ಸುಮಲತಾ ಅಂಬರೀಶ್ಗೆ ಇರುವುದು ನಾಲ್ಕೇ ಆಫ್ಷನ್
ಮೈತ್ರಿ ಅಭ್ಯರ್ಥಿ ಪರ ನಿಂತರೆ? ಪ್ಲಸ್, ಮೈನಸ್ ಏನು?
ಪಕ್ಷೇತರ ಅಭ್ಯರ್ಥಿಯಾದ್ರೆ? ಪ್ಲಸ್ ಏನು? ಮೈನಸ್ ಏನು?
ನಾಳೆ ರಾಜಕೀಯಕ್ಕೆ ಹೊಸ ಚಿತ್ರಣ ಸಿಗಲಿದೆ. ದಳ ವರ್ಸಸ್ ಕಾಂಗ್ರೆಸ್ ನೇರ ಹಣಾಹಣಿ ಇರುತ್ತಾ? ಈ ಹಣಾಹಣಿ ಏನಾದ್ರೂ ತ್ರಿಕೋನ ಸ್ಪರ್ಧೆಗೆ ತಿರುಗುತ್ತಾ? ತ್ರಿಕೋನ ಕದನವಾಗಲು ಸುಮಲತಾ ಸ್ಪರ್ಧಿಸಬೇಕು. ಹಾಗಾದ್ರೆ ಸುಮಲತಾ ಸ್ಪರ್ಧಿಸ್ತಾರಾ? ಇಲ್ವಾ? ಸ್ವಾಭಿಮಾನಿಯ ಮುಂದಿನ ನಡೆ ಏನು? ಈ ಪ್ರಶ್ನೆಗಳ ಸುತ್ತವೇ ರಾಜಕೀಯ ಸುತ್ತುತ್ತಿದೆ. ಈ ಸುತ್ತುವ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ.
ಸಕ್ಕರೆ ನಾಡಿನ ಸವಿಪಾಕ ಸವಿಯಲು ಸಮರ ನಡೆಯುತ್ತಿದೆ. ಕಳೆದ ಬಾರಿ ಸ್ವಾಭಿಮಾನಿ ಹೆಸರಲ್ಲಿ ಗೆದ್ದು ಬೀಗಿದ ಸುಮಲತಾ ಈ ಬಾರಿ ನಿರ್ಧಾರವೇ ಅತಂತ್ರದಲ್ಲಿ ಸಿಲುಕಿದೆ. ನಾಳೆ ರೆಬಲ್ ಲೇಡಿ ನಿರ್ಧಾರ ಪ್ರಕಟಿಸಲಿದ್ದು, ಕೌಂಡ್ ಡೌನ್ ಶುರುವಾಗಿದೆ. ಮಂಡ್ಯ ನೆಲದಲ್ಲೆ ಅಂತಿಮ ನಿರ್ಧಾರ ಘೋಷಣೆಗೆ ಸಿದ್ಧತೆ ನಡೆಸಿರುವ ಸುಮಲತಾ, ಮುಂದೇನು ಅನ್ನೋ ಚಿಂತೆಗೆ ಬಿದ್ದಿದ್ದಾರೆ.
ತ್ರಿಶಂಕು ಸ್ಥಿತಿಯಲ್ಲಿದ್ದಾರಾ ಮಂಡ್ಯದ ಗೌಡ್ತಿ?
ಏಪ್ರಿಲ್ 3 ರಂದು ತಮ್ಮ ನಿರ್ಧಾರ ಪ್ರಕಟಿಸಲು ಸುಮಲತಾ ಮುಂದಾಗಿದ್ದಾರೆ. ಸದ್ಯ ಯಾವ ನಿರ್ಧಾರ ಕೈಗೊಂಡರೇ ರಾಜಕೀಯ ಭವಿಷ್ಯ ಸೂಕ್ತ ಎಂಬ ಯೊಚನೆ ನಡೆಸ್ತಿದ್ದಾರೆ. ಅಷ್ಟಕ್ಕೂ ಸುಮಲತಾ ರಾಜಕೀಯ ನಡೆ ಏನಾಗಲಿದೆ? ಹಾಗಾದ್ರೆ ಅವರ ಮುಂದಿರುವ ಆಫ್ಷನ್ಗಳೇನು?
