/newsfirstlive-kannada/media/post_attachments/wp-content/uploads/2025/03/SUMALATHA_DARSHAN.jpg)
ಬೆಂಗಳೂರು: ಇನ್​ಸ್ಟಾದಲ್ಲಿ ಮಾಜಿ ಸಂಸದೆ ಹಾಗೂ ನಟಿ ಸುಮಲತಾ ಅವರನ್ನು ದರ್ಶನ್ ಅವರು ಅನ್​ಫಾಲೋ ಮಾಡಿದ್ದಾರೆ. ಇದರ ಬೆನ್ನಲ್ಲೇ ಸುಮಲತಾ ಅವರು ತಮ್ಮ ಇನ್​ಸ್ಟಾದಲ್ಲಿ ಸರಣಿ ಸ್ಟೇಟಸ್​ಗಳನ್ನ ಬೇಸರದಲ್ಲೇ ಶೇರ್ ಮಾಡಿರುವುದು ಚರ್ಚೆಗೆ ಕಾರಣವಾಗಿದೆ ಎನ್ನಬಹುದು. ಆದರೆ ಇದು ಇಂತಹವರಿಗೆ ಹೇಳಿದ್ದಾರೆ ಎನ್ನುವುದು ಮಾತ್ರ ನಿಖರವಾಗಿಲ್ಲ.
ಸುಮಲತಾ ಅವರ ಇನ್​ಸ್ಟಾಗ್ರಾಮ್​ ಪೋಸ್ಟ್​ನ ಸ್ಟೇಟಸ್​ಗಳನ್ನು ಗಮನಿಸಿದರೆ ಬೇಸರದಿಂದಲೇ ಮಾಡಿದ್ದಾರೆ ಎಂದು ಅನಿಸುತ್ತದೆ. ದರ್ಶನ್ ಅನ್​ಫಾಲೋ ಮಾಡಿದ ಬೆನ್ನಲ್ಲೇ ಪೋಸ್ಟ್ ಮಾಡಿರುವುದು ಸದ್ಯಕ್ಕೆ ಹೆಚ್ಚು ಚರ್ಚೆಯ ವಿಷಯವಾಗಿದೆ. ಆದರೆ ಇಂತವರಿಗೆ ಎಂಬುದು ಸ್ಪಷ್ಟವಾಗಿಲ್ಲ. ಇಂದು ನೀವು ಏನ್​ ಆಗಿದ್ದೀರಿ ಗೊತ್ತಾಗಲು, ಈ ಹಿಂದೆ ನೋವನ್ನು ಎಷ್ಟು ಬಾರಿ ಶಕ್ತಿಯಾಗಿ ಚೇಂಜ್ ಮಾಡಿದ್ರಿ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಸ್ಟೇಟಸ್​ ಒಂದರಲ್ಲಿ ಹೇಳಿದ್ದಾರೆ.
ಇನ್ನೊಂದರಲ್ಲಿ ನೀವು ನಿಮ್ಮ ಹೃದಯದಷ್ಟೇ ಸುಂದರವಾಗಿದ್ದೀರಿ. ಹೇಗೆಂದರೆ ನೀವು ಮಾತನಾಡುವ ಮಾತುಗಳಂತೆ, ಯೋಚಿಸುವ ಆಲೋಚನೆಗಳಂತೆ ಹಾಗೂ ನೀಡುವ ಶಕ್ತಿಯಂತೆ ಎಂದಿದ್ದಾರೆ. ಇನ್ನೊಂದರಲ್ಲಿ ಶ್ರೀಮಂತಿಕೆ ಕುರಿತು ಮಾತನಾಡಿರುವ ಅವರು, ನಿಜವಾದ ಐಷಾರಾಮಿ ಯಾವುದು ಎಂಬುದರ ಬಗ್ಗೆ ಇನ್​​ಸ್ಟಾ ಸ್ಟೇಟಸ್​ನಲ್ಲಿ ಹೇಳಿಕೊಂಡಿದ್ದಾರೆ. ಸಮಾಜ ಹಾಗೂ ಜನರ ಪ್ರಕಾರ ನಿಜವಾದ ಐಷಾರಾಮಿ ಎಂದ್ರೆ, ಕಾರುಗಳು, ಬೆಲೆ ಬಾಳುವ ಒಡವೆ, ಬಟ್ಟೆಗಳನ್ನು ಧರಿಸುವುದು ಹಾಗೂ ಅದ್ಧೂರಿ ಲೈಫ್​ಸ್ಟೈಲ್​ನಲ್ಲಿದೆ ಎಂದುಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ ಅನ್​​ಫಾಲೋ ಬೆನ್ನಲ್ಲೇ ಸುಮಲತಾ ಪೋಸ್ಟ್; ದಾಸನಿಗೆ ಅಮ್ಮ ಪರೋಕ್ಷ ಟಾಂಗ್..!?
ಆದರೆ ನಿಜವಾದ ಐಷಾರಾಮಿ ಇರುವುದು ಇವುಗಳಲ್ಲಿ ಅಲ್ಲ. ಐಷಾರಾಮಿ ಇರುವುದು- ನಮ್ಮ ಆಯ್ಕೆಗಳಲ್ಲಿ ಸ್ವಾತಂತ್ರ್ಯ ಇರಬೇಕು. ರಾತ್ರಿಯಲ್ಲಿ ಒಳ್ಳೆಯ ನಿದ್ದೆ ಮಾಡಬೇಕು. ಮನಸ್ಸಿಗೆ ಶಾಂತಿ, ನೆಮ್ಮದಿಯಿಂದ ಕೂಡಿದ ದಿನಗಳಿರಬೇಕು. ಎಲ್ಲದರಲ್ಲೂ ಸಮನಾವಾಗಿ ಕೂಡಿರುವುದರ ಜೊತೆಗೆ ನೀವು ಪ್ರೀತಿಸುವ ಜನರು, ವಾಪಸ್ ನಿಮ್ಮನ್ನು ಮತ್ತಷ್ಟು ಪ್ರೀತಿಸುವುದರಲ್ಲಿ ಐಷಾರಾಮಿ ಇದೆ ಎಂದು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