ಮನಸ್ಸಿಗೆ ಸಮಾಧಾನ, ನೆಮ್ಮದಿ -ಈ ರಾಶಿಯವರಿಗೆ ಇವತ್ತು ಗುಡ್​ನ್ಯೂಸ್​..!

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಪಾಲ್ಗುಣ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಕೃತ್ತಿಕಾ ನಕ್ಷತ್ರ. ರಾಹುಕಾಲ ಶನಿವಾರ ಮಧ್ಯಾಹ್ನ 3.00 ರಿಂದ 4.30 ವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ- ವಿಜಯ ದೇವರಕೊಂಡ ವಿವಾಹ ಆಗ್ತಿರುವ ಹೋಟೇಲ್ ಯಾವುದು? ವಿಲ್ಲಾ ಬಾಡಿಗೆ ಎಷ್ಟು? ಹೋಟೇಲ್ ನಲ್ಲಿ ಏನೇನಿದೆ?

ಮೇಷ

  • ಆಸ್ತಿ ಬದಲಾವಣೆ ವಿಚಾರದಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
  • ನಿಮ್ಮ ಬಂಧುಗಳಲ್ಲಿ ಮಂಗಳ ಕಾರ್ಯದಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
  • ಕೋರ್ಟ್ ವಿಚಾರದಲ್ಲಿ ವಿಶೇಷವಾದ ಚರ್ಚೆ ಸಾಧ್ಯತೆ
  • ಆರೋಗ್ಯ ಹಣದ ಸಮಸ್ಯೆ ಕುರಿತು ಸರಿಯಾದ ನಿರ್ಧಾರ ಮಾಡಿದರೆ ಒಳ್ಳೆಯದು
  • ದೈಹಿಕವಾದ ಆಯಾಸದಿಂದ ಕೋಪ ಹೆಚ್ಚಾಗಬಹುದು
  • ನಿಮ್ಮ ಶಕ್ತಿಯನ್ನು ಸರಿಯಾಗಿ ವಿನಿಯೋಗಿಸಿಕೊಳ್ಳಿ
  • ಶ್ರೀರಾಮ ಪರಿವಾರ ದೇವರನ್ನು ಪ್ರಾರ್ಥಿಸಿ

ವೃಷಭ

  • ನಿಮ್ಮ ಕೆಲಸದಲ್ಲಿ ಜಾಗ್ರತೆಯಿಂದಿರಿ
  • ಬೇರೆಯವರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ
  • ಅತಿಯಾದ ಯೋಚನೆಗಳು ಆತಂಕಕಾರಿಯಾಗಬಹುದು 
  • ಸ್ವಸಾಮರ್ಥ್ಯದಿಂದ ಜನರ ಮೆಚ್ಚುಗೆ ದೊರೆಯಬಹುದು
  • ನಿವೃತ್ತ ಜೀವನ ನಡೆಸುತ್ತಿರುವವರಿಗೆ ಬಹಳ ಶುಭದಿನ
  • ಮಾಧ್ಯಮದಲ್ಲಿ ಕೆಲಸ ನಿರ್ವಹಣೆ ಮಾಡುವವರಿಗೆ ತೃಪ್ತಿ ಲಾಭವಿದೆ
  • ಸಾಕು ಪ್ರಾಣಿಗಳಿಗೆ ಆಹಾರ ನೀಡಿ

ಮಿಥುನ

  • ಬೇರೆಯವರನ್ನು ಅನುಸರಿಸಿ ಆದರೆ ಅನುಕರಿಸಬೇಡಿ
  • ನಿಮ್ಮ ರಹಸ್ಯ ವಿಚಾರಗಳಿಂದ ನಿಮಗೇ ತೊಂದರೆ ಅವಮಾನ ಸಾಧ್ಯತೆ
  • ಸ್ವಂತ ಬುದ್ದಿಯಿಂದ ನಿಮ್ಮ ಕೆಲಸವನ್ನ ಮಾಡಿ 
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭ ದಿನ
  • ಮಕ್ಕಳಿಂದ ತೊಂದರೆ,ಸಮಸ್ಯೆಯಿದೆ ಅದರ ಬಗ್ಗೆ ಗಮನವಿರಲಿ
  • ನಿಮ್ಮ ತಪ್ಪು ನಿಮ್ಮನ್ನು ಕಾಡಬಹುದು
  • ನಿಮ್ಮ ವ್ಯಾಪಾರ ವ್ಯವಹಾರ ವೇಗವಾಗಿ ನಡೆಯುವ ದಿನ
  • ಸುಬ್ರಹ್ಮಣ್ಯನಿಗೆ ಭಸ್ಮದಿಂದ ಅರ್ಚನೆ ಮಾಡಿಸಿ

ಕಟಕ

  • ಮಕ್ಕಳಿಂದ ಸಂತೋಷ ಸಿಗುವ ದಿನ
  • ಹಣದ ಅಭಾವ ತುಂಬಾ ಬೇಸರ ವೈರಾಗ್ಯದ ಮಾತು ಉಂಟಾಗಬಹುದು
  • ನಿಮ್ಮ ವ್ಯವಹಾರದ ನಿರ್ಧಾರಗಳನ್ನು ನೀವೇ ಮಾಡಿದರೆ ಒಳ್ಳೆಯದು
  • ಉದ್ಯೋಗ ವೃತ್ತಿಯಲ್ಲಿ ಬದಲಾವಣೆಯಾಗಬಹುದು
  • ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
  • ಬೇರೆಯವರ ಸಹಾಯ ನಿರೀಕ್ಷೆಯಲ್ಲಿದ್ದರೆ ನಿರಾಸೆ ಉಂಟು ಮಾಡಬಹುದು
  • ಗುರುದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಸಿಂಹ

  • ಪ್ರೇಮಿಗಳಿಗೆ ಅಪಘಾತ ಸಂಭವಿಸುವ ಸೂಚನೆಯಿದೆ ಎಚ್ಚರ
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಿನ್ನಡೆ ಸಾಧ್ಯತೆಯಿದೆ
  • ನಿಮ್ಮ ಆಸೆಗಳು ಇಂದು ಈಡೇರಬಹುದು
  • ಶ್ರೀಮಂತ ಗಣ್ಯ ವ್ಯಕ್ತಿಯ ಭೇಟಿಗೆ ಅವಕಾಶವಿದೆ ಲಾಭವಿದೆ
  • ಆರೋಗ್ಯದಲ್ಲಿ ಸಮಸ್ಯೆಗಳು ಬರದಂತೆ ಕಾಪಾಡಿಕೊಳ್ಳಿ
  • ಮನೆಯವರಿಗೆ ಬಹಳ ವಿಧೇಯರಾಗಿ ವರ್ತಿಸಿ
  • ಅಘೋರ ರುದ್ರನನ್ನು ಆರಾಧಿಸಿ

ಕನ್ಯಾ

  • ವೃತ್ತಿಯಲ್ಲಿ ಲಾಭದ ಜೊತೆ ಸಾಧನೆ ಮಾಡುವ ಅವಕಾಶವಿದೆ
  • ಜನ ಮನ್ನಣೆ ಗೌರವ ಪುರಸ್ಕಾರ ಸಿಗಬಹುದು
  • ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಉಳಿಯಬಹುದು
  • ಯಾವುದೇ ರೀತಿಯ ಬದಲಾವಣೆಯ ವಿಚಾರವನ್ನು ತಲೆಯಿಂದ ತೆಗೆದುಹಾಕಿ
  • ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ
  • ಸಾಧು-ಸಂತರ ಸಮಾಗಮವಾಗಬಹುದು, ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಚರ್ಚೆ ಸಾಧ್ಯತೆ
  • ಮಕ್ಕಳಿಗೆ ಸಿಹಿ ಪದಾರ್ಥ ಹಂಚಿ

ತುಲಾ

  • ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
  • ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಬೇರೆಯವರು ಬರದಂತೆ ಗಮನಿಸಿ
  • ಸಣ್ಣಪುಟ್ಟ ವಿಚಾರಗಳಿಗೆ ಜಗಳ ಮಾಡಬೇಡಿ
  • ಕೆಲಸದಿಂದ ಆಯಾಸ ಬೇಸರ ಆಲಸ್ಯ ಕಾಡಬಹುದು ಜಾಗ್ರತೆವಹಿಸಿ
  • ಸಾಮಾಜಿಕ ಸ್ಥಾನ ಮಾನ ಅಪೇಕ್ಷಿಸುವ ದಿನ
  • ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ
  • ವೃದ್ಧರಿಗೆ ಹಣ್ಣು ಕೊಡಿ

ವೃಶ್ಚಿಕ

  • ಲೇಖಕರಿಗೆ ಉತ್ತಮವಾದ ದಿನ
  • ಕಷ್ಟಗಳನ್ನು ನಿಮ್ಮ ಮನಸ್ಥೈರ್ಯದಿಂದ ದೂರ ಮಾಡಿಕೊಳ್ಳಬೇಕು
  • ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಬರಬಹುದು
  • ನೆಂಟರಿಷ್ಟರಲ್ಲಿ ಸ್ವಲ್ಪ ಅಂತರ ಕಾಯ್ದುಕೊಳ್ಳಿ ಇಲ್ಲದಿದ್ದರೆ ಅಪಮಾನ ಸಾಧ್ಯತೆ
  • ಇಂದು ಪೋಷಕರಿಗೆ ಬೇಸರ ಮಾಡಬಾರದು
  • ಹಳೆಯ ನೆನಪುಗಳಿಂದ ಸಂತೋಷವಾಗಬಹುದು
  • ಪಾರ್ವತಿ-ಪರಮೇಶ್ವರರನ್ನು ಪ್ರಾರ್ಥಸಿ

ಧನುಸ್ಸು

  • ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲ ದಿನ
  • ಬಂಧುಗಳಲ್ಲಿ ವ್ಯವಹಾರಿಕ ವಿಚಾರಕ್ಕೆ ಬೇಸರ, ಕಲಹ ಸಾಧ್ಯತೆ
  • ಜೀವನದಲ್ಲಿ ಅಸ್ಥಿರತೆ ಕಾಡಬಹುದು
  • ಮಕ್ಕಳ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಸಾಧ್ಯತೆ
  • ಇಂದು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
  • ಮನೆ ಕಟ್ಟುವ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಸಾಧ್ಯತೆ 
  • ಇಂದ್ರಾಕ್ಷಿ ದೇವಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಅಪರೂಪದ ವ್ಯಕ್ತಿಯ ಭೇಟಿ ಅಥವಾ ಆಗಮನದಿಂದ ಸಂತೋಷ ಸಾಧ್ಯತೆ
  • ಮನೆ, ಮಕ್ಕಳು ತಮ್ಮ ಕರ್ತವ್ಯ ನಿರ್ವಹಿಸುವ ಕುಟುಂಬಸ್ಥರಿಂದ ನೆಮ್ಮದಿ
  • ರಾಜಕಾರಣಿಗಳಿಗೆ ಶುಭವಾದ ದಿನ
  • ಮನೋರಂಜನೆಗೆ ಅವಕಾಶ ಸಿಗುವ ದಿನ
  • ರಾಜಕೀಯ ವಿಚಾರಗಳಲ್ಲಿ ಸ್ವಲ್ಪ ಸಮಾಧಾನ ಸಿಗುವ ದಿನ
  • ಆರ್ಥಿಕ ಬಿಕ್ಕಟ್ಟು ಎದುರಾಗಬಹುದು ಆದರೆ ಸಾಯಂಕಾಲಕ್ಕೆ ಸರಿ ಹೋಗುವ ಸೂಚನೆಯಿದೆ 
  • ಕುಬೇರನನ್ನು ಪ್ರಾರ್ಥನೆ ಮಾಡಿ


ಕುಂಭ

  • ಇಂದು ವಿನಾಕಾರಣ ಪ್ರಯಾಣ ಬೇಡವೆಂಬ ಸೂಚನೆಯಿದೆ
  • ಆರೋಗ್ಯ ಸಮಸ್ಯೆ, ಆಲಸ್ಯ ಕಾಡಬಹುದು
  • ಅಪರಿಚಿತರಲ್ಲಿ ಯಾವುದೇ ರೀತಿಯ ನಂಬಿಕೆ ಬೇಡ
  • ಮಕ್ಕಳ ದೂರ ಪ್ರಯಾಣದ ವಿಚಾರದಲ್ಲಿ ಚರ್ಚೆ ನಡೆಯಬಹುದು
  • ದಾಂಪತ್ಯದಲ್ಲಿ ಸ್ವಲ್ಪ ಕಿರಿಕಿರಿ ಸಾಧ್ಯತೆಯಿದೆ
  • ಹಿರಿಯರ ಸಲಹೆ ಬಹಳ ಮುಖ್ಯವಾಗುತ್ತದೆ ತಾತ್ಸಾರ ಬೇಡ
  • ಕುಲದೇವರಿಗೆ ತುಪ್ಪದ ದೀಪ ಹಚ್ಚಿ

ಮೀನ

  • ಇಂದು ತುಂಬಾ ತಾಳ್ಮೆಯಿಂದ ವರ್ತಿಸಿ
  • ವೃತ್ತಿ ಜೀವನ ಬದಲಾಯಿಸಲು ಈಗ ಸೂಕ್ತ ಸಮಯವಲ್ಲ
  • ಇಂದು ಹಳೆಯ ಸ್ನೇಹಿತರು ಸಂಪರ್ಕಕ್ಕೆ ಬರಬಹುದು
  • ನಿಮ್ಮ ಯೋಜನೆಗೆ ಕುಟುಂಬದವರ ಸಂಪೂರ್ಣ ಸಹಕಾರ ಸಿಗುವ ದಿನ
  • ಪ್ರತೀಕ್ಷಣವು ಜಾಗರೂಕರಾಗಿರಬೇಕಾದ ದಿನ
  • ಗೌರವಾನ್ವಿತ ವ್ಯಕ್ತಿಗಳು ಉತ್ತಮವಾದ ಸಲಹೆಗಳನ್ನ ನೀಡಬಹುದು
  • ವಿಘ್ನೇಶ್ವರನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment