/newsfirstlive-kannada/media/post_attachments/wp-content/uploads/2025/02/mahakumbhmela-Prayagraj.jpg)
ಆಧ್ಯಾತ್ಮಿಕ ರಾಜಧಾನಿ ದೇವ ಪ್ರಯಾಗದಲ್ಲಿ ಕೋಟ್ಯಂತರ ಭಕ್ತರು ಮಹಾಕುಂಭಮೇಳ ವೀಕ್ಷಿಸಲು ಹೋಗುತ್ತಿದ್ದಾರೆ. 144 ವರ್ಷಕ್ಕೊಮ್ಮೆ ನಡೆಯೋ ಮಹಾಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಇದೇ ರೀತಿಯೇ ಬಿಹಾರದ ದಶರಥ್ ಯಾದವ್​​ ಕೂಡ ತೆರಳಿದ್ರು. ಈ ವೇಳೆ ಅಚ್ಚರಿಯ ಪ್ರಾಣಿಯೊಂದು ಅವರ ಪಾದಕ್ಕೆ ತಾಕಿದೆ. ಆ ಪ್ರಾಣಿ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹುದೊಡ್ಡ ಚರ್ಚೆಯೇ ಶುರುವಾಗಿದೆ.
ಇದನ್ನೂ ಓದಿ: 50 ಅಲ್ಲ 60 ಕೋಟಿ ಭಕ್ತರು.. ಪ್ರಯಾಗ್ರಾಜ್ನಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಎಲ್ಲಾ ಪ್ಲ್ಯಾನ್ಗಳು ಫೇಲ್!
ಅಜ್ಜನ ಕಾಲಿಗೆ ತಾಕಿದ್ದು 300 ವರ್ಷ ಬದುಕೋ ಜೀವಿ
ಶಾಹಿ ಸ್ನಾನ ಮಾಡಲೆಂದು ತ್ರಿವೇಣಿ ಸಂಗಮಕ್ಕೆ ಇಳಿದ ದಶರಥ್ ಯಾದವ್​ ಎರಡು ಮುಳುಗು ಹಾಕಿದ್ರು. ಮೂರನೇ ಮುಳಗು ಹಾಕೋ ಹೊತ್ತಿಗೆ ಏನೋ ಕಾಲಿಗೆ ಸ್ಪರ್ಶಿಸಿದಂತಾಯ್ತು. ಅಚ್ಚರಿಯಿಂದಲೇ ಅದನ್ನು ಮುಟ್ಟಿ ನೋಡಿದ್ರು. ಸಾಕ್ಷಾತ್​ ಮಹಾವಿಷ್ಣು ಅಮೃತ ಮಂಥನಕ್ಕಾಗಿ ಕೂರ್ಮಾವತಾರ ಎತ್ತಿದ ಆಮೆ ದಶರಥ್ ಯಾದವ್ ಕಾಲ ಬಳಿ ಇತ್ತು. ಕೂಡಲೇ ಅದನ್ನು ಕಣ್ಣಿಗೆ ಒತ್ತಿಕೊಂಡು ದಡಕ್ಕೆ ತಂದಿದ್ದರು. ಇದೀಗ ಆ ಆಮೆ ದಶರಥ್ ಯಾದವ್​ ಅವರೊಂದಿಗೇ ಇದೆ. ಇಂಥದ್ದೊಂದು ವಿಷಯವನ್ನು ಹೇಳುವ ವಿಡಿಯೋ ಒಂದು ಇನ್​ಸ್ಟಾಗ್ರಾಂನಲ್ಲಿ ಕಾಣಬಹುದು. mushraffbhaijaan ಅನ್ನೋ ಅಕೌಂಟ್​​ನಲ್ಲಿ ಅಜ್ಜ ಈ ಬಗ್ಗೆ ಹೇಳೋ ಮಾಹಿತಿ ಇದೆ.
/newsfirstlive-kannada/media/post_attachments/wp-content/uploads/2025/02/mahakumbhmela-Prayagraj-1.jpg)
ಜೀವಿ ಮೈಮೇಲಿನ 4 ಅಕ್ಷರಗಳು ಜನರನ್ನ ಚಿಂತಿಗೆ ದೂಡಿವೆ!
ದಶರಥ್ ಯಾದವ್ ಅವರಿಗೆ ಸಿಕ್ಕ ಆಮೆ ಇಂಡಿಯನ್ ಫ್ಲಾಪ್ಶೆಲ್ ಆಮೆಯಂತಿದೆ. ವಿಜ್ಞಾನಿಗಳೇ ಹೇಳುವಂತೆ ಆಮೆ ಕನಿಷ್ಠ 30 ರಿಂದ 300 ವರ್ಷದವರೆಗೂ ಬದುಕಬಲ್ಲದು. ಇದಕ್ಕೊಂದು ಉದಾಹರಣೆ ಎಂದರೇ 2006ರಲ್ಲಿ ಕೋಲ್ಕತ್ತಾದ ಅಲಿಪೂರ್ ಜೂಲಾಜಿಕಲ್ ಗಾರ್ಡನ್​​ನಲ್ಲಿ ಪ್ರಾಣ ಬಿಟ್ಟ 256 ವರ್ಷ ಪ್ರಾಯದ ಅದ್ವೈತ ಅನ್ನೋ ಅಮೆ. ಆದರೇ, ಬಹುಪಾಲು ಆಮೆಗಳು 30-40 ವರ್ಷ ಬದುಕುತ್ತವೆ ಎಂದು ಹೇಳಲಾಗುತ್ತದೆ. ಆದರೇ, ದಶರಥ್ ಯಾದವ್ ಅವರಿಗೆ ಸಿಕ್ಕ ಆಮೆಯ ಮೈಮೇಲೆ ಹಳದಿ ಬಣ್ಣದಲ್ಲಿ 4 ಅಕ್ಷರಗಳನ್ನು ಯಾರೋ ಬರೆದಿದ್ದಾರೆ. ಅದು ಇಂಗ್ಲಿಷ್​ ನ ಎಬಿಸಿಡಿ ಆಗಿದ್ದು. ಇದನ್ನು ಬರೆದಿದ್ದು ಯಾರು? ಅನ್ನೋ ಬಗ್ಗೆ ಚರ್ಚೆ ನಡೀತಿದೆ. ಆದರೇ, ಬಹುಪಾಲು ಮಂದಿ ಇದು ಸಾಕ್ಷಾತ್​ ವಿಷ್ಣುವಿನ ಪ್ರತಿರೂಪ ಎಂದೇ ಹೇಳುತ್ತಿದ್ದಾರೆ. ಸದ್ಯ, ಇದೇ ಆಮೆಯನ್ನು ನೋಡೋದಕ್ಕೆ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ವಿಶೇಷ ವರದಿ : ಬಸವರಾಜು ಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us