Advertisment

ಸಾಲ ಪಡೆಯುವ ಬಗ್ಗೆ ಚಿಂತೆ, ಆದ್ರೆ ಶುಭವಿದೆ.. ಬದುಕಲ್ಲಿ ಬದಲಾವಣೆ; ಇಲ್ಲಿದೆ ಇಂದಿನ ಭವಿಷ್ಯ!

ಚಿನ್ನಾಭರಣ ಪ್ರಾಪ್ತಿಯಿಂದ ಮಾನಸಿಕ ನೆಮ್ಮದಿ ತಂದುಕೊಳ್ಳಬೇಕಾಗುತ್ತದೆ, ಬೇರೆ ವ್ಯವಹಾರಕ್ಕೆ ಹಣ ಹೂಡಿಕೆ ಮಾಡುವುದರಿಂದ ಶುಭವಿದೆ. ಪಿತ್ರಾರ್ಜಿತ ಆಸ್ತಿ ಕೈ ತಪ್ಪುವ ಸಾಧ್ಯತೆಗಳಿವೆ. ರಾಜಕೀಯದ ವಿಚಾರಗಳು ಮುನ್ನಲೆಗೆ ಬರುತ್ತದೆ. ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ, ಚತುರ್ದಶಿ ತಿಥಿ, ಮಖಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  •  ಕೆಲವು ಕೆಲಸಗಳಿಗೆ ಹಣವನ್ನು ಮುಂಗಡಕೊಟ್ಟು ಮೋಸಹೋಗಬಹುದು.
  •  ಅನರ್ಥಗಳಿಂದ ಮಾನಹಾನಿಯಾಗುವ ಸಾಧ್ಯತೆಗಳಿವೆ
  • ಭೂಮಿ ಖರೀದಿ ಮಾಡಲು ಉತ್ತಮವಾದ ದಿನ
  • ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಬಗ್ಗೆ ಚಿಂತನೆ
  • ಹಿಂದಿನ ದಿನಗಳ ವಿಚಾರದಲ್ಲಿ ಆತ್ಮಾವಲೋಕನದಿಂದ ಉತ್ತರ ಸಿಗುವುದು 
  • ಮಾರುತಿಯನ್ನು ಆರಾಧನೆ ಮಾಡಿ

ವೃಷಭ

RASHI_BHAVISHA_VRSHABA

  • ಕೌಟುಂಬಿಕ ಸಂಬಂಧಗಳು ಗಟ್ಟಿಯಾಗಿದ್ದರೂ ಬೇರೆಯವರ ಮಾತಿನಿಂದ ಬಿರುಕು
  • ವ್ಯವಹಾರದಲ್ಲಿ, ಆರೋಗ್ಯದ ವಿಚಾರದಲ್ಲಿ ಶುಭವಿದೆ
  • ಈ ದಿನ ಶತ್ರುನಾಶ ಉತ್ತಮ ಭೋಜನ
  • ಬೇರೆಯವರನ್ನು ದೂಷಿಸುವುದರಿಂದ ನಿಮಗೆ ತೊಂದರೆಯಾಗಬಹುದು
  •  ಮದುವೆಯ ವಿಚಾರದತ್ತ ಗಮನಹರಿಸಿ
  •  ಅನಿರೀಕ್ಷಿತವಾಗಿ ಯಾವುದೋ ಶುಭಸುದ್ದಿಯಿಂದ ಸಂತೋಷ ಉಂಟಾಗಲಿದೆ
  • ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ
Advertisment

ಮಿಥುನ

RASHI_BHAVISHA_MITHUNA

  • ಪಿತ್ರ್ರಾರ್ಜಿತ ಆಸ್ತಿಯನ್ನು ನೀವೇ ಖರೀದಿಸಲು ಮುಂದಾಗುತ್ತೀರಿ
  •  ಸರಳ ಜೀವನದ ಕಡೆ ಮನಸ್ಸು ಹೋಗಬಹುದು
  •  ಉನ್ನತ ಅಧಿಕಾರ ಪ್ರಾಪ್ತಿಯಾಗಬಹುದು
  •  ಸಾಮಾಜಿಕ ಬದುಕಿನಲ್ಲಿ ಬದಲಾವಣೆ ಗಾಳಿಬೀಸುತ್ತದೆ
  • ಸಾಲ ಪಡೆಯುವುದರ ಬಗ್ಗೆ ಚಿಂತಿಸುವಿರಿ ಶುಭವಿದೆ
  •  ಸಹೋದರರ ಕಿರಿ ಕಿರಿಯನ್ನು ಸಹಿಸಬೇಕಾಗುತ್ತದೆ  ನೆಮ್ಮದಿಯಿರುವುದಿಲ್ಲ
  • ತಾಪಸಮನ್ಯುವನ್ನು ಪ್ರಾರ್ಥಿಸಿ

ಕಟಕ

RASHI_BHAVISHA_KATAKA

  • ಇಂದು ಚಿಕ್ಕ ಮಕ್ಕಳ ಬಗ್ಗೆ ಗಮನವಿರಲಿ
  •  ವೈವಾಹಿಕ ಸಂಬಂಧಗಳಿಂದ ದೂರವಾಗಲು ಯತ್ನಿಸುತ್ತೀರಿ
  •  ಇಂದು ಶಸ್ತ್ರ ಚಿಕಿತ್ಸೆಯ ಸಂಭವವಿದೆ
  • ಧನನಷ್ಟ ಆಗುವುದರಿಂದ ಮಾನಸಿಕ ಚಿಂತನೆ ಕಾಡಲಿದೆ
  • ಮನೆಯಲ್ಲಿ ಕಳ್ಳತನ ಆಗಬಹುದು
  • ವಿಚಿತ್ರ ಸನ್ನಿವೇಶಗಳಿಂದ ನಿಮಗೆ ಅಚ್ಚರಿಯುಂಟಾಗಬಹುದು
  • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ಸಿಂಹ 

RASHI_BHAVISHA_SIMHA

  • ಇಂದು ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತೀರಿ
  •  ಹತ್ತಿ ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗಬಹುದು
  • ಲೆಕ್ಕಾಧಿಕಾರಿಗಳಿಗೆ ಶುಭ ಲಾಭವಿದೆ
  •  ನಿಮ್ಮ ಆಲಸ್ಯ ಅಥವಾ ಕೆಲಸವನ್ನು ಮುಂದೂಡುವಿಕೆಯಿಂದ ನಷ್ಟವಾಗುತ್ತದೆ
  • ಮಕ್ಕಳ ವಿದ್ಯಾಭ್ಯಾಸಕ್ಕೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲು ಯೋಚಿಸುತ್ತೀರಿ
  •  ಹಣ ಕೈಯಲ್ಲಿದ್ದರೂ ಮಾನಸಿಕ ನೆಮ್ಮದಿಯಿರುವುದಿಲ್ಲ
  •  ತುಂಬಾ ದಿನಗಳಿಂದ ಬರಬೇಕಾದ ಹಣ ಸಾಯಂಕಾಲ ಕೈ ಸೇರಬಹುದು
  • ಚಾಮುಂಡೇಶ್ವರಿಯ ದರ್ಶನ ಮಾಡಿ
Advertisment

ಕನ್ಯಾ

RASHI_BHAVISHA_KANYA

  • ಹಲವರಲ್ಲಿ ಮೈಮನಸ್ಸು ಬೆಳೆಯಬಹುದು
  • ಹಿರಿಯರಿಗೆ ಗೌರವವನ್ನು ನೀಡಿ
  •  ಆಹಾರ ವ್ಯತ್ಯಾಸದಿಂದ ತುಂಬಾ ಆತಂಕ ಉಂಟಾಗಬಹುದು
  •  ನಿಮ್ಮ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
  •  ನಿಮ್ಮ ಪ್ರಯತ್ನ ಸಫಲವಾಗುವ ದಿನ
  •  ಸ್ತ್ರೀಯರಿಗೆ ನೌಕರಿಯಲ್ಲಿ ಕಿರಿಕಿರಿ ವರ್ಗಾವಣೆ ಸಾಧ್ಯತೆ
  • ಕನ್ನಿಕಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ತುಲಾ

RASHI_BHAVISHA_TULA

  • ಚಿನ್ನಾಭರಣ ಪ್ರಾಪ್ತಿಯಿಂದ ಮಾನಸಿಕ ನೆಮ್ಮದಿ ತಂದುಕೊಳ್ಳಬೇಕಾಗುತ್ತದೆ
  •  ಬೇರೆ ವ್ಯವಹಾರಕ್ಕೆ ಹಣದ ಹೂಡಿಕೆ ಮಾಡುವುದರಿಂದ ಶುಭ
  • ಪಿತ್ರಾರ್ಜಿತ ಆಸ್ತಿ ಕೈ ತಪ್ಪುವ ಸಾಧ್ಯತೆಗಳಿವೆ
  •  ರಾಜಕೀಯದ ವಿಚಾರಗಳು ಮುನ್ನಲೆಗೆ ಬರುತ್ತದೆ
  • ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ  
  • ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ದಿನ
  • ಗಣಪತಿಯನ್ನು ಆರಾಧನೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು
  •  ಸ್ಥಳ ಬದಲಾವಣೆಯ ವಿಚಾರ ಬರುತ್ತದೆ
  •  ಇಂದು ನಿಮಗೆ ಧೈರ್ಯ ಕಡಿಮೆಯಾಗಬಹುದು
  •  ಸಾಲಬಾಧೇಯಿಂದ ನೀವು ಮುಕ್ತಿ ಹೊಂದುತ್ತೀರಿ
  • ಶುಭ ಸಮಾಚಾರ ನಿಮಗೆ ಉತ್ಸಾಹ ನೀಡಲಿದೆ
  •  ನಿಮ್ಮ ಭಾವನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ
  •  ಮನೆಯಲ್ಲಿ ಸಂಭ್ರಮದ ವಾತಾವರಣ
  • ಈಶ್ವರನನ್ನು ಪ್ರಾರ್ಥನೆ ಮಾಡಿ
Advertisment

ಧನುಸ್ಸು

RASHI_BHAVISHA_DHANASU

  • ಆಸ್ತಿ ವಸ್ತು  ದ್ರವ್ಯ ನಷ್ಟವಾಗುವ ಸೂಚನೆಯಿದೆ
  • ಹಣಕಾಸಿನ ವಿಚಾರದಲ್ಲಿ ಜಾಗ್ರತೆವಹಿಸಿ
  •  ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ
  • ನಿಮ್ಮ ವೈಯಕ್ತಿಕ ಸಿದ್ಧಾಂತಗಳನ್ನು ಬದಿಗಿಟ್ಟು ಭಗವಂತನಿಗೆ ಶರಣು ಹೋಗಬೇಕು
  •  ಮಹಿಳೆಯರಿಗೆ  ವಸ್ತ್ರ ಆಭರಣ ಪ್ರಾಪ್ತಿಯಾಗಲಿದೆ
  •  ದೈನಂದಿನ ಚಟುವಟಿಕೆಯ ಹೊರತಾಗಿ ಬೇರೆ ಕೆಲಸಗಳಲ್ಲಿ ಆಸಕ್ತಿವಹಿಸುವಿರಿ
  • ಸರ್ಕಾರಿ ನೌಕರರಿಗೆ ಬಡ್ತಿ ಸಿಗಲಿದೆ
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

RASHI_BHAVISHA_MAKARA

  • ಇಂಜಿನಿಯರ್ ಕೆಲಸ ಮಾಡುವವರಿಗೆ ಶುಭದಿನ
  • ನಿಮ್ಮ ಸಾಧನೆಯ ಸಂತೋಷವನ್ನು ಬೇರೆಯವರಿಗೆ ಹಂಚಿಕೊಳ್ಳಿ 
  • ಸಹೋದರರ ನಡುವೆ ಕಲಹ ಉಂಟಾಗಬಹುದು
  •  ಸಂಶೋಧಕರಿಗೆ ಮಹತ್ಮ ಪೂರ್ಣ ದಿನ
  • ಅಕಾಲ ಭೋಜನದಿಂದ ಬೇಸರ ಆಗಬಹುದು
  •  ಹೊಂದಾಣಿಕೆ ಮಾಡಿಕೊಂಡ್ರೆ  ಕೈ ಹಾಕಿದ ಕೆಲಸ ಉತ್ತಮ ಮುಟ್ಟದಾಗಿರುತ್ತದೆ
  • ಆಸ್ತಿ ವಿವಾದ ಇತ್ಯರ್ಥ ಆಗುವ ದಿನ
  • ಪ್ರೇಮಿಗಳ ನಡುವೆ ಮನಸ್ತಾಪ ಉಂಟಾಗಬಹುದು
  • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ಕುಂಭ

RASHI_BHAVISHA_KUMBHA

  • ಭೂಮಿ ಖರೀದಿಯ ಚಿಂತನೆಯಿರುತ್ತದೆ
  • ಸಂಬಂಧಿಕರ ಆಗಮನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ
  •  ಧನಲಾಭ  ಐಶ್ವರ್ಯ ವೃದ್ಧಿಯಾಗಲಿದೆ
  • ಶತ್ರುಬಾಧೆಯಿಂದ ವ್ಯವಹಾರಕ್ಕೆ ಸ್ವಲ್ಪ ನಿಧಾನ ಆಗಲಿದೆ
  • ವಿದೇಶ ಪ್ರಯಾಣ ಮಾಡುತ್ತೀರಿ
  • ಹಿರಿಯರಿಗೆ ಗೌರವವನ್ನು ನೀಡಿ
  •  ಬೇರೆಯವರಿಗೆ ಉಪಕಾರ ಮಾಡುತ್ತೀರಿ  
  •  ಸಾಮೂಹಿಕ ತಿರಸ್ಕಾರ ಮಾಡುವ ಜನರಲ್ಲಿ ನೀವೂ ಒಬ್ಬರಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ
Advertisment

ಮೀನ

RASHI_BHAVISHA_MEENA

  • ಸುಖ ದುಃಖ ಎರಡನ್ನು ಸಮಾನವಾಗಿ ಸ್ವೀಕರಿಸಿ
  •  ಯಾರನ್ನು ತುಂಬಾ ನಂಬಬೇಡಿ ಒಳ್ಳೆಯದಲ್ಲ
  •  ನಿಮ್ಮ ವ್ಯಕ್ತಿತ್ವ ನಿಮಗೆ ಗೌರವ ತರುತ್ತದೆ
  •  ವ್ಯವಹಾರದ ಮಾತುಕತೆ ಫಲಪ್ರದವಾಗಬಹುದು
  • ಇಂದು  ಅಪನಿಂದನೆಯೂ ಬರುತ್ತದೆ
  • ಕೋರ್ಟ್ ಕಛೇರಿ ಕೆಲಸಗಳು ಸುಗಮವಾಗಿ ಆಗಲಿದೆ
  •  ಸ್ನೇಹಿತರು ಮತ್ತು ಬಂಧುಗಳ ಮಧ್ಯದಲ್ಲಿದ್ದ ಗೊಂದಲ ನಿವಾರಣೆಯಾಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope Kannada News
Advertisment
Advertisment
Advertisment