ರಜನಿಗೆ ರಾಜ್ಯಪಾಲರ ಪಟ್ಟ ಕಟ್ಟಿಿದ್ರೆ ಬಿಜೆಪಿಗೆ ಆಗೋ ಲಾಭವೇನು.?
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಬಳಿಕ ಹೊಸ ಚರ್ಚೆ
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಈ ಸುದ್ದಿ ನಿಜಾನಾ?
ನವದೆಹಲಿ: ಜೈಲರ್ ಸಿನಿಮಾದ ಸಕ್ಸಸ್ನಲ್ಲಿರೋ ಸೂಪರ್ ಸ್ಟಾರ್ ರಜನಿಕಾಂತ್ ಅವರು ತೆಲಂಗಾಣದ ರಾಜ್ಯಪಾಲ ಆಗುತ್ತಾರೆ ಎನ್ನುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇಂತಹದೊಂದು ಬಂಪರ್ ಆಫರ್ ಅನ್ನು ತಲೈವಾಗೆ ನೀಡಿದೆ ಎಂದು ಹೇಳಲಾಗುತ್ತಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಈ ಹಿಂದೆ ತಮಿಳುನಾಡು ರಾಜಕಾರಣದಲ್ಲಿ ಧುಮುಕುವುದಾಗಿ ಹೇಳಿದ್ದರು. ನಂತರ ದಿನಗಳಲ್ಲಿ ಅನಾರೋಗ್ಯ ಕಾರಣ ನೀಡಿ ಅವರು ರಾಜಕಾರಣದಿಂದ ಹಿಂದೆ ಸರಿದಿದ್ದರು. ಆದ್ರೆ ಈಗ ರಜನಿಕಾಂತ್ ಅವರು ತೆಲಂಗಾಣದ ನೂತನ ರಾಜ್ಯಪಾಲರಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಈ ಬಗ್ಗೆ ಅವರು ಮಾತ್ರ ಅಧಿಕೃತವಾಗಿ ಹೇಳಿಕೆ ನೀಡಿಲ್ಲ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಜೈಲರ್ ಸಿನಿಮಾ ಯಶಸ್ವಿಯಾಗಿದ್ದಕ್ಕೆ ರಜನಿಕಾಂತ್ ಅವರು ಹಿಮಾಲಯಕ್ಕೆ ಟ್ರಿಪ್ ಹೋಗಿದ್ದರು. ಹಿಮಾಲಯದಿಂದ ವಾಪಸ್ ಆಗುವಾಗ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಜಾರ್ಖಂಡ್ ಗವರ್ನರ್ ಸಿ.ಪಿ ರಾಧಾಕೃಷ್ಣ ಸೇರಿದಂತೆ ಕೆಲವು ರಾಜಕೀಯ ಗಣ್ಯರನ್ನು ಭೇಟಿ ಮಾಡಿದ್ದರು. ಹೀಗಾಗಿ ಬಿಜೆಪಿಯು ರಜನಿಕಾಂತ್ ಅವರನ್ನು ಗವರ್ನರ್ ಆಗಿ ನೇಮಕ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ರಜನಿಕಾಂತ್ರನ್ನು ರಾಜ್ಯಪಾಲರನ್ನಾಗಿ ಮಾಡಿದ್ರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಇನ್ನಷ್ಟು ಆಳವಾಗಿ ಬೇರೂರಬಹುದು ಎಂಬ ಲೆಕ್ಕಚಾರದಲ್ಲಿದೆ ಎನ್ನಲಾಗಿದೆ.
ಸದ್ಯ ತೆಲಂಗಾಣದ ಗವರ್ನರ್ ತಮಿಳಿಸೈ ಸೌಂದರರಾಜನ್ ಹಾಗೂ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಮಧ್ಯೆ ಕಿತ್ತಾಟ ನಡೆಯುತ್ತಿದೆ. ಇದು ಅಲ್ಲಿನ ರಾಜಕೀಯ ಬಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೀಗಾಗಿ ಬಿಜೆಪಿ ರಜನಿಕಾಂತ್ರನ್ನ ಗವರ್ನರ್ ಮಾಡುವ ಯೋಚನೆಯಲ್ಲಿದಿಯಾ ಎಂಬ ಪ್ರಶ್ನೆ ಕಾಡುತ್ತಿದೆ. ಜೊತೆಗೆ ಇಂತಹ ಅಧಿಕಾರ ಕೊಟ್ಟರು ತೈಲವಾ ಒಪ್ಪುತ್ತಾರೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಜನಿಗೆ ರಾಜ್ಯಪಾಲರ ಪಟ್ಟ ಕಟ್ಟಿಿದ್ರೆ ಬಿಜೆಪಿಗೆ ಆಗೋ ಲಾಭವೇನು.?