ಮೈತ್ರಿ ಅಭ್ಯರ್ಥಿ ಪರ ನಿಂತರೆ? ಪ್ಲಸ್ ಏನು?
ಮೈತ್ರಿ ಅಭ್ಯರ್ಥಿ ಪರ ನಿಂತರೆ? ಮೈನಸ್ ಏನು?
ಈ ಬೆಳವಣಿಗೆ ಸಾಧ್ಯವಿಲ್ಲ ಅನ್ನೋದಾದ್ರೆ, ಮೈತ್ರಿಗೆ ಸೆಡ್ಡು ಹೊಡೆಯಬೇಕು. ಸೆಡ್ಡು ಹೊಡೆಯಲು ಮತ್ತೆ ಪಕ್ಷೇತರರಾಗಿ ಕಣಕ್ಕಿಳಿಯಬೇಕು.
ಪಕ್ಷೇತರ ಅಭ್ಯರ್ಥಿಯಾದ್ರೆ? ಪ್ಲಸ್ ಏನು? ಮೈನಸ್ ಏನು?
ಇದನ್ನೂ ಓದಿ: ಸುಮಲತಾ ‘ಎಚ್ಚರಿಕೆಯ ಹೆಜ್ಜೆ’; ರೆಬಲ್ ಲೇಡಿಯ ಮೌನದ ನಡೆ ಮೈತ್ರಿ ಪಾಳಯಕ್ಕೆ ಟೆನ್ಷನ್, ಟೆನ್ಷನ್..!
ಜೆಡಿಎಸ್ ಕುಟುಂಬ ರಾಜಕಾರಣ ವಿರುದ್ಧ ಗಟ್ಟಿ ಹೋರಾಟ ಅನ್ನೋದೇ ಸುಮಲತಾಗೆ ಇರೋ ಏಕೈಕ ಪ್ಲಸ್ ಪಾಯಿಂಟ್. ಸುಮಲತಾ ಪಕ್ಷೇತರ ಸ್ಪರ್ಧೆಯಿಂದ ಪ್ಲಸ್ಗಿಂತ ಮೈನಸ್ಸೇ ಹೆಚ್ಚು. ಬಿಜೆಪಿ ಹೈಕಮಾಂಡ್ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಪಕ್ಷೇತರವಾಗಿ ಸ್ಪರ್ಧಿಸಿದ್ರೂ ಗೆಲುವು ಕಷ್ಟಸಾಧ್ಯ ಎಂಬ ಸತ್ಯದ ಅರಿವು ಸುಮಲತಾರಿಗಿದೆ. ಅಲ್ಲದೆ, ಈಗಾಗಲೇ ಬಿಜೆಪಿ ಜೊತೆ ಮತ್ತು ಹೆಚ್ಡಿಕೆ ಜೊತೆ ಸಂಬಂಧ ಸುಧಾರಿಸಿಕೊಂಡ ಇಂಡುವಾಳು ಸಚ್ಚಿದಾನಂದ ಸೇರಿ ಹಲವು ಸುಮಲತಾ ಬೆಂಬಲಿಗರು ಅಂತರ ಕಾಯ್ದುಕೊಳ್ಳಲಿದ್ದಾರೆ. ಇದಷ್ಟೇ ಅಲ್ಲ, ಬಿಜೆಪಿ ಸೇರದೆ, ಕಾಂಗ್ರೆಸ್ ಬೆಂಬಲಿಸದೇ ರಾಜಕೀಯದಿಂದಲೇ ಕಣ್ಮರೆ ಆಗುವ ಭೀತಿಯೂ ಸುಮಲತಾರಿಗಿದೆ.. ಅಕಸ್ಮಾತ್ ಫಲಿತಾಂಶದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವಾದ್ರೆ ರಾಜಕೀಯವೇ ಅಂತ್ಯ ಆಗುವ ಆತಂಕ ಇದೆ.. ಜೊತೆಗೆ ತನ್ನ ರಾಜಕೀಯ ಭವಿಷ್ಯದ ಜೊತೆ ಪುತ್ರನ ರಾಜಕೀಯ ಭವಿಷ್ಯವೂ ಕಮರಲಿದೆ.
ಅಳೆದುತೂಗಿ ಕೈಗೊಳ್ಳುವ ನಿರ್ಧಾರ ಯಾರಿಗೆ ಹಿತ ತರಲಿದೆ? ಹಳೇ ವಿರೋಧಿ, ಹೊಸ ಮಿತ್ರ ದಳಕ್ಕೆ ಶಾಕ್ ನೀಡ್ತಾರಾ? ಕಳೆದ ಬಾರಿ ಒಳೇಟು ಕೊಟ್ಟು ಬಲ ತುಂಬಿದ್ದ ಹಸ್ತಕ್ಕೆ ಋಣ ಸಂದಾಯ ಮಾಡ್ತಾರ? ಬಿಜೆಪಿ ವಿಶ್ವಾಸ ಉಳಿಸಿಕೊಳ್ತಾರಾ? ಒಟ್ಟಾರೆ ಸುಮಲತಾ ಕೈಗೊಳ್ಳುವ ನಿರ್ಧಾರದತ್ತ ರಾಜ್ಯ ರಾಜಕೀಯವೇ ಎದುರು ನೋಡ್ತಿದೆ.
ವಿಶೇಷ ವರದಿ: ನಂದೀಶ್, ನ್ಯೂಸ್ಫಸ್ಟ್, ಮಂಡ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸುಮಲತಾ ಅಂಬರೀಶ್ಗೆ ಇರುವುದು ನಾಲ್ಕೇ ಆಫ್ಷನ್
ಮೈತ್ರಿ ಅಭ್ಯರ್ಥಿ ಪರ ನಿಂತರೆ? ಪ್ಲಸ್, ಮೈನಸ್ ಏನು?
ಪಕ್ಷೇತರ ಅಭ್ಯರ್ಥಿಯಾದ್ರೆ? ಪ್ಲಸ್ ಏನು? ಮೈನಸ್ ಏನು?
ನಾಳೆ ರಾಜಕೀಯಕ್ಕೆ ಹೊಸ ಚಿತ್ರಣ ಸಿಗಲಿದೆ. ದಳ ವರ್ಸಸ್ ಕಾಂಗ್ರೆಸ್ ನೇರ ಹಣಾಹಣಿ ಇರುತ್ತಾ? ಈ ಹಣಾಹಣಿ ಏನಾದ್ರೂ ತ್ರಿಕೋನ ಸ್ಪರ್ಧೆಗೆ ತಿರುಗುತ್ತಾ? ತ್ರಿಕೋನ ಕದನವಾಗಲು ಸುಮಲತಾ ಸ್ಪರ್ಧಿಸಬೇಕು. ಹಾಗಾದ್ರೆ ಸುಮಲತಾ ಸ್ಪರ್ಧಿಸ್ತಾರಾ? ಇಲ್ವಾ? ಸ್ವಾಭಿಮಾನಿಯ ಮುಂದಿನ ನಡೆ ಏನು? ಈ ಪ್ರಶ್ನೆಗಳ ಸುತ್ತವೇ ರಾಜಕೀಯ ಸುತ್ತುತ್ತಿದೆ. ಈ ಸುತ್ತುವ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ.
