ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ವಿರುದ್ಧ ಬಿಸಿಸಿಐ ಕ್ರಮ!
ಬಿಸಿಸಿಐ ಕ್ರಮ ಸರಿಯಾಗಿದೆ ಎಂದ ದಿಗ್ಗಜ ಸುನಿಲ್ ಗವಾಸ್ಕರ್
ಐಪಿಎಲ್ ಅಲ್ಲ, ಭಾರತೀಯ ಕ್ರಿಕೆಟ್ ಮುಖ್ಯ ಎಂದ ದಿಗ್ಗಜ
ರಣಜಿ ಕ್ರಿಕೆಟ್ ಆಡದ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಅವರನ್ನು ಬಿಸಿಸಿಐ ಗುತ್ತಿಗೆಯಿಂದ ತೆಗೆದಿದ್ದು ಸರಿಯಾಗಿದೆ ಎಂದು ದಿಗ್ಗಜ ಕ್ರಿಕೆಟರ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಈ ಸಂಬಂಧ ಮಾತಾಡಿದ ಸುನಿಲ್ ಗವಾಸ್ಕರ್, ಬಿಸಿಸಿಐನ ಈ ಕ್ರಮ ಸರಿಯಾಗಿದೆ. ಪ್ರತಿಯೊಬ್ಬರೂ ರಣಜಿ ಟ್ರೋಫಿ ಕ್ರಿಕೆಟ್ ಆಡಬೇಕು. ಐದು ದಿನದ ಆಟ ರಿಯಲ್ ಕ್ರಿಕೆಟ್. ಐಪಿಎಲ್ಗೆ ಬಹಳ ಆದ್ಯತೆ ನೀಡಬಾರದು. ದೇಸಿ ಕ್ರಿಕೆಟ್ ಆಡೋದು ಭಾರತ ತಂಡದ ಆಟಗಾರರಿಗೆ ತುಂಬಾ ಒಳ್ಳೆಯದು ಎಂದರು.
ಫ್ರೀ ಇದ್ದಾಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕೂಡ ರಣಜಿ ಕ್ರಿಕೆಟ್ ಆಡಲಿ. ನಾವು ರಾಜ್ಯಕ್ಕೆ ಆಡಿದ ಮೇಲೆ ದೇಶಕ್ಕೆ ಆಡಲು ಅವಕಾಶ ಸಿಕ್ಕಿದ್ದು, ಅದೇ ಸರಿಯಾದ ಕ್ರಮ. ಸೆಲೆಕ್ಷನ್ಗೆ ಕೇವಲ ಐಪಿಎಲ್ ಪ್ರದರ್ಶನವನ್ನು ಪರಿಗಣಿಸಬಾರದು ಎಂದರು.
ಬಿಷನ್ ಸಿಂಗ್ ಬೇಡಿ, ಮದನ್ ಲಾಲ್, ಸುರೀಂದರ್ ಅಮರನಾಥ್, ಮೊಹಿಂದರ್ ಅಮರನಾಥ್, ಚೇತನ್ ಚೌಹಾಣ್, ಸಂದೀಪ್ ಪಾಟೀಲ್, ಕರ್ಸನ್ ಘವ್ರಿ, ರವಿಶಾಸ್ತ್ರಿ ಅವರಂತಹ ಆಟಗಾರರೇ ರಣಜಿ ಕ್ರಿಕೆಟ್ ಆಡುತ್ತಿದ್ದರು. ಈಗಿನ ಯುವ ಆಟಗಾರರಿಗೆ ಏನಾಗಿದೆ? ಎಂದು ಗೊತ್ತಾಗುತ್ತಿಲ್ಲ. ಯಾರು ಆಡಲ್ಲವೋ ಅವರ ವಿರುದ್ಧ ಬಿಸಿಸಿಐ ಕ್ರಮ ತೆಗೆದುಕೊಳ್ಳಬೇಕು. ಐಪಿಎಲ್ ಅಲ್ಲ, ಇಂಡಿಯನ್ ಕ್ರಿಕೆಟ್ ಮುಖ್ಯ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ವಿರುದ್ಧ ಬಿಸಿಸಿಐ ಕ್ರಮ!
