Advertisment

Horoscope: ತುಂಬಾ ಧನಾತ್ಮಕ ದಿನ; ಆತ್ಮವಿಶ್ವಾಸದಿಂದ ಕೆಲ್ಸ ಮಾಡಿ -ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಕೃಷ್ಣ ಪಕ್ಷ, ತುರ್ಥಿ ತಿಥಿ, ಉತ್ತರಾ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ರಸ್ತೆ ಪಕ್ಕ ಕಾರ್ ನಿಲ್ಲಿಸಿಕೊಂಡು ನಿಂತಿದ್ದೇ ತಪ್ಪಾಯ್ತು : BMW ಕಾರ್ ಹಿಂದಿನಿಂದ ಡಿಕ್ಕಿ ಹೊಡೆದು ಮಲ್ಲಿಕಾ ದಾರುಣ ಸಾವು

ಮೇಷ

  • ಮನೆಯಲ್ಲಿ ಮನೆಯವರಾಗಿರಿ ವ್ಯವಹಾರ ಬೇಡ
  • ತುಂಬಾ ಧನಾತ್ಮಕವಾದ ದಿನ
  • ಉದ್ಯಮಿಗಳಿಗೆ ತುಂಬಾ ಅನುಕೂಲ
  • ಆರೋಗ್ಯದ ಬಗ್ಗೆ ಚಿಂತೆಬೇಡ
  • ಈ ದಿನ ಕೋಪ ಕಡಿಮೆ ಇರಲಿ 
  • ಹಣಕೋಪ ಒಟ್ಟಿಗೆ ಇರುವುದರಿಂದ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಬಹುದು ಎಚ್ಚರಿಕೆ
  • ಮಕ್ಕಳಿಗೆ ಉತ್ತಮ ತಿಳುವಳಿಕೆ ನೀಡಿ  ಅನರ್ಥವಾಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ

ವೃಷಭ

  • ಕಾನೂನು ರೀತಿಯ ಕೆಲಸಕ್ಕೆ ಜಯವಿದೆ  ಅಭಿಮಾನವಿಲ್ಲ
  • ಅನುಪಯುಕ್ತ ವಿಷಯದಲ್ಲಿ ನಿಮ್ಮ ಸಮಯ ವ್ಯರ್ಥ 
  • ಯಾವುದೋ ಅಹಂಭಾವ ಎಲ್ಲದಿಂದ ದೂರವಿರುವಂತೆ ಮಾಡಬಹುದು
  • ಸಂತೋಷ ನೆಮ್ಮದಿಯನ್ನು ಹುಡುಕುವ ದಿನ
  • ನಿಮ್ಮ ಕೈಯಲ್ಲಿ ಹಣವಿದೆ  ಜನರಲ್ಲಿ  ಬಂಧುಗಳಲ್ಲಿ  ಬೇಸರ
  • ಇಂದು ಆತುರದ ನಿರ್ಧಾರ ಬೇಡ
  • ತಾಪಸ ಮನ್ಯುವನ್ನು ಪ್ರಾರ್ಥಿಸಿ
Advertisment

ಮಿಥುನ

  • ಸ್ವಂತ ಬುದ್ದಿ ಕೆಲಸಕ್ಕೆ ಬರಲಿ
  • ವಿದ್ಯಾವಂತರೊಂದಿಗೆ ವಾದ ಮಾಡಿ ತಪ್ಪಿಗೆ ಸಿಲಿಕಬೇಡಿ
  • ಶಾಂತಿಯುತವಾಗಿ ದಿನ ಕಳೆಯಿರಿ
  • ನಿಮ್ಮ ತಪ್ಪುಗಳ ಅರಿವಾಗುತ್ತದೆ ಸರಿಪಡಿಸಿಕೊಳ್ಳಿ
  • ಬೇರೆಯವರಿಗೆ ಮಾತು ಕೊಟ್ಟಿದ್ದರೆ ಅದನ್ನು ಉಳಿಸಿಕೊಳ್ಳಿ 
  • ನಿಮ್ಮ ಸಂಬಂಧಿಕರು ನಿಮ್ಮನ್ನು ಹೊಗಳುವುದಿಲ್ಲ  ಬೇಸರ ಆಗಬಹುದು
  • ಈಶ್ವರನನ್ನು ಬಿಲ್ಪಪತ್ರೆಯಿಂದ ಅರ್ಚಿಸಿ

