Horoscopes ಕೆಲಸದಲ್ಲಿ ಒತ್ತಡ ಮಾನಸಿಕ ಕಿರಿಕಿರಿ -ನಿಮ್ಮ ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಷಷ್ಠೀ ತಿಥಿ, ಶ್ರವಣ ನಕ್ಷತ್ರ. ರಾಹುಕಾಲ ಬುಧವಾರ ಬೆಳಗ್ಗೆ 12.00 ರಿಂದ 1.30 ರವರೆಗೆ

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಮಯಕ್ಕೆ ಸರಿಯಾಗಿ ನಿಮ್ಮ ಕಾರ್ಯಕ್ಷೇತ್ರ ಅಥವಾ ಕೆಲಸಕ್ಕೆ ಹೋದರೆ ಗೌರವ ಸಿಗುತ್ತದೆ
  • ಇಂದು ಯಾವುದೇ ರೀತಿಯ ವಾದ-ವಿವಾದಗಳು ಬೇಡ
  • ಇಂದು ವ್ಯರ್ಥವಾಗಿ ಓಡಾಡುವುದನ್ನು ಕಡಿಮೆ ಮಾಡಿ
  • ನಿಮಗೆ ಗೊತ್ತಿಲ್ಲದ ಭಯ ನಿಮ್ಮನ್ನು ತುಂಬಾ ಕಾಡಬಹುದು ಹೆದರಿಕೆ ಬೇಡ
  • ಇಂದು ನಿಮ್ಮ ದಿನಚರಿ ಸ್ವಲ್ಪ ಅಸ್ತವ್ಯಸ್ತವಾಗಬಹುದು
  • ಇಷ್ಟದೇವತಾರಾಧನೆ ಮಾಡಿ

ವೃಷಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬ-ಬಂಧುಗಳು ಅಥವಾ ಸ್ನೇಹಿತರ ಮನೆಯಲ್ಲಿ ಹಿರಿಯರ ಆರೋಗ್ಯ ಚಿಂತಾಜನಕ ಸಾಧ್ಯತೆ
  • ವಿದೇಶ ಪ್ರಯಾಣಕ್ಕೆ ಹೊರಟವರಿಗೂ ಸ್ವಲ್ಪ ಅಡ್ಡಿಯಾಗಬಹುದು
  • ವಿದೇಶದಿಂದ ಇಲ್ಲಿಗೆ ಬರುವಂತಹ ವ್ಯಕ್ತಿಗಳಿಗೂ ಇದು ಅನ್ವಯವಾಗುತ್ತದೆ
  • ಇಂದು ಯಾವ ಕೆಲಸದಲ್ಲೂ ಆತುರದ ನಿರ್ಧಾರ ಬೇಡ
  • ನಿಮ್ಮ ಯೋಜನೆಗಳ ಬಗ್ಗೆ ಸರಿಯಾಗಿ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ
  • ನಿಮ್ಮ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸಮಾಧಾನ ಹೇಳಿ
  • ಈಶ್ವರನ ಆರಾಧನೆ ಮಾಡಿ