ಬಿಸಿಸಿಐ ಕ್ರಮ ಸರಿಯಾಗಿದೆ ಎಂದ ದಿಗ್ಗಜ ಸುನಿಲ್ ಗವಾಸ್ಕರ್
ಐಪಿಎಲ್ ಅಲ್ಲ, ಭಾರತೀಯ ಕ್ರಿಕೆಟ್ ಮುಖ್ಯ ಎಂದ ದಿಗ್ಗಜ
ರಣಜಿ ಕ್ರಿಕೆಟ್ ಆಡದ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಅವರನ್ನು ಬಿಸಿಸಿಐ ಗುತ್ತಿಗೆಯಿಂದ ತೆಗೆದಿದ್ದು ಸರಿಯಾಗಿದೆ ಎಂದು ದಿಗ್ಗಜ ಕ್ರಿಕೆಟರ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಈ ಸಂಬಂಧ ಮಾತಾಡಿದ ಸುನಿಲ್ ಗವಾಸ್ಕರ್, ಬಿಸಿಸಿಐನ ಈ ಕ್ರಮ ಸರಿಯಾಗಿದೆ. ಪ್ರತಿಯೊಬ್ಬರೂ ರಣಜಿ ಟ್ರೋಫಿ ಕ್ರಿಕೆಟ್ ಆಡಬೇಕು. ಐದು ದಿನದ ಆಟ ರಿಯಲ್ ಕ್ರಿಕೆಟ್. ಐಪಿಎಲ್ಗೆ ಬಹಳ ಆದ್ಯತೆ ನೀಡಬಾರದು. ದೇಸಿ ಕ್ರಿಕೆಟ್ ಆಡೋದು ಭಾರತ ತಂಡದ ಆಟಗಾರರಿಗೆ ತುಂಬಾ ಒಳ್ಳೆಯದು ಎಂದರು.
ಫ್ರೀ ಇದ್ದಾಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕೂಡ ರಣಜಿ ಕ್ರಿಕೆಟ್ ಆಡಲಿ. ನಾವು ರಾಜ್ಯಕ್ಕೆ ಆಡಿದ ಮೇಲೆ ದೇಶಕ್ಕೆ ಆಡಲು ಅವಕಾಶ ಸಿಕ್ಕಿದ್ದು, ಅದೇ ಸರಿಯಾದ ಕ್ರಮ. ಸೆಲೆಕ್ಷನ್ಗೆ ಕೇವಲ ಐಪಿಎಲ್ ಪ್ರದರ್ಶನವನ್ನು ಪರಿಗಣಿಸಬಾರದು ಎಂದರು.
ಬಿಷನ್ ಸಿಂಗ್ ಬೇಡಿ, ಮದನ್ ಲಾಲ್, ಸುರೀಂದರ್ ಅಮರನಾಥ್, ಮೊಹಿಂದರ್ ಅಮರನಾಥ್, ಚೇತನ್ ಚೌಹಾಣ್, ಸಂದೀಪ್ ಪಾಟೀಲ್, ಕರ್ಸನ್ ಘವ್ರಿ, ರವಿಶಾಸ್ತ್ರಿ ಅವರಂತಹ ಆಟಗಾರರೇ ರಣಜಿ ಕ್ರಿಕೆಟ್ ಆಡುತ್ತಿದ್ದರು. ಈಗಿನ ಯುವ ಆಟಗಾರರಿಗೆ ಏನಾಗಿದೆ? ಎಂದು ಗೊತ್ತಾಗುತ್ತಿಲ್ಲ. ಯಾರು ಆಡಲ್ಲವೋ ಅವರ ವಿರುದ್ಧ ಬಿಸಿಸಿಐ ಕ್ರಮ ತೆಗೆದುಕೊಳ್ಳಬೇಕು. ಐಪಿಎಲ್ ಅಲ್ಲ, ಇಂಡಿಯನ್ ಕ್ರಿಕೆಟ್ ಮುಖ್ಯ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