ಭಾರತದಲ್ಲಿ ಹೇಗೆ ಬೌದ್ಧ, ಸಿಖ್ ಹಾಗೂ ಜೈನ ಧರ್ಮಗಳು ಇದವಲ್ಲಾ, ಅದೇ ರೀತಿ ಬಸವ ಧರ್ಮ ಬೇಕು. ಭಾರತದಲ್ಲಿ ಹಿಂದೂ ಧರ್ಮ ಇದೆಯಲ್ಲಾ ಅದೇ ರೀತಿ ಬಸವ ಧರ್ಮ ಇರಲಿ. ಸಿಎಂ ಸಿದ್ದರಾಮಯ್ಯ ತಲೆಗೆ ಕಟ್ಟೋಕೆ ಆಗಲ್ಲ. ಕಳೆದ ಬಾರಿ ಮಾಡಿದ್ದರು. ಆದರೆ ಈ ಬಾರಿ ಜನರು ತುಂಬಾ ಜಾಗರತೆ ಆಗಿದ್ದರಿಂದ ಹಾಗೇ ಆಗಲ್ಲ. ಯಾರದೂ ಆಟ ನಡೆಯಲ್ಲ, ಎಲ್ಲರೂ ಒಟ್ಟಿಗೆ ಇದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.
ಬೌದ್ಧ, ಸಿಖ್ ಹಾಗೂ ಜೈನರಿಗೆ ಪ್ರತ್ಯೇಕ ಧರ್ಮ ಕೊಟ್ಟಂತೆ ವೀರಶೈವ ಲಿಂಗಾಯತರಿಗೆ ಸೇರಿಸಿಕೊಂಡು, ಎಲ್ಲ ಒಳ ಪಂಗಡಗಳಿಗೆ ಸೇರಿಸಿಕೊಂಡು ಪ್ರತ್ಯೇಕ ಧರ್ಮ ಕೊಡಬೇಕು. ಇದಕ್ಕೆ ಮಾನ್ಯತೆ ಕೊಡಬೇಕು ಎಂದು ಪದೇ ಪದೇ ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡಿದ್ದೇವೆ. ಜನಗಣತಿಯಲ್ಲಿ ಪ್ರತ್ಯೇಕ ಕಾಲಂ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಆದರೆ ಇದುವರೆಗೂ ಸರ್ಕಾರ ಅದನ್ನು ಗುರುತಿಸಿಲ್ಲ. ಪ್ರತ್ಯೇಕ ಧರ್ಮದ ವಿಚಾರದಲ್ಲಿ ರಾಜ್ಯ ಸರ್ಕಾರದ ಯಾವುದೇ ಸಂಬಂಧ ಇಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