ಇಂಗ್ಲೆಂಡ್ ಸರಣಿ ಗೆಲುವಿನ ಬಗ್ಗೆ ಗವಾಸ್ಕರ್ ಮಾತು
ಪರೋಕ್ಷವಾಗಿ ಸ್ಟಾರ್ಗಳ ವಿರುದ್ಧ ಅಸಮಾಧಾನ
ನಾನ್ ಇಲ್ದೇ ತಂಡ ಗೆಲ್ಲಲ್ಲ ಅನ್ನೋದು ಭ್ರಮೆ..!
ಟೀಮ್ ಇಂಡಿಯಾ ಗೆಲ್ಲೋಕೆ ದೊಡ್ಡ ಹೆಸರುಗಳೇ ಬೇಕಿಲ್ಲ. ನಾನು ಇಲ್ದೇ ತಂಡ ಗೆಲ್ಲಲ್ಲ ಅನ್ಕೊಂಡಿದ್ರೆ ಅದು ಸುಳ್ಳು. ಈ ಮಾತನ್ನು ಹೇಳಿರೋದು ಲೆಜೆಂಡ್ ಸುನಿಲ್ ಗವಾಸ್ಕರ್. ಅಂದ್ಹಾಗೆ ಹೇಳಿದ್ದು ಯಾರಿಗೆ ಗೊತ್ತಾ? ವಿಶ್ವ ಕ್ರಿಕೆಟ್ನ ಕಿಂಗ್, ವಿರಾಟ್ ಕೊಹ್ಲಿಗೆ. ಕೊಹ್ಲಿ ಬಗ್ಗೆ ಗವಾಸ್ಕರ್ ಈ ಪರಿ ಟೀಕೆ ಮಾಡಿರೋದ್ಯಾಕೆ?
ಇಂಡೋ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಮಾರ್ಚ್ 7 ರಿಂದ ಅಂತಿಮ ಟೆಸ್ಟ್ ಪಂದ್ಯ ಶುರುವಾಗಲಿದ್ದು, ಉಭಯ ತಂಡಗಳು ಧರ್ಮಾಶಾಲಾ ತಲುಪಿವೆ. ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ, ಕೊನೆಯ ಪಂದ್ಯದಲ್ಲೂ ಗೆಲ್ಲೋ ಛಲದಲ್ಲಿದೆ.
ಆಂಗ್ಲರ ವಿರುದ್ಧ ಯುವ ಆಟಗಾರರ ಅಬ್ಬರ
ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಟೀಮ್ ಇಂಡಿಯಾ ತೀವ್ರ ಹಿನ್ನಡೆ ಅನುಭವಿಸಿತು. ಅನುಭವಿಗಳ ಅಲಭ್ಯತೆ ತಂಡವನ್ನು ತಂಡವನ್ನ ಕಾಡಿತು. ಪರಿಣಾಮ 4 ಪಂದ್ಯಗಳಲ್ಲಿ ನಾಲ್ವರು ಯುವ ಆಟಗಾರರು ಡೆಬ್ಯೂ ಮಾಡಿದ್ರು. ಸೀನಿಯರ್ಗಳ ಅಲಭ್ಯತೆಯಲ್ಲಿ ಚಾನ್ಸ್ ಗಿಟ್ಟಿಸಿಕೊಂಡ ಯಂಗ್ಸ್ಟರ್ಸ್ ಸಾಲಿಡ್ ಪರ್ಫಾಮೆನ್ಸ್ ಕೂಡ ನೀಡಿದ್ರು. ಅಬ್ಬರಿಸಿದ ಯಂಗ್ಸ್ಟರ್ಗಳು ದಿಗ್ಗಜರ ಮನ ಗೆದ್ದಿದ್ದಾರೆ. ಈ ಯಂಗ್ಸ್ಟರ್ಗಳನ್ನೇ ಹೊಗಳೊ ಭರದಲ್ಲಿ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಯಡವಟ್ಟು ಮಾಡಿಕೊಂಡಿರೋದು.
ಭಾರತ ಗೆಲ್ಲೋಕೆ ದೊಡ್ಡ ಹೆಸರುಗಳು ಬೇಕಿಲ್ಲ
ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಯುವ ಆಟಗಾರರ ಪರ್ಫಾಮೆನ್ಸ್ ಬಗ್ಗೆ ಸುನಿಲ್ ಗವಾಸ್ಕರ್, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೇ ಸಮಯದಲ್ಲಿ ಸರಣಿಯಿಂದ ಹೊರಗುಳಿದವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿಗೆ ಹೇಳಿದ ಮಾತು ಎನ್ನಲಾಗ್ತಿದೆ.
