/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ತುಂಬಾ ದಿನಗಳ ನಂತರ ಪುಣ್ಯಕ್ಷೇತ್ರಕ್ಕೆ ಹೋಗುವ ಆಲೋಚನೆ ಮಾಡ್ತೀರಿ
- ವಿರೋಧಿಗಳ ಜೊತೆ ವಾಗ್ವಾದ ನಡೆಯುವ ಸಾಧ್ಯತೆ ಹೆಚ್ಚು
- ಉಗ್ರ ಸ್ವಭಾವದ ಜೊತೆಯಲ್ಲಿ ಅಂತರ ಕಾಯ್ದುಕೊಳ್ಳಿ
- ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿ ಮಾಡಬೇಕಾಗುತ್ತದೆ
- ಹಣದ ವಿಚಾರ ಬಂದಾಗ ನಿಮಗೆ ತೃಪ್ತಿ ಇರುವುದಿಲ್ಲ
- ಆದಾಯದ ಮೂಲ ಚೆನ್ನಾಗಿರುವುದರಿಂದ ಮನಸ್ಸಿಗೆ ಸಂತೋಷವಿರಲಿದೆ
- ಉಗ್ರ ನರಸಿಂಹನನ್ನು ಪ್ರಾರ್ಥಿಸಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ದಿನಚರಿ ಸ್ವಲ್ಪ ಅಸ್ತವ್ಯಸ್ತವಾಗಬಹುದು ಸರಿಪಡಿಸಿಕೊಳ್ಳಿ
- ಹಲವಾರು ಕೆಲಸಗಳು ನಿಮ್ಮ ಮುಂದಿರುತ್ತದೆ
- ಪ್ರಯಾಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದರಲ್ಲೇ ದಿನವನ್ನು ಕಳೆಯುತ್ತೀರಿ
- ಮುಖ್ಯವಾದ ಕೆಲಸಕ್ಕೆ ಅಡ್ಡಿಯಾಗಬಹುದು
- ಬಂಧುಗಳಲ್ಲಿ ಅಭಿಪ್ರಾಯ ಬಹಳ ಚೆನ್ನಾಗಿರುತ್ತದೆ
- ವಿದೇಶದಿಂದ ಇಲ್ಲಿಗೆ ಬರುವವರಿಗೂ ಕೂಡ ಯೋಗ ಸಿಗುವಂತಹದ್ದು
- ಗಂಟಲಿನ ಸಮಸ್ಯೆ ಕಾಡಬಹುದು
- ವಿಘ್ನೇಶ್ವರನನ್ನು ಪ್ರಾರ್ಥನೆ ಮಾಡಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದೇಶದಿಂದ ಧನಲಾಭವಾಗುವ ಯೋಗವಿದೆ
- ಮನಸ್ಸಿಗೆ ಎನೋ ಸಮಾಧಾನ ಉಂಟಾಗಲಿದೆ
- ವಿದೇಶಕ್ಕೆ ಪ್ರಯಾಣವನ್ನು ಬೆಳಿಸಬೇಕು ಅನ್ನೋ ಆಲೋಚನೆ ಇರುವವರಿಗೆ ಶುಭವಿದೆ
- ವಿರೋಧಿಗಳಿಗೆ ಉತ್ತರ ನೀಡಲು ಸಿದ್ಧರಾಗಿರುತ್ತೀರಿ
- ಸಾಯಂಕಾಲದ ಹೊತ್ತಿಗೆ ಬೇಸರದ ಜೊತೆ ಜಿಗುಪ್ಸೆ ಕಾಡಲಿದೆ
- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಆರ್ಥಿಕವಾಗಿ ಸುಧಾರಣೆಯಾಗುವ ದಿನ
- ವಿಷ್ಣು ಸಹಸ್ರನಾಮ ಪಠಣೆ ಮಾಡಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಸ್ವಭಾವ ಅನುಮಾನಾಸ್ಪದವಾಗಿ ಕಾಣುತ್ತದೆ
- ಆರೋಗ್ಯ ಸಮಸ್ಯೆಗಳು ಇದ್ದರೆ ಯಾವುದೇ ಕಾರಣಕ್ಕೂ ತಾತ್ಸಾರ ಮಾಡಬೇಡಿ
- ಹಣದ ಕೊರತೆ ನಿಮಗೆ ಕಾಡಬಹುದು
- ಶ್ರಮದಿಂದ ಕಾರ್ಯ ಮುಗಿಸಲು ಪ್ರಯತ್ನಿಸುತ್ತೀರಿ
- ನಿರ್ಲಕ್ಷ್ಯದಿಂದ ಮುಖ್ಯ ಕೆಲಸಗಳನ್ನು ಕೈ ಬಿಡುವ ಸಾಧ್ಯತೆ ಇದೆ
- ಮಾತು ಮತ್ತು ಅಭಿಪ್ರಾಯ ದ್ವೇಷಕ್ಕೆ ಕಾರಣವಾಗುತ್ತದೆ
- ನಿಮ್ಮ ಜೀವನದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ
- ಕುಲದೇವತೆಯನ್ನು ಪ್ರಾರ್ಥಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರೇಮಿಗಳಿಗೆ ಶುಭದಿನ
- ಸ್ವಾರ್ಥಕ್ಕೋಸ್ಕರ ಬೇರೆಯವರ ಸಹಾಯ ಕೇಳಬಾರದು
- ನಿಮಗಿರುವ ಸಂಪರ್ಕವು ಉತ್ತಮ ಕಾರ್ಯಗಳಿಗೆ ವಿನಿಯೋಗವಾಗಲಿ
- ತರಕಾರಿ ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟಿನ ಲಾಭ ಸಿಗುವ ದಿನ
- ನಿಮ್ಮ ಮಾತಿನಿಂದ ಹಲವರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ
- ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸದಾವಕಾಶ
- ಶಾಕಾಂಬರಿ ದೇವತೆಯನ್ನು ಆರಾಧನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಶುಭ ಲಾಭಗಳಿರುತ್ತದೆ
- ನಕರಾತ್ಮಕವಾದ ಚಿಂತನೆಗಳು ಮನಸ್ಸಿನಲ್ಲಿ ಬಂದು ಭಯವನ್ನು ಹುಟ್ಟಿಸುತ್ತದೆ
- ಮಾನಸಿಕವಾಗಿ ಏನೋ ಭಯ
- ಸ್ನೇಹಿತರು ಮತ್ತು ಬಂಧುಗಳೊಂದಿಗೆ ವಿಶೇಷವಾದ ಬಾಂಧವ್ಯವನ್ನು ಉಳಿಸಿಕೊಳ್ಳಬೇಕು
- ಹಲವರಿಗೆ ನಿಮ್ಮ ಮೇಲೆ ಕೋಪವಿರುತ್ತದೆ
- ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ
- ಸರ್ಕಾರಿ ಕೆಲಸಕ್ಕೆ ಅಡಚಣೆ ಇರುವುದು
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರೀತಿ ಪಾತ್ರರ ಮೇಲೆ ಅತಿಯಾದ ಅವಲಂಬನೆ ಬೇಡ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು
- ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಹೆಸರು ಬರುತ್ತದೆ
- ಆಹಾರ ಮಿತವಾಗಿರಲಿ ಅಲರ್ಜಿ ಸಮಸ್ಯೆ ಕಾಡಬಹುದು
- ಹವ್ಯಾಸಿ ಕಲಾವಿದರು ತಮ್ಮ ಹವ್ಯಾಸಕ್ಕೆ ಅನುಗುಣವಾದಂತಹ ವಸ್ತುವಿನ ಖರೀದಿಗೆ ಹಣ ಖರ್ಚು ಮಾಡಬೇಕಾದ ದಿನ
- ಸಿಟ್ಟಿನಿಂದ ಯಾರೊಂದಿಗೂ ಮಾತನಾಡಬಾರದು
- ಧನ್ವಂತರಿಯನ್ನು ಪ್ರಾರ್ಥಿಸಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಆದಾಯದಷ್ಟೇ ಖರ್ಚಿರುತ್ತದೆ
- ಹಳೆಯ ಸಾಲ ತೀರಿಸಲು ಮತ್ತೆ ಸಾಲ ಮಾಡಬಹುದು
- ನಿಮ್ಮ ಪ್ರತಿಭೆ, ಸ್ವಭಾವ ಎಲ್ಲವೂ ಕೂಡ ಹಿರಿಯರಿಗೆ ಬಹಳ ಸಂತೋಷವನ್ನುಂಟು ಮಾಡುತ್ತದೆ
- ಸ್ನೇಹಿತರೊಂದಿಗೆ ಗಹನವಾದ ವಿಚಾರವನ್ನ ಚರ್ಚಿಸುತ್ತೀರಿ
- ಸಣ್ಣ-ಪುಟ್ಟ ವಿಚಾರಗಳನ್ನು ತಾತ್ಸಾರ ಮಾಡಬೇಡಿ
- ನಿಮ್ಮ ಕೆಲಸವೆ ನಿಮಗೆ ತೃಪ್ತಿ ಕೊಡುವುದಿಲ್ಲ
- ಹಿರಿಯರ ಪ್ರೀತಿಗೆ ಪಾತ್ರರಾಗುತ್ತೀರಿ
- ಕುಲದೇವತಾ ಆರಾಧನೆ ಮಾಡಿ
ಧನುಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ವಿನಾಕಾರಣ ಹಣವನ್ನು ವಸ್ತು ಖರೀದಿಗೋಸ್ಕರ ವ್ಯಯವಾಗುವಂತಹದ್ದು ಹೆಚ್ಚಾಗಿ ಕಾಣುತ್ತದೆ
- ಸಣ್ಣ ಪುಟ್ಟ ತಪ್ಪಿಗೋಸ್ಕರ ಹಣ ವ್ಯಯವಾಗಬಹುದು
- ಮನೆಯವರಿಗಾಗಿ ಸ್ವಲ್ಪ ಸಮಯ ಮೀಸಲಾಗಿಡಬೇಕಾಗುತ್ತದೆ
- ಆರ್ಥಿಕ ಲಾಭವಿರುವ ದಿನ
- ಕುಟುಂಬದ ವಾತಾವರಣ ಚೆನ್ನಾಗಿರುವಂತೆ ಕಾಪಾಡುವ ಜವಾಬ್ದಾರಿ ನಿಮ್ಮ ಮೇಲಿರುತ್ತೆ
- ದೂರ ಪ್ರಯಾಣವನ್ನು ಮಾಡುವ ಸಾಧ್ಯತೆಗಳಿವೆ
- ಎಲ್ಲಾ ಕೆಲಸಗಳು ಕೂಡ ತುಂಬಾ ಆತು ಆತುರವಾಗಿ ನಡೆಯುವಂತಹದ್ದು ನಿಮಗೆ ಸಮಯವೇ ಇಲ್ಲ
- ಸಂಪತ್ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಯಾವುದೇ ಹೊಸ ಕೆಲಸಗಳನ್ನ ಪ್ರಾರಂಭಿಸಬೇಡಿ
- ಹಣ ಹೂಡಿಕೆಗೆ ಒಳ್ಳೆಯ ದಿನ
- ಆರೋಗ್ಯದ ವಿಚಾರಕ್ಕೆ ಒಮ್ಮೆ ಜಾತಕವನ್ನ ಪರಿಶೀಲಿಸಿಕೊಳ್ಳುವುದು ಒಳ್ಳೆಯದು
- ವ್ಯಾವಹಾರಿಕವಾಗಿ ಸ್ವಲ್ಪ ದುರ್ಬಲರಾಗುತ್ತೀರಿ
- ಮಕ್ಕಳಿಂದ ಚಿಂತೆ, ಹಣದ ಖರ್ಚು ನಿಮ್ಮ ಮುಂದೆ ಸವಾಲಾಗಿ ಕಾಣುವಂತಹದ್ದು
- ಬೇರೆಯವರು ನಿಮಗೆ ತಿಳುವಳಿಕೆ ಹೇಳುವಂತೆ ಮಾಡಿಕೊಳ್ಳಬೇಡಿ
- ಹಳೆಯ ರೋಗ ಮತ್ತೆ ಕಾಡಬಹುದು
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ತ್ರೀಯರಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇದೆ
- ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಬಹುದು
- ಆತ್ಮ ಸಾಕ್ಷಿಗೆ ಸರಿ ಅನಿಸಿದ ಕೆಲಸವನ್ನು ಮಾತ್ರ ಮಾಡಿ
- ತುಂಬಾ ಒತ್ತಡಕ್ಕೆ ಮಣಿದು ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ
- ಸತ್ಸಂಗ, ಸಭೆಗಳಲ್ಲಿ ಭಾಗವಹಿಸುವ ಅವಕಾಶಗಳಿವೆ
- ಕೋರ್ಟ್ ಕೆಲಸಗಳಲ್ಲಿ ಜಯ ಸಿಗಲಿದೆ
- ನಿಮ್ಮ ಜವಾಬ್ದಾರಿ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ
- ದೇವಿಯನ್ನು ಪ್ರಾರ್ಥನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಶೀತ ಸಂಬಂಧಿ ತೊಂದರೆ ನಿಮ್ಮನ್ನು ಕಾಡಬಹುದು
- ಸಹೋದರರಿಗೆ ಯಾವುದೋ ಮಾತಿನಿಂದ ಜಗಳಕ್ಕೆ ಒಳಗಾಗುವಂತೆ ಅವಕಾಶ ಮಾಡಿಕೊಡುತ್ತೀರಿ
- ಕೈ ಹಾಕಿದ ಕೆಲಸದಲ್ಲಿ ಯಶಸ್ಸಿದೆ
- ಕುಟುಂಬದ ಕಿರಿಕಿರಿಗಳನ್ನು ದೂರಮಾಡಿಕೊಳ್ಳಬೇಕು,ಮನಸ್ಸನ್ನ ಪ್ರಶಾಂತವಾಗಿಟ್ಟುಕೊಳ್ಳಬೇಕು
- ಮರಗೆಲಸ ಮಾಡುವವರಿಗೆ ಲಾಭದ ದಿನ
- ಚಲನಚಿತ್ರ ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾದ ದಿನ
- ಸಾಯಂಕಾಲದ ಸಮಯದಲ್ಲಿ 108 ಬಾರಿ ಚಂದ್ರಾಯ ನಮಃ ಅಂತ ಪಠಿಸಿ
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us