ಸರ್ಕಾರದಿಂದ ಲಾಭದ ಸೂಚನೆ.. ಸ್ಪರ್ಧಾತ್ಮಕ ಜೀವನದಲ್ಲಿ ಬೇಸರವಾಗಬಹುದು; ಇಲ್ಲಿದೆ ನಿಮ್ಮ ಇಂದಿನ ರಾಶಿ ಭವಿಷ್ಯ!

ನಿಮ್ಮ ಹಟ ಸ್ವಭಾವದಿಂದ ಅವಮಾನ ಆಗಬಹುದು, ತಾಯಿ ಮತ್ತು ಅಜ್ಜಿಯವರಿಗೆ ತೊಂದರೆಯಿದೆ ಎಚ್ಚರವಹಿಸಿ, ಕೆಲವು ಸಹಾಯಕರಿಂದ ವಂಚನೆ ಬೇಸರ ಆಗಬಹುದು, ಪ್ರಯಾಣದ ಆಯಾಸದಿಂದ ಕೆಲಸ ಮುಂದೂಡುತ್ತೀರಿ

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಹಳೆಯ ಸ್ನೇಹಿತರಿಂದ ಅಪಮಾನ ಆಗಬಹುದು
  • ನಿಮ್ಮ ಧೈರ್ಯ ಬೇರೆಯವರಿಗೆ ಮಾದರಿಯಾಗಲಿದೆ 
  • ಬೇರೆಯವರಿಂದ ಏನನ್ನು ನಿರೀಕ್ಷಿಸಬೇಡಿ
  • ಪ್ರಯಾಣದಿಂದ ಆನಂದ ಆಗಲಿದೆ
  • ಸರ್ಕಾರದಿಂದ ಲಾಭದ ಸೂಚನೆ ಇದೆ
  • ವಿರೋಧಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾರೆ
  • ಹಗುರವಾದ ಮಾತುಕತೆಯಿಂದ ಬೇಸರ ಆಗಬಹುದು
  • ವನದುರ್ಗಾ ಆರಾಧನೆ ಮಾಡಿ

ವೃಷಭ

RASHI_BHAVISHA_VRSHABA

  • ಪ್ರೇಮಿಗಳಿಗೆ ಕಷ್ಟದ ಪರಿಸ್ಥಿತಿ, ಸ್ಥಳ ಬದಲಾವಣೆ
  • ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ದೊಡ್ಡ ಅನಾಹುತ ಆಗಬಹುದು
  • ಆರೋಗ್ಯದಲ್ಲಿ ತಕ್ಷಣ ಏರು ಪೇರು ಆಗಬಹುದು
  • ಆದಾಯದಲ್ಲಿ ಇಳಿಕೆಯಾಗುವುದರಿಂದ ಬೇಸರ, ಆತಂಕ ಆಗಲಿದೆ
  • ಅನಗತ್ಯ ಸಲಹೆ, ವಾದ ಬೇಡ
  • ಬಂಡವಾಳದಲ್ಲಿ ನಷ್ಟ ಮೂಲಕ್ಕೆ ಧಕ್ಕೆ ಉಂಟಾಗಬಹುದು
  • ಸೂರ್ಯನಾರಾಯಣನನ್ನು ಪ್ರಾರ್ಥಿಸಿ

ಮಿಥುನ

RASHI_BHAVISHA_MITHUNA

  • ನಿಮ್ಮ ಹಟ ಸ್ವಭಾವದಿಂದ ಅವಮಾನ ಆಗಬಹುದು
  • ತಾಯಿ ಮತ್ತು ಅಜ್ಜಿಯವರಿಗೆ ತೊಂದರೆಯಿದೆ ಎಚ್ಚರವಹಿಸಿ
  • ಕೆಲವು ಸಹಾಯಕರಿಂದ ವಂಚನೆ ಬೇಸರ ಆಗಬಹುದು
  • ನಿದ್ರಾಹೀನತೆ ಆರೋಗ್ಯದ ಬಗ್ಗೆ ನಿಗಾ ಇರಬೇಕು
  • ಪ್ರಯಾಣದ ಆಯಾಸದಿಂದ  ಕೆಲಸ ಮುಂದೂಡುತ್ತೀರಿ
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಆಂಜನೇಯ ಸ್ವಾಮಿಯ ಉಪಾಸನೆ ಮಾಡಿ

ಕಟಕ

RASHI_BHAVISHA_KATAKA

  • ಅಧಿಕಾರಿ ವರ್ಗದವರೊಂದಿಗೆ ವಾದ ಬೇಡ
  • ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ ಮಾಡಿ
  • ಮಕ್ಕಳ ಸಮಸ್ಯೆಯನ್ನು ಬಗೆಹರಿಸಿ
  • ಹಣದ ಅಭಾವ, ಮಾನಸಿಕ ಒತ್ತಡ ಉಂಟಾಗಬಹುದು
  • ಪ್ರೇಮಿಗಳ ವಿವಾಹಕ್ಕೆ ವಿಚಾರ ಮಾಡಿ
  • ಪ್ರಮುಖ ವ್ಯಕ್ತಿಗಳ ಜೊತೆ ಮಾತು ಸಮಯ ವ್ಯರ್ಥ ಆಗಲಿದೆ
  • ಲಕ್ಷ್ಮೀಯನ್ನು 16 ಕಮಲ ಪುಷ್ಪಗಳಿಂದ ಅರ್ಚಿಸಿ

ಸಿಂಹ 

RASHI_BHAVISHA_SIMHA

  • ಸ್ಪರ್ಧಾತ್ಮಕ ಜೀವನದಲ್ಲಿ ಬೇಸರ ಆಗಬಹುದು
  • ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಆಗಲಿದೆ ಗಾಬರಿ ಬೇಡ
  • ವಿದ್ಯಾರ್ಥಿಗಳಿಗೆ ಮನಸ್ಸು ವಿಚಲಿತವಾಗುವುದರಿಂದ ಅಧ್ಯಯನಕ್ಕೆ ತೊಂದರೆಯಾಗಬಹುದು 
  • ಈ ದಿನ ನಿರಾಶಾಭಾವನೆ ಬೇಡ
  • ಪ್ರೇಮಿಗಳಿಗೆ ಪರಸ್ಪರ ಕಿತ್ತಾಟ ಆಗಬಹುದು
  • ಇಂದು ನಿಮ್ಮ ಕರ್ತವ್ಯಕ್ಕೆ ಬದ್ಧರಾಗಿರಿ
  • ಧ್ಯಾನ ಮಾಡಿ

ಕನ್ಯಾ

RASHI_BHAVISHA_KANYA

  • ಇಂದು ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿಯಿರುವುದಿಲ್ಲ
  • ನಿಮ್ಮ ಎಲ್ಲ ಕಾರ್ಯಗಳು ಯಶಸ್ವಿಯಾಗಲಿದೆ
  • ಇಂದು ಕುಟುಂಬದಲ್ಲಿ ಶುಭ ವಾತಾವರಣ
  • ಈ ದಿನ ಎಲ್ಲರೊಂದಿಗೆ ಸಂತೋಷವಾಗಿರಿ
  • ಯಾವುದೇ ಕಾರಣಕ್ಕೂ ಅತಿಯಾದ ನಂಬಿಕೆಬೇಡ
  • ಮನೋಬಲ ಹೆಚ್ಚಾಗುವ ದಿನ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥಿಸಿ

ತುಲಾ

RASHI_BHAVISHA_TULA

  • ಕಲಾ ಪ್ರಪಂಚದ ಹಿರೀಕರಿಗೆ ಗೌರವ ಸಿಗಲಿದೆ
  • ಪುಸ್ತಕ ವ್ಯಾಪಾರಿಗಳಿಗೆ ಲಾಭ ಮತ್ತು ಮನ್ನಣೆ ಸಿಗಲಿದೆ
  • ಷೇರು ಮಾರುಕಟ್ಟೆಯಿಂದ ಲಾಭವಿದೆ,  ಹಣಹೂಡಿಕೆ ಬೇಡ
  • ಹಲವರ ಕೆಂಗಣ್ಣಿಗೆ ಗುರಿಯಾಗುತ್ತೀರಿ
  • ನಾಯಕತ್ವ ಗೌರವ ತಂದುಕೊಡುತ್ತದೆ
  • ಇಷ್ಟ ದೇವತಾ ಪ್ರಾರ್ಥನೆ

ವೃಶ್ಚಿಕ

RASHI_BHAVISHA_VRUSHCHIKA

  • ಆದಾಯಕ್ಕಿಂತ ಖರ್ಚು ಅಧಿಕವಾಗಿರುತ್ತದೆ
  • ವೈಯಕ್ತಿಕ ವಿಚಾರಗಳಲ್ಲಿ ಗೊಂದಲ ಬೇಡ
  • ಅನುಪಯುಕ್ತ ಕೆಲಸಗಳಲ್ಲಿ ಹಣವ್ಯಯ ಆಗಬಹುದು
  • ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಉಂಟಾಗಬಹುದು
  • ಇಂದು ಮಾನಸಿಕ ಒತ್ತಡವನ್ನು ದೂರಮಾಡಿ
  • ಈ ದಿನ ಅಪಘಾತ ಆಗಬಹುದು ಜಾಗ್ರತೆವಹಿಸಿ
  • ಕಾಲ ಭೈರವನನ್ನು ಪೂಜಿಸಿ

ಧನುಸ್ಸು

RASHI_BHAVISHA_DHANASU

  • ಅಧ್ಯಯನದ ಕಡೆ ಮನಸ್ಸಿದ್ದವರಿಗೆ ಮಾತ್ರ ಜಯವಿದೆ
  • ಲಾಭವಿದ್ದರೂ ಎಚ್ಚರಿಕೆ ಇರಬೇಕು
  • ನಂಬಿದವರಿಂದ ಹಣ ಮೋಸ ಆಗಬಹುದು
  • ವೃತ್ತಿ ಅಥವಾ ನೌಕರಿಯ ಒತ್ತಡ ಹೆಚ್ಚಾಗಿರಲಿದೆ
  • ವಿದ್ಯಾರ್ಥಿ ಮತ್ತು  ಉಪಾಧ್ಯಾಯರ ಮಧ್ಯೆ ವೈಮನಸ್ಸು ಏರ್ಪಡಲಿದೆ
  • ಪ್ರೇಮಿಗಳಿಗೆ ಸಮಸ್ಯೆ ಉಂಟಾಗಬಹುದು
  • ಉಮಾ ಮಹೇಶ್ವರರ ಆರಾಧನೆ ಮಾಡಿ

ಮಕರ

RASHI_BHAVISHA_MAKARA

  • ಹಿರಿಯರ ನಿರ್ಲಕ್ಷ್ಯ ಎಲ್ಲದಕ್ಕೂ ಅಡ್ಡಿಯಾಗಲಿದೆ
  • ಪೋಷಕರನ್ನು ನಿಂದಿಸಬೇಡಿ, ಅವರ ಆಶೀರ್ವಾದ ಪಡೆಯಿರಿ
  • ಸಹೋದರಿಯ ಚಿಂತೆಯಿಂದ ಬೇಸರ ಆಗಬಹುದು
  • ಸ್ನೇಹಿತರ ಕೆಲಸಕ್ಕಾಗಿ ಸಮಯ ವ್ಯರ್ಥ ಆಗಲಿದೆ
  • ಈ ದಿನ ಪರಸ್ಪರ ಹೊಂದಾಣಿಕೆಯಿರಲಿ
  • ರಕ್ತದೊತ್ತಡ ರೋಗಿಗಳು ಎಚ್ಚರವಹಿಸಿ
  • ತಿರುಪತಿ ಬೆಟ್ಟ ಹತ್ತುವುದಾಗಿ ಹರಿಸಿಕೊಳ್ಳಿ

ಕುಂಭ

RASHI_BHAVISHA_KUMBHA

  • ಇಂದು ಸಮಯದ ಸದುಪಯೋಗವಾಗಲಿ
  • ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಕಾಡಬಹುದು ಎಚ್ಚರಿಕೆವಹಿಸಿ
  • ಹಣಕ್ಕೆ ತೊಂದರೆಯಿಲ್ಲ, ಖರ್ಚು ಅಧಿಕ 
  • ಇಂದು ಬಂಧುಗಳಿಂದ ಟೀಕೆ ಬರಲಿದೆ
  • ಉದ್ಯೋಗ ಅಥವಾ ವೃತ್ತಿಯಲ್ಲಿ ಆತಂಕ ಉಂಟಾಗಬಹುದು
  • ಆತುರದ ಕ್ರಮದಿಂದ ನಷ್ಟ ಆಗಲಿದೆ
  • ಗಣಪತಿಗೆ 21 ಗರಿಕೆ ಸಮರ್ಪಿಸಿ

ಮೀನ

RASHI_BHAVISHA_MEENA

  • ನಿಮ್ಮ ಎಲ್ಲಾ ಕಾರ್ಯಗಳನ್ನು ಯೋಜನೆಯಂತೆ ಮಾಡಿ
  • ಈ ದಿನ ಉತ್ತಮ ಲಾಭವಿದೆ
  • ವೈವಾಹಿಕ ವಿಚಾರದಲ್ಲಿ ನಕಾರಾತ್ಮಕ ಚಿಂತನೆ ಬೇಡ
  • ಕುಟುಂಬದ ಭಿನ್ನಾಭಿಪ್ರಾಯವನ್ನು ಸರಿಪಡಿಸಿ
  • ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ
Rashi Bhavishya
Advertisment