Advertisment

ದಿಟ್ಟ ನಿರ್ಧಾರ ದಾರಿದೀಪ ಆಗಲಿದೆ.. ಉತ್ತಮ ಫಲ ನಿರೀಕ್ಷಿಸಬಹುದಾದ ದಿನ; ಇಲ್ಲಿದೆ ಇಂದಿನ ಭವಿಷ್ಯ!

ಬಂಧುಗಳಲ್ಲಿ, ಸ್ನೇಹಿತರಲ್ಲಿ ವಿಶ್ವಾಸವು ಗಟ್ಟಿಯಾಗುತ್ತದೆ. ಸರ್ಕಾರಿ ಕೆಲಸಗಳಿದ್ದಲ್ಲಿ ಅವೆಲ್ಲವೂ ಪೂರ್ಣವಾಗುವ ಯೋಗವಿದೆ. ಸಾಮಾಜಿಕ ವಲಯ ವಿಸ್ತಾರವಾಗಬಹುದು. ಕಾರ್ಯಕ್ಷೇತ್ರದಲ್ಲಿ ಮಿತಿ ಮೀರಿದ ಅನಾಹುತಗಳು ನಿಮ್ಮ ನಿಯಂತ್ರಣಕ್ಕೆ ಬರುತ್ತವೆ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ ಶುಕ್ಲ ಪಕ್ಷ ಪಂಚಮಿ ತಿಥಿ ಅನೂರಾಧ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಮನೆಯವರೊಂದಿಗಿನ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ
  • ಬೇರೆಯವರಿಗೆ ಸಹಾಯ ಸಹಕಾರ ಮಾಡುತ್ತೀರಿ ಆದರೆ ಅವರಿಂದ ಬರುವ ಸಲಹೆಗಳು ಸೂಕ್ತವಾಗಿರುವುದಿಲ್ಲ 
  • ಮಾನಸಿಕವಾಗಿ ನೋವಿನಲ್ಲಿರುವ ನಿಮಗೆ ಅದ್ಯಾವುದು ಬೇಕಾಗಿರುವುದಿಲ್ಲ 
  • ನಿಮ್ಮ ಕಾರ್ಯಕ್ರಮಗಳು ತಕ್ಷಣ ನಿಂತುಹೋಗುವ ಸಾಧ್ಯತೆಗಳಿವೆ 
  • ಭಾವನಾತ್ಮಕವಾಗಿ ವರ್ತಿಸುವುದರಿಂದ ನಿಮ್ಮ ಕೆಲಸಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕಾಣಬಹುದು
  • ನಿಮ್ಮ ತಂದೆಯವರ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ 
  • ಮೃತ್ಯುಂಜಯನನ್ನು ಆರಾಧಿಸಿ

ವೃಷಭ

RASHI_BHAVISHA_VRSHABA

  • ಲೌಕಿಕ ಜೀವನಕ್ಕೆ ಕೊಟ್ಟಂತಹ ಬೆಲೆಯನ್ನು ಮನುಷ್ಯತ್ವಕ್ಕೆ ಕೊಡದೆ ಗೌರವ ಕಡಿಮೆಯಾಗುವ ಸಾಧ್ಯತೆ
  • ಆರೋಗ್ಯ ವ್ಯವಹಾರ ಒಂದೆಡೆಯಾದರೆ ಒಂಟಿತನ ಮತ್ತೊಂದೆಡೆ ನಿಮ್ಮನ್ನ ಕಾಡಬಹುದು
  •  ನಾವು ಸರಿಯಾಗಿದ್ದರೆ ಏನನ್ನಾದರು ಸಾಧಿಸಬಹುದೆಂಬ ಛಲವಿರಬೇಕಾಗುತ್ತದೆ ನಿಮ್ಮ ತಪ್ಪಿನ ಅರಿವಾಗಬೇಕು 
  • ನಿಮ್ಮ ಜೀವನ ಎರಡೆರಡು ವಿಷಯಗಳಲ್ಲಿ ಆಶಾದಾಯಕವಾಗಿರಬಹುದು 
  • ಇಂದು ಜೀವನದಲ್ಲಿ ಜಿಗುಪ್ಪೆ ಕಾಡುವಂತಹ ದಿನ 
  • ಸಪ್ತರ್ಷಿಗಳನ್ನು ಧ್ಯಾನ ಮಾಡಿ
Advertisment

ಮಿಥುನ

RASHI_BHAVISHA_MITHUNA

  • ಉದ್ಯೋಗಾಕಾಂಕ್ಷಿಗಳಿಗೆ ಶುಭಫಲವಿದೆ
  • ವ್ಯವಹಾರ ವೃತ್ತಿಯಲ್ಲಿ ಹೊಸ ಸಿಬ್ಬಂದಿಯಿಂದ ತಿರುಕುಳ ಜಗಳವಾಗುವ ಸಾಧ್ಯತೆಯಿದೆ 
  • ಪ್ರಾಮಾಣಿಕವಾಗಿ ದುಡಿದ ಕಲಾವಿದರಿಗೆ ಇಂದು ಅದೃಷ್ಟ ಒಲಿಯಬಹುದು 
  • ನಿಮ್ಮ ಪಿತ್ರಾರ್ಜಿತ ಆಸ್ತಿಗೆ ಇನ್ನೂ ಸ್ವಲ್ಪ ಆಸ್ತಿ ಸೇರ್ಪಡೆಯಾಗಬಹುದು 
  • ನಿಮ್ಮ ಪ್ರತಿಭೆಯನ್ನು ವೃದ್ಧಿಗೊಳಿಸಲು ಅವಕಾಶಗಳಿವೆ ಗಮನಿಸಿ
  • ಕುಬೇರ ಲಕ್ಷ್ಮಿಯ ಆರಾಧನೆ ಮಾಡಿ

ಕಟಕ

RASHI_BHAVISHA_KATAKA

  • ನಿಮ್ಮ ಜೀವನದ ಸಾಧನೆ ಹಲವರಿಗೆ ಮಾದರಿ ಆದರೆ ನೀವೇ ಬೆಲೆ ಕೊಡುವುದಿಲ್ಲ 
    ಈ ದಿನ ಚೆನ್ನಾಗಿದೆ
  • ಹೊಸತನ್ನು ಆರಂಭಿಸಲು ಸಕಾಲಕ್ಕೆ ಚಿಂತಿಸಿ
  •  ನಿಮ್ಮ ಸಾಮರ್ಥ್ಯ ಎಲ್ಲ ಕಡೆ ಯಶಸ್ಸು ಪಡೆಯಲು ಸಹಕಾರಿಯಾಗುವುದಿಲ್ಲ
  • ಉತ್ತಮ ಫಲ ನಿರೀಕ್ಷಿಸಬಹುದಾದ ದಿನವಾಗಿದೆ 
  • ಹಿರಿಯರು ನಿಮ್ಮಲ್ಲಿರುವ ಪ್ರತಿಭೆಗೆ ಪ್ರಭಾವಿತರಾಗುತ್ತಾರೆ 
  • ದುರ್ಗಾರಾಧನೆ ಮಾಡಿ

ಸಿಂಹ 

RASHI_BHAVISHA_SIMHA

  • ಬದಲಾಗುತ್ತಿರುವ ಹವಾಮಾನದಿಂದ ಶೀತ ಜ್ವರ ಕಾಣಬಹುದು ಜಾಗ್ರತೆವಹಿಸಿ
  •  ಹಣದ ಕೊರತೆಯಿಂದ ಕೋಪ ಬರಬಹುದು ನಿಯಂತ್ರಿಸಿ 
  • ಆತುರಾತುರವಾದ ನಿರ್ಧಾರಗಳು ನಿಮಗೆ ಹಿನ್ನಡೆ ಉಂಟು ಮಾಡಬಹುದು, ತಾಳ್ಮೆ ಇರಲಿ 
  • ಮಾನಸಿಕ ಒತ್ತಡವು ನಿಮಗೆ ತೊಂದರೆಯುಂಟು ಮಾಡಬಹುದು
  • ನಿಮ್ಮ ಕಾಲಿಗೆ ತೊಂದರೆಯಾಗುವ ಸಾಧ್ಯತೆಗಳಿವೆ ಎಚ್ಚರವಹಿಸಿ
  •  ಯಾವುದೇ ಹೊಸ ಕೆಲಸ ಆರಂಭಿಸಬೇಡಿ 
  • ಇಂದ್ರಾಕ್ಷಿದೇವಿಯನ್ನು ಪ್ರಾರ್ಥನೆ ಮಾಡಿ
Advertisment

ಕನ್ಯಾ

RASHI_BHAVISHA_KANYA

  • ಸಮಾಜ ಮೆಚ್ಚುವಂತಹ ಕೆಲಸಗಳಲ್ಲಿ ಭಾಗಿಯಾಗುತ್ತೀರಿ ಗೌರವ ಹೆಚ್ಚುವ ಸಾಧ್ಯತೆ
  • ವೃತ್ತಿಯಲ್ಲಿ ಸ್ವಲ್ಪ ಲಾಭವಿರುತ್ತದೆ ಆದರೆ ತುಂಬಾ ಕಿರಿಕಿರಿ ಶೀತಲ ಸಮರ ಸಾಧ್ಯತೆ
  • ಲೇಖಕರಿಗೆ ಸ್ವಲ್ಪ ಸಮಸ್ಯೆ ಉಂಟಾಗಬಹುದು
  • ವೈಯಕ್ತಿಕವಾದ ಸಂಬಂಧಗಳಲ್ಲಿ ಸಂತೋಷವಿರುತ್ತದೆ
  • ಹಣಕಾಸಿನ ವಿಚಾರದಲ್ಲಿ ತುಂಬಾ ಗಂಭೀರವಾಗಿ ಪರಿಗಣಿಸುತ್ತೀರಿ
  • ಜವಾಬ್ದಾರಿ ಸ್ಥಾನದಿಂದ ನಿಮಗೆ ಗೌರವ ಪುರಸ್ಕಾರ ದೊರೆಯಬಹುದು 
  • ಮನ್ಯುಸೂಕ್ತವನ್ನು ಪಠಣೆ ಮಾಡಿ

ತುಲಾ

RASHI_BHAVISHA_TULA

  • ಕೆಲವು ಕೆಲಸಗಳನ್ನು ಸಕಾಲಕ್ಕೆ ಮುಗಿಸಬೇಕೆಂಬ ಒತ್ತಡ ಬರಬಹುದು
  • ಹೃದ್ರೋಗಿಗಳು ಎಚ್ಚರಿಕೆಯಿಂದ ಇರಬೇಕಾದ ದಿನ
  • ನಿಮ್ಮ ಜವಾಬ್ದಾರಿಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲದಿದ್ದರೆ ಅವಮಾನ ಸಾಧ್ಯತೆ
  • ಸಂಬಂಧಿಕರ ಮಾತು ಸಮಾಧಾನ ನೀಡಬಹುದು
  • ತುಂಬಾ ವಿಶ್ರಾಂತಿ ಬೇಕೆನಿಸಬಹುದು ಆದರೆ ನೀವು ಮಾತ್ರ ಕಾರ್ಯತತ್ಪರರಾಗಿರುತ್ತೀರಿ
  • ಹೊಸ ಕೆಲಸದ ಬಗ್ಗೆ ಮನಸ್ಸಿರುತ್ತದೆ ಧೈರ್ಯ ಮಾತ್ರ ಕಡಿಮೆಯಿರುತ್ತದೆ
  • ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ಜನರು ನಿಮ್ಮ ಸಲಹೆಗಳನ್ನು ಅಪೇಕ್ಷಿಸಬಹುದು ಸರಿಯಾದ ಸಲಹೆ ಕೊಡಿ
  • ನಿಮ್ಮ ದಿಟ್ಟ ನಿರ್ಧಾರ ಬೇರೆಯವರಿಗೆ ದಾರಿದೀಪ ಸಾಧ್ಯತೆ
  •  ಕುಟುಂಬದವರು ನಿಮ್ಮನ್ನು ಇಷ್ಟ ಪಡುತ್ತಾರೆ ಆದರೆ ನೀವು ಅದನ್ನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ 
  • ನಿಮ್ಮ ಸ್ನೇಹಿತರನ್ನು ವಿಶ್ವಾಸದಿಂದ ಗೌರವಿಸಿ
  • ಅಹಂಭಾವ ಸ್ವಲ್ಪ ಕಡಿಮೆ ಇದ್ದರೆ ತುಂಬಾ ಒಳ್ಳೆಯದು
  • ಆಂಜನೇಯನನ್ನು ಪೂಜಿಸಿ ಹನುಮಾನ್ ಚಾಲೀಸ ಪಠಣೆ ಮಾಡಿ
Advertisment

ಧನುಸ್ಸು

RASHI_BHAVISHA_DHANASU

  • ನಿರೀಕ್ಷಿಸಿದಷ್ಟು ಫಲಗಳು ಸಿಗಬೇಕಾದರೆ ಕಷ್ಟ ಸಾಧ್ಯ
  • ವಿದ್ಯಾರ್ಥಿಗಳು ಮತ್ತು ನೌಕರರು ತುಂಬಾ ಪರಿಶ್ರಮಿಸಬೇಕಾದ ದಿನ 
  • ನಕಾರಾತ್ಮಕ ಆಲೋಚನೆಗಳು ನಿಮ್ಮ ಕೆಲಸದ ಗುಣಮಟ್ಟವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ 
  • ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ಅಪಯಶಸ್ಸು ಸಾಧ್ಯತೆ
  •  ಬಾಂಧವ್ಯ ತುಂಬಾ ದುರ್ಬಲವಾಗುವ ಸಾಧ್ಯತೆಯಿದೆ
  •  ಮನೆಗೆ ಮತ್ತೆ ಮತ್ತೆ ಸ್ನೇಹಿತರು ಬಂಧುಗಳು ಬರಬಹುದು
  •  ಗುರು ದಕ್ಷಿಣಾಮೂರ್ತಿಯನ್ನು ಆರಾಧನೆ ಮಾಡಿ

ಮಕರ

RASHI_BHAVISHA_MAKARA

  • ಇಂದು ಉದ್ಯೋಗ ಬದಲಾವಣೆ ಸ್ಥಾನ ಪಲ್ಲಟಕ್ಕೆ ಅವಕಾಶವಿದೆ
  • ನಿಮ್ಮ ಹತ್ತಿರದವರ ಬಗ್ಗೆ ಹೆಚ್ಚು ಕಾಳಜಿವಹಿಸಿ
  • ವಿದ್ಯಾರ್ಥಿಗಳು ಕಷ್ಟ ಪಟ್ಟರೂ ಸಂಕಷ್ಟ ತಪ್ಪಿದ್ದಲ್ಲ
  • ಪ್ರೇಮಿಗಳಿಗೆ ಕೆಲವು ಅಡೆತಡೆಗಳು ಬರಬಹುದು ಆದರೆ ನಿಭಾಯಿಸುತ್ತೀರಿ
  • ಬೇರೆಯವರ ತಪ್ಪುಗಳನ್ನು ಹೇಳುವ ಬದಲು ಸೂಕ್ತ ಸಲಹೆ ಕೊಟ್ಟರೆ ಒಳ್ಳೆಯದು 
  • ಲಲಿತಾ ಪರಮೇಶ್ವರಿಯನ್ನು ಆರಾಧನೆ ಮಾಡಿ

ಕುಂಭ

RASHI_BHAVISHA_KUMBHA

  • ಬಂಧುಗಳಲ್ಲಿ, ಸ್ನೇಹಿತರಲ್ಲಿ ವಿಶ್ವಾಸವು ಗಟ್ಟಿಯಾಗುತ್ತದೆ
  •  ಸರ್ಕಾರಿ ಕೆಲಸಗಳಿದ್ದಲ್ಲಿ ಅವೆಲ್ಲವೂ ಪೂರ್ಣವಾಗುವ ಯೋಗವಿದೆ
  •  ಸಾಮಾಜಿಕ ವಲಯ ವಿಸ್ತಾರವಾಗಬಹುದು
  • ಕಾರ್ಯಕ್ಷೇತ್ರದಲ್ಲಿ ಮಿತಿ ಮೀರಿದ ಅನಾಹುತಗಳು ನಿಮ್ಮ ನಿಯಂತ್ರಣಕ್ಕೆ ಬರುತ್ತವೆ 
  • ಶತ್ರುಗಳು ನಿಮ್ಮ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿ ವಿಫಲರಾಗುತ್ತಾರೆ 
  • ನಿಮ್ಮ ಉದಾರವಾದ ವರ್ತನೆ ನಿಮಗೆ ಅನುಕೂಲ ಮಾಡಿಕೊಡಬಹುದು 
  • ಶ್ರೀ ರಾಮನನ್ನು ಪ್ರಾರ್ಥನೆ ಮಾಡಿ
Advertisment

ಮೀನ

RASHI_BHAVISHA_MEENA

  • ಈ ದಿನ ತುಂಬಾ ಶಿಸ್ತುಬದ್ಧವಾಗಿರಬೇಕೆಂದು ಚಿಂತಿಸಬಹುದು ಆದರೆ ಸಾಧ್ಯವಾಗುವುದಿಲ್ಲ 
  • ಸಾರ್ವಜನಿಕವಾದ ಕೆಲಸಗಳಲ್ಲಿ ಭಾಗವಹಿಸುವುದು ಒಳ್ಳೆಯದು 
  • ನಿಮಗೆ ಬೇಕಾದಷ್ಟು ವಿರಾಮವಿರುತ್ತದೆ ಆದರೆ ಪೂರ್ತಿ ದಿನ ವ್ಯರ್ಥವಾಗುವ ಸಾಧ್ಯತೆ
  •  ವ್ಯವಹಾರಗಳಲ್ಲಿ ದುರ್ಬಲವಾದ ಅಂಶಗಳನ್ನು ನೋಡುವ ಸಾಧ್ಯತೆ
  •  ಪ್ರೇಮಿಗಳಲ್ಲಿ ಪರಸ್ಪರ ಜಗಳವಾಗುವ ಸಂದರ್ಭಗಳಿವೆ ಮಾಡುತ್ತೀರಿ 
  • ಕುಲದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Kannada News Horoscope
Advertisment
Advertisment
Advertisment