ಕಟಕ

  • ಮನೆಯ ಕೆಲಸದಲ್ಲಿ ಹೆಚ್ಚು ಒತ್ತಡ
  • ಸಮಾಜದಲ್ಲಿ ಹೇಗಿರಬೇಕೆಂಬ ಗೊಂದಲ
  • ಪ್ರಾಮಾಣಿಕತೆಗೆ ಬೆಲೆಯಿಲ್ಲದ ದಿನ ಎನಿಸಬಹುದು
  • ಜನ ಮೋಸ ಮಾಡದಿದ್ದರೆ ತುಂಬಾ ಒಳ್ಳೆಯ ದಿನ  ಎಚ್ಚರ
  • ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ
  • ಹಿರಿಯರಿಂದ ಒಳ್ಳೆಯ ಸುದ್ದಿ  ಸಂತೋಷ ಸಿಗಲಿದೆ
  • ಇಷ್ಟದೇವತಾ ಆರಾಧನೆ ಮಾಡಿ

ಸಿಂಹ

  • ವೃತ್ತಿಯ ಬಗ್ಗೆ ಎಚ್ಚರಿಕೆ ವಹಿಸಿ
  • ದೈನಂದಿನ ಕೆಲಸಗಳಲ್ಲಿ ಅಡ್ಡಿ  ಸಮಸ್ಯೆ ಕಾಣಬಹುದು
  • ಆರೋಗ್ಯ ನಿಮ್ಮ ಕೈಯಲ್ಲಿರುತ್ತದೆ ಆರೋಗ್ಯ ಕೆಡಿಸಿಕೊಳ್ಳಬೇಡಿ
  • ದಾಂಪತ್ಯದಲ್ಲಿ ಹೊಸ ಚೈತನ್ಯ ಕಾಣಬಹುದು
  • ನಿಮ್ಮ ತ್ಯಾಗ ಬುದ್ದಿ ಮನೆಯವರಿಗೆ ಸಂತೋಷ ತರಬಹುದು
  • ಧರ್ಮಕಾರ್ಯದಲ್ಲಿ ಭಾಗಿಯಾಗಲು ಅವಕಾಶಗಳಿವೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
Advertisment

ಕನ್ಯಾ

  • ಸಾಲ ಪ್ರಕ್ರಿಯ ಈ ದಿನ ಬೇಡ
  • ಬರಹಗಾರರಿಗೆ ಶುಭವಿದೆ
  • ಕಲೆ-ಸಾಹಿತ್ಯ ವಿಚಾರಧಾರಿಗಳಿಗೆ ಸಮಸ್ಯೆ
  • ತ್ವರಿತ ತೀರ್ಮಾನದಿಂದ ಆರ್ಥಿಕ ನಷ್ಟ
  • ಪರಿಶ್ರಮದ ಫಲ ನಿಮ್ಮನ್ನು ಕಾಪಾಡುವ ತೃಪ್ತಿ ತರಬಹುದು
  • ಅನಗತ್ಯ ಕೆಲಸಕ್ಕಾಗಿ ಸಮಯ ವ್ಯರ್ಥ
  • ಕುಲದೇವತಾ ಆರಾಧನೆ ಮಾಡಿ

ತುಲಾ

  • ದಂಪತಿಗಳಲ್ಲಿ ಪರಸ್ಪರ ಶೀತಲ ಸಮರ
  • ನಿಮ್ಮ ಸ್ವಾರ್ಥಕ್ಕಾಗಿ ಬೇರೆಯವರಿಗೆ ಹಿಂಸೆ  ಬೇಸರ
  • ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಪ್ರಭಾವ ತೋರಬಹುದು
  • ಸ್ವಂತ ಕಾರ್ಯಕ್ಕಾಗಿ ಖರ್ಚು ಮಾಡುತ್ತೀರಿ
  • ಕುಟುಂಬದವರ ತಿಳುವಳಿಕೆ ಕಹಿ ಎನಿಸಬಹು
  • ನಿಮ್ಮ ಭಾವನೆಗಳು ತಪ್ಪಿನೆಡೆಗೆ ಕರೆದೊಯ್ಯಬಹುದು
  • ಧ್ಯಾನಮಾಡಿ

ವೃಶ್ಚಿಕ

  • ಕಠಿಣ ಪರಿಶ್ರಮವಿದ್ದರೂ ಸಾರ್ಥಕತೆ ಇಲ್ಲ
  • ವೈವಾಹಿಕ ವಿಚಾರದಲ್ಲಿ ಕಲಹ
  • ಇಂದು ವ್ಯವಸ್ಥಿತವಾದ ದಿನ
  • ನಕಾರಾತ್ಮಕ ಅಭಿಪ್ರಾಯ ಹೇಳುವವರನ್ನು ಅವಲಂಬಿಸಬೇಡಿ
  • ಮಕ್ಕಳು ಪೋಷಕರಿಗೆ ದುಃಖದಾಯಕರು
  • ಹಿರಿಯರ ಮಾರ್ಗದರ್ಶನ ಆಶೀರ್ವಾದ ಪಡೆಯಿರಿ
Advertisment

