/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆತ್ಮ ವಿಶ್ವಾಸ ಹೆಚ್ಚಿದರೆ ಗುರಿ ಮುಟ್ಟಬಹುದು ಬೆಳಸಿ
- ಒಬ್ಬರೆ ಇದ್ದು ಕೆಟ್ಟ ಅಭ್ಯಾಸಗಳಿಗೆ ದಾಸರಾಗುವುದನ್ನು ತಪ್ಪಿಸಿ
- ಇಂದು ಅಜೀರ್ಣ ಸಮಸ್ಯೆ ಉಂಟಾಗಬಹುದು
- ಹಳೆಯ ತಪ್ಪು ಪುನರಾವರ್ತನೆ ಆಗಬಹುದು
- ಓದು ಕೆಲಸ ಎರಡೂ ಇರುವವರಿಗೆ ಸವಾಲಿನ ದಿನ
- ಮನೆ ಮನ ಸಂತಸದಿಂದ ಇರುವುದಿಲ್ಲ
- ಧ್ಯಾನ ಮಾಡಿ ಮನಸ್ಸನ್ನು ತಿಳಿಗೊಳಿಸಿಕೊಳ್ಳಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರೇಮ ವಿಚಾರದಲ್ಲಿ ಸಮಾಧಾನವಿರಬಹುದು
- ಗೌರವ ಇರುವಲ್ಲಿ ಭಾಗಿಗಳಾಗಿ
- ಮನೆಯ ಅಗತ್ಯತೆಗಳನ್ನು ಗಮನಿಸಿ
- ವಿನಾಕಾರಣ ತಿರುಗಾಟ ಮಾಡದಿದ್ದರೆ ಯಶಸ್ಸು
- ವಿವಾಹ ವಿಚಾರ ಪ್ರಸ್ತಾಪಬೇಡ ನಿರಾಸೆ
- ಸಾಲದ ವಿಚಾರ ಬೇಡ
- ಲಕ್ಷ್ಮೀನಾರಾಯಣರ ಅನುಗ್ರಹ ಪಡೆಯಿರಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ದಾಂಪತ್ಯದಲ್ಲಿ ಬೇರೆಯವರ ಆಗಮನ ಬೇಸರ
- ವ್ಯವಹಾರದಲ್ಲಿ ನಷ್ಟ ಅವಮಾನ ಎಲ್ಲವೂ ಇದೆ
- ಲಾಭ ಅಥವಾ ಹಣ ತಾತ್ಕಾಲಿಕವಾದದ್ದು ಹಿಂದಿನ ಪರಿಸ್ಥಿತಿ ಜ್ಞಾಪಿಸಿಕೊಳ್ಳಿ
- ಆಸ್ತಿಯ ವಿಚಾರ ಮುಂದೆ ಮಾರಕವಾಗಲಿದೆ
- ಬಂಧುಗಳಿಂದಲೇ ನಿಮ್ಮ ವೃತ್ತಿಗೆ ಪೆಟ್ಟು ಬೀಳಬಹುದು
- ನಿಮ್ಮ ಸ್ವಭಾವವನ್ನು ಬದಲಿಸಿಕೊಳ್ಳಿ
- ಕುಟುಂಬದ ಮೂಲ ದೇವರನ್ನು ಪ್ರಾರ್ಥಿಸಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದಲ್ಲಿ ಹೆಂಗಸರ ವಿಚಾರದಲ್ಲಿ ಬೇಸರ ಆಗಬಹುದು
- ನಿಮ್ಮ ಆರೋಗ್ಯ ಸುಧಾರಿಸುತ್ತದೆ
- ಕೆಲಸದಲ್ಲಿ ಉತ್ಸಾಹವಿಲ್ಲದೆ ಎಡವಟ್ಟು ಮಾಡಿಕೊಳ್ಳಬಹುದು
- ಹಣದ ವಿಚಾರಕ್ಕೆ ತೊಂದರೆ ಬೇಸರ ಉಂಟಾಗಲಿದೆ
- ಮಧ್ಯಾಹ್ನದ ನಂತರ ದುಃಖ ಹೆಚ್ಚಾಗಲಿದೆ
- ಆಲಸ್ಯ ದೂರಮಾಡಿಕೊಳ್ಳಿ
