newsfirstkannada.com

9 ವರ್ಷದ ಬಾಲಕಿ ಮೇಲೆ ಮಲತಾಯಿ ಧೋರಣೆ; ಐರನ್‌ ಬಾಕ್ಸ್​ನಿಂದ ಸುಟ್ಟು ವಿಕೃತಿ

Share :

Published February 25, 2024 at 3:08pm

    ಪುಟ್ಟ ಬಾಲಕಿ ಮೇಲೆ ಅಮಾನುಷ ವರ್ತನೆ

    ಮಲತಾಯಿಯಿಂದ ಬಾಲಕಿ ಮೇಲೆ ಧೋರಣೆ

    ಬಾಲಕಿ ರಕ್ಷಣೆ ಮಾಡಿ ಪೊಲೀಸರಿಗೆ ದೂರು

ನೆಲಮಂಗಲ: ಮಲತಾಯಿಯೊಬ್ಬಳು ಪುಟ್ಟ ಬಾಲಕಿ ಮೇಲೆ ಅಮಾನುಷ ವರ್ತನೆ ತೋರಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಂಚೇಪಾಳ್ಯ ಪ್ರಕೃತಿ ಲೇಔಟ್ ನಲ್ಲಿ ನಡೆದಿದೆ. ಮಲತಾಯಿ 9 ವರ್ಷದ ಮಾನ್ವಿತಾ ಎಂಬ ಬಾಲಕಿ ಕಾಲಿಗೆ ಐರನ್‌ ಬಾಕ್ಸ್ ನಿಂದ ಸುಟ್ಟು ವಿಕೃತಿ ಮೆರೆದಿದ್ದಾಳೆ.

ಮಾನ್ವಿತಾ ತಾಯಿ ಪವಿತ್ರ ಚಿಕ್ಕ ವಯಸ್ಸಿನಲ್ಲೇ ನಾಪತ್ತೆಯಾಗಿದ್ದಳು. ಆದರೆ ಅಜ್ಜಿ ಮನೆಯಲ್ಲಿ ಇದ್ದ ಬಾಲಕಿಯನ್ನ ಮಲತಾಯಿ ಮಮತ ಮನೆಗೆ ಕರೆತಂದು ವಿಕೃತ ಮೆರೆದಿದ್ದಳು. ಆದರೆ ಘಟನೆ ಬೆಳಕಿಗೆ ಬಂದಂತೆ ಸ್ಥಳೀಯರಿಂದ ಬಾಲಕಿ ರಕ್ಷಣೆ ಮಾಡಿ ಪೊಲೀಸರಿಗೆ ದೂರು ನೀಡಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

9 ವರ್ಷದ ಬಾಲಕಿ ಮೇಲೆ ಮಲತಾಯಿ ಧೋರಣೆ; ಐರನ್‌ ಬಾಕ್ಸ್​ನಿಂದ ಸುಟ್ಟು ವಿಕೃತಿ

https://newsfirstlive.com/wp-content/uploads/2024/02/Malathai.jpg

    ಪುಟ್ಟ ಬಾಲಕಿ ಮೇಲೆ ಅಮಾನುಷ ವರ್ತನೆ

    ಮಲತಾಯಿಯಿಂದ ಬಾಲಕಿ ಮೇಲೆ ಧೋರಣೆ

    ಬಾಲಕಿ ರಕ್ಷಣೆ ಮಾಡಿ ಪೊಲೀಸರಿಗೆ ದೂರು

ನೆಲಮಂಗಲ: ಮಲತಾಯಿಯೊಬ್ಬಳು ಪುಟ್ಟ ಬಾಲಕಿ ಮೇಲೆ ಅಮಾನುಷ ವರ್ತನೆ ತೋರಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಂಚೇಪಾಳ್ಯ ಪ್ರಕೃತಿ ಲೇಔಟ್ ನಲ್ಲಿ ನಡೆದಿದೆ. ಮಲತಾಯಿ 9 ವರ್ಷದ ಮಾನ್ವಿತಾ ಎಂಬ ಬಾಲಕಿ ಕಾಲಿಗೆ ಐರನ್‌ ಬಾಕ್ಸ್ ನಿಂದ ಸುಟ್ಟು ವಿಕೃತಿ ಮೆರೆದಿದ್ದಾಳೆ.

ಮಾನ್ವಿತಾ ತಾಯಿ ಪವಿತ್ರ ಚಿಕ್ಕ ವಯಸ್ಸಿನಲ್ಲೇ ನಾಪತ್ತೆಯಾಗಿದ್ದಳು. ಆದರೆ ಅಜ್ಜಿ ಮನೆಯಲ್ಲಿ ಇದ್ದ ಬಾಲಕಿಯನ್ನ ಮಲತಾಯಿ ಮಮತ ಮನೆಗೆ ಕರೆತಂದು ವಿಕೃತ ಮೆರೆದಿದ್ದಳು. ಆದರೆ ಘಟನೆ ಬೆಳಕಿಗೆ ಬಂದಂತೆ ಸ್ಥಳೀಯರಿಂದ ಬಾಲಕಿ ರಕ್ಷಣೆ ಮಾಡಿ ಪೊಲೀಸರಿಗೆ ದೂರು ನೀಡಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More