ಸಕ್ಕರೆ ನಾಡಿನ ಸವಿಪಾಕ ಸವಿಯಲು ಸಮರ ನಡೆಯುತ್ತಿದೆ. ಕಳೆದ ಬಾರಿ ಸ್ವಾಭಿಮಾನಿ ಹೆಸರಲ್ಲಿ ಗೆದ್ದು ಬೀಗಿದ ಸುಮಲತಾ ಈ ಬಾರಿ ನಿರ್ಧಾರವೇ ಅತಂತ್ರದಲ್ಲಿ ಸಿಲುಕಿದೆ. ನಾಳೆ ರೆಬಲ್ ಲೇಡಿ ನಿರ್ಧಾರ ಪ್ರಕಟಿಸಲಿದ್ದು, ಕೌಂಡ್ ಡೌನ್ ಶುರುವಾಗಿದೆ. ಮಂಡ್ಯ ನೆಲದಲ್ಲೆ ಅಂತಿಮ ನಿರ್ಧಾರ ಘೋಷಣೆಗೆ ಸಿದ್ಧತೆ ನಡೆಸಿರುವ ಸುಮಲತಾ, ಮುಂದೇನು ಅನ್ನೋ ಚಿಂತೆಗೆ ಬಿದ್ದಿದ್ದಾರೆ.
ತ್ರಿಶಂಕು ಸ್ಥಿತಿಯಲ್ಲಿದ್ದಾರಾ ಮಂಡ್ಯದ ಗೌಡ್ತಿ?
ಏಪ್ರಿಲ್ 3 ರಂದು ತಮ್ಮ ನಿರ್ಧಾರ ಪ್ರಕಟಿಸಲು ಸುಮಲತಾ ಮುಂದಾಗಿದ್ದಾರೆ. ಸದ್ಯ ಯಾವ ನಿರ್ಧಾರ ಕೈಗೊಂಡರೇ ರಾಜಕೀಯ ಭವಿಷ್ಯ ಸೂಕ್ತ ಎಂಬ ಯೊಚನೆ ನಡೆಸ್ತಿದ್ದಾರೆ. ಅಷ್ಟಕ್ಕೂ ಸುಮಲತಾ ರಾಜಕೀಯ ನಡೆ ಏನಾಗಲಿದೆ? ಹಾಗಾದ್ರೆ ಅವರ ಮುಂದಿರುವ ಆಫ್ಷನ್ಗಳೇನು?
ಮೈತ್ರಿ ಅಭ್ಯರ್ಥಿ ಪರ ನಿಂತರೆ? ಪ್ಲಸ್ ಏನು?
ಮೈತ್ರಿ ಅಭ್ಯರ್ಥಿ ಪರ ನಿಂತರೆ? ಮೈನಸ್ ಏನು?
ಈ ಬೆಳವಣಿಗೆ ಸಾಧ್ಯವಿಲ್ಲ ಅನ್ನೋದಾದ್ರೆ, ಮೈತ್ರಿಗೆ ಸೆಡ್ಡು ಹೊಡೆಯಬೇಕು. ಸೆಡ್ಡು ಹೊಡೆಯಲು ಮತ್ತೆ ಪಕ್ಷೇತರರಾಗಿ ಕಣಕ್ಕಿಳಿಯಬೇಕು.
ಪಕ್ಷೇತರ ಅಭ್ಯರ್ಥಿಯಾದ್ರೆ? ಪ್ಲಸ್ ಏನು? ಮೈನಸ್ ಏನು?
ಇದನ್ನೂ ಓದಿ: ಸುಮಲತಾ ‘ಎಚ್ಚರಿಕೆಯ ಹೆಜ್ಜೆ’; ರೆಬಲ್ ಲೇಡಿಯ ಮೌನದ ನಡೆ ಮೈತ್ರಿ ಪಾಳಯಕ್ಕೆ ಟೆನ್ಷನ್, ಟೆನ್ಷನ್..!
ಜೆಡಿಎಸ್ ಕುಟುಂಬ ರಾಜಕಾರಣ ವಿರುದ್ಧ ಗಟ್ಟಿ ಹೋರಾಟ ಅನ್ನೋದೇ ಸುಮಲತಾಗೆ ಇರೋ ಏಕೈಕ ಪ್ಲಸ್ ಪಾಯಿಂಟ್. ಸುಮಲತಾ ಪಕ್ಷೇತರ ಸ್ಪರ್ಧೆಯಿಂದ ಪ್ಲಸ್ಗಿಂತ ಮೈನಸ್ಸೇ ಹೆಚ್ಚು. ಬಿಜೆಪಿ ಹೈಕಮಾಂಡ್ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಪಕ್ಷೇತರವಾಗಿ ಸ್ಪರ್ಧಿಸಿದ್ರೂ ಗೆಲುವು ಕಷ್ಟಸಾಧ್ಯ ಎಂಬ ಸತ್ಯದ ಅರಿವು ಸುಮಲತಾರಿಗಿದೆ. ಅಲ್ಲದೆ, ಈಗಾಗಲೇ ಬಿಜೆಪಿ ಜೊತೆ ಮತ್ತು ಹೆಚ್ಡಿಕೆ ಜೊತೆ ಸಂಬಂಧ ಸುಧಾರಿಸಿಕೊಂಡ ಇಂಡುವಾಳು ಸಚ್ಚಿದಾನಂದ ಸೇರಿ ಹಲವು ಸುಮಲತಾ ಬೆಂಬಲಿಗರು ಅಂತರ ಕಾಯ್ದುಕೊಳ್ಳಲಿದ್ದಾರೆ. ಇದಷ್ಟೇ ಅಲ್ಲ, ಬಿಜೆಪಿ ಸೇರದೆ, ಕಾಂಗ್ರೆಸ್ ಬೆಂಬಲಿಸದೇ ರಾಜಕೀಯದಿಂದಲೇ ಕಣ್ಮರೆ ಆಗುವ ಭೀತಿಯೂ ಸುಮಲತಾರಿಗಿದೆ.. ಅಕಸ್ಮಾತ್ ಫಲಿತಾಂಶದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವಾದ್ರೆ ರಾಜಕೀಯವೇ ಅಂತ್ಯ ಆಗುವ ಆತಂಕ ಇದೆ.. ಜೊತೆಗೆ ತನ್ನ ರಾಜಕೀಯ ಭವಿಷ್ಯದ ಜೊತೆ ಪುತ್ರನ ರಾಜಕೀಯ ಭವಿಷ್ಯವೂ ಕಮರಲಿದೆ.
ಅಳೆದುತೂಗಿ ಕೈಗೊಳ್ಳುವ ನಿರ್ಧಾರ ಯಾರಿಗೆ ಹಿತ ತರಲಿದೆ? ಹಳೇ ವಿರೋಧಿ, ಹೊಸ ಮಿತ್ರ ದಳಕ್ಕೆ ಶಾಕ್ ನೀಡ್ತಾರಾ? ಕಳೆದ ಬಾರಿ ಒಳೇಟು ಕೊಟ್ಟು ಬಲ ತುಂಬಿದ್ದ ಹಸ್ತಕ್ಕೆ ಋಣ ಸಂದಾಯ ಮಾಡ್ತಾರ? ಬಿಜೆಪಿ ವಿಶ್ವಾಸ ಉಳಿಸಿಕೊಳ್ತಾರಾ? ಒಟ್ಟಾರೆ ಸುಮಲತಾ ಕೈಗೊಳ್ಳುವ ನಿರ್ಧಾರದತ್ತ ರಾಜ್ಯ ರಾಜಕೀಯವೇ ಎದುರು ನೋಡ್ತಿದೆ.
ವಿಶೇಷ ವರದಿ: ನಂದೀಶ್, ನ್ಯೂಸ್ಫಸ್ಟ್, ಮಂಡ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