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಒತ್ತಡ ಮಾನಸಿಕ ಕಿರಿಕಿರಿ ಸಾಧ್ಯತೆ
  • ನಿಮ್ಮ ಸಹೋದ್ಯೋಗಿಗಳು ಮಿತ್ರರು ನಿಮ್ಮ ಬಗ್ಗೆ ಸಂತೋಷ ವ್ಯಕ್ತಪಡಿಸುವ ಸಾಧ್ಯತೆ
  • ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ
  • ಇಂದು ಕೆಲಸ ಹೆಚ್ಚಾಗಿ ಸುಸ್ತಾಗುವ ಸಾಧ್ಯತೆ
  • ಹನುಮಂತನನ್ನು ಪ್ರಾರ್ಥಿಸಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಿಗುವ ಸಾಧ್ಯತೆ
  • ಇಂದು ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಸಾಧ್ಯತೆ ಜಾಗ್ರತೆ ಇರಲಿ
  • ನಿಮ್ಮ ಮಾತಿನಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ
  • ಇಂದು ನಿಮ್ಮ ಮಾತಿನ ಮೇಲೆ ಜಾಗ್ರತೆ ಇರಲಿ
  • ನೌಕರರಿಗೆ ಬಡ್ತಿ ಕೆಲಸಗಾರರಿಗೆ ಸಂಬಳ ಹೆಚ್ಚಾಗುವ ಸಾಧ್ಯತೆ
  • ಇಂದ್ರಾಣಿ ದೇವಿಯನ್ನು ಪ್ರಾರ್ಥಿಸಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನಸ್ಸಿಗೆ ಹಿತ ಸಿಗುವ ದಿನವಾಗಿದೆ
  • ಇಂದು ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು
  • ಧಾರಾಳವಾಗಿ ಹಣ ಖರ್ಚುಮಾಡಬೇಕಾಗುವ ಸಂದರ್ಭ ಬರಬಹುದು
  • ಆರೋಗ್ಯದ ಕಡೆ ನಿರ್ಲಕ್ಷ ಬೇಡ ಗಮನ ಕೊಡಿ
  • ಗೌಪ್ಯತೆ ಕಾಪಾಡಿಕೊಂಡು ಮಾಡ್ತಾ ಇದ್ದ ಕೆಲಸವು ಇಂದು ಫಲ ನೀಡಬಹುದು 
  • ತಿರುಪತಿ ವೆಂಕಟೇಶ್ವರನನ್ನು ಪ್ರಾರ್ಥಿಸಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೇಮಿಗಳ ಮಧ್ಯ ಘರ್ಷಣೆ ಉಂಟಾಗಬಹುದು, ಗಮನಹರಿಸಿ 
  • ಉದ್ಯೋಗ ಮತ್ತು ವಿದ್ಯಾ ಕ್ಷೇತ್ರದಲ್ಲಿ ಅನೇಕ ದುಷ್ಟರು ಎದುರಾಗಬಹುದು ದೂರ ಇದ್ದರೆ ಒಳಿತು
  • ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ
  • ಇಂದು ಹಣದ ಖರ್ಚನ್ನು ಕಡಿಮೆ ಮಾಡಿ
  • ಉಳಿತಾಯದ ಹಣವೇ ಈ ದಿನ ಆದಾಯವಾಗಿ ಪರಿಣಮಿಸುತ್ತದೆ
  • ಈಶ್ವರಾರಾಧನೆ ಮಾಡಿ 

