ಆರ್ಥಿಕವಾಗಿ ತೊಂದರೆ ಇಲ್ಲ, ಲೆಕ್ಕದ ವಿಚಾರದಲ್ಲಿ ಗೊಂದಲ -ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಅಶ್ವಿನಿ ನಕ್ಷತ್ರ. ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಇನ್ನು, ನ್ಯೂಸ್​ಫಸ್ಟ್ ಕನ್ನಡ ವಾಹಿಯ ವೀಕ್ಷಕರು ಕೇಳಿದ ಪ್ರಶ್ನೆಗಳಿಗೆ ಗುರುಗಳು ಉತ್ತರ ನೀಡಿದ್ದಾರೆ. ಅದು ಹೀಗಿದೆ.

ಮಮತಾ, ಬೆಂಗಳೂರು
ಪ್ರಶ್ನೆ: ಮಗಳು ಮೋಹನಾಂಬಿಕರವರ ವಿದ್ಯಾಭ್ಯಾಸದ ಬಗ್ಗೆ?
ಪರಿಹಾರ: ವಿದ್ಯಾಭ್ಯಾಸದ ಸ್ಥಳದಲ್ಲಿ ಸರಸ್ವತಿ ಫೋಟೊ ಅಥವಾ ವಿಗ್ರಹ ಇಟ್ಟುಕೊಳ್ಳಿ ಪ್ರತಿ ಶುಕ್ರವಾರ ಬಿಳಿ ಹೂಗಳಿಂದ ಸರಸ್ವತಿ ಪ್ರಾರ್ಥನೆ ಮಾಡಿ

ಪ್ರೇಮಕುಮಾರಿ, ಚಿಕ್ಕಮಗಳೂರು,ಕುಡ್ಲೂರು
ಪ್ರಶ್ನೆ: ಕಾಲು ನೋವಿನ ಬಗ್ಗೆ
ಪರಿಹಾರ: 5 ಶನಿವಾರ ಆಂಜನೇಯನ ದೇವಾಲಯದಲ್ಲಿ ಎಳ್ಳೆಣ್ಣೆ ಅಭಿಷೇಕ ಮಾಡಿಸಿ, ಆ ಎಳ್ಳೆಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿ 5 ವಾರಗಳಲ್ಲಿ ಅನುಕೂಲವಾಗುತ್ತದೆ.

ಮೇಷ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನೀವು ತುಂಬಾ ಸುಲಭ ಎಂದು ಭಾವಿಸಿದ ಕೆಲಸಗಳಿಂದ ಸಮಸ್ಯೆ ಉಂಟಾಗಲಿದೆ
  • ಇಂದು ಆರೋಗ್ಯ ಚೆನ್ನಾಗಿದೆ ಹಾಗೇ ಕಾಪಾಡಿಕೊಳ್ಳಿ
  • ಆರ್ಥಿಕವಾಗಿ ತೊಂದರೆಯಿಲ್ಲ ಆದರೆ ಲೆಕ್ಕದ ವಿಚಾರದಲ್ಲಿ ಗೊಂದಲವಿರುತ್ತದೆ
  • ಬೇರೆಯವರ ಹಣದಿಂದ ನೀವು ವ್ಯವಹಾರ ನಡೆಸಬಹುದು
  • ಅಕ್ಕಪಕ್ಕದವರ ಸಹಾಯ, ಸಹಕಾರ ದುರುಪಯೋಗ ಆಗಬಾರದು
  • ನಿಮ್ಮ ಸಾಧನೆ ನಿಮ್ಮ ಅನುಭವ ಉತ್ಕೃಷ್ಟವಾದಂತಹದ್ದು
  • ಕುಲದೇವತಾ ಆರಾಧನೆ ಮಾಡಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

 

  • ಈ ದಿನ ಚೆನ್ನಾಗಿದೆ
  • ಖರ್ಚುಗಳನ್ನು ನಿಯಂತ್ರಿಸಿ
  • ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ
  • ಬಂಧುಗಳ ಮತ್ತು ಸ್ನೇಹಿತರ ಜೊತೆ ಉತ್ತಮ ಬಾಂಧವ್ಯ,ಮಾತುಕತೆಯನ್ನು ಮುಂದುವರೆಸಿಕೊಂಡು ಹೋಗಿ
  • ಅನೇಕ ವಿಧವಾದ ಹಳೆಯ ನೆನಪುಗಳು ಕಾಡುತ್ತದೆ ಕೆಲವೊಂದು ಸಮಾಧಾನ ನೀಡಲಿದೆ
  • ಜಮೀನಿನ ವಿಚಾರದಲ್ಲಿ ದೃಢವಾದ ನಿರ್ಧಾರವನ್ನು ಮಾಡಿ
  • ಮಾತಿನಲ್ಲಿ ಎಲ್ಲವೂ ಅಡಗಿರುತ್ತದೆ
  • ಆಂಜನೇಯನನ್ನು ಆರಾಧನೆ ಮಾಡಿ

ಮಿಥುನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ರಕ್ತದೊತ್ತಡ ಇರುವವರಿಗೆ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಹೆಚ್ಚಾಗಲಿದೆ
  • ಧಾರ್ಮಿಕ ಮುಖಂಡರಿಗೆ ಭಯ ಅಥವಾ ಅವಮಾನ ಆಗುವ ಸಾಧ್ಯತೆ ಇದೆ
  • ಧರ್ಮವನ್ನು ಮೀರಿ ವರ್ತಿಸುವವರಿಗೆ ತೊಂದರೆಯಿದೆ
  • ನಿಮ್ಮ ವೃತ್ತಿ, ಕೆಲಸಕ್ಕೆ ಆದ್ಯತೆ ಕೊಡಿ ಅನಗತ್ಯ ವಿಚಾರಗಳನ್ನು ದೂರ ಮಾಡಿ
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಂಬಂಧಿತ ವಿಚಾರಗಳಿಗೆ ವಿವಾದಗಳು ಏರ್ಪಟಾಗುತ್ತದೆ
  • ಸಭ್ಯವಾಗಿ ವರ್ತಿಸಬೇಕು ಜೊತೆಗೆ ಮಾನಸಿಕ ಧ್ಯೆರ್ಯವಿರಬೇಕು 
  • ಗ್ರಹಗತಿಯಿಂದ ಎಲ್ಲವೂ ಶುಭವಾಗಲಿದೆ
  • ಧರ್ಮಗ್ರಂಥಾವಲೋಕನ ಮಾಡಿ

ಕಟಕ  

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳ ಪ್ರಗತಿಯಿಂದ ಸಮಾಧಾನವಾಗಲಿದೆ
  • ಹಣಕಾಸಿನ ಸಮಸ್ಯೆ ಸ್ವಲ್ಪ ಕಾಡಬಹುದು
  • ಧಾರಾಳವಾಗಿ ಖರ್ಚು ಮಾಡಿದ ಕೈ ಕಟ್ಟಿಹಾಕಿದಂತಾಗಿರುತ್ತದೆ
  • ಸ್ವಯಂಕೃತ ಅಪರಾಧಗಳನ್ನು ಕಡಿಮೆ ಮಾಡಬೇಕು
  • ಧಾರ್ಮಿಕ ಕಾರ್ಯಕ್ರಮಗಳು ಹಣದ ಕೊರತೆಯಿಂದ ರದ್ದಾಗಬಹುದು
  • ಕುಟುಂಬದ ಸದಸ್ಯರ ಆಗಮನದಿಂದ ಸಂತೋಷವಿದ್ದು ನಂತರ ಜಗಳ ಆಗಬಹುದು
  • ನಿಮ್ಮ ಗುರುಗಳನ್ನು ಪ್ರಾರ್ಥಿಸಿ

ಸಿಂಹ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನ್ಯಾಯಾಲಯದ ವಿಚಾರದಲ್ಲಿ ಜಯ ಸಿಗಲಿದೆ
  • ಯಾವುದೆ ವಿಚಾರವಿದ್ದರೂ ತಾರ್ಕಿಕವಾಗಿ ಚಿಂತನೆ ಮಾಡಬೇಡಿ ಹೊಂದಾಣಿಕೆ ಇರಲಿ
  • ಹಳೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೀರ
  • ಮಾನಸಿಕವಾಗಿ, ಸಾಮಾಜಿಕವಾಗಿ ಶಕ್ತಿ ಹೆಚ್ಚಾಗಲಿದೆ 
  • ಉತ್ತಮ ಆಹಾರ ಲಭ್ಯವಾಗಲಿದೆ
  • ಜೀವನದ ಬಗ್ಗೆ ನಿರ್ಧಾರ ಮಾಡುತ್ತೀರಿ
  • ಹಿರಿಯರ ಆಶೀರ್ವಾದ ಪಡೆಯಿರಿ

