/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೆಲಸಗಾರರ ಪ್ರಾಮಾಣಿಕ ದುಡಿಮೆ ತ್ಯಾಗದಿಂದ ಉತ್ತಮ ಲಾಭ
- ನಿಮ್ಮ ಕೆಲಸಗಾರರಿಗೆ ಹಣ ಅವಶ್ಯಕ ವಸ್ತುಗಳನ್ನು ನೀಡಿ ಸಂತೋಷಪಡಿಸಿ
- ಗ್ರಾಹಕರಿಗೆ ವಸ್ತುಗಳನ್ನು ಒದಗಿಸುವಲ್ಲಿ ಹಿನ್ನಡೆಯಾಗಬಹುದು
- ಇಂದು ಶೀತ ಸಂಬಂಧಿ ಕಾಯಿಲೆಗಳು ಕಾಡಬಹುದು
- ಕೆಲಸಗಾರರು ನಿಮಗೆ ಸಂಪೂರ್ಣ ಸಹಕಾರ ನೀಡುತ್ತಾರೆ
- ಕಬ್ಬಿಣದ ವ್ಯಾಪಾರಿಗಳಿಗೆ ತುಂಬಾ ಬೇಡಿಕೆ ಅಧಿಕ ಲಾಭ
- ನಭೋ ದೇವನನ್ನು ಪ್ರಾರ್ಥಿಸಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ರಫ್ತು ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಹಿನ್ನಡೆ ನಷ್ಟ ಸಾಧ್ಯತೆ
- ಕೆಲಸದಲ್ಲಿ ಹೆಚ್ಚು ಒತ್ತಡದಿಂದ ಅನಾರೋಗ್ಯ ಕಾಡಬಹುದು ಎಚ್ಚರ
- ಕೆಲ ದುಷ್ಟರಿಂದ ಕಿರುಕುಳ ಸಾಧ್ಯತೆ ಎಚ್ಚರ
- ಇಂದು ವಿದ್ಯಾರ್ಥಿಗಳಿಗೆ ಆತಂಕ ಅತಿಯಾದ ನಿದ್ರೆ ಕಾಡಬಹುದು
- ವ್ಯಾಪಾರಸ್ಥರು ಪೊಲೀಸರ ವಿಚಾರಣೆಗೆ ಒಳಪಡುವ ಸಾಧ್ಯತೆ
- ನಿಮ್ಮ ವಸ್ತುಗಳು, ಹಣದ ಬಗ್ಗೆ ಎಚ್ಚರಿಕೆ ಇರಲಿ ಕಳುವಾಗಬಹುದು
- ಔಷಧಿ ವ್ಯಾಪಾರಸ್ಥರಿಗೆ ಶುಭ ದಿನ
- ಕಾಮಧೇನುವನ್ನು ಸ್ಮರಿಸಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ವಕೀಲರು ನ್ಯಾಯಮೂರ್ತಿಗಳಿಗೆ ವಿಶೇಷವಾದ ಶುಭ ದಿನ
- ಇಂದು ಹಿರಿಯ ದಂಪತಿಗಳಲ್ಲಿ ವಿರಸ ಸಾಧ್ಯತೆ
- ಹತ್ತಿ ಮತ್ತು ತೆಂಗು ಬೆಳೆಗಾರರಿಗೆ ಅಧಿಕ ಲಾಭ ಸಾಧ್ಯತೆ
- ನಿಮ್ಮ ಮಾತುಗಳಿಂದ ಸಂಬಂಧ ಮುರಿಯಬಹುದು ಸರಿಯಾಗಿ ವ್ಯವಹರಿಸಿ
- ವಿವಾಹ ಉತ್ಸುಕರಿಗೆ ಸಿಹಿ ಸುದ್ದಿ ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆ
- ದಿವ್ಯರೂಪವಾದ ಜ್ಯೋತಿಯನ್ನು ಪ್ರಾರ್ಥಿಸಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೈನುಗಾರಿಕೆ ಮತ್ತು ಜಲಸಂಬಂಧಿ ವಸ್ತುಗಳ ಮಾರಾಟಗಾರರಿಗೆ ಹೆಚ್ಚು ಲಾಭ
- ಜಲ ಕಂಟಕ ಸೂಚನೆಯಿದೆ ಎಚ್ಚರಿಕೆ ಇರಲಿ
- ರಾಸಾಯನಿಕ ವಸ್ತುಗಳ ವ್ಯಾಪಾರಸ್ಥರಿಗೆ ಶುಭ ದಿನ
- ತಮ್ಮ ಬಳಿಯಿರುವ ಪದಾರ್ಥಗಳಿಗೆ ಅತೀವ ಬೇಡಿಕೆ ಬರುವ ಸಾಧ್ಯತೆ
- ಆಲಸ್ಯ ಬಿಟ್ಟು ಕೆಲಸ ಮಾಡಿ
- ಶಿಂಶುಮಾರನನ್ನು ಪ್ರಾರ್ಥಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಾರ್ಮಿಕ ವರ್ಗದವರಿಗೆ ಯಂತ್ರೋಪಕರಣಗಳಿಂದ ತೊಂದರೆ ಸಾಧ್ಯತೆ
- ಕಸೂತಿ ಕೆಲಸ ಕಲಾಕಾರರು ಚಿತ್ರ ಬಿಡಿಸುವವರಿಗೆ ಉತ್ತಮ ದಿನ
- ಇಂದು ಅನಗತ್ಯ ವಿಚಾರ ಚರ್ಚೆಗಳಲ್ಲಿ ಭಾಗಿಯಾಗಬೇಡಿ ಸಹನೆ ಇರಲಿ
- ಇಂದು ಕುಟುಂಬದಲ್ಲಿ ಸಾಮರಸ್ಯ ಕಾಪಾಡಿ
- ರಿಯಲ್​ ಎಸ್ಟೇಟ್​ನವರಿಗೆ ಶುಭ ದಿನ ಆದರೆ ಅತೀವ ಶತ್ರುಭಯ ಅಪನಿಂದನೆ ಸಾಧ್ಯತೆ
- ಬ್ರಹ್ಮನನ್ನು ಪ್ರಾರ್ಥಿಸಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಧಾರಣ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಚಂಚಲ ಮನಸ್ಸು
- ಜ್ಞಾನಿಗಳು ಅನುಭವಿಗಳ ಭೇಟಿಗೆ ಅವಕಾಶ ಸಿಗಬಹುದು
- ಇಂದು ಜ್ಞಾನಾರ್ಜನೆಯಲ್ಲಿ ಹೆಚ್ಚು ಆಸಕ್ತಿ ವಹಿಸಬಹುದು
- ಸಂಶೋಧನಾ ವಿಚಾರದಲ್ಲಿ ಮನಸ್ಸು ಸ್ಥಿರ ಸಾಧ್ಯತೆ
- ತುಂಬಾ ಓಡಾಟ ಸಾಧ್ಯತೆ ಆದಷ್ಟು ಮೌನವಾಗಿರುವುದು ಉತ್ತಮ
- ಷೇರು ವ್ಯವಹಾರದಲ್ಲಿ ಮಿಶ್ರಫಲ ಸಾಧ್ಯತೆ
- ಮಹಾಶಾಸ್ತಾರ ಮಂತ್ರ ಶ್ರವಣ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ತ್ರೀಯರಿಗೆ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಕಾಡಬಹುದು ಆಲಸ್ಯ ಬೇಡ
- ಉನ್ನತ ಶಿಕ್ಷಣ ಕ್ಷೇತ್ರದವರಿಗೆ ಶುಭ ದಿನ
- ನಿಮ್ಮ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳ್ಳೆಯದು
- ಮಿತ್ರರು ಹೋದ್ಯೋಗಿಗಳ ಜೊತೆಗೆ ಔತಣ ಕೂಟಕ್ಕೆ ಹೋಗುವ ಸಾಧ್ಯತೆ
- ಕಲಾವಿದರಿಗೆ ಗೌರವ ಸನ್ಮಾನ ಪುರಸ್ಕಾರ ದೊರೆಯುವ ಸಾಧ್ಯತೆ
- ಮಹಾಲಕ್ಷ್ಮೀ ಕೈಯಲ್ಲಿರುವ ಪದ್ಮವನ್ನು ಸ್ಮರಣೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ತೈಲ ವ್ಯಾಪಾರಿಗಳಿಗೆ ಧನಲಾಭ ಸಾಧ್ಯತೆ
- ಹೋಟೆಲ್ ಉದ್ದಿಮೆದಾರರಿಗೆ ಸ್ವಲ್ಪ ಕಿರಿಕಿರಿ ನಷ್ಟ ಸಾಧ್ಯತೆ
- ಸಣ್ಣ ಪುಟ್ಟ ಗಾಯಗಳಾಗಬಹುದು ಎಚ್ಚರಿಕೆ ಇರಲಿ
- ವ್ಯಾಪಾರ ವ್ಯವಹಾರಕ್ಕೆ ಶುಭ ದಿನ ಉತ್ತಮ ಜನರ ಸಂಪರ್ಕ ಸಾಧ್ಯತೆ
- ಸಾಯಂಕಾಲ ಮನಸ್ಸಿಗೆ ಸ್ವಲ್ಪ ಸಮಾಧಾನ ಸಾಧ್ಯತೆ
- ಈ ದಿನ ಸಹೋದರನನ್ನು ಕ್ಷಮಿಸಿದರೆ ಒಳಿತು
- ಸಹೋದರರಲ್ಲಿ ಜಗಳ ಸಾಧ್ಯತೆ ಹೆಚ್ಚು ಗಮನವಿರಲಿ
- ದಕ್ಷಿಣಾವರ್ತ ಶಂಖವನ್ನು ಪಾರ್ಥನೆ ಮಾಡಿ
ಧನಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಕುಟುಂಬದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಸಾಧ್ಯತೆ
- ಇಂದು ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ
- ಕಣ್ಣಿನ ಸಮಸ್ಯೆ ಕಾಡಬಹುದು ವೈದ್ಯರ ಸಲಹೆ ಪಡೆಯಿರಿ
- ಇಲಾಖಾ ಪರೀಕ್ಷೆಗಳು ಪಾಯಶಃ ಮುಂದೂಡಲ್ಪಡಬಹುದು
- ಇಂದು ಮಿತ್ರರಿಂದ ವಿರೋಧ ಎದುರಿಸುವ ಸಾಧ್ಯತೆ
- ಕೃಷಿಕರಿಗೆ ಲಾಭದ ದಿನ ಮಾನಸಿಕ ಒತ್ತಡ ಸಾಧ್ಯತೆ
- ಇಂದು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ತಾಳ್ಮೆ ತುಂಬಾ ಮುಖ್ಯ
- ಹರಿಹರ ಪುತ್ರನನ್ನು ಸ್ಮರಿಸಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ವಾಹನ ಅಪಘಾತ ಆಗುವ​ ಸಾಧ್ಯತೆ ಇದೆ ಎಚ್ಚರಿಕೆ ಇರಲಿ
- ಇಂದು ವಿದ್ಯಾರ್ಥಿಗಳಿಗೆ ಗುತ್ತಿಗೆದಾರರಿಗೆ ಶುಭ ದಿನ
- ನಿಮ್ಮ ಪ್ರತಿಭೆಗೆ ತಕ್ಕ ಮನ್ನಣೆ ಗೌರವ ಸಿಗುವ ಸಾಧ್ಯತೆ
- ಕಮೀಷನ್​ ವ್ಯಾಪಾರದಾರರಿಗೆ ಲಾಭದ ದಿನ
- ಹಣಕಾಸಿನ ವಿಚಾರದಲ್ಲಿ ಜಾಗ್ರತೆವಹಿಸಿ ಆದಷ್ಟೂ ಉಳಿತಾಯ ಮಾಡಿ
- ಶಿಕ್ಷಕ ವರ್ಗದವರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ
- ಇಂದು ಬೇರೆಯವರಿಂದ ಸಾಲವನ್ನು ಅಪೇಕ್ಷಿಸಬೇಡಿ
- ಗುರುಪಾದುಕಾ ಸ್ತೋತ್ರ ಪಠಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಅಧಿಕ ವರಮಾನದಿಂದ ನೆಮ್ಮದಿ ಸಾಧ್ಯತೆ
- ಮನೆಯಲ್ಲಿ ಶುಭಕಾರ್ಯ ಸಂಭ್ರಮ
- ಮಕ್ಕಳ ಸಾಧನೆ ವಿಚಾರದಲ್ಲಿ ಶುಭ ಸುದ್ದಿ
- ಕೋರ್ಟ್​ ಕಚೇರಿ ವಿಚಾರದಲ್ಲಿ ಜಯ ಸಾಧ್ಯತೆ
- ವೈದ್ಯರಿಗೆ ಕೆಲಸದಲ್ಲಿ ಒತ್ತಡದಿಂದ ನಿದ್ರಾಭಂಗ ಸಾಧ್ಯತೆ
- ಅಷ್ಟಾಕ್ಷರೀ ದತ್ತಮಂತ್ರ ಪಠಿಸಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಯಾವುದೇ ರೀತಿಯ ತೊಂದರೆಗಳಿದ್ದರೆ ಅವುಗಳಿಂದ ಮುಕ್ತಿ ಸಾಧ್ಯತೆ
- ಇಂದು ಮಂಗಳ ಕಾರ್ಯಗಳಲ್ಲಿ ಭಾಗಿಯಾಗಬಹುದು
- ರೇಷ್ಮೆ ಮತ್ತು ಅಡಿಕೆ ಬೆಳೆಗಾರರಿಗೆ ಅಧಿಕ ಲಾಭ
- ಇಂದು ವಿನಾಕಾರಣ ಕೋಪಕ್ಕೆ ಒಳಗಾಗದಿದ್ದರೆ ಒಳ್ಳೆಯದು
- ಇಂದು ಋಣವಿಮೋಚನೆ ಯೋಗವಿದೆ
- ನಿಮ್ಮ ಪ್ರಾಮಾಣಿಕ ಕೆಲಸದಿಂದ ಹೆಚ್ಚು ಯಶಸ್ಸು
- ಋಣವಿಮೋಚನೆ ಮಂಗಳ ಸ್ತೋತ್ರ ಪಠಿಸಿ
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us