Advertisment

ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ಅರ್ಜಿ ಕೋರ್ಟ್ ನಲ್ಲಿ ವಜಾ: ಮುತ್ಯಾ, ಭಕ್ತರಿಗೆ ಭಾರಿ ಅಘಾತ

ಪೋಕ್ಸೋ ಕೇಸ್ ನಲ್ಲಿ ಆರೋಪಿಯಾಗಿರುವ ಯಾದಗಿರಿ ಜಿಲ್ಲೆಯ ಮಲ್ಲಿಕಾರ್ಜುನ ಮುತ್ಯಾ ಕೋರ್ಟ್ ಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರವಾಗಿದೆ. ಇದರಿಂದ ಮಲ್ಲಿಕಾರ್ಜುನ ಮುತ್ಯಾ ಹಾಗೂ ಭಕ್ತರಿಗೆ ಭಾರಿ ಅಘಾತವಾಗಿದೆ. ಈಗ ಪೊಲೀಸರು ಆರೋಪಿಯನ್ನು ಬಂಧಿಸುತ್ತಾರೋ ಇಲ್ಲವೋ ಎಂಬ ಕುತೂಹಲ ಇದೆ.

author-image
Chandramohan
Mallikarjuna mutya
Advertisment


ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ತೋರಿದ ಕೇಸ್ ನಲ್ಲಿ  ಮಲ್ಲಿಕಾರ್ಜುನ ಮುತ್ಯಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರವಾಗಿದೆ. ಯಾದಗಿರಿ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ. ಇದರಿಂದ   ಮಲ್ಲಿಕಾರ್ಜುನ ಮುತ್ಯಾ ಮತ್ತು ಭಕ್ತರಿಗೆ ತೀವ್ರ ಶಾಕ್ ಆಗಿದೆ. ಮಲ್ಲಿಕಾರ್ಜುನ  ಮುತ್ಯಾಗೆ ಜಾಮೀನು ನೀಡದಂತೆ ಸರ್ಕಾರಿ ವಕೀಲರಿಂದ ಪ್ರಬಲ ವಾದ ಮಂಡನೆ ನಡೆದಿತ್ತು.  ಮುತ್ಯಾನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ.  ಯಾದಗಿರಿ ಜಿಲ್ಲೆಯ ಗೋಗಿ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.   ನಿರೀಕ್ಷಣಾ  ಜಾಮೀನು ಸಿಗುವ ವಿಶ್ವಾಸದಲ್ಲಿ‌‌ ಇದ್ದ ಮುತ್ಯಾಗೆ ಭಾರಿ ಆಘಾತ ಎದುರಾಗಿದೆ. 
ಪೊಲೀಸ್   ವಿಚಾರಣೆ ವೇಳೆ ಮುತ್ಯಾನ‌‌ ಮೊಬೈಲ್ ಅನ್ನು  ತನಿಖಾಧಿಕಾರಿ ಶರಣಗೌಡ ನಾಮನವರ್ ಅವರು ಜಫ್ತಿ ಮಾಡಿದ್ದಾರೆ.   ಪೊಲೀಸರು ಈಗಲಾದರೂ ಮುತ್ಯಾನ ಬಂಧಿಸುತ್ತಾರೋ ಇಲ್ಲವೋ ಎಂಬುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. 
ಕೋರ್ಟ್ ನ ಇಂದಿನ ಆದೇಶವು ಮಲ್ಲಿಕಾರ್ಜುನ ಮುತ್ಯಾ ಹಾಗೂ ಭಕ್ತರಿಗೆ ಭಾರಿ ಅಘಾತ ತಂದಿದೆ.

Advertisment

 ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

mallikarjuna muthya anticipatory bail rejected by court
Advertisment
Advertisment
Advertisment