/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ, ಅಮಾವಾಸ್ಯೆ ತಿಥಿ, ಪುಬ್ಬಾ ನಕ್ಷತ್ರ, ಭಾದ್ರಪದ ಮಾಸ, ಕೃಷ್ಣಪಕ್ಷ, ಅಮಾವಾಸ್ಯೆ, ಪುಬ್ಬಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ಕುಟುಂಬದ ಹಿರಿಯರ ಪ್ರೀತಿ ವಿಶ್ವಾಸಗಳಿಸಿ
- ಬೇರೆಯವರ ನಿರ್ಲಕ್ಷದಿಂದ ನಿಮ್ಮ ಕೆಲಸಕ್ಕೆ ಹಿನ್ನಡೆಯಾಗಬಹುದು
- ಉನ್ನತ ಹುದ್ದೆಯಲ್ಲಿರುವವರಿಗೂ ನಿರಾಶೆ
- ಪ್ರೇಮಿಗಳಿಗೆ ಹಿನ್ನಡೆ ಉದ್ವಿಗ್ನತೆ ಕಾಡಬಹುದು
- ಅಧಿಕಾರದ ಭಯದಿಂದ ಸ್ಥಾನ ಚ್ಯುತಿಯಾಗಬಹುದು
- ಅತಿಯಾದ ಆತ್ಮ ವಿಶ್ವಾಸ ನಿಮಗೆ ತೊಂದರೆ ಮಾಡುತ್ತದೆ
- ನಿರುದ್ಯೋಗಿಗಳಿಗೆ ತುಂಬಾ ಬೇಸರವಾಗುವ ದಿನ
- ಇಷ್ಟದೇವತಾ ಆರಾಧನೆ ಮಾಡಿ
ವೃಷಭ
- ನೌಕರರಿಗೆ ವಿದ್ಯಾರ್ಥಿಗಳಿಗೆ ತಾಳ್ಮೆ ಪರೀಕ್ಷೆಯ ದಿನವಿದು
- ಕೈಯಲ್ಲಿ ಹಣದ ಸಮಸ್ಯೆ ಉದ್ಯೋಗ ಸಮಸ್ಯೆ ಆರೋಗ್ಯವೂ ಕೈ ಕೊಡಬಹುದು
- ಅತೀ ಮುಖ್ಯವಾದ ವಿಚಾರಗಳಲ್ಲಿ ಗೊಂದಲ
- ಆರ್ಥಿಕ ಸಮಸ್ಯೆ, ಸಾಯಂಕಾಲ ಸ್ವಲ್ಪ ಮಾನಸಿಕ ಒತ್ತಡ ಕಡಿಮೆಯಾಗುವುದರಿಂದ ನೆಮ್ಮದಿ
- ಜವಾಬ್ದಾರಿಯ ಬಗ್ಗೆ ನಿಗಾವಹಿಸಬೇಕಾದ್ದು ನಿಮಗೆ ಅನಿವಾರ್ಯವಾಗುತ್ತದೆ
- ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ನಿಮ್ಮನ್ನು ಪ್ರಶಂಸಿಸುತ್ತಾರೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
ಮಿಥುನ
- ವ್ಯಾಪಾರ ವಿಸ್ತರಿಸಲು ಕೈ ಹಾಕಿ ನಷ್ಟವಾಗಬಹುದು
- ಪ್ರೇಮಿಗಳಿಗೆ ಆಶುಭ ಹೆಚ್ಚು ಧೈರ್ಯ ಬೇಡ ಭವಿಷ್ಯಕ್ಕೆ ತೊಂದರೆಯಾಗಬಹುದು
- ಧಾರ್ಮಿಕ ಮುಖಂಡರಿಗೆ ಹಿನ್ನಡೆ ಅವಮಾನ ಆಗಲಿದೆ
- ಹಿತಶತ್ರುಗಳ ಕಾಟದಿಂದ ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗಬಹುದು
- ಆದರೆ ವಿರೋಧಿಗಳು ನಿಮ್ಮೆಲ್ಲಾ ಸಂತೋಷವನ್ನು ಹಾಳು ಮಾಡಬಹುದು
- ಕುಟುಂಬದ ವಾತಾವರಣ ವ್ಯಾಪಾರ ವ್ಯವಹಾರ ಚೆನ್ನಾಗಿಯೇ ಇರುತ್ತದೆ
- ಸುದರ್ಶನನನ್ನು ಪ್ರಾರ್ಥಿಸಿ
ಕಟಕ
- ಪುಸಕ್ತ ಪ್ರೇಮಿಗಳಿಗೆ ವ್ಯಾಪಾರಸ್ಥರಿಗೆ ಶುಭವಿದೆ
- ಸಹೋದರ ವೈಮನಸ್ಸು ಇರಬಹುದು ತಾಳ್ಮೆಯಿರಲಿ
- ಈ ದಿನ ದುಂದುವೆಚ್ಚ ಬೇಡ
- ಬೇರೆಯವರಿಗೆ ಸಾಲದ ರೂಪದಲ್ಲಿ ಹಣ ಪದಾರ್ಥ ನೀಡಬಾರದು
- ಆದಾಯದ ಮೂಲ ನೋಡಿ ಖರ್ಚಿಗೆ ಮುಂದಾಗಬೇಕು
- ದುಬಾರಿ ವಸ್ತುಗಳ ಖರೀದಿ ಮಾಡಬೇಡಿ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ
ಸಿಂಹ
- ಆಹಾರ ಸೇವನೆಯ ಬಗ್ಗೆ ಹೆಚ್ಚು ಗಮನಹರಿಸಿ
- ನಿಮ್ಮ ಸ್ಥಾನ ಸಂಬಂಧಗಳ ತಿಳುವಳಿಕೆ ನಿಮಗಿರಬೇಕಾಗುತ್ತದೆ
- ಮೇಲಾಧಿಕಾರಿಗಳ ಜೊತೆ ಕುಟುಂಬದ ಹಿರಿಯರ ಜೊತೆ ವಾದಿಸಬಾರದು
- ಕೋಪಬೇಡ ಕೆಲ ಹೊತ್ತು ವಾತಾವರಣ ಚೆನ್ನಾಗಿರುವುದಿಲ್ಲ
- ನಯ ವಂಚಕರಿಂದ ದೂರವಿರಬೇಕಾಗುತ್ತದೆ
- ಹವಾಮಾನ ವೈಪರೀತ್ಯಾ ಶೀತ ಸಂಬಂಧಿ ತೊಂದರೆ ಕುಟುಂಬಕ್ಕೆಲ್ಲ ಬರಬಹುದು
- ದುರ್ಗಾದೇವಿಯನ್ನು ಆರಾಧನೆ ಮಾಡಿ
ಕನ್ಯಾ
- ನಿಮ್ಮ ತತ್ತ್ವಗಳಲ್ಲಿ ಯಾವುದೇ ಕಾರಣಕ್ಕೂ ರಾಜಿ ಬೇಡ
- ಮದುವೆಗೆ ನಿಶ್ಚಯದ ಸೂಚನೆಗಳಿವೆ
- ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಲಿದೆ
- ಸ್ವಲ್ಪ ಆಸಕ್ತಿಯನ್ನು ಗಟ್ಟಿಮಾಡಿಕೊಳ್ಳಬೇಕು
- ಜಗಳ ಬೇಡ ಕೇವಲ ಮಾತಿನಿಂದ ನೀವು ಹೇಳಬೇಕಾದ್ದನ್ನು ಹೇಳಿ
- ಹಳೆಯ ನಷ್ಟಕ್ಕೆ ಅವಮಾನಕ್ಕೆ ಇಂದು ಪ್ರತೀಕಾರದ ಸಮಯವಾಗಿರುತ್ತದೆ
- ನಿಮಗಿರುವ ಬುದ್ಧಿವಂತಿಕೆಯಿಂದ ನಿಮ್ಮ ವಿರೋಧಿಗಳನ್ನು ಸೋಲಿಸುತ್ತೀರಿ
- ಸಾಲಿಗ್ರಾಮ ಮಹಾವಿಷ್ಣುವನ್ನು ಆರಾಧನೆ ಮಾಡಿ
ತುಲಾ
- ನಿಮ್ಮ ಜವಾಬ್ದಾರಿಯುತ ಕೆಲಸಗಳು ಸಕಾಲದಲ್ಲಿ ಮುಗಿಯಬಹುದು
- ಸ್ನೇಹಿತರೊಂದಿಗೆ ಸೇರಿ ಹೊಸ ಯೋಜನೆ ರೂಪಿಸಲು ಅವಕಾಶವಿದೆ
- ಬದಲಾವಣೆಯ ಪರ್ವ ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತದೆ
- ಕೆಲಸದಲ್ಲಿ ಬಡ್ತಿ ಅಥವಾ ಹಣ ನಿಮ್ಮ ಕೈ ಸೇರುತ್ತದೆ
- ಕೌಶಲ್ಯದ ಕೆಲಸ ನಿಮಗೆ ಸಹಾಯಕವಾಗುವಂತೆ ಮಾಡಬಹುದು
- ಮಕ್ಕಳ ವಿಚಾರವಾಗಿ ಇದ್ದ ಚಿಂತೆ ದೂರವಾಗಬಹುದು
- ಕುಲದೇವತಾ ಆರಾಧನೆ ಮಾಡಿ
ವೃಶ್ಚಿಕ
- ನಿಮ್ಮ ಧೈರ್ಯ ಹಾಗೂ ಭಾವನೆಗಳಿಗೆ ಭಂಗ ಬರಬಹುದು ಎಚ್ಚರಿಕೆಯಿರಲಿ
- ಸಾಧನೆ ಮತ್ತು ಪ್ರಗತಿಯ ಬಗ್ಗೆ ಅಹಂಭಾವ ಬೇಡ
- ಹಣ ಮತ್ತು ದ್ರವ್ಯ ಕಳೆದುಕೊಳ್ಳುವ ಸಾಧ್ಯತೆಗಳಿವೆ
- ವಿನಾಕಾರಣ ವಾದ-ವಿವಾದಗಳು ಬೇಡ
- ಮಾಟ-ಮಂತ್ರ ಇತ್ಯಾದಿಗಳ ಬಗ್ಗೆ ವಿಚಾರ ಮಾಡುತ್ತೀರಿ
- ಅಪರಿಚಿತ ಭಯ ಕಾಡಬಹುದು
- ಮಾಟ-ಮಂತ್ರ ಇತ್ಯಾದಿಗಳ ಬಗ್ಗೆ ವಿಚಾರ ಮಾಡುತ್ತೀರಿ
- ಪ್ರತ್ಯಂಗಿರಾ ಹೋಮ ಮಾಡಿಸಿ
ಧನುಸ್ಸು
- ಮನೋರಂಜನೆಯನ್ನು ಅನುಭವಿಸುವ ಮೂಲಕ ಸಂತೋಷಿತರಾಗುತ್ತೀರಿ
- ಚಿಕ್ಕಮಕ್ಕಳಿಗೆ ಸಮಸ್ಯೆ ಇರುವುದರಿಂದ ಮಕ್ಕಳ ಬಗ್ಗೆ ಗಮನವಿರಲಿ
- ಕೈ ಹಾಕಿದ ಕೆಲಸಗಳು ಪೂರ್ಣವಾಗುವ ಸೂಚನೆಯಿರುತ್ತದೆ
- ಸಂಬಂಧಿಕರಲ್ಲಿ ಬಹು ಜನಪ್ರಿಯರಾಗುತ್ತೀರಿ
- ಸಮಾಜ ಕಾರ್ಯ ಜನಸೇವೆಯಲ್ಲಿ ಉತ್ಸುಕರಾಗಿರುತ್ತೀರಿ
- ವಿದೇಶಿ ಪ್ರಯಣಕ್ಕಾಗಿ ಪ್ರಯತ್ನಿಸುತ್ತಿದ್ದವರಿಗೆ ಈ ದಿನ ಶುಭವಿದೆ
- ಅಶ್ವತ್ಥ ಪ್ರದಕ್ಷಿಣೆ ಮಾಡಿ
ಮಕರ
- ಕುಟುಂಬ ಸದಸ್ಯರ ಸ್ವಭಾವದಿಂದ ನಿಮಗೆ ಬೇಸರವಾಗಬಹುದು
- ಸಮಾಜದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡಬೇಕಾಗುತ್ತದೆ
- ಪೂರ್ವಿಕರ ಆಸ್ತಿ ವಿಚಾರಗಳಲ್ಲಿ ಒಂದು ತಿರುವು ಬರಬಹುದು
- ಹಣಕಾಸಿನ ಸಮಸ್ಯೆಯಿಂದ ಕೆಲವು ಕೆಲಸಗಳು ಸ್ಥಗಿತವಾಗಬಹುದು
- ವೈದ್ಯಕೀಯ ವಿದ್ಯಾರ್ಥಿಗಳಿಗೆ ವೈದ್ಯರಿಗೆ ಶುಭಫಲವಿದೆ
- ಕಾರ್ಯಕ್ಷೇತ್ರದಲ್ಲಿ ಕೆಲವು ಅರಿವಿಲ್ಲದ ಸಮಸ್ಯೆಗಳುಂಟಾಗಬಹುದು
- ಕಾಮಧೇನು ಮಂತ್ರವನ್ನು ಜಪಿಸಿ
ಕುಂಭ
- ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ವಿನಾಕಾರಣ ಮಾತು ಬೇಡ
- ಕಾರ್ಯ ನಿಮಿತ್ತ ಪ್ರಯಾಣ ಮಾಡಬಹುದು
- ಒಂದೇ ಸಮಯದಲ್ಲಿ 2-3 ಕೆಲಸಗಳಾಗುವ ಸಾಧ್ಯತೆಗಳಿವೆ ಶುಭವಿದೆ
- ಮನೆಯಲ್ಲಿ ಕೆಲಸಗಾರರಿದ್ದರೆ ಸ್ವಲ್ಪ ಜಾಗ್ರತೆವಹಿಸಿ
- ವಿದ್ಯಾರ್ಥಿಗಳಿಗೆ ಗಂಭೀರ ವಿಷಯಗಳನ್ನು ಅಧ್ಯಯನ ಮಾಡಲು ಆಸಕ್ತಿ ಬರಬಹುದು
- ನಿಮ್ಮ ಸಾಮರ್ಥ್ಯ ನೋಡಿ ಜವಾಬ್ದಾರಿಯುತ ಕೆಲಸ ನಿಮ್ಮ ಹೆಗಲೇರಲಿದೆ
- ಶಿಂಶುಮಾರ ಮಂತ್ರವನ್ನು ಜಪ ಮಾಡಿಸಿ
ಮೀನ
- ಮನೆಯಲ್ಲಿ ಪರಸ್ಪರ ವಿವಾದಗಳು ಉಂಟಾಗಬಹುದು
- ಯಾವುದೇ ಕಾರಣಕ್ಕೂ ಸಾಲ ಮಾಡುವುದು ಬೇಡ
- ಖರ್ಚನ್ನು ಸರಿಯಾಗಿ ಗಮನಿಸಿ ಆದಾಯಕ್ಕೆ ಹೊಂದಿಕೆಯಾಗುವಂತೆ ಮಾಡಿ
- ಕೆಂಪುವಸ್ತ್ರ ಧರಿಸಿ ಶುಭವಾಗಲಿದೆ
- ಮನಸ್ಸಿನಲ್ಲಿ ಹೊಸ ಹೊಸ ಆಲೋಚನೆಗಳು ಬರಬಹುದು
- ತಾಯಿಯ ಆಶೀರ್ವಾದದ ಮೂಲಕ ಈ ದಿನದ ಕೆಲಸವನ್ನು ಆರಂಭಿಸಿ
- ಸ್ರಷ್ಟಾ ಮಂತ್ರಜಪದಿಂದ ಶುಭವಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