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಬಳಿಕ ಹೊಸ ಚರ್ಚೆ
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಈ ಸುದ್ದಿ ನಿಜಾನಾ?
ನವದೆಹಲಿ: ಜೈಲರ್ ಸಿನಿಮಾದ ಸಕ್ಸಸ್ನಲ್ಲಿರೋ ಸೂಪರ್ ಸ್ಟಾರ್ ರಜನಿಕಾಂತ್ ಅವರು ತೆಲಂಗಾಣದ ರಾಜ್ಯಪಾಲ ಆಗುತ್ತಾರೆ ಎನ್ನುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇಂತಹದೊಂದು ಬಂಪರ್ ಆಫರ್ ಅನ್ನು ತಲೈವಾಗೆ ನೀಡಿದೆ ಎಂದು ಹೇಳಲಾಗುತ್ತಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಈ ಹಿಂದೆ ತಮಿಳುನಾಡು ರಾಜಕಾರಣದಲ್ಲಿ ಧುಮುಕುವುದಾಗಿ ಹೇಳಿದ್ದರು. ನಂತರ ದಿನಗಳಲ್ಲಿ ಅನಾರೋಗ್ಯ ಕಾರಣ ನೀಡಿ ಅವರು ರಾಜಕಾರಣದಿಂದ ಹಿಂದೆ ಸರಿದಿದ್ದರು. ಆದ್ರೆ ಈಗ ರಜನಿಕಾಂತ್ ಅವರು ತೆಲಂಗಾಣದ ನೂತನ ರಾಜ್ಯಪಾಲರಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಈ ಬಗ್ಗೆ ಅವರು ಮಾತ್ರ ಅಧಿಕೃತವಾಗಿ ಹೇಳಿಕೆ ನೀಡಿಲ್ಲ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಜೈಲರ್ ಸಿನಿಮಾ ಯಶಸ್ವಿಯಾಗಿದ್ದಕ್ಕೆ ರಜನಿಕಾಂತ್ ಅವರು ಹಿಮಾಲಯಕ್ಕೆ ಟ್ರಿಪ್ ಹೋಗಿದ್ದರು. ಹಿಮಾಲಯದಿಂದ ವಾಪಸ್ ಆಗುವಾಗ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಜಾರ್ಖಂಡ್ ಗವರ್ನರ್ ಸಿ.ಪಿ ರಾಧಾಕೃಷ್ಣ ಸೇರಿದಂತೆ ಕೆಲವು ರಾಜಕೀಯ ಗಣ್ಯರನ್ನು ಭೇಟಿ ಮಾಡಿದ್ದರು. ಹೀಗಾಗಿ ಬಿಜೆಪಿಯು ರಜನಿಕಾಂತ್ ಅವರನ್ನು ಗವರ್ನರ್ ಆಗಿ ನೇಮಕ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ರಜನಿಕಾಂತ್ರನ್ನು ರಾಜ್ಯಪಾಲರನ್ನಾಗಿ ಮಾಡಿದ್ರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಇನ್ನಷ್ಟು ಆಳವಾಗಿ ಬೇರೂರಬಹುದು ಎಂಬ ಲೆಕ್ಕಚಾರದಲ್ಲಿದೆ ಎನ್ನಲಾಗಿದೆ.
ಸದ್ಯ ತೆಲಂಗಾಣದ ಗವರ್ನರ್ ತಮಿಳಿಸೈ ಸೌಂದರರಾಜನ್ ಹಾಗೂ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಮಧ್ಯೆ ಕಿತ್ತಾಟ ನಡೆಯುತ್ತಿದೆ. ಇದು ಅಲ್ಲಿನ ರಾಜಕೀಯ ಬಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೀಗಾಗಿ ಬಿಜೆಪಿ ರಜನಿಕಾಂತ್ರನ್ನ ಗವರ್ನರ್ ಮಾಡುವ ಯೋಚನೆಯಲ್ಲಿದಿಯಾ ಎಂಬ ಪ್ರಶ್ನೆ ಕಾಡುತ್ತಿದೆ. ಜೊತೆಗೆ ಇಂತಹ ಅಧಿಕಾರ ಕೊಟ್ಟರು ತೈಲವಾ ಒಪ್ಪುತ್ತಾರೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