ಹೊಸ ಸಿನಿಮಾ ಶೂಟಿಂಗ್​​.. ಕಾರು ಸ್ಟಂಟ್ ಮಾಡುವಾಗ ಉಸಿರು ಚೆಲ್ಲಿದ ಸಾಹಸ ಕಲಾವಿದ ರಾಜು

author-image
Bheemappa
Updated On
ಹೊಸ ಸಿನಿಮಾ ಶೂಟಿಂಗ್​​.. ಕಾರು ಸ್ಟಂಟ್ ಮಾಡುವಾಗ ಉಸಿರು ಚೆಲ್ಲಿದ ಸಾಹಸ ಕಲಾವಿದ ರಾಜು
Advertisment
  • ಕಾರನ್ನು ಉರುಳಿಸುವ ಸ್ಟಂಟ್ ಮಾಡುವಾಗ ನಡೆದ ಘಟನೆ
  • ಸಿನಿ ರಂಗದಲ್ಲಿ ತನ್ನ ಸ್ಟಂಟ್​​ಗಳಿಂದಲೇ ಎಲ್ಲರಿಗೂ ಪರಿಚಯ
  • ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ನೀಡಿದ ವಿಶಾಲ್

ಕಾಲಿವುಡ್​ ಸ್ಟಾರ್​ ಆರ್ಯ ನಟನೆಯ ಹೊಸ ಸಿನಿಮಾದ ಶೂಟಿಂಗ್ ಮಾಡುವ ವೇಳೆ ಸ್ಟಂಟ್​ಮ್ಯಾನ್ ಒಬ್ಬರು ನಿಧನರಾಗಿದ್ದಾರೆ. ಶೂಟಿಂಗ್​ನಲ್ಲಿ ಕಾರು ಸ್ಟಂಟ್ ಮಾಡುವಾಗ ಈ ಅವಘಡ ನಡೆದಿದೆ ಎಂದು ಹೇಳಲಾಗಿದೆ.

ತಮಿಳು ಸಿನಿ ರಂಗದ ಸಾಹಸ ಕಲಾವಿದ ರಾಜು ಎನ್ನುವರು ಕೊನೆಯುಸಿರೆಳೆದಿದ್ದಾರೆ. ತಮಿಳು ಸಿನಿಮಾದ ಸ್ಟಾರ್ ನಟ ಆರ್ಯ ಅವರ ಹೊಸ ಸಿನಿಮಾದ ಶೂಟಿಂಗ್​ನಲ್ಲಿ ಕಾರು ಸ್ಟಂಟ್​ ಮಾಡುವ ಸನ್ನಿವೇಶ ಇತ್ತು. ಇದಕ್ಕಾಗಿ ಸಾಹಸ ಕಲಾವಿದ ರಾಜು ಅವರಿಂದ ಕಾರು ಸ್ಟಂಟ್​ ಮಾಡಿಸಲಾಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿ ಘಟನೆಯಲ್ಲಿ ಸ್ಟಂಟ್ ಮ್ಯಾನ್ ರಾಜು ಅವರು ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಕರುಣ್ ನಾಯರ್​ಗೆ ಇದು ಒಳ್ಳೆ ಸರಣಿ.. ಕನ್ನಡಿಗನ ಬೆನ್ನಿಗೆ ನಿಂತ ಲೆಜೆಂಡರಿ ಕ್ರಿಕೆಟರ್ ಅನಿಲ್​ ಕುಂಬ್ಳೆ, ಏನಂದ್ರು?

publive-image

ಈ ಕುರಿತು ತಮಿಳು ನಟ ವಿಶಾಲ್ ಅವರು ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ನಾನು, ರಾಜು ಸಾಕಷ್ಟು ಸಿನಿಮಾಗಳಲ್ಲಿ ಸ್ಟಂಟ್​ಗಳನ್ನು ಮಾಡಿದ್ದೇವೆ. ಅವರನ್ನು ಕಳೆದುಕೊಂಡಿರುವುದು ನಮಗೆ ತುಂಬಾ ದುಃಖ ತರಿಸಿದೆ. ಕಾರು ಉರುಳಿಸುವ ಸನ್ನಿವೇಶದ ಸ್ಟಂಟ್ ಮಾಡುವಾಗ ಈ ಘಟನೆ ನಡೆದಿದೆ. ತಮಿಳು ಸಿನಿ ರಂದಲ್ಲಿ ಕೆಲವು ವರ್ಷಗಳಿಂದ ರಾಜು ರಿಸ್ಕ್​ ತೆಗೆದುಕೊಂಡು ಸ್ಟಂಟ್​ಗಳನ್ನು ಮಾಡುತ್ತಿದ್ದರು. ಆದರೆ ಇಂದು ಕೆಚ್ಚೆದೆಯ ವ್ಯಕ್ತಿ ನಮ್ಮನ್ನು ಅಗಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ತಮಿಳು ಸಿನಿಮಾ ಶೂಟಿಂಗ್​ಗಳಲ್ಲಿ ಸ್ಟಂಟ್ ಮಾಡುತ್ತಿದ್ದ ರಾಜು ಎಲ್ಲರಿಗೂ ಪರಿಚಿತರಾಗಿದ್ದರು. ಪಾ.ರಂಜೀತ್ ನಿರ್ದೇಶನದಲ್ಲಿ ಆರ್ಯ ಅವರು ನಟಿಸುತ್ತಿರುವ ಹೊಸ ಸಿನಿಮಾದ ಶೂಟಿಂಗ್​ನಲ್ಲಿ ರಾಜು ಸ್ಟಂಟ್ ಮಾಡುವಾಗ ಇದು ನಡೆದಿದೆ ಎಂದು ಚಿತ್ರತಂಡ ಅಧಿಕೃತ ಹೇಳಿಕೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment