ಯಾರಿಗೆ ಶುಭ, ಯಾರಿಗೆ ಅಶುಭ -ಏನು ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ..?

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಅನೂರಾಧ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಮೇಷ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಾನಸಿಕವಾಗಿ ನೋವಿನಲ್ಲಿರುವ ನಿಮಗೆ ಅದ್ಯಾವುದು ಬೇಕಾಗಿರುವುದಿಲ್ಲ 
  • ಮನೆಯವರೊಂದಿಗಿನ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ 
  • ನಿಮ್ಮ ತಂದೆಯವರ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
  • ಬೇರೆಯವರಿಗೆ ಸಹಾಯ, ಸಹಕಾರ ಮಾಡಿರುತ್ತೀರಿ ಆದರೆ ಅವರಿಂದ ಬರುವ ಸಲಹೆಗಳು ಸೂಕ್ತವಾಗಿರುವುದಿಲ್ಲ 
  • ಭಾವನಾತ್ಮಕವಾಗಿ ವರ್ತಿಸುವುದರಿಂದ ನಿಮ್ಮ ಕೆಲಸಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕಾಣಬಹುದು 
  • ನಿಮ್ಮ ಕಾರ್ಯಕ್ರಮಗಳು ತಕ್ಷಣ ನಿಂತುಹೋಗುವ ಸಾಧ್ಯತೆಗಳಿವೆ
  • ಮೃತ್ಯುಂಜಯನನ್ನು ಆರಾಧಿಸಿ 

ವೃಷಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಆರೋಗ್ಯ, ವ್ಯವಹಾರ ಬಗ್ಗೆ ಒಂದೆಡೆ, ಒಂಟಿತನ ಮತ್ತೊಂದೆಡೆ ನಿಮ್ಮನ್ನ ಕಾಡಬಹುದು
  • ನಿಮ್ಮ ಜೀವನ ಎರಡೆರಡು ವಿಷಯಗಳಲ್ಲಿ ಆಶಾದಾಯಕವಾಗಿರಬಹುದು
  • ನಿಮ್ಮ ಜೀವನ ಎರಡೆರಡು ವಿಷಯಗಳಲ್ಲಿ ಆಶಾದಾಯಕವಾಗಿರಬಹುದು
  • ನಿಮ್ಮ ತಪ್ಪಿನ ಅರಿವಾಗಬೇಕು ಅದರ ಬಗ್ಗೆ ಚಿಂತಿಸಿ ಸರಿಯಾಗುತ್ತದೆ
  • ಇಂದು ಜೀವನದಲ್ಲಿ ಜಿಗುಪ್ಸೆ ಕಾಡುವಂತಹ ದಿನ 
  • ನಾವು ಸರಿಯಾಗಿದ್ದರೆ ಏನನ್ನಾದರು ಸಾಧಿಸಬಹುದೆಂಬ ಛಲವಿರಬೇಕಾಗುತ್ತದೆ
  • ಲೌಕಿಕ ಜೀವನಕ್ಕೆ ಕೊಟ್ಟಂತಹ ಬೆಲೆಯನ್ನು ಮನುಷ್ಯತ್ವಕ್ಕೆ ಕೊಡದೆ ಗೌರವ ಕಡಿಮೆಯಾಗುವ ಸಾಧ್ಯತೆ
  • ಸಪ್ತರ್ಷಿಗಳನ್ನು ಧ್ಯಾನ ಮಾಡಿ 

ಮಿಥುನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಉತ್ತಮ ಫಲ ನಿರೀಕ್ಷಿಸಬಹುದಾದ ದಿನವಾಗಿದೆ 
  • ಹಿರಿಯರು ನಿಮ್ಮಲ್ಲಿರುವ ಪ್ರತಿಭೆಗೆ ಪ್ರಭಾವಿತರಾಗುತ್ತಾರೆ
  • ನಿಮ್ಮ ಜೀವನ ಸಾಧನೆ ಹಲವರಿಗೆ ಮಾದರಿ ಆದರೆ ನೀವೇ ಅದಕ್ಕೆ ಬೆಲೆ ಕೊಡುವುದಿಲ್ಲ 
  • ದಿನ ಚೆನ್ನಾಗಿದೆ, ಹೊಸತನ್ನು ಆರಂಭಿಸಲು ಸಕಾಲಕ್ಕೆ ಚಿಂತಿಸಿ
  • ನಿಮ್ಮ ಸಾಮರ್ಥ್ಯ ಎಲ್ಲ ಕಡೆ ಯಶಸ್ಸು ಪಡೆಯಲು ಸಹಕಾರಿಯಾಗುವುದಿಲ್ಲ 
  • ಇಂದು  ದುರ್ಗಾರಾಧನೆ ಮಾಡಿ

ಕಟಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೇಮಿಗಳಿಗೆ ಕೆಲವು ಅಡೆತಡೆಗಳು ಬರಬಹುದು ಆದರೆ ನಿಭಾಯಿಸುತ್ತೀರಿ
  • ವಿದ್ಯಾರ್ಥಿಗಳು ಕಷ್ಟ ಪಟ್ಟರೂ ಸಂಕಷ್ಟ ತಪ್ಪಿದ್ದಲ್ಲ 
  • ಬೇರೆಯವರ ತಪ್ಪುಗಳನ್ನು ಹೆಕ್ಕಿ ಹೆಕ್ಕಿ ಹೇಳುವ ಬದಲು ಸೂಕ್ತ ಸಲಹೆ ಕೊಟ್ಟರೆ ಒಳ್ಳೆಯದು
  • ಇಂದು ಉದ್ಯೋಗ ಬದಲಾವಣೆ, ಸ್ಥಾನ ಪಲ್ಲಟಕ್ಕೆ ಅವಕಾಶವಿದೆ
  • ನಿಮ್ಮ ಹತ್ತಿರದವರ ಬಗ್ಗೆ ಹೆಚ್ಚು ಕಾಳಜಿವಹಿಸಿ 
  • ಲಲಿತಾ ಪರಮೇಶ್ವರಿಯನ್ನು ಆರಾಧನೆ ಮಾಡಿ

ಸಿಂಹ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಣದ ಕೊರತೆಯಿಂದ ಕೋಪ ಬರಬಹುದು ನಿಯಂತ್ರಿಸಿ 
  • ಯಾವುದೇ ಹೊಸ ಕೆಲಸ ಆರಂಭಿಸಬೇಡಿ 
  • ಆತುರಾತುರವಾದ ನಿರ್ಧಾರಗಳು ನಿಮಗೆ ಹಿನ್ನಡೆ ಉಂಟು ಮಾಡಬಹುದು, ತಾಳ್ಮೆ ಇರಲಿ
  • ಮಾನಸಿಕ ಒತ್ತಡವು ನಿಮಗೆ ತೊಂದರೆಯುಂಟು ಮಾಡಬಹುದು
  • ಬದಲಾಗುತ್ತಿರುವ ಹವಾಮಾನದಿಂದ ಶೀತ, ಜ್ವರ ಕಾಣಬಹುದು ಜಾಗ್ರತೆವಹಿಸಿ 
  • ನಿಮ್ಮ ಕಾಲಿಗೆ ತೊಂದರೆಯಾಗುವ ಸಾಧ್ಯತೆಗಳಿವೆ ಎಚ್ಚರವಹಿಸಿ
  • ಇಂದ್ರಾಕ್ಷಿದೇವಿಯನ್ನ ಪ್ರಾರ್ಥನೆ ಮಾಡಿ

ಕನ್ಯಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಜವಾಬ್ದಾರಿ ಸ್ಥಾನದಿಂದ ನಿಮಗೆ ಗೌರವ, ಪುರಸ್ಕಾರ ದೊರೆಯಬಹುದು 
  • ಲೇಖಕರಿಗೆ ಸ್ವಲ್ಪ ಸಮಸ್ಯೆ ಉಂಟಾಗಬಹುದು 
  • ಹಣಕಾಸಿನ ವಿಚಾರದಲ್ಲಿ ತುಂಬಾ ಗಂಭೀರವಾಗಿ ಪರಿಗಣಿಸುತ್ತೀರಿ
  • ಸಮಾಜ ಮೆಚ್ಚುವಂತಹ ಕೆಲಸಗಳಲ್ಲಿ ಭಾಗಿಯಾಗುತ್ತೀರಿ, ಗೌರವ ಹೆಚ್ಚುವ ಸಾಧ್ಯತೆ
  • ವೈಯಕ್ತಿಕವಾದ ಸಂಬಂಧಗಳಲ್ಲಿ ಸಂತೋಷವಿರುತ್ತದೆ
  • ವೃತ್ತಿಯಲ್ಲಿ ಸ್ವಲ್ಪ ಲಾಭವಿರುತ್ತದೆ ಆದರೆ ತುಂಬಾ ಕಿರಿಕಿರಿ, ಶೀತಲ ಸಮರ ಸಾಧ್ಯತೆ
  • ಮನ್ಯುಸೂಕ್ತವನ್ನ ಪಠಣೆ ಮಾಡಿ, ಮನ್ಯುವನ್ನು ಪಾರ್ಥಿಸಿ

ತುಲಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಂಬಂಧಿಕರ ಮಾತು ಸಮಾಧಾನ ನೀಡಬಹುದು
  • ಕೆಲವು ಕೆಲಸಗಳನ್ನು ಸಕಾಲಕ್ಕೆ ಮುಗಿಸಬೇಕೆಂಬ ಒತ್ತಡ ಬರಬಹುದು
  • ನಿಮ್ಮ ಜವಾಬ್ದಾರಿಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು, ಇಲ್ಲದಿದ್ದರೆ ಅವಮಾನ ಸಾಧ್ಯತೆ
  • ಹೊಸ ಕೆಲಸದ ಬಗ್ಗೆ ಮನಸ್ಸಿರುತ್ತದೆ ಧೈರ್ಯ ಮಾತ್ರ ಕಡಿಮೆಯಿರುತ್ತದೆ
  • ತುಂಬಾ ವಿಶ್ರಾಂತಿ ಬೇಕೆನಿಸಬಹುದು, ಆದರೆ ನೀವು ಮಾತ್ರ ಕಾರ್ಯತತ್ಪರರಾಗಿರುತ್ತೀರಿ 
  • ಹೃದ್ರೋಗಿಗಳು ಎಚ್ಚರಿಕೆಯಿಂದ ಇರಬೇಕಾದ ದಿನ
  • ಸೂರ್ಯನಾರಾಯಣನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅಹಂಭಾವ ಸ್ವಲ್ಪ ಕಡಿಮೆ ಇದ್ದರೆ ತುಂಬಾ ಒಳ್ಳೆಯದು
  • ಕುಟುಂಬದವರು ನಿಮ್ಮನ್ನು ಇಷ್ಟ ಪಡುತ್ತಾರೆ ಆದರೆ ನೀವು ಅದನ್ನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ
  • ನಿಮ್ಮ ದಿಟ್ಟ ನಿರ್ಧಾರ ಬೇರೆಯವರಿಗೆ ದಾರಿದೀಪ ಸಾಧ್ಯತೆ
  • ಇಂದು ಬೇರೆಯವರ ಮನಸ್ಸನ್ನ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕು
  • ಜನರು ನಿಮ್ಮ ಸಲಹೆಗಳನ್ನು ಅಪೇಕ್ಷಿಸಬಹುದು ಸರಿಯಾದ ಸಲಹೆ ಕೊಡಿ
  • ನಿಮ್ಮ ಸ್ನೇಹಿತರನ್ನು ವಿಶ್ವಾಸದಿಂದ ಗೌರವಿಸಿ 
  • ಆಂಜನೇಯನನ್ನು ಪೂಜಿಸಿ, ಹನುಮಾನ್ ಚಾಲೀಸ ಪಠಣೆ ಮಾಡಿ

ಧನುಸ್ಸು 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಕಾರಾತ್ಮಕ ಆಲೋಚನೆಗಳು ನಿಮ್ಮ ಕೆಲಸದ ಗುಣಮಟ್ಟವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ
  • ಬಾಂಧವ್ಯ ತುಂಬಾ ದುರ್ಬಲವಾಗುವ ಸಾಧ್ಯತೆಯಿದೆ
  • ವಿದ್ಯಾರ್ಥಿಗಳು ಮತ್ತು ನೌಕರರು ತುಂಬಾ ಪರಿಶ್ರಮಿಸಬೇಕಾದ ದಿನ
  • ಮನೆಗೆ ಮತ್ತೆ ಮತ್ತೆ ಸ್ನೇಹಿತರು ಬಂಧುಗಳು ಬರಬಹುದು 
  • ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ಅಪಯಶಸ್ಸು ಸಾಧ್ಯತೆ 
  • ನಿರೀಕ್ಷಿಸಿದಷ್ಟು ಫಲಗಳು ಸಿಗಬೇಕಾದರೆ ಕಷ್ಟ ಸಾಧ್ಯಇದೆ
  • ಗುರು ದಕ್ಷಿಣಾಮೂರ್ತಿಯನ್ನು ಆರಾಧನೆ ಮಾಡಿ

ಮಕರ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಉದ್ಯೋಗಾಕಾಂಕ್ಷಿಗಳಿಗೆ ಶುಭಫಲವಿದೆ 
  • ನಿಮ್ಮ ಪ್ರತಿಭೆಯನ್ನು ವೃದ್ಧಿಗೊಳಿಸಲು ಅವಕಾಶಗಳಿವೆ ಗಮನಿಸಿ
  • ಪ್ರಾಮಾಣಿಕವಾಗಿ ದುಡಿದ ಕಲಾವಿದರಿಗೆ ಇಂದು ಅದೃಷ್ಟ ಒಲಿಯಬಹುದು
  • ವ್ಯವಹಾರ, ವೃತ್ತಿಯಲ್ಲಿ ಹೊಸ ಸಿಬ್ಬಂದಿಯಿಂದ ಕಿರುಕುಳ, ಜಗಳವಾಗುವ ಸಾಧ್ಯತೆಯಿದೆ
  • ನಿಮ್ಮ ಪಿತ್ರಾರ್ಜಿತ ಆಸ್ತಿಗೆ ಇನ್ನೂ ಸ್ವಲ್ಪ ಆಸ್ತಿ ಸೇರ್ಪಡೆಯಾಗಬಹುದು 
  • ಕುಬೇರ ಲಕ್ಷ್ಮಿಯ ಆರಾಧನೆ ಮಾಡಿ

ಕುಂಭ  

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬಂಧುಗಳಲ್ಲಿ, ಸ್ನೇಹಿತರಲ್ಲಿ ವಿಶ್ವಾಸವು ಗಟ್ಟಿಯಾಗುತ್ತದೆ 
  • ಶತ್ರುಗಳು ನಿಮ್ಮ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿ ವಿಫಲರಾಗುತ್ತಾರೆ
  • ಕಾರ್ಯಕ್ಷೇತ್ರದಲ್ಲಿ ಮಿತಿ ಮೀರಿದ ಅನಾಹುತಗಳು ನಿಮ್ಮ ನಿಯಂತ್ರಣಕ್ಕೆ ಬರುತ್ತವೆ
  • ನಿಮ್ಮ ಉದಾರವಾದ ವರ್ತನೆ ನಿಮಗೆ ಅನುಕೂಲ ಮಾಡಿಕೊಡಬಹುದು
  • ಸಾಮಾಜಿಕ ವಲಯ ವಿಸ್ತಾರವಾಗಬಹುದು
  • ಸರ್ಕಾರಿ ಕೆಲಸಗಳಿದ್ದಲ್ಲಿ ಅವೆಲ್ಲವೂ ಪೂರ್ಣವಾಗುವ ಯೋಗವಿದೆ
  • ಶ್ರೀ ರಾಮನನ್ನು ಪ್ರಾರ್ಥನೆ ಮಾಡಿ 

ಮೀನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೇಮಿಗಳಲ್ಲಿ ಪರಸ್ಪರ ಜಗಳವಾಗುವ ಸಂದರ್ಭಗಳಿವೆ, ಮಾಡುತ್ತೀರಿ   
  • ಸಾರ್ವಜನಿಕವಾದ ಕೆಲಸಗಳಲ್ಲಿ ಭಾಗವಹಿಸುವುದು ಒಳ್ಳೆಯದು
  • ನಿಮಗೆ ಬೇಕಾದಷ್ಟು ವಿರಾಮವಿರುತ್ತದೆ, ಆದರೆ ಪೂರ್ತಿ ದಿನ ವ್ಯರ್ಥವಾಗುವ ಸಾಧ್ಯತೆ
  • ಈ ದಿನ ತುಂಬಾ ಶಿಸ್ತುಬದ್ಧವಾಗಿರಬೇಕೆಂದು ಚಿಂತಿಸಬಹುದು ಆದರೆ ಸಾಧ್ಯವಾಗುವುದಿಲ್ಲ
  • ವ್ಯವಹಾರಗಳಲ್ಲಿ ದುರ್ಲಭವಾದ ಅಂಶಗಳನ್ನು ನೋಡುವ ಸಾಧ್ಯತೆ 
  • ಏಕಾಂತದಲ್ಲಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ದಿನ, ಆದರೆ ಮಾಡುವುದಿಲ್ಲ 
  • ಕುಲದೇವತಾ ಆರಾಧನೆ ಮಾಡಿ

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment