್ತ್ರೀಯರಿಗೆ ನೌಕರಿಯಲ್ಲಿ ಕಿರಿಕಿರಿ ವರ್ಗಾವಣೆ ಸಾಧ್ಯತೆ
- ಕನ್ನಿಕಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಚಿನ್ನಾಭರಣ ಪ್ರಾಪ್ತಿಯಿಂದ ಮಾನಸಿಕ ನೆಮ್ಮದಿ ತಂದುಕೊಳ್ಳಬೇಕಾಗುತ್ತದೆ
- ಬೇರೆ ವ್ಯವಹಾರಕ್ಕೆ ಹಣದ ಹೂಡಿಕೆ ಮಾಡುವುದರಿಂದ ಶುಭ
- ಪಿತ್ರಾರ್ಜಿತ ಆಸ್ತಿ ಕೈ ತಪ್ಪುವ ಸಾಧ್ಯತೆಗಳಿವೆ
- ರಾಜಕೀಯದ ವಿಚಾರಗಳು ಮುನ್ನಲೆಗೆ ಬರುತ್ತದೆ
- ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ
- ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ದಿನ
- ಗಣಪತಿಯನ್ನು ಆರಾಧನೆ ಮಾಡಿ
ವೃಶ್ಚಿಕ
- ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು
- ಸ್ಥಳ ಬದಲಾವಣೆಯ ವಿಚಾರ ಬರುತ್ತದೆ
- ಇಂದು ನಿಮಗೆ ಧೈರ್ಯ ಕಡಿಮೆಯಾಗಬಹುದು
- ಸಾಲಬಾಧೇಯಿಂದ ನೀವು ಮುಕ್ತಿ ಹೊಂದುತ್ತೀರಿ
- ಶುಭ ಸಮಾಚಾರ ನಿಮಗೆ ಉತ್ಸಾಹ ನೀಡಲಿದೆ
- ನಿಮ್ಮ ಭಾವನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ
- ಮನೆಯಲ್ಲಿ ಸಂಭ್ರಮದ ವಾತಾವರಣ
- ಈಶ್ವರನನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಆಸ್ತಿ ವಸ್ತು ದ್ರವ್ಯ ನಷ್ಟವಾಗುವ ಸೂಚನೆಯಿದೆ
- ಹಣಕಾಸಿನ ವಿಚಾರದಲ್ಲಿ ಜಾಗ್ರತೆವಹಿಸಿ
- ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ
- ನಿಮ್ಮ ವೈಯಕ್ತಿಕ ಸಿದ್ಧಾಂತಗಳನ್ನು ಬದಿಗಿಟ್ಟು ಭಗವಂತನಿಗೆ ಶರಣು ಹೋಗಬೇಕು
- ಮಹಿಳೆಯರಿಗೆ ವಸ್ತ್ರ ಆಭರಣ ಪ್ರಾಪ್ತಿಯಾಗಲಿದೆ
- ದೈನಂದಿನ ಚಟುವಟಿಕೆಯ ಹೊರತಾಗಿ ಬೇರೆ ಕೆಲಸಗಳಲ್ಲಿ ಆಸಕ್ತಿವಹಿಸುವಿರಿ
- ಸರ್ಕಾರಿ ನೌಕರರಿಗೆ ಬಡ್ತಿ ಸಿಗಲಿದೆ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಮಕರ
- ಇಂಜಿನಿಯರ್ ಕೆಲಸ ಮಾಡುವವರಿಗೆ ಶುಭದಿನ
- ನಿಮ್ಮ ಸಾಧನೆಯ ಸಂತೋಷವನ್ನು ಬೇರೆಯವರಿಗೆ ಹಂಚಿಕೊಳ್ಳಿ
- ಸಹೋದರರ ನಡುವೆ ಕಲಹ ಉಂಟಾಗಬಹುದು
- ಸಂಶೋಧಕರಿಗೆ ಮಹತ್ಮ ಪೂರ್ಣ ದಿನ
- ಅಕಾಲ ಭೋಜನದಿಂದ ಬೇಸರ ಆಗಬಹುದು
- ಹೊಂದಾಣಿಕೆ ಮಾಡಿಕೊಂಡ್ರೆ ಕೈ ಹಾಕಿದ ಕೆಲಸ ಉತ್ತಮ ಮುಟ್ಟದಾಗಿರುತ್ತದೆ
- ಆಸ್ತಿ ವಿವಾದ ಇತ್ಯರ್ಥ ಆಗುವ ದಿನ
- ಪ್ರೇಮಿಗಳ ನಡುವೆ ಮನಸ್ತಾಪ ಉಂಟಾಗಬಹುದು
- ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ
ಕುಂಭ
- ಭೂಮಿ ಖರೀದಿಯ ಚಿಂತನೆಯಿರುತ್ತದೆ
- ಸಂಬಂಧಿಕರ ಆಗಮನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ
- ಧನಲಾಭ ಐಶ್ವರ್ಯ ವೃದ್ಧಿಯಾಗಲಿದೆ
- ಶತ್ರುಬಾಧೆಯಿಂದ ವ್ಯವಹಾರಕ್ಕೆ ಸ್ವಲ್ಪ ನಿಧಾನ ಆಗಲಿದೆ
- ವಿದೇಶ ಪ್ರಯಾಣ ಮಾಡುತ್ತೀರಿ
- ಹಿರಿಯರಿಗೆ ಗೌರವವನ್ನು ನೀಡಿ
- ಬೇರೆಯವರಿಗೆ ಉಪಕಾರ ಮಾಡುತ್ತೀರಿ
- ಸಾಮೂಹಿಕ ತಿರಸ್ಕಾರ ಮಾಡುವ ಜನರಲ್ಲಿ ನೀವೂ ಒಬ್ಬರಾಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ
ಮೀನ
- ಸುಖ ದುಃಖ ಎರಡನ್ನು ಸಮಾನವಾಗಿ ಸ್ವೀಕರಿಸಿ
- ಯಾರನ್ನು ತುಂಬಾ ನಂಬಬೇಡಿ ಒಳ್ಳೆಯದಲ್ಲ
- ನಿಮ್ಮ ವ್ಯಕ್ತಿತ್ವ ನಿಮಗೆ ಗೌರವ ತರುತ್ತದೆ
- ವ್ಯವಹಾರದ ಮಾತುಕತೆ ಫಲಪ್ರದವಾಗಬಹುದು
- ಇಂದು ಅಪನಿಂದನೆಯೂ ಬರುತ್ತದೆ
- ಕೋರ್ಟ್ ಕಛೇರಿ ಕೆಲಸಗಳು ಸುಗಮವಾಗಿ ಆಗಲಿದೆ
- ಸ್ನೇಹಿತರು ಮತ್ತು ಬಂಧುಗಳ ಮಧ್ಯದಲ್ಲಿದ್ದ ಗೊಂದಲ ನಿವಾರಣೆಯಾಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