‘ಸ್ಟಾರ್ಗಳನ್ನ ನೆಚ್ಚಿಕೊಂಡಿಲ್ಲ’
3 ವರ್ಷದ ಹಿಂದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾದಲ್ಲಿ ದೊಡ್ಡ ಹೆಸರುಗಳು ಇರಲಿಲ್ಲ. ಆದರೂ ಭಾರತ, ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ತು. ಈಗ ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದಿದೆ. ನಾನು ಅದಕ್ಕೆ ಯಾವಾಗಲೂ ಹೇಳೋದು ತಂಡಕ್ಕೆ ದೊಡ್ಡ ಹೆಸರುಗಳು ಬೇಕಿಲ್ಲ. ಹೆಸರು ಮಾಡಿದ ಯಾರಾದರೂ ನಾನು ಇಲ್ಲದೇ ಟೀಮ್ ಇಂಡಿಯಾ ಗೆಲ್ಲಲ್ಲ ಅಂದುಕೊಂಡಿದ್ರೆ ಅದು ಸುಳ್ಳು. ನೀವು ಇದ್ದರೂ, ಇಲ್ಲದಿದ್ದರೂ ಗೆಲ್ಲುತ್ತೆವೆ ಅಂತಾ ಈ 2 ಸರಣಿಗಳು ಉತ್ತರ ಕೊಟ್ಟಿವೆ-ಸುನಿಲ್ ಗವಾಸ್ಕರ್, ಮಾಜಿ ಕ್ರಿಕೆಟಿಗ
ವಿರಾಟ್ ಕೊಹ್ಲಿಗೆ ಟಾಂಗ್ ಕೊಟ್ರಾ ಗವಾಸ್ಕರ್..?
2021ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಕೊಹ್ಲಿ, ಟೀಮ್ ಇಂಡಿಯಾ ಫುಲ್ ಟೈಮ್ ಕ್ಯಾಪ್ಟನ್ ಆಗಿದ್ರು. ಆ ಪ್ರವಾಸದ ಮೊದಲ ಟೆಸ್ಟ್ನಲ್ಲಿ 36 ರನ್ಗಳಿಗೆ ಆಲೌಟ್ ಆಗಿದ್ದ ಟೀಮ್ ಇಂಡಿಯಾ ಹೀನಾಯ ಸೋಲಿಗೆ ಗುರಿಯಾಗಿತ್ತು. ಈ ವೇಳೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕೊಹ್ಲಿ, ಸೋಲಿನ ಬೆನ್ನಲ್ಲೇ ಸರಣಿಯನ್ನ ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ವಾಪಾಸ್ಸಾಗಿದ್ರು. ಕೊಹ್ಲಿ ಅಲಭ್ಯತೆಯಲ್ಲಿ ತಂಡವನ್ನ ಮುನ್ನಡೆಸಿದ್ದ ರಹಾನೆ, ಕಠಿಣ ಸವಾಲುಗಳ ನಡುವೆ ಸರಣಿ ಗೆಲ್ಲಿಸಿದ್ರು.
2ನೇ ಮಗುವಿನ ಜನನ, ಇಂಗ್ಲೆಂಡ್ ಸರಣಿಗೆ ಕೊಹ್ಲಿ ಅಲಭ್ಯ
ಹಾಲಿ ನಡೀತಿರೋ ಇಂಗ್ಲೆಂಡ್ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ 2ನೇ ಮಗುವಿನ ನಿರೀಕ್ಷೆಯಲ್ಲಿದ್ದ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ತಂಡವನ್ನ ತೊರೆದರು. ಈ ಸರಣಿಯಲ್ಲೂ ಕೊಹ್ಲಿಯ ಜೊತೆಗೆ ಇನ್ನೂ ಹಲ ಸ್ಟಾರ್ಗಳ ಅಲಭ್ಯತೆ ಟೀಮ್ ಇಂಡಿಯಾವನ್ನ ಕಾಡಿತು. ಯುವ ಆಟಗಾರರ ಅದ್ದೂರಿ ಪರ್ಫಾಮೆನ್ಸ್ನಿಂದ ಒಂದು ಪಂದ್ಯ ಮೊದಲೇ ಟೀಮ್ ಇಂಡಿಯಾ ಸರಣಿ ಜಯಿಸಿದೆ.
ಅಂದಿನ ಆಸ್ಟ್ರೇಲಿಯಾ ಪ್ರವಾಸ ಹಾಗೂ ಈಗಿನ ಇಂಗ್ಲೆಂಡ್ ವಿರುದ್ಧದ ಸರಣಿ ಎರಡರಲ್ಲೂ ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಟೀಮ್ ಇಂಡಿಯಾ ಸರಣಿ ಗೆದ್ದು ಬೀಗಿದೆ. ಇದರ ನಡುವೆ ಗವಾಸ್ಕರ್ ಗೆಲ್ಲೋಕೆ ದೊಡ್ಡ ದೊಡ್ಡ ಸ್ಟಾರ್ಗಳನ್ನ ನಾವು ನೆಚ್ಚಿಕೊಂಡಿಲ್ಲ. ನಾನು ಇಲ್ಲದೇ ತಂಡ ಗೆಲ್ಲಲ್ಲ ಅಂದುಕೊಂಡಿದ್ರೆ ಅದು ಸುಳ್ಳು ಎಂದಿದ್ದಾರೆ. ಈ ಮಾತು ಪರೋಕ್ಷವಾಗಿ ವಿರಾಟ್ ಕೊಹ್ಲಿಯನ್ನೆ ಗುರಿ ಮಾಡಿ ಹೇಳಿದಂತಿದೆ.
ಗವಾಸ್ಕರ್ ನೀಡಿರುವ ಹೇಳಿಕೆ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಫ್ಯಾನ್ಸ್ ವಲಯದಲ್ಲಂತೂ ಪರ-ವಿರೋಧದ ಚರ್ಚೆ ಜೋರಾಗಿದ್ದು, ವಿವಾದದ ಸ್ವರೂಪ ಪಡೆದುಕೊಂಡಿದೆ. ಮುಂದೆ ಈ ವಿವಾದ ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಇಂಗ್ಲೆಂಡ್ ಸರಣಿ ಗೆಲುವಿನ ಬಗ್ಗೆ ಗವಾಸ್ಕರ್ ಮಾತು
ಪರೋಕ್ಷವಾಗಿ ಸ್ಟಾರ್ಗಳ ವಿರುದ್ಧ ಅಸಮಾಧಾನ
ನಾನ್ ಇಲ್ದೇ ತಂಡ ಗೆಲ್ಲಲ್ಲ ಅನ್ನೋದು ಭ್ರಮೆ..!
ಟೀಮ್ ಇಂಡಿಯಾ ಗೆಲ್ಲೋಕೆ ದೊಡ್ಡ ಹೆಸರುಗಳೇ ಬೇಕಿಲ್ಲ. ನಾನು ಇಲ್ದೇ ತಂಡ ಗೆಲ್ಲಲ್ಲ ಅನ್ಕೊಂಡಿದ್ರೆ ಅದು ಸುಳ್ಳು. ಈ ಮಾತನ್ನು ಹೇಳಿರೋದು ಲೆಜೆಂಡ್ ಸುನಿಲ್ ಗವಾಸ್ಕರ್. ಅಂದ್ಹಾಗೆ ಹೇಳಿದ್ದು ಯಾರಿಗೆ ಗೊತ್ತಾ? ವಿಶ್ವ ಕ್ರಿಕೆಟ್ನ ಕಿಂಗ್, ವಿರಾಟ್ ಕೊಹ್ಲಿಗೆ. ಕೊಹ್ಲಿ ಬಗ್ಗೆ ಗವಾಸ್ಕರ್ ಈ ಪರಿ ಟೀಕೆ ಮಾಡಿರೋದ್ಯಾಕೆ?
ಇಂಡೋ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಮಾರ್ಚ್ 7 ರಿಂದ ಅಂತಿಮ ಟೆಸ್ಟ್ ಪಂದ್ಯ ಶುರುವಾಗಲಿದ್ದು, ಉಭಯ ತಂಡಗಳು ಧರ್ಮಾಶಾಲಾ ತಲುಪಿವೆ. ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ, ಕೊನೆಯ ಪಂದ್ಯದಲ್ಲೂ ಗೆಲ್ಲೋ ಛಲದಲ್ಲಿದೆ.
ಆಂಗ್ಲರ ವಿರುದ್ಧ ಯುವ ಆಟಗಾರರ ಅಬ್ಬರ
ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಟೀಮ್ ಇಂಡಿಯಾ ತೀವ್ರ ಹಿನ್ನಡೆ ಅನುಭವಿಸಿತು. ಅನುಭವಿಗಳ ಅಲಭ್ಯತೆ ತಂಡವನ್ನು ತಂಡವನ್ನ ಕಾಡಿತು. ಪರಿಣಾಮ 4 ಪಂದ್ಯಗಳಲ್ಲಿ ನಾಲ್ವರು ಯುವ ಆಟಗಾರರು ಡೆಬ್ಯೂ ಮಾಡಿದ್ರು. ಸೀನಿಯರ್ಗಳ ಅಲಭ್ಯತೆಯಲ್ಲಿ ಚಾನ್ಸ್ ಗಿಟ್ಟಿಸಿಕೊಂಡ ಯಂಗ್ಸ್ಟರ್ಸ್ ಸಾಲಿಡ್ ಪರ್ಫಾಮೆನ್ಸ್ ಕೂಡ ನೀಡಿದ್ರು. ಅಬ್ಬರಿಸಿದ ಯಂಗ್ಸ್ಟರ್ಗಳು ದಿಗ್ಗಜರ ಮನ ಗೆದ್ದಿದ್ದಾರೆ. ಈ ಯಂಗ್ಸ್ಟರ್ಗಳನ್ನೇ ಹೊಗಳೊ ಭರದಲ್ಲಿ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಯಡವಟ್ಟು ಮಾಡಿಕೊಂಡಿರೋದು.
ಭಾರತ ಗೆಲ್ಲೋಕೆ ದೊಡ್ಡ ಹೆಸರುಗಳು ಬೇಕಿಲ್ಲ
ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಯುವ ಆಟಗಾರರ ಪರ್ಫಾಮೆನ್ಸ್ ಬಗ್ಗೆ ಸುನಿಲ್ ಗವಾಸ್ಕರ್, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೇ ಸಮಯದಲ್ಲಿ ಸರಣಿಯಿಂದ ಹೊರಗುಳಿದವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿಗೆ ಹೇಳಿದ ಮಾತು ಎನ್ನಲಾಗ್ತಿದೆ.
‘ಸ್ಟಾರ್ಗಳನ್ನ ನೆಚ್ಚಿಕೊಂಡಿಲ್ಲ’
3 ವರ್ಷದ ಹಿಂದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾದಲ್ಲಿ ದೊಡ್ಡ ಹೆಸರುಗಳು ಇರಲಿಲ್ಲ. ಆದರೂ ಭಾರತ, ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ತು. ಈಗ ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದಿದೆ. ನಾನು ಅದಕ್ಕೆ ಯಾವಾಗಲೂ ಹೇಳೋದು ತಂಡಕ್ಕೆ ದೊಡ್ಡ ಹೆಸರುಗಳು ಬೇಕಿಲ್ಲ. ಹೆಸರು ಮಾಡಿದ ಯಾರಾದರೂ ನಾನು ಇಲ್ಲದೇ ಟೀಮ್ ಇಂಡಿಯಾ ಗೆಲ್ಲಲ್ಲ ಅಂದುಕೊಂಡಿದ್ರೆ ಅದು ಸುಳ್ಳು. ನೀವು ಇದ್ದರೂ, ಇಲ್ಲದಿದ್ದರೂ ಗೆಲ್ಲುತ್ತೆವೆ ಅಂತಾ ಈ 2 ಸರಣಿಗಳು ಉತ್ತರ ಕೊಟ್ಟಿವೆ-ಸುನಿಲ್ ಗವಾಸ್ಕರ್, ಮಾಜಿ ಕ್ರಿಕೆಟಿಗ
ವಿರಾಟ್ ಕೊಹ್ಲಿಗೆ ಟಾಂಗ್ ಕೊಟ್ರಾ ಗವಾಸ್ಕರ್..?
2021ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಕೊಹ್ಲಿ, ಟೀಮ್ ಇಂಡಿಯಾ ಫುಲ್ ಟೈಮ್ ಕ್ಯಾಪ್ಟನ್ ಆಗಿದ್ರು. ಆ ಪ್ರವಾಸದ ಮೊದಲ ಟೆಸ್ಟ್ನಲ್ಲಿ 36 ರನ್ಗಳಿಗೆ ಆಲೌಟ್ ಆಗಿದ್ದ ಟೀಮ್ ಇಂಡಿಯಾ ಹೀನಾಯ ಸೋಲಿಗೆ ಗುರಿಯಾಗಿತ್ತು. ಈ ವೇಳೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕೊಹ್ಲಿ, ಸೋಲಿನ ಬೆನ್ನಲ್ಲೇ ಸರಣಿಯನ್ನ ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ವಾಪಾಸ್ಸಾಗಿದ್ರು. ಕೊಹ್ಲಿ ಅಲಭ್ಯತೆಯಲ್ಲಿ ತಂಡವನ್ನ ಮುನ್ನಡೆಸಿದ್ದ ರಹಾನೆ, ಕಠಿಣ ಸವಾಲುಗಳ ನಡುವೆ ಸರಣಿ ಗೆಲ್ಲಿಸಿದ್ರು.
2ನೇ ಮಗುವಿನ ಜನನ, ಇಂಗ್ಲೆಂಡ್ ಸರಣಿಗೆ ಕೊಹ್ಲಿ ಅಲಭ್ಯ
ಹಾಲಿ ನಡೀತಿರೋ ಇಂಗ್ಲೆಂಡ್ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ 2ನೇ ಮಗುವಿನ ನಿರೀಕ್ಷೆಯಲ್ಲಿದ್ದ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ತಂಡವನ್ನ ತೊರೆದರು. ಈ ಸರಣಿಯಲ್ಲೂ ಕೊಹ್ಲಿಯ ಜೊತೆಗೆ ಇನ್ನೂ ಹಲ ಸ್ಟಾರ್ಗಳ ಅಲಭ್ಯತೆ ಟೀಮ್ ಇಂಡಿಯಾವನ್ನ ಕಾಡಿತು. ಯುವ ಆಟಗಾರರ ಅದ್ದೂರಿ ಪರ್ಫಾಮೆನ್ಸ್ನಿಂದ ಒಂದು ಪಂದ್ಯ ಮೊದಲೇ ಟೀಮ್ ಇಂಡಿಯಾ ಸರಣಿ ಜಯಿಸಿದೆ.
ಅಂದಿನ ಆಸ್ಟ್ರೇಲಿಯಾ ಪ್ರವಾಸ ಹಾಗೂ ಈಗಿನ ಇಂಗ್ಲೆಂಡ್ ವಿರುದ್ಧದ ಸರಣಿ ಎರಡರಲ್ಲೂ ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಟೀಮ್ ಇಂಡಿಯಾ ಸರಣಿ ಗೆದ್ದು ಬೀಗಿದೆ. ಇದರ ನಡುವೆ ಗವಾಸ್ಕರ್ ಗೆಲ್ಲೋಕೆ ದೊಡ್ಡ ದೊಡ್ಡ ಸ್ಟಾರ್ಗಳನ್ನ ನಾವು ನೆಚ್ಚಿಕೊಂಡಿಲ್ಲ. ನಾನು ಇಲ್ಲದೇ ತಂಡ ಗೆಲ್ಲಲ್ಲ ಅಂದುಕೊಂಡಿದ್ರೆ ಅದು ಸುಳ್ಳು ಎಂದಿದ್ದಾರೆ. ಈ ಮಾತು ಪರೋಕ್ಷವಾಗಿ ವಿರಾಟ್ ಕೊಹ್ಲಿಯನ್ನೆ ಗುರಿ ಮಾಡಿ ಹೇಳಿದಂತಿದೆ.
ಗವಾಸ್ಕರ್ ನೀಡಿರುವ ಹೇಳಿಕೆ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಫ್ಯಾನ್ಸ್ ವಲಯದಲ್ಲಂತೂ ಪರ-ವಿರೋಧದ ಚರ್ಚೆ ಜೋರಾಗಿದ್ದು, ವಿವಾದದ ಸ್ವರೂಪ ಪಡೆದುಕೊಂಡಿದೆ. ಮುಂದೆ ಈ ವಿವಾದ ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್