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ವಿರೋಧಿಗಳು ಶತ್ರುಗಳು ಸಮಸ್ಯೆಗಳನ್ನು ಸೃಷ್ಟಿಸಿ ನಿಮ್ಮನ್ನ ಗೊಂದಲಕ್ಕೆ ಸಿಲುಕಿಸಬಹುದು ಜಾಗ್ರತೆ 
  • ಇಂದು ನಿಮಗೆ ಆತಂಕ ಅನ್ನೋದು ತಪ್ಪಿದಲ್ಲಾ ಎಚ್ಚರಿಕೆ ಇರಲಿ 
  • ನಿಮಗೆ ಜನಬಲ ಧನಬಲ ನನ್ನ ಜೊತೆಯಲ್ಲಿದೆ ಅನ್ನೋ ಭಾವನೆ ಗಟ್ಟಿಯಾಗುವ ದಿನ
  • ಇಂದು ಸಾಮಾಜಿಕ ಸ್ಥಾನಮಾನ ಹೆಚ್ಚಾಗುವ ದಿನ
  • ವಿದ್ಯುತ್​ ಉಪಕರಣದಿಂದ ಹಾನಿ ಉಂಟಾಗಬಹುದು ಎಚ್ಚರಿಕೆ 
  • ಮುನೇಶ್ವರನನ್ನು ಪ್ರಾರ್ಥಿಸಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಳೆಯ ಅನುಭವಗಳು ಇಂದು ಎಲ್ಲಾ  ರೀತಿಯಿಂದಲೂ ಉಪಯೋಗಕ್ಕೆ ಬರಬಹುದು
  • ಸಹೋದರರನ್ನು ಸಂಬಂಧಿಕರನ್ನು ಈ ದಿನ ಸಂತೋಷ ಪಡಿಸುತ್ತೀರಿ
  • ಹೊಸ ಕೆಲಸಗಳ ಬಗ್ಗೆ ಆಲೋಚನೆಗಳು ಬರುವ ಸಾಧ್ಯತೆ 
  • ನಿಮ್ಮ ಬುದ್ಧಿವಂತಿಕೆಯಿಂದ ಹಣವನ್ನು ಜನರನ್ನು ಸಂಪಾದಿಸುವ ದಿನ 
  • ಇಂದು ಎಲ್ಲಾ ದೃಷ್ಟಿಯಿಂದ ಅನುಕೂಲಕರವಾದ ಶುಭ ದಿನ
  • ಬೇರೆಯವರ ಜೊತೆ ವ್ಯವಹರಿಸುವುದು ಪಾಲುದಾರಿಕೆ ಈ ದಿನ ಬೇಡ
  • ದುರ್ಗಾದೇವಿಯನ್ನು  ಆರಾಧಿಸಿ

ಧನಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ ಮಾನ್ಯತೆ ದೊರೆಯುವ ದಿನವಾಗಿದೆ 
  • ನೀವು ಅಂದುಕೊಂಡ ಕೆಲಸವನ್ನು ಸಾಧಿಸಲು ಒಳ್ಳೆಯ ದಿನ
  • ವಿದ್ಯಾರ್ಥಿಗಳಿಗೆ ಇಂದು ತುಂಬಾ ಉತ್ತಮವಾದ ದಿನ
  • ನೀವೂ ಕೂಡ ವೈದ್ಯರ ಸಲಹೆ ಪಡೆಯಬೇಕಾಗಿ ಬರಬಹುದು
  • ಕುಟುಂಬ ಸದಸ್ಯರ ಆರೋಗ್ಯ ವ್ಯತ್ಯಯವಾಗಬಹುದು ಗಮನವಿರಲಿ
  • ನಿಮ್ಮ ಗುರಿಯ ಬಗ್ಗೆ ಹೆಚ್ಚಿನ ಗಮನ ಕೊಡಿ
  • ಕೆಲಸದಲ್ಲಿ ಗೌರವ ಸಿಕ್ಕಿದ್ರೂ ಸಹೋದ್ಯೋಗಿಗಳ ವರ್ತನೆ ನಿಮಗೆ ಬೇಸರ ತರಬಹುದು
  • ಇಂದು ಹೊಸತನ್ನು ಕಲಿಯುವ ಮನಸ್ಥಿತಿ ನಿಮ್ಮದಾಗಿರುತ್ತದೆ
  • ಉಮಾಮಹೇಶ್ವರರನ್ನು ಪ್ರಾರ್ಥಿಸಿ

ಮಕರ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

 

  • ಬೇರೆಯವರ ವಿಷಯಕ್ಕೆ ತಲೆಕೆಡಿಸಿಕೊಳ್ಳದೆ ದೂರವಿದ್ದರೆ ಒಳ್ಳೆಯದು
  • ಇಂದು ಸ್ತ್ರೀಯರಿಗೆ ಕಾಲಿನ ಚರ್ಮವ್ಯಾಧಿ ಕಾಡಬಹುದು ಜಾಗ್ರತೆವಹಿಸಿ
  • ವಿವಾದಾತ್ಮಕ ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಡಿ ಜಾಗ್ರತೆ
  • ಪತಿ-ಪತ್ನಿಯರ ಸಂಬಂಧ ಪ್ರಭಾವ ಬೀರುವಂತದ್ದು
  • ಪ್ರೇಮಿಗಳು ಹಿಂದಿನ ದ್ವೇಷ ಬಿಟ್ಟು ಅನ್ಯೋನ್ಯತೆ ಕಾಪಾಡಿಕೊಂಡರೆ ಒಳಿತು
  • ಸೂರ್ಯನಾರಾಯಣನನ್ನು ಪ್ರಾರ್ಥಿಸಿ

ಕುಂಭ 

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಈ ದಿನ ಕೆಲಸದಲ್ಲಿ ವಿಶೇಷವಾಗಿ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ
  • ಇಂದು ಸರ್ಕಾರಿ ಕೆಲಸ ತುಂಬಾ ವಿಳಂಬವಾಗುವ ಸಾಧ್ಯತೆ ಇದೆ ಯೋಚಿಸಿ
  • ಜನರು ನಿಮ್ಮನ್ನು ನೋಡಿದ್ರೆ ಇವರಿಗೆ ಯಾವ ಕೆಲಸವನ್ನು ಮಾಡಿಕೊಡಬಾರದು ಅನ್ನೋ ಮನಸ್ಥಿತಿಗೆ ತಲಪುತ್ತಾರೆ
  • ನಿಮ್ಮ ಕೆಲಸವನ್ನು ಜಾಗರೂಕತೆಯಿಂದ ಮಾಡಿ
  • ಇಂದು ಒಳ್ಳೆಯ ಆಹಾರ ಸ್ವೀಕರಿಸುತ್ತೀರಿ 
  • ಮನಸ್ಸಿಗೆ ಸಂತೋಷ ಸಿಗುವಂತಹ ದಿನವಾಗಿರುತ್ತದೆ
  • ಕೆಲವೊಂದು ಕೆಲಸ ವಿಳಂಬವಾಗಿ ಮನೆಯವರಿಗೆಲ್ಲಾ ಆತಂಕ ಉಂಟಾಗುವ ದಿನ
  • ವಿನಾಕಾರಣ ಹಣವನ್ನು ದುಂದುವೆಚ್ಚ ಮಾಡಬೇಡಿ
  • ಇಂದು ಹಣವನ್ನು ಎಷ್ಟು ಉಳಿಸಿದರೂ ಅಷ್ಟು ಒಳ್ಳೆಯದು
  • ಶಿವಮಂತ್ರ ಪಠನೆ ಮಾಡಿ

ಮೀನ 

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಹಣಕಾಸಿನ ವ್ಯವಸ್ಥೆ ಬಹಳ ಅನುಕೂಲಕರವಾಗಿರುವ ದಿನವಾಗಿದೆ
  • ಹಣವನ್ನು ಅವಲಂಬಿಸಿ ಮಾಡುವ ಯೋಜನೆಗಳು ಇಂದು ಒಳಿತಾಗುತ್ತದೆ
  • ವ್ಯಾಪಾರ ವ್ಯವಹಾರದ ದೃಷ್ಟಿಯಿಂದ ಪ್ರಯಾಣ ಮಾಡಲು ಶುಭದಿನ
  • ಸಾಂಸಾರಿಕ ಅನುಕೂಲಗಳು ಹೆಚ್ಚಾಗುವ ದಿನ
  • ಇಂದು ನಿಮಗೆ ಸಂಪೂರ್ಣವಾಗಿ ಶುಭದಿನ
  • ಬಾಕಿ ಬರಬೇಕಾದ ಹಣವು ಇಂದು ನಿಮ್ಮ ಕೈಸೇರುವ ಸಾಧ್ಯತೆ ಇದೆ
  • ಕುಲದೇವತಾ ಆರಾಧನೆ ಮಾಡಿ 

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment