/newsfirstlive-kannada/media/post_attachments/wp-content/uploads/2025/02/Suresh-Raina_Kohli.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ ಶುರುವಾಗಲು ಇನ್ನೇನು ಕೇವಲ 20 ದಿನ ಬಾಕಿ ಇದೆ. ಕಳೆದ 17 ಸೀಸನ್​​ಗಳಿಂದಲೂ ಕಪ್​​ ಗೆಲ್ಲುವಲ್ಲಿ ಎಡವಿದ ಆರ್​​​ಸಿಬಿ ಈ ಬಾರಿ ಮೆಗಾ ಹರಾಜಿನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡ ಕಟ್ಟಿದೆ. ಅದರಲ್ಲೂ ಯುವ ಆಟಗಾರರಿಗೆ ಮಣೆ ಹಾಕಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಟ್ರೋಫಿ ಗೆಲ್ಲಲು ಈಗಾಗಲೇ ತಯಾರಿ ಶುರು ಮಾಡಿದೆ.
ಒಂದು ತಿಂಗಳಿಗೆ ಮುನ್ನವೇ ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್​​ಸಿಬಿ ತಂಡದ ಸ್ಟಾರ್​ ಆಟಗಾರರು ತಯಾರಿ ಆರಂಭಿಸಿದ್ದಾರೆ. ಈ ಬಾರಿ ಕಪ್​ ಗೆಲ್ಲಲೇಬೇಕು ಎಂದು ಆರ್​​​ಸಿಬಿ ಮ್ಯಾನೇಜ್ಮೆಂಟ್​ ನಿರ್ಧಾರಕ್ಕೆ ಬಂದಿದೆ. ಹಾಗಾಗಿ ಆರ್​​ಸಿಬಿ ಹೆಡ್​ ಕೋಚ್​​​ ಆ್ಯಂಡಿ ಫ್ಲವರ್​ ದೇಶೀಯ ಆಟಗಾರರೊಂದಿಗೆ ಅಭ್ಯಾಸ ಮಾಡಿಸುತ್ತಿದ್ದಾರೆ. ಇದರ ಮಧ್ಯೆ ಬಿಗ್​ ಅಪ್ಡೇಟ್​ ಒಂದಿದೆ.
ಆರ್​​ಸಿಬಿಗೆ ಸುರೇಶ್​ ರೈನಾ ಎಂಟ್ರಿ
ಮಿಸ್ಟರ್​ ಐಪಿಎಲ್​ ಎಂದೇ ಖ್ಯಾತಿ ಆಗಿರೋ ಸ್ಟಾರ್​ ಪ್ಲೇಯರ್​ ಸುರೇಶ್​ ರೈನಾ. ಇವರು ಹಲವು ವರ್ಷಗಳ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಆಡಿದವರು. ಈಗ ಐಪಿಎಲ್​ ಸೇರಿದಂತೆ ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಆಗಿದ್ದಾರೆ. ಬರೋಬ್ಬರಿ 2 ವರ್ಷಗಳ ಹಿಂದೆ ನಿವೃತ್ತಿ ಆದ ಇವರು ಮತ್ತೆ ಐಪಿಎಲ್​ ಅಖಾಡಕ್ಕೆ ಎಂಟ್ರಿ ನೀಡಿದ್ದಾರೆ. 2025ರ ಐಪಿಎಲ್​​ನಲ್ಲಿ ಆರ್​​ಸಿಬಿ ತಂಡದ ಫೀಲ್ಡಿಂಗ್​ ಕೋಚ್​ ಆಗಿ ರೈನಾ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ.
🚨 SURESH RAINA IN RCB🚨
- Suresh Raina is likely to become a fielding coach of RCB in IPL 2025.[Revyez sports]. pic.twitter.com/h0E9sXX85L
— mufaddla parody (@mufaddl_parody)
🚨 SURESH RAINA IN RCB🚨
- Suresh Raina is likely to become a fielding coach of RCB in IPL 2025.[Revyez sports]. pic.twitter.com/h0E9sXX85L— muffatball vikrant (@Vikrant_1589) February 26, 2025
">February 26, 2025
2025ರ ಐಪಿಎಲ್​ಗೆ ಮೇಜರ್​ ಸರ್ಜರಿ
2024ರ ಐಪಿಎಲ್ನಲ್ಲಿ ಪ್ಲೇ ಆಫ್ ಬಹಳ ರೋಚಕತೆಯಿಂದ ಕೂಡಿತ್ತು. ಆರಂಭದಲ್ಲಿ ಸತತ ಸೋಲು ಕಂಡಿದ್ದ ಆರ್​ಸಿಬಿ ಬಳಿಕ 7 ಪಂದ್ಯ ಗೆದ್ದು ಆರ್​​ಸಿಬಿ ಪ್ಲೇ ಆಫ್ಗೆ ಪ್ರವೇಶಿಸಿತ್ತು. ಬಳಿಕ ಸೆಮೀಸ್​ನಲ್ಲಿ ರಾಜಸ್ಥಾನ್​ ಮೇಲೆ ಸೋತು ನಿರಾಸೆ ಮೂಡಿಸಿದ್ರು. ಹಾಗಾಗಿ ಮುಂದಿನ ಸೀಸನ್​ಗೆ ಆರ್​​ಸಿಬಿ ತಂಡದಲ್ಲಿ ಮೇಜರ್​ ಸರ್ಜರಿ ಆಗಲಿದೆ ಎಂದು ಫ್ಯಾನ್ಸ್​ ನಿರೀಕ್ಷೆ ಮಾಡಿದ್ದರು.
ನಿರೀಕ್ಷೆಯಂತೆ ಹರಾಜಿಗೆ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿತ್ತು. ಅದಕ್ಕೆ ತಕ್ಕಂತೆ ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಯಶ್ ದಯಾಳ್ ಅವರನ್ನು ಮಾತ್ರ ರೀಟೈನ್​ ಮಾಡಿಕೊಂಡು ಎಲ್ಲರನ್ನು ರಿಲೀಸ್​ ಮಾಡಲಾಗಿತ್ತು. ಐಪಿಎಲ್ ಮೆಗಾ ಹರಾಜಿನಲ್ಲಿ ಫಿಲ್ ಸಾಲ್ಟ್, ಜೋಶ್ ಹೇಜಲ್​ವುಡ್​​, ಜೇಕಬ್ ಬೆಥೆಲ್, ಭುವನೇಶ್ವರ್ ಕುಮಾರ್, ಲಿಯಾಮ್ ಲಿವಿಂಗ್ಸ್ಟೋನ್​ ಅವರನ್ನು ಖರೀದಿ ಮಾಡಿದೆ. ಈ ಬಾರಿ ತಂಡ ಬಲಿಷ್ಠವಾಗಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ಸದ್ಯ ನಡೆಯುತ್ತಿರೋ ಆರ್​​ಸಿಬಿ ಕ್ಯಾಂಪ್​​ನಲ್ಲಿ ಕೃನಾಲ್ ಪಾಂಡ್ಯ, ಭುವಿ, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಯಶ್ ದಯಾಳ್​​ ಮತ್ತು ರಸಿಖ್ ದಾರ್ ಸೇರಿ ಹಲವರು ಭಾಗಿಯಾಗಿದ್ದಾರೆ.
ಇದನ್ನೂ ಓದಿ:ರಾತ್ರಿ ಊಟ ಆಗುತ್ತಿದ್ದಂತೆ ಈ ತಪ್ಪು ಮಾಡ್ತಿದ್ರೆ ಇಂದೇ ಬಿಟ್ಟುಬಿಡಿ! ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us