ಧನಸ್ಸು

  • ಪ್ರಯತ್ನ ಪೂರ್ವಕವಾಗಿ ಸಮಾಧಾನ
  • ಬುದ್ದಿವಂತಿಕೆಯು ಕೆಲಸ ಮಾಡುವುದಿಲ್ಲ
  • ಕರ್ಕಾಟಕ ರಾಶಿಯ ಪ್ರೇಮಿಗಳಿಗೆ ಭಯ  ದೂರವಾಗುವಿಕೆ
  • ವೃತ್ತಿ ಉದ್ಯೋಗದಲ್ಲಿ ಆದಾಯ ಹೆಚ್ಚು
  • ದುಡ್ಡು ಹೊರತಾಗಿ ಬೇಱವುದೂ ಕೆಲಸ ಮಾಡಲಾರದ ದಿನ
  • ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ತುಂಬಾ ಗೊಂದಲ
  • ಹಣದ ಚಿಂತೆಯಿಂದ ಹೊರಬರುತ್ತೀರಿ
  • ಪಾರಿಜಾತ ಸರಸ್ವತಿಯನ್ನು ಮಲ್ಲಿಗೆ ಹೂಗಳಿಂದ  ಅರ್ಚಿಸಿ

ಮಕರ

  • ಖರ್ಚಿನ ಬಗ್ಗೆ ಮುಂದಾಲೋಚನೆ ಬೇಕು
  • ನಿಮ್ಮ ವ್ಯವಹಾರದ ಬಗ್ಗೆ ಚಿಂತಿಸಿ
  • ಸಣ್ಣ ವಿಚಾರ ವಿವಾದವಾಗಬಹುದು
  • ನಿಮ್ಮ ಸಾಧನೆ ನಿಮಗೆ ಮುಖ್ಯ ಬೇರೆಯವರಿಗೆ ಒತ್ತಡ ಹಾಕಬಾರದು
  • ನಿಮ್ಮ ತಪ್ಪುಗಳಿಗೆ ನಿಮ್ಮ ವರ್ತನೆ ಕಾರಣವಾಗಬಹುದು
  • ವಿದ್ಯುತ್ ಉಪಕರಣಗಳಿಂದ ತೊಂದರೆಯ ಸೂಚನೆ
  • ವಿಷ್ಣುವನ್ನು ತುಳಸಿಯಿಂದ ಅರ್ಚಿಸಿ

ಕುಂಭ

  • ಮನೆಕಟ್ಟುವ ವಿಚಾರ ಪ್ರಸ್ತಾಪಕ್ಕೆ ಬರುತ್ತದೆ
  • ನಿಮ್ಮ ಜೀವನ ಶೈಲಿಯನ್ನು ಪರಾಮರ್ಶಿಸಿಕೊಳ್ಳಿ
  • ನಿಮ್ಮ ಮತ್ತು ಮನೆಯವರ ಆರೋಗ್ಯ ಗಮನಿಸಿ
  • ಹೊಸ ಸಂಶೋಧನೆ ಪ್ರಯತ್ನಕ್ಕೆ ಅವಕಾಶ
  • ನಿಮಗಿರುವ ಅನುಕೂಲವನ್ನು ಸದುಪಯೋಗ ಮಾಡಿ
  • ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ
Advertisment

ಮೀನ

  • ಆತ್ಮವಿಶ್ವಾಸದಿಂದ ಮಾಡಿದ ಕೆಲಸಕ್ಕೆ ಜಯವಿದೆ
  • ಮನೆ ಮಡದಿ ಮಕ್ಕಳ ಬಗ್ಗೆ ಪ್ರಾಮಾಣಿಕತೆ ತೋರಬೇಕು
  • ಮನೆಯವರೆಲ್ಲಾ ಹೆಚ್ಚಾಗಿ ಹೊರಗೆ ಕಳೆಯುವುದಾಗಿರುತ್ತದೆ
  • ಹಿರಿಯರೊಂದಿಗೆ ಚರ್ಚೆ  ಶುಭವಿದೆ
  • ಮಹಿಳೆಯರಿಗೆ ಒತ್ತಡ  ಖರೀದಿಯಿಂದ ಸಂತೋಷ
  • ಭೂ ವ್ಯವಹಾರದಲ್ಲಿ ಎಚ್ಚರಿಕೆ
  • ದುರ್ಗಾಮಾತೆಯನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Horoscope Rashi Bhavishya
Advertisment
Advertisment
Advertisment