ಆರೋಪಿಗಳನ್ನ ಕರೆ ತರುವಾಗ ಭೀಕರ ಅಪಘಾತ.. ಸಬ್ ಇನ್‌ಸ್ಪೆಕ್ಟರ್‌ ನಿಧನ

author-image
Veena Gangani
Updated On
ಆರೋಪಿಗಳನ್ನ ಕರೆ ತರುವಾಗ ಭೀಕರ ಅಪಘಾತ.. ಸಬ್ ಇನ್‌ಸ್ಪೆಕ್ಟರ್‌ ನಿಧನ
Advertisment
  • ಆರೋಪಿಗಳನ್ನ ಬಂಧಿಸಿ ಕರೆ ತರುವಾಗ ರಸ್ತೆ ಅಪಘಾತ
  • ತಲಘಟ್ಟಪುರ ಸಬ್ ಇನ್​ಸ್ಪೆಕ್ಟರ್ ಮೈಬೂಬ್ ಗುಡ್ಡಳ್ಳಿ ನಿಧನ
  • ನಿಂತಿದ್ದ ಕಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ

ಬೆಂಗಳೂರು: ಆರೋಪಿಗಳನ್ನ ಬಂಧಿಸಿ ಕರೆ ತರುವಾಗ ಭೀಕರ ಅಪಘಾತ ಸಂಭವಿಸಿ ಸಬ್ ಇನ್‌ಸ್ಪೆಕ್ಟರ್‌ ಜೀವಬಿಟ್ಟಿರೋ ಘಟನೆ ಸೂರ್ಯ ಸಿಟಿ ಬಳಿ ನಡೆದಿದೆ.

ಇದನ್ನೂ ಓದಿ:ಶೆಫಾಲಿ ಜೀವಬಿಟ್ಟಿದ್ದು ಹೃದಯಾಘಾತದಿಂದ ಅಲ್ವಾ? ನಟಿಯ ಸಾವಿನ ಹಿಂದೆ ಹಲವು ಅನುಮಾನ..!

ಜೂನ್ 24ರಂದು ಸೂರ್ಯ ಸಿಟಿ ಬಳಿ ಗಾಂಜಾ ಕೇಸ್​ವೊಂದರಲ್ಲಿ ಅತ್ತಿಬೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ಕರೆ ತರುವಾಗ ಈ ಅಪಘಾತ ಸಂಭವಿಸಿದೆ. ಪರಿಣಮ ತಲಘಟ್ಟಪುರ ಸಬ್ ಇನ್‌ಸ್ಪೆಕ್ಟರ್‌ ಮೈಬೂಬ್ ಗುಡ್ಡಳ್ಳಿ ಮೃತಪಟ್ಟಿದ್ದಾರೆ. ಮೊದಲು ಕಾರಿನಿಂದ ಹೊರಗೆ ಬಂದು ಸಬ್ ಇನ್‌ಸ್ಪೆಕ್ಟರ್‌ ಫೋನಿನಲ್ಲಿ ಮಾತಾಡುತ್ತಿದ್ದರು. ಆಗ ಇದೇ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಗುದ್ದಿದೆ.

publive-image

ಅಪಘಾತದ ಬಳಿಕ ಇಬ್ಬರು ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇದಾದ ಬಳಿಕ ಮೈಬೂಬ್ ಗುಡ್ಡಳ್ಳಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಇಂದು ಸಬ್ ಇನ್‌ಸ್ಪೆಕ್ಟರ್‌ ಮೈಬೂಬ್ ಗುಡ್ಡಳ್ಳಿ ನಿಧನರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment