newsfirstkannada.com

ಅಭಿಷೇಕ್​ ಅಂಬರೀಶ್​​ ರಾಜಕೀಯಕ್ಕೆ ಎಂಟ್ರಿ? HDK ಭೇಟಿ ಬಳಿ ಸುಮಲತಾ ಬಿಚ್ಚಿಟ್ಟ ಸತ್ಯವೇನು?

Share :

Published March 31, 2024 at 6:32pm

    ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಬಳಿಕ ಸುಮಲತಾ ಹೇಳಿದ್ದೇನು?

    ಅಭಿಷೇಕ್​ ಅಂಬರೀಶ್​ ರಾಜಕೀಯದ ಬಗ್ಗೆ ಸುಮಲತಾ ಏನಂದ್ರು..?

    ಒಂದು ಕುಟುಂಬದಿಂದ ಒಬ್ಬರು ಮಾತ್ರ ರಾಜಕೀಯ ಮಾಡಬೇಕು ಅಂದ್ರು!

ಬೆಂಗಳೂರು: ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಹೇಗಾದ್ರೂ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ಬಿಜೆಪಿ, ಜೆಡಿಎಸ್​​ ಮೈತ್ರಿ ಮಾಡಿಕೊಂಡಿವೆ. ಬಿಜೆಪಿ 25 ಕ್ಷೇತ್ರಗಳಲ್ಲಿ ಕಂಟೆಸ್ಟ್​ ಮಾಡುತ್ತಿದ್ದು, ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿದೆ. ಮಂಡ್ಯದಲ್ಲಿ ಜೆಡಿಎಸ್​ನಿಂದ ಖುದ್ದು ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಅವರೇ ಕಣಕ್ಕಿಳಿಯುತ್ತಿದ್ದಾರೆ.

ಇನ್ನು, ಸಂಸದೆ ಸುಮಲತಾ ಅಂಬರೀಶ್​​ ಕೂಡ ಮಂಡ್ಯದ ಜನರಿಗೆ ನೋಯಿಸೋ ತೀರ್ಮಾನ ಮಾಡಲ್ಲ. ನಾನು ಮಂಡ್ಯದಿಂದ ಚುನಾವಣೆಗೆ ನಿಂತೇ ನಿಲ್ಲುತ್ತೇನೆ ಎಂದು ಪಣತೊಟ್ಟಿದ್ದಾರೆ. ಈ ಮಧ್ಯೆ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ, ಜೆಪಿ ನಗರದಲ್ಲಿರೋ ಸಂಸದೆ ಸುಮಲತಾ ಅಂಬರೀಶ್​ ಅವರ ಮನೆಗೆ ಭೇಟಿ ನೀಡಿದ್ದಾರೆ.

ರಾಜಕೀಯಕ್ಕೆ ಬರ್ತಾರಾ ಅಭಿಷೇಕ್​​..?

ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಸುಮಲತಾ ಅಂಬರೀಶ್​ ಮಾತಾಡಿದ್ದಾರೆ. ಇಬ್ಬರ ಮಧ್ಯೆ ಆರೋಗ್ಯಕರ ಚರ್ಚೆ ನಡೆದಿದೆ. ಭಿನ್ನಾಭಿಪ್ರಾಯ ಇತ್ತು, ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಎಂದಿದ್ದಾರೆ. ಲಹಿತೈಷಿಗಳ ಒಪ್ಪಿಗೆ ಪಡೆಯದೆ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದಿದ್ದೇನೆ. ಇದಕ್ಕೆ ಅವರು ಒಪ್ಪಿದ್ದಾರೆ. ಏಪ್ರಿಲ್​​ 3ರಂದು ನನ್ನೊಂದಿಗೆ ದರ್ಶನ್​​, ಅಭಿಷೇಕ್​ ಇರಲಿದ್ದಾರೆ. ಅವರೊಂದಿಗೆ ಚರ್ಚಿಸಿ ನನ್ನ ತೀರ್ಮಾನ ತಿಳಿಸುತ್ತೇನೆ. ಮಂಡ್ಯದ ಜನರಿಗೆ ಒಳ್ಳೆಯದು ಆಗೋ ತೀರ್ಮಾನ ಮಾಡುತ್ತೇನೆ. ನನ್ನ ಮಗ ಅಭಿಷೇಕ್​ ರಾಜಕೀಯಕ್ಕೆ ಬಂದ್ರೆ, ನಾನು ಚುನಾವಣೆಗೆ ನಿಲ್ಲಲ್ಲ. ಅಭಿಷೇಕ್​ ರಾಜಕೀಯಕ್ಕೆ ಬಂದ್ರೆ ನಾನು ಮನೆಯಲ್ಲೇ ಇರುತ್ತೇನೆ, ಮನೆಯಲ್ಲಿ ಯಾರಾದ್ರೂ ಒಬ್ಬರು ರಾಜಕೀಯದಲ್ಲಿ ಇರಬೇಕು. ನನ್ನ ಸ್ಪರ್ಧೆ ಬಗ್ಗೆ ಹೆಚ್​​ಡಿಕೆ ಬಳಿ ಏನು ಚರ್ಚೆ ಮಾಡಿಲ್ಲ ಎಂದರು.

ಇದನ್ನೂ ಓದಿ: BREAKING: ಸುಮಲತಾ ಮನೆಗೆ ಮಾಜಿ ಸಿಎಂ ಕುಮಾರಸ್ವಾಮಿ ದಿಢೀರ್​ ಭೇಟಿ; ಮಹತ್ವದ ಮಾತುಕತೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಭಿಷೇಕ್​ ಅಂಬರೀಶ್​​ ರಾಜಕೀಯಕ್ಕೆ ಎಂಟ್ರಿ? HDK ಭೇಟಿ ಬಳಿ ಸುಮಲತಾ ಬಿಚ್ಚಿಟ್ಟ ಸತ್ಯವೇನು?

https://newsfirstlive.com/wp-content/uploads/2024/03/hdk-and-sumalatha-2.jpg

    ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಬಳಿಕ ಸುಮಲತಾ ಹೇಳಿದ್ದೇನು?

    ಅಭಿಷೇಕ್​ ಅಂಬರೀಶ್​ ರಾಜಕೀಯದ ಬಗ್ಗೆ ಸುಮಲತಾ ಏನಂದ್ರು..?

    ಒಂದು ಕುಟುಂಬದಿಂದ ಒಬ್ಬರು ಮಾತ್ರ ರಾಜಕೀಯ ಮಾಡಬೇಕು ಅಂದ್ರು!

ಬೆಂಗಳೂರು: ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಹೇಗಾದ್ರೂ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ಬಿಜೆಪಿ, ಜೆಡಿಎಸ್​​ ಮೈತ್ರಿ ಮಾಡಿಕೊಂಡಿವೆ. ಬಿಜೆಪಿ 25 ಕ್ಷೇತ್ರಗಳಲ್ಲಿ ಕಂಟೆಸ್ಟ್​ ಮಾಡುತ್ತಿದ್ದು, ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿದೆ. ಮಂಡ್ಯದಲ್ಲಿ ಜೆಡಿಎಸ್​ನಿಂದ ಖುದ್ದು ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಅವರೇ ಕಣಕ್ಕಿಳಿಯುತ್ತಿದ್ದಾರೆ.

ಇನ್ನು, ಸಂಸದೆ ಸುಮಲತಾ ಅಂಬರೀಶ್​​ ಕೂಡ ಮಂಡ್ಯದ ಜನರಿಗೆ ನೋಯಿಸೋ ತೀರ್ಮಾನ ಮಾಡಲ್ಲ. ನಾನು ಮಂಡ್ಯದಿಂದ ಚುನಾವಣೆಗೆ ನಿಂತೇ ನಿಲ್ಲುತ್ತೇನೆ ಎಂದು ಪಣತೊಟ್ಟಿದ್ದಾರೆ. ಈ ಮಧ್ಯೆ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ, ಜೆಪಿ ನಗರದಲ್ಲಿರೋ ಸಂಸದೆ ಸುಮಲತಾ ಅಂಬರೀಶ್​ ಅವರ ಮನೆಗೆ ಭೇಟಿ ನೀಡಿದ್ದಾರೆ.

ರಾಜಕೀಯಕ್ಕೆ ಬರ್ತಾರಾ ಅಭಿಷೇಕ್​​..?

ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಸುಮಲತಾ ಅಂಬರೀಶ್​ ಮಾತಾಡಿದ್ದಾರೆ. ಇಬ್ಬರ ಮಧ್ಯೆ ಆರೋಗ್ಯಕರ ಚರ್ಚೆ ನಡೆದಿದೆ. ಭಿನ್ನಾಭಿಪ್ರಾಯ ಇತ್ತು, ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಎಂದಿದ್ದಾರೆ. ಲಹಿತೈಷಿಗಳ ಒಪ್ಪಿಗೆ ಪಡೆಯದೆ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದಿದ್ದೇನೆ. ಇದಕ್ಕೆ ಅವರು ಒಪ್ಪಿದ್ದಾರೆ. ಏಪ್ರಿಲ್​​ 3ರಂದು ನನ್ನೊಂದಿಗೆ ದರ್ಶನ್​​, ಅಭಿಷೇಕ್​ ಇರಲಿದ್ದಾರೆ. ಅವರೊಂದಿಗೆ ಚರ್ಚಿಸಿ ನನ್ನ ತೀರ್ಮಾನ ತಿಳಿಸುತ್ತೇನೆ. ಮಂಡ್ಯದ ಜನರಿಗೆ ಒಳ್ಳೆಯದು ಆಗೋ ತೀರ್ಮಾನ ಮಾಡುತ್ತೇನೆ. ನನ್ನ ಮಗ ಅಭಿಷೇಕ್​ ರಾಜಕೀಯಕ್ಕೆ ಬಂದ್ರೆ, ನಾನು ಚುನಾವಣೆಗೆ ನಿಲ್ಲಲ್ಲ. ಅಭಿಷೇಕ್​ ರಾಜಕೀಯಕ್ಕೆ ಬಂದ್ರೆ ನಾನು ಮನೆಯಲ್ಲೇ ಇರುತ್ತೇನೆ, ಮನೆಯಲ್ಲಿ ಯಾರಾದ್ರೂ ಒಬ್ಬರು ರಾಜಕೀಯದಲ್ಲಿ ಇರಬೇಕು. ನನ್ನ ಸ್ಪರ್ಧೆ ಬಗ್ಗೆ ಹೆಚ್​​ಡಿಕೆ ಬಳಿ ಏನು ಚರ್ಚೆ ಮಾಡಿಲ್ಲ ಎಂದರು.

ಇದನ್ನೂ ಓದಿ: BREAKING: ಸುಮಲತಾ ಮನೆಗೆ ಮಾಜಿ ಸಿಎಂ ಕುಮಾರಸ್ವಾಮಿ ದಿಢೀರ್​ ಭೇಟಿ; ಮಹತ್ವದ ಮಾತುಕತೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More