ಕನ್ಯಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಿರಿಯರು ಹಿಂದೆ ಆಡಿದ ಮಾತು ಇಂದು ಸತ್ಯವೆಂದು ತಿಳಿಯುವ ದಿನ 
  • ಕುಟುಂಬದಲ್ಲಿ ಸಂತೋಷ,ನೆಮ್ಮದಿ ವಾತಾವರಣ ಇರುತ್ತದೆ
  • ಕಾರ್ಯ ಒತ್ತಡದ ಮಧ್ಯೆಯು ಮನೆಯಲ್ಲಿ ಹಬ್ಬದ ವಾತಾವರಣವಿರಲಿದೆ
  • ಎಲ್ಲಾ ಕೆಲಸಗಳು ಅಚ್ಚುಕಟ್ಟಾಗಿ ನಡೆಯಲಿದೆ
  • ಸಾಯಂಕಾಲದ ಹೊತ್ತಿಗೆ ಮನೆಯಲ್ಲಿ ಹಿರಿಯರ ಆರೋಗ್ಯ ವ್ಯತ್ಯಾಸ ಆಗಲಿದೆ
  • ಮೃತ್ಯುಂಜಯ ಮಂತ್ರವನ್ನು ಪಠಿಸಿ

ತುಲಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕೆಲಸದ ಸ್ಥಳದಲ್ಲಿ ಅನೇಕ ಸವಾಲುಗಳು ಎದುರಾಗಬಹುದು 
  • ಪ್ರೇಮಿಗಳಿಗೆ ಮತ್ತು ಸಂಬಂಧಿಕರನ್ನೇ ವಿವಾಹವಾದವರಿಗೆ ತೊಂದರೆಯಿದೆ 
  • ಹಲವು ಭಿನ್ನಾಭಿಪ್ರಾಯಗಳು,ನಿಮ್ಮ ಮಾತು ಸಾಂಸಾರಿಕ ಸಮಸ್ಯೆಗಳನ್ನ ಹೆಚ್ಚಿಸಬಹುದು
  • ಮಕ್ಕಳಿಗೆ ಚಂಚಲ ಮನಸ್ಸಿನಿಂದ ಓದಿಗೆ ಸಮಸ್ಯೆ ಉಂಟಾಗಲಿದೆ
  • ಆರೋಗ್ಯದ ಬಗ್ಗೆ ಕಾಳಜಿವಹಿಸಿ 
  • ಚರ್ಮ ರೋಗಿಗಳಿಗೆ ಹೆಚ್ಚಿನ ತೊಂದರೆ 
  • ಸುಬ್ರಹ್ಮಣ್ಯನನ್ನು ಆರಾಧಿಸಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನೌಕರಿಯಲ್ಲಿ ಹಿರಿಯರ ಸಲಹೆ ಪಡೆಯಿರಿ 
  • ಮನಸ್ಸನ್ನ ಕೇಂದ್ರಿಕರಿಸಲಾಗದೆ ಒದ್ದಾಡಬಹುದು 
  • ಕೆಲಸದ ಗುಣಮಟ್ಟ ಕಡಿಮೆಯಾಗಿ ನಿಂದನೆಗೆ ಒಳಗಾಗುತ್ತೀರಿ 
  • ಆತ್ಮ ವಿಶ್ವಾಸದ ಕೊರತೆ ಕಾಡಲಿದೆ
  • ಬೇರೆಯವರಿಗೆ ವಿನಾಕಾರಣ ಸಲಹೆ ನೀಡಬೇಡಿ 
  • ಗಣಪತಿಗೆ  21  ಗರಿಕೆಯಿಂದ ಪೂಜಿಸಿ

ಧನಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸ್ವಲ್ಪ ಉದಾರತೆಯ ದಿನ 
  • ದಾನ ಧರ್ಮದ ಆಲೋಚನೆ ಮಾಡಿ ಭವಿಷ್ಯದಲ್ಲಿ ಕಾಪಾಡುತ್ತದೆ
  • ಕೆಲಸ ಕಾರ್ಯಗಳಲ್ಲಿ ಹಲವಾರು ಜನರ ಸಹಾಯ ಪಡೆಯುತ್ತೀರಿ
  • ನೀವು ಬೇರೆಯವರಿಗೆ ಸಹಾಯ ಮಾಡುವ ಅವಕಾಶವಿದೆ
  • ಸಂದರ್ಭಗಳು ಕಾಲಕ್ರಮೇಣ ನಿಮ್ಮ ಪರವಾಗಿರಬಹುದು 
  • ದಾಂಪತ್ಯದಲ್ಲಿ ಸುಖ ಸಂತೋಷವಿರುತ್ತದೆ ಆದರೆ ಅನುಭವಿಸುವ ಯೋಗ ಕಡಿಮೆ 
  • ಹೊಸ ವ್ಯವಹಾರ, ಹಿಂದೆ ಮಾಡಿದ ಹಣದ ವ್ಯವಹಾರದಿಂದ ಬೇಸರವನ್ನುಂಟು ಮಾಡುವ ಸಾಧ್ಯತೆ 
  • ಕರ್ತವ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ
  • ಶ್ರೀ ರಾಮನನ್ನು ಪ್ರಾರ್ಥಿಸಿ 

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬುದ್ದಿವಂತರ ಸಹವಾಸದಿಂದ ನಿಮಗೆ ಅನುಕೂಲವಿದೆ 
  • ನಿಮ್ಮ ವೃತ್ತಿಗೆ ಸಂಬಂಧಪಟ್ಟ ಹಾಗೆ ಹೆಚ್ಚು ಕೆಲಸಗಳು ನಿಮ್ಮ ಕೈ ಸೇರಿ ಆದಾಯ ಸಿಗಲಿದೆ
  • ಕುಟುಂಬದ ಸಂತೋಷವನ್ನು ಹಾಗೆ ಕಾಪಾಡಿಕೊಳ್ಳಿ
  • ವಿದ್ಯಾರ್ಥಿಗಳಿಗೆ ಬಹಳ ಶುಭದಿನ
  • ವೃತ್ತಿ ಜೀವನಕ್ಕೆ ಯಾವುದೇ ಕೊರತೆಯಿರುವುದಿಲ್ಲ
  • ಇರುವ ವ್ಯವಸ್ಥೆಗೆ ಹೊಂದಿಕೊಂಡರೆ ಯಾವ ಕೊರತೆಯು ಕಾಣುವುದಿಲ್ಲ 
  • ಪಾರ್ವತಿ ದೇವಿಯನ್ನು ಆರಾಧಿಸಿ 

ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹೊಸ ಕೆಲಸ ಆರಂಭ ಮಾಡಲು ಈ ದಿನ ಶುಭಕರವಾಗಿಲ್ಲ 
  • ಕತ್ತರಿ ಅಥವಾ ಚಾಕು ಇತ್ಯಾದಿಗಳಿಂದ ಗಾಯವಾಗಬಹುದು ಎಚ್ಚರಿಕೆವಹಿಸಿ
  • ಬಡ್ಡಿ ವ್ಯವಹಾರ ಮಾಡುವವರಿಗೆ ಸಮಸ್ಯೆಗಳು ಉಂಟಾಗಲಿದೆ
  • ವಿಕಲ ಚೇತನರು ಅದರಲ್ಲೂ ಕಾಲಿನ ಸಮಸ್ಯೆ ಇರುವವರಿಗೆ ತೊಂದರೆ ಆಗಬಹುದು
  • ಮನೆ ಕಟ್ಟುವ ವಿಚಾರ ಮನಸ್ಸಿಗೆ ಬರಬಹುದು
  • ಅನಪೇಕ್ಷಿತ ಪ್ರಯಾಣಕ್ಕೆ ಸಿದ್ದವಾಗಬೇಕಾಗುತ್ತದೆ
  • ಸಂಪತ್ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ 

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಕೆಲಸದಲ್ಲಿ ದೃಢ ನಿರ್ಧಾರವಿರಬೇಕು
  • ಭೂ ಸಂಬಂಧೀಯಾದ ವಿಚಾರದಲ್ಲಿ ನಷ್ಟ ಆಗುವ ದಿನವಾಗಿದೆ
  • ಜನರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಸುಳ್ಳು ಮಾಡಬೇಡಿ
  • ಕುಟುಂಬದ ಹಿತಾಸಕ್ತಿಗೆ ಬೇರೆಯವರು ನಿಮ್ಮನ್ನ ವಂಚನೆ ಮಾಡಬಹುದು
  • ಮನೆಗೆ ಬಂದ ಅತಿಥಿಗಳಿಗೆ ಅವಮಾನ ಆಗುವ ಸಾಧ್ಯತೆ ಇದೆ
  • ವೈದ್ಯಕೀಯ ಕ್ಷೇತ್ರದವರಿಗೆ ಅನಾನುಕೂಲವಿರುತ್ತದೆ 
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment