newsfirstkannada.com

ವಿದ್ಯಾರ್ಥಿಗಳೇ.. ನಾಳೆ ಸ್ವಯಂ ರಜೆ ಪಡೆಯಿರಿ; ಯಶ್ ಪಾಲ್ ಸುವರ್ಣ ಕರೆ 

Share :

Published January 21, 2024 at 7:13am

Update January 21, 2024 at 7:42am

    ರಜೆ ಮಾಡಿ ರಾಮೋತ್ಸವದಲ್ಲಿ ಭಾಗಿಯಾಗಿ ಎಂದ ಶಾಸಕ

    ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆ ಹೊಂದಿದೆ

    ಕರ್ನಾಟಕ ಮಾತ್ರ ರಜೆ ಘೋಷಣೆ ಮಾಡಿಲ್ಲ ಎಂದು ಬರೆದುಕೊಂಡ ಶಾಸಕ

ಉಡುಪಿ: ವಿದ್ಯಾರ್ಥಿಗಳೇ ಜನವರಿ 22ರಂದು ಸ್ವಯಂ ರಜೆ ಪಡೆಯಿರಿ ಅಂತ ಉಡುಪಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಕರೆ ಕೊಟ್ಟಿದ್ದಾರೆ. ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸ್ವಯಂ ರಜೆ ಪಡೆಯಲು ಕರೆ ನೀಡಿದ್ದಾರೆ.

ರಜೆ ಮಾಡಿ ರಾಮೋತ್ಸವದಲ್ಲಿ ಭಾಗಿಯಾಗಿ, ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆ ಹೊಂದಿದೆ. ರಜೆ ಘೋಷಣೆ ಮಾಡದೆ ಹಿಂದುಗಳ ಭಾವನೆ ಜೊತೆ ಚೆಲ್ಲಾಟ ಆಡುತ್ತಿದೆ. ಹಲವಾರು ರಾಜ್ಯಗಳು ರಜೆ ಘೋಷಿಸಿದರೂ ಕರ್ನಾಟಕ ಮಾತ್ರ ರಜೆ ಘೋಷಣೆ ಮಾಡಿಲ್ಲ ಅಂತ ಪೋಸ್ಟ್​ ಮಾಡಿ ಕಿಡಿಕಾರಿದ್ದಾರೆ.

 

ಇನ್ನೂ ರಾಜ್ಯದ ರಾಮಭಕ್ತರು ನಾಳೆ ಪುಣ್ಯ ಪಾವನ ಕ್ಷಣ ಸಂಭ್ರಮಿಸಲು ಕರೆ ಕೊಟ್ಟಿದ್ದಾರೆ. ಒಂದು ವೇಳೆ ರಜೆ ಪಡೆದವರ ವಿರುದ್ಧ ಕ್ರಮ ಕೈಗೊಂಡರೆ ಶಾಸಕನಾಗಿ ಜೊತೆಗೆ ನಿಲ್ಲುತ್ತೇನೆ ಅಂತ ಭರವಸೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳೇ.. ನಾಳೆ ಸ್ವಯಂ ರಜೆ ಪಡೆಯಿರಿ; ಯಶ್ ಪಾಲ್ ಸುವರ್ಣ ಕರೆ 

https://newsfirstlive.com/wp-content/uploads/2024/01/Yash-pal-Suvarna.jpg

    ರಜೆ ಮಾಡಿ ರಾಮೋತ್ಸವದಲ್ಲಿ ಭಾಗಿಯಾಗಿ ಎಂದ ಶಾಸಕ

    ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆ ಹೊಂದಿದೆ

    ಕರ್ನಾಟಕ ಮಾತ್ರ ರಜೆ ಘೋಷಣೆ ಮಾಡಿಲ್ಲ ಎಂದು ಬರೆದುಕೊಂಡ ಶಾಸಕ

ಉಡುಪಿ: ವಿದ್ಯಾರ್ಥಿಗಳೇ ಜನವರಿ 22ರಂದು ಸ್ವಯಂ ರಜೆ ಪಡೆಯಿರಿ ಅಂತ ಉಡುಪಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಕರೆ ಕೊಟ್ಟಿದ್ದಾರೆ. ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸ್ವಯಂ ರಜೆ ಪಡೆಯಲು ಕರೆ ನೀಡಿದ್ದಾರೆ.

ರಜೆ ಮಾಡಿ ರಾಮೋತ್ಸವದಲ್ಲಿ ಭಾಗಿಯಾಗಿ, ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆ ಹೊಂದಿದೆ. ರಜೆ ಘೋಷಣೆ ಮಾಡದೆ ಹಿಂದುಗಳ ಭಾವನೆ ಜೊತೆ ಚೆಲ್ಲಾಟ ಆಡುತ್ತಿದೆ. ಹಲವಾರು ರಾಜ್ಯಗಳು ರಜೆ ಘೋಷಿಸಿದರೂ ಕರ್ನಾಟಕ ಮಾತ್ರ ರಜೆ ಘೋಷಣೆ ಮಾಡಿಲ್ಲ ಅಂತ ಪೋಸ್ಟ್​ ಮಾಡಿ ಕಿಡಿಕಾರಿದ್ದಾರೆ.

 

ಇನ್ನೂ ರಾಜ್ಯದ ರಾಮಭಕ್ತರು ನಾಳೆ ಪುಣ್ಯ ಪಾವನ ಕ್ಷಣ ಸಂಭ್ರಮಿಸಲು ಕರೆ ಕೊಟ್ಟಿದ್ದಾರೆ. ಒಂದು ವೇಳೆ ರಜೆ ಪಡೆದವರ ವಿರುದ್ಧ ಕ್ರಮ ಕೈಗೊಂಡರೆ ಶಾಸಕನಾಗಿ ಜೊತೆಗೆ ನಿಲ್ಲುತ್ತೇನೆ ಅಂತ ಭರವಸೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More