ಏರುತ್ತಿದೆ ನೆತ್ತಿ ಸುಡುವ ಬಿಸಿಲು.. ಮೇ 10ರವರೆಗೂ ಹುಷಾರಾಗಿರಿ; ಹೊಸ ಗೈಡ್‌ಲೈನ್ಸ್ ಬಿಡುಗಡೆ!

author-image
admin
Updated On
BREAKING: 52, 53, 54 ಅಲ್ಲ.. ಇಂದು ದೇಶದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಗರಿಷ್ಠ ಉಷ್ಣಾಂಶ ದಾಖಲು
Advertisment
  • ಸುಡೋ ಸೂರ್ಯನ ರಣಾರ್ಭಟ ಶುರುವಾದಂತೆ ಕಾಣುತ್ತಿದೆ
  • ಬಿಸಿಲ ಹೊಡೆತದಿಂದ (Sun stroke) ತಪ್ಪಿಸಿಕೊಳ್ಳಲು ಪರದಾಟ
  • ಹೊಸ ಗೈಡ್‌ಲೈನ್ಸ್‌ಗಾಗಿ ವಿಶೇಷ ತಂಡ ರಚಿಸಿದ ರಾಜ್ಯ ಸರ್ಕಾರ

ಚಳಿಗಾಲ ಮುಗಿದಿದ್ದೇ ಗೊತ್ತಾಗಿಲ್ಲ. ಈ ಬಾರಿಯ ಸುಡೋ ಸೂರ್ಯನ ರಣಾರ್ಭಟ ಶುರುವಾದಂತೆ ಕಾಣುತ್ತಿದೆ. ದೇಶದಲ್ಲಿ ಈ ವರ್ಷದ ಬೇಸಿಗೆ ಕಾಲ ಆದಷ್ಟು ಬೇಗನೇ ಆಗಮಿಸುತ್ತಾ ಇದ್ದು, ಜನರಿಗೆ ಎಚ್ಚರವಾಗಿರಿ ಅನ್ನೋ ಹೈ ಅಲರ್ಟ್ ನೀಡಲಾಗುತ್ತಿದೆ.

ಇಡೀ ದೇಶದಲ್ಲಿ ಕೇರಳ ಜನರಿಗೆ ಬಿರು ಬಿಸಿಲು ಬಹಳ ಬೇಗನೆ ತಟ್ಟೋ ಲಕ್ಷಣ ಕಾಡುತ್ತಿದೆ. ವಾತಾವರಣ ಬದಲಾಗಿದ್ದು, ಬಿಸಿಲ ಹೊಡೆತದಿಂದ (Sun stroke) ತಪ್ಪಿಸಿಕೊಳ್ಳಲು ಜನರು ಪರದಾಡುತ್ತಿದ್ದಾರೆ.

publive-image

ಕೇರಳ ಸರ್ಕಾರದ ಕಾರ್ಮಿಕ ಆಯೋಗ ಈ ಸನ್ ಸ್ಟ್ರೋಕ್ ಹಿನ್ನೆಲೆಯಲ್ಲಿ ಕಾರ್ಮಿಕರಿಗಾಗಿ ಹೊಸ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ಇನ್ನು ಮುಂದೆ ಕೇರಳದಲ್ಲಿ ಕಾರ್ಮಿಕರು ಕೆಲಸ ಮಾಡುವ ಅವಧಿ ಬದಲಾಯಿಸಲು ತೀರ್ಮಾನ ಮಾಡಲಾಗಿದೆ. ಸನ್ ಸ್ಟ್ರೋಕ್ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಮೇ 10ರವರೆಗೂ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

publive-image

ಕೇರಳ ಕಾರ್ಮಿಕ ಆಯೋಗ ಹೊಸ ಗೈಡ್‌ಲೈನ್ಸ್ ಬಿಡುಗಡೆ ಮಾಡಿದ್ದು, ಕೆಲಸ ಮಾಡುವ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ. ಹೊರಾಂಗಣದಲ್ಲಿ ಕೆಲಸ ಮಾಡುವವರಿಗೆ ಮಧ್ಯಾಹ್ನ ವಿಶ್ರಾಂತಿ ಕೊಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಹೊಸ ಗೈಡ್‌ಲೈನ್ಸ್‌ಗಾಗಿ ವಿಶೇಷ ತಂಡವನ್ನು ರಚನೆ ಮಾಡಲಾಗಿದ್ದು, ಅದರ ಪ್ರಕಾರ ಕಾರ್ಮಿಕರ ಕೆಲಸದ ಅವಧಿ 8 ಗಂಟೆ ಇರಬೇಕು. ಅದು ಬೆಳಗ್ಗೆ 7ರಿಂದ ಸಂಜೆ 7 ಗಂಟೆ. ಇದರ ಮಧ್ಯೆ ಮಧ್ಯಾಹ್ನ 12ಗಂಟೆಯಿಂದ 3ಗಂಟೆಯವರೆಗೂ ವಿಶ್ರಾಂತಿಯ ಅವಧಿ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ಹೆಣ್ಣಿನ ಸೌಂದರ್ಯಕ್ಕೆ ಅನಗತ್ಯ ಕೂದಲುಗಳೇ ದಕ್ಕೆ.. ಇದಕ್ಕೆ ಪರಿಹಾರ ಏನು? 

ಪ್ರಮುಖವಾಗಿ ಕಟ್ಟಡ ಕಾರ್ಮಿಕರು, ರಸ್ತೆಯಲ್ಲಿ ಕೆಲಸ ಮಾಡುವ ಕೂಲಿಗಾರರಿಗೆ ಈ ಹೊಸ ನಿಯಮ ಅನ್ವಯವಾಗುತ್ತದೆ. ಮಾರ್ಗಸೂಚಿಯನ್ನು ಕಡ್ಡಾಯ ಪಾಲಿಸುವ ಸಂಬಂಧ ಪ್ರತಿದಿನ ಮೇಲ್ವಿಚಾರಣೆ ಮಾಡಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಕೇರಳದಲ್ಲಿ ಬಿಸಿಲಿನ ಹೊಡೆತಕ್ಕೆ ಕಾರ್ಮಿಕರು ಜೀವ ಕಳೆದುಕೊಳ್ಳಬಾರದು ಅನ್ನೋ ಕಾರಣದಿಂದ ಈ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ.

ಕೇರಳದಂತೆ ಕರ್ನಾಟಕದಲ್ಲೂ ಬಿಸಿಲಿನ ಝಳ ದಿನಕಳೆದಂತೆ ಹೆಚ್ಚಾಗುತ್ತಿದೆ. ಫೆಬ್ರವರಿ ಮುಗಿಯುವುದರೊಳಗೆ ಬಿಸಿಲಿನ ಶಾಖ ತಟ್ಟಲಿದ್ದು, ಮೇ ತಿಂಗಳು ಮುಗಿಯುವವರೆಗೂ ಎಲ್ಲರೂ ಎಚ್ಚರದಿಂದ ಇರೋದು ಒಳ್ಳೆಯದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment