/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ:ದೆಹಲಿ ಪೊಲೀಸರಿಂದ ‘Op Aaghat’! 24 ಗಂಟೆಯಲ್ಲಿ 660 ಮಂದಿ ಅರೆಸ್ಟ್, ಯಾಕೆ..?
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೇರೆಯವರ ಸಹಾಯದ ಸ್ಮರಣೆ ಮಾಡುತ್ತೀರಿ
- ಎದೆ, ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು
- ಉದ್ಯೋಗದಲ್ಲಿ ಮೆಚ್ಚುಗೆ ಸಿಗಲಿದೆ
- ಇಂದು ಜೀವ ಭಯದಿಂದ ಪಾರಾಗುತ್ತೀರಿ
- ಅನಗತ್ಯ ವಿಚಾರಗಳಿಂದ ದೂರವಿರಿ ತಾಳ್ಮೆಯಿರಲಿ
- ಶತ್ರುಗಳಿಂದ ತೊಂದರೆ ಆಗಬಹುದು ಎಚ್ಚರಿಕೆವಹಿಸಿ
- ಸುದರ್ಶನ ಮಹಾವಿಷ್ಣುವಿನ ಆರಾಧನೆ ಮಾಡಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಹಾಯಕ್ಕೆ ಬರಬೇಕಾದವರು ನಾಪತ್ತೆಯಾಗುತ್ತಾರೆ
- ವೃತ್ತಿಯಲ್ಲಿ ಅಪಮಾನ ಆಗಬಹುದು
- ಭೂ ವ್ಯಾಪಾರಾದಿಗಳಲ್ಲಿ ಗೊಂದಲ ಆಗುವುದರಿಂದ ಈ ದಿನ ವ್ಯರ್ಥ್ಯ
- ಬಂಧುಗಳ ವಿಚಾರದಲ್ಲಿ ಅತಿಯಾದ ಒತ್ತಡ
- ಮನಸ್ಸಿಗೆ ಬೇಸರ ಆಗುವುದರಿಂದ ಕೆಲಸ ಮುಂದೂಡಿಕೆ ಆಗಲಿದೆ
- ವ್ಯಾಪಾರದಲ್ಲಿ ಆರ್ಥಿಕ ಸಂಕಷ್ಟ ಎದುರಾಗಲಿದೆ
- ಭೂ ವ್ಯಾಪಾರಾದಿಗಳಲ್ಲಿ ಗೊಂದಲ ಆಗುವುದರಿಂದ ಈ ದಿನ ವ್ಯರ್ಥ್ಯ
- ಕಾಲಭೈರವನನ್ನು ಪ್ರಾರ್ಥಿಸಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ನಿರ್ಲಕ್ಷ್ಯ
- ಪ್ರೇಮಿಗಳಿಗೆ ದಂಪತಿಗಳಿಗೆ ಜಗಳ ಮಾಡುವ ವಾತಾವರಣ ಉಂಟಾಗಲಿದೆ
- ಅಪರಿಚಿತರ ಸಂಪರ್ಕದಿಂದ ಹಣ ನಷ್ಟ ಮೋಸ ಸಾಧ್ಯತೆ
- ಆರ್ಥಿಕ ನಷ್ಟ ದುರ್ಬಲರಾಗುತ್ತೀರಿ
- ಶತ್ರುಗಳನ್ನು ಜಯಿಸಲು ಕಷ್ಟವಾಗಬಹುದು
- ಆಂಜನೇಯ ಸ್ವಾಮಿಯ ಅನುಗ್ರಹ ಪಡೆಯಿರಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಾರ್ಯನಿಮಿತ್ತ ಸಭೆಗಳಲ್ಲಿ ಭಾಗಿಗಳಾಗುತ್ತೀರಿ
- ಇಂದು ಪ್ರಯಾಣಕ್ಕೆ ಅನುಕೂಲವಾಗಿರುವ ದಿನ
- ನಿಮ್ಮ ತೀರ್ಮಾನ ನಿಮಗೆ ಮಾರಕವಾಗಲಿದೆ
- ಹಣದ ವಿಚಾರ ಸಮಸ್ಯೆಯಾಗಬಹುದು
- ಕುಟುಂಬದವರೊಡನೆ ಆನಂದದಾಯಕ ಸಮಯ ಕಳೆಯುತ್ತೀರಿ
- ಪ್ರೇಮಿಗಳಲ್ಲಿ ಅನ್ಯೋನ್ಯತೆ ಹೆಚ್ಚಾಗಬಹುದು
- ಶ್ರೀರಾಮನನ್ನು ಆರಾಧಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೆಲಸದ ಶೈಲಿ ಬದಲಾದರೆ ನಿಮಗೆ ಮಾರಕವಾಗಲಿದೆ
- ಕಾಲು ನೋವಿನಿಂದ ಬೇಸರ ಉಂಟಾಗಬಹುದು
- ಈ ದಿನ ಸ್ವಲ್ಪ ಮಂದಗತಿಯನ್ನು ಅನುಸರಿಸುತ್ತದೆ
- ಗುರಿಮುಟ್ಟುವ ತನಕ ವಿಶ್ರಮಿಸಬೇಡಿ
- ಖಾಸಗಿ ಕ್ಷೇತ್ರದವರ ಆದಾಯ ಹೆಚ್ಚಾಗಲಿದೆ
- ಕಾನೂನು ವಿಷಯಗಳು ನಿಮ್ಮ ಪರವಾಗಿರುತ್ತದೆ
- ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಗುರುತರ ಜವಾಬ್ದಾರಿಯ ಮಾತುಕತೆ ನಡೆಯಬಹುದು
- ಹೊಸಬರ ಪರಿಚಯ ಆಗಲಿದೆ
- ಪ್ರಯಾಣದಿಂದ ಆಲಸ್ಯ ಆಗುವುದರಿಂದ ಅವಕಾಶ ವಂಚಿತರಾಗುತ್ತೀರಿ
- ಆರ್ಥಿಕ ನಷ್ಟ ವೃತ್ತಿಯಲ್ಲಿ ಅಸಮಾಧಾನ
- ಶೀತ ಸಂಬಂಧೀ ಸಮಸ್ಯೆ ಕಾಡಲಿದೆ
- ಸ್ನೇಹಿತರಲ್ಲಿ ಬಾಂಧವ್ಯ ಹೆಚ್ಚು
- ಲಲಿತಾ ಪರಮೇಶ್ವರಿಯನ್ನು ಪೂಜಿಸಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೆಲಸ ಕಾರ್ಯಗಳಿಂದ ಆಯಾಸ ಆಗಲಿದೆ
- ಕೈ ಹಾಕಿದ ಕೆಲಸಗಳು ಸಕಾಲದಲ್ಲಿ ಪೂರ್ಣವಾಗುವುದಿಲ್ಲ
- ವಿಶ್ರಾಂತಿಯಿಲ್ಲದ ಕೋಪ ಮನೆಯ ವಾತಾವರಣ ಹಾಳುಮಾಡುತ್ತದೆ
- ಇಂದು ಅನಗತ್ಯ ಖರ್ಚು ಬೇಡ
- ಬೇರೆಯವರ ವಿಷಯಕ್ಕೆ ಹೋಗಬೇಡಿ
- ವ್ಯಾಪಾರದಲ್ಲಿ ಹೊಂದಾಣಿಕೆಯ ಅಗತ್ಯವಿದೆ
- ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
- ಆತ್ಮವಿಶ್ವಾಸಕ್ಕೆ ಧಕ್ಕೆ ಬರುವ ಪ್ರಸಂಗಗಳು ಎದುರಾಗುತ್ತವೆ
- ವ್ಯಾಪಾರ ವಿಸ್ತರಣೆಗೆ ಅವಕಾಶವಿದೆ
- ಭಾವನಾತ್ಮಕ ವಿಷಯಗಳು ದುಃಖ ತರಬಹುದು
- ಉತ್ತಮ ಕೆಲಸಗಳಿಂದ ಯಶಸ್ಸು ಸಿಗಲಿದೆ
- ಕಾನೂನಿನ ವಿಚಾರದಲ್ಲಿ ಜಯ ಸಿಗಲಿದೆ
- ಕುಲದೇವತಾ ಆರಾಧನೆ
ಧನುಸ್
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ನೀವು ಹೊರಗೆ ಸೇವಿಸುವ ಆಹಾರದಿಂದ ಆರೋಗ್ಯ ಕೆಡಬಹುದು
- ಬೇರೆಯವರೊಂದಿಗೆ ವ್ಯವಹರಿಸುವಾಗ ಗಮನವಿರಲಿ
- ನಿಮ್ಮ ಕರ್ತವ್ಯದ ಬಗ್ಗೆ ಗಮನಹರಿಸಲಾಗದೆ ಲೋಪ ಆಗಲಿದೆ
- ಕಾಲಿಗೆ ಸಂಬಂಧಿಸಿದ ತೊಂದರೆ ಕಾಣಬಹುದು
- ಮೇಲಾಧಿಕಾರಿಗಳ ಹಿರಿಯರ ಕೋಪಕ್ಕೆ ಗುರಿಯಾಗುವಿರಿ
- ನಿಮ್ಮ ಅನುಭವ ನಿಮ್ಮನ್ನು ಕಾಪಾಡಬಹುದು
- ಗಣಪತಿಗೆ ಗಂಧದಿಂದ ಅಭಿಷೇಕ ಮಾಡಿಸಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಖಾಸಗಿ ಕ್ಷೇತ್ರದಲ್ಲಿ ನೌಕರರ ಭಿನ್ನಾಭಿಪ್ರಾಯ
- ದೈವಾನುಗ್ರಹ ಪಡೆಯುವಲ್ಲಿ ಯಶಸ್ಸು ಕಾಣಬಹುದು
- ತಂದೆಯವರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
- ಸರ್ಕಾರಿ ಕೆಲಸದಲ್ಲಿ ವಿಳಂಬ ಆಗಬಹುದು
- ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ
- ಪತಿ- ಪತ್ನಿಯರಲ್ಲಿ ಪರಸ್ಪರ ಕಾಳಜಿ ಸಂತೋಷ
- ಸ್ವಯಂವರ ಪಾರ್ವತಿಯನ್ನು ಧ್ಯಾನಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಅಸೂಯೆ ಪಡಬೇಡಿ ದ್ವೇಷ ಸಾಧಿಸಬೇಡಿ
- ಜೀವನ ಶೈಲಿಯಲ್ಲಿ ಬದಲಾವಣೆ ಕಾಣಬಹುದು
- ಇಂದು ಉತ್ತಮದಿನ ಸಮಾಧಾನವಾಗಿರುತ್ತೀರಿ
- ವಿರೋಧಿಗಳನ್ನು ಒಳ್ಳೆಯ ಮಾತಿನಿಂದ ಸೋಲಿಸಿ
- ವ್ಯಾಪಾರ ವ್ಯವಹಾರದ ಸಮಸ್ಯೆಗಳು ಇತ್ಯರ್ಥವಾಗಲಿದೆ
- ಕೆಲಸಗಳು ಪೂರ್ಣಗೊಳ್ಳುವುದರಿಂದ ಸಂತೋಷವಾಗಿರುತ್ತೀರಿ
- ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಅಕ್ಕಪಕ್ಕದವರ ಸಹಾಯ ವಿಶ್ವಾಸ ಚೆನ್ನಾಗಿರುತ್ತದೆ
- ವಿದ್ಯಾರ್ಥಿಗಳಿಗೆ ಭವಿಷ್ಯದ ನಿರ್ಧಾರದ ದಿನ
- ಸಮಾಜ ಸೇವೆಯಲ್ಲಿ ಉತ್ತಮ ಸಾಧನೆ ಮಾಡುತ್ತೀರಿ
- ಕುಟುಂಬದಲ್ಲಿ ಮನಸ್ತಾಪ ಉಂಟಾಗಬಹುದು
- ಮಕ್ಕಳಿಗಾಗಿ ಹೆಚ್ಚು ಖರ್ಚಾಗಲಿದೆ
- ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ನಷ್ಟ ಆಗಲಿದೆ
- ಪಾರ್ವತೀ ಪರಮೇಶ್ವರರನ್ನು ಆರಾಧಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us