- ಕುಬೇರ ಲಕ್ಷ್ಮೀಯನ್ನು ಅರ್ಚಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಪರಿಚಯ ಬಂಧುತ್ವ ಎಲ್ಲಾ ವ್ಯರ್ಥ
- ಯಾರ ಸಹಾಯವೂ ದೊರೆಯುವುದಿಲ್ಲ
- ಸಂಜೆಗೆ ಬೇಸರದಿಂದ ಒಂಟಿತನ ಕಾಡುತ್ತದೆ
- ಕುಟುಂಬದ ಸದಸ್ಯರು ಆತಂಕದಲ್ಲಿರುತ್ತಾರೆ
- ತುಂಬಾ ಖರ್ಚು ಮಾತಿನಿಂದ ತೊಂದರೆ ಆಗಬಹುದು
- ಅನಗತ್ಯ ಕೆಲಸಗಳಿಂದ ದೂರವಿರಬೇಕು ದಂಡ ಶಿಕ್ಷೆಗೆ ಅವಕಾಶವಿದೆ
- ತಿರುಪತಿ ವೆಂಕಟೇಶ್ವರನನ್ನು ಪ್ರಾರ್ಥನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ದಾಂಪತ್ಯದಲ್ಲಿ ಬಿರುಕು ಬರದಂತೆ ಗಮನಿಸಿ
- ಬೇರೆಯವರ ಹಿತಕ್ಕಾಗಿ ಬಯಸುತ್ತೀರಿ ಅದರ ಬೆಲೆ ಅವರಿಗೆ ತಿಳಿಯುವುದಿಲ್ಲ
- ಶಿಸ್ತುಬದ್ದವಾದ ಜೀವನ ಸಮಾಜದ ಹಿತ ನಿಮ್ಮಿಂದ ಆಗಬಹುದು
- ನಿಮ್ಮ ಶ್ರಮ ಸಾರ್ಥಕವಾದ ಭಾವವಿರುತ್ತದೆ
- ಉತ್ತಮ ಹೆಸರುಗಳಿಸಲು ಸದಾವಕಾಶ ತಾನಾಗಿಯೇ ಬರುತ್ತದೆ
- ನಂಬಿದವರು ಸಹಾಯ ಮಾಡದಿರಬಹುದು
- ನವಗ್ರಹರನ್ನು ಆರಾಧಿಸಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಬಂಧುಗಳಲ್ಲಿ ಅವಮಾನ ಆಗಬಹುದು
- ಮಕ್ಕಳಿಗೆ ನ್ಯಾಯ ಒದಗಿಸಬೇಕು
- ದುಡ್ಡಿನ ಚಿಂತೆ ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು
- ಸ್ವಭಾವ ನಡವಳಿಕೆ ಬದಲು ಮಾಡಿಕೊಳ್ಳಲು ಅವಕಾಶವಿದೆ ಚಿಂತಿಸಿ
- ನಿಮ್ಮ ತಿರುಗಾಟ ಅಲಂಕಾರ ಇತ್ಯಾದಿಗಳಿಗೆ ಕಡಿವಾಣವಿರಬೇಕು
- ಎಲ್ಲವೂ ಇದ್ದು ನರಳುತ್ತೀರಿ ಪೂರ್ವಜನ್ಮದ ಕರ್ಮ ಇರಬಹುದು
- ಲಕ್ಷ್ಮೀನರಸಿಂಹನನ್ನು ಪ್ರಾರ್ಥಿಸಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ವಾರ್ಥಕ್ಕಾಗಿ ಬೇರೆಯವರನ್ನು ದೂಷಿಸಬಾರದು
- ಸ್ನೇಹಿತೆ ಮಧ್ಯೆ ಜಗಳ ಸಂಭವ
- ಮಾನಸಿಕ ನೋವಿನಿಂದ ಬಳಲುತ್ತೀರಿ
- ನಿಮ್ಮ ಸಮಸ್ಯೆಯನ್ನು ಮನೆ ಸ್ನೇಹಿತರು ಬಂಧುಗಳಲ್ಲಿ ಹೇಳಿಕೊಳ್ಳಿ
- ವಿದ್ಯಾಭ್ಯಾಸದ ವಿಚಾರದಲ್ಲಿ ಮುನ್ನಡೆ
- ಸಾಯಂಕಾಲದ ಹೊತ್ತಿಗೆ ತಾಯಿಯಿಂದ ಸಮಾಧಾನ ಗೆಲವು
- ತಾಯಿಯ ಪ್ರೀತಿಗೆ ಪಾತ್ರರಾಗಿರಿ
ಧನುಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಮಧ್ಯಾಹ್ನದ ನಂತರ ಸಮಯ ಚೆನ್ನಾಗಿದೆ
- ಇಂದು ಧೈರ್ಯ ಕಡಿಮೆ
- ವೃತ್ತಿಯಲ್ಲಿ ದ್ವೇಷ ಸಾಧಿಸುತ್ತೀರಿ
- ಯಶಸ್ಸಿನ ಬಯಕೆ ಹಣ ಹೂಡಿಕೆಯ ಚಿಂತನೆ
- ಆಹಾರದಿಂದ ಸಮಸ್ಯೆ ಆಗಬಹುದು
- ಹೊಸ ವಾಹನ ಖರೀದಿ ಸಾಧ್ಯತೆ
- ಈಶ್ವರ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರೀತಿಸಿದವರಿಂದ ವಂಚನೆಯ ಸೂಚನೆ
- ಆಸೆಗಳಿಗೆ ವಿರುದ್ದ ವಾತಾವರಣ
- ನಂಬಿಕೆ ದ್ರೋಹಕ್ಕೆ ಪಾತ್ರರಾಗಬಹುದು
- ಮಾನಸಿಕ ಧೈರ್ಯ ನಿಮಗೆ ಮಾರ್ಗ ಸೂಚಿ
- ವಿದೇಶ ಪ್ರಯಾಣದ ವಿಚಾರದಲ್ಲಿ ಗೊಂದಲ
- ಎಲ್ಲಾ ಕಡೆ ಅಪಮಾನ ಆಗಬಹುದು
- ಮಾರುತಿಯನ್ನು ಪ್ರಾರ್ಥಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಮನಸ್ಸಿಗೆ ಒಪ್ಪದ ಸ್ಥಳಕ್ಕೆ ಕೆಲಸಕ್ಕೆ ಹೋಗಬೇಡಿ
- ಗೌರವವನ್ನು ಕೇಳಿ ಪಡೆಯುವುದಲ್ಲ ಎಂದು ಅರಿಯಬೇಕು
- ಕುಟುಂಬದಲ್ಲಿ ಶಾಂತಿಯ ವಾತಾವರಣ
- ನಿಮ್ಮ ಗಮನ ನಿಮ್ಮ ಕರ್ತವ್ಯದ ಮೇಲಿರಲಿ
- ಅನಿರೀಕ್ಷಿತ ಸಿಹಿ ಸುದ್ದಿ ಉಲ್ಲಾಸ
- ಸಮಾಜದಲ್ಲಿ ಜಯಸಾಧಿಸುವುದು ಕಷ್ಟ ಮಾತಿನಲ್ಲಿ ಗೆಲ್ಲಬೇಕು
- ವಾಗ್ದೇವತಾ ಆರಾಧನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಅವಿವಾಹಿತರಿಗೆ ಸಿಹಿಸುದ್ದಿ ಅನುಮಾನ ಬೇಡ
- ಪ್ರಯಾಣದಿಂದ ತೊಂದರೆಯಿದೆ ಅನಿವಾರ್ಯ
- ಸಾಮಾಜಿಕ ಕೆಲಸಗಳಲ್ಲಿ ಯಶಸ್ಸು
- ಮನೆ ನವೀಕರಣ ವಿಚಾರದಲ್ಲಿ ಅಡ್ಡಿಯಾಗಬಹುದು
- ನಿಮ್ಮ ನಾಯಕತ್ವದ ಸಾಮರ್ಥ್ಯ ಪರೀಕ್ಷಿಸಿ
- ಬುದ್ಧಿವಂತರ ಸಹವಾಸದಿಂದ ಸಂತೋಷ
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us