/newsfirstlive-kannada/media/post_attachments/wp-content/uploads/2025/04/SURYAKUMAR-YADAV.jpg)
ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧ ಗೆಲ್ಲಲು ಮುಂಬೈ ಇಂಡಿಯನ್ಸ್​ಗೆ 7 ಬಾಲ್​ಗೆ 24 ರನ್​ಗಳ ಅಗತ್ಯವಿದ್ದಾಗ ತಿಲಕ್ ವರ್ಮಾ ರಿಟೈರಿಂಗ್ ಔಟ್ ಆದರು. ಕಾರಣ ಮುಂಬೈ ಇಂಡಿಯನ್ಸ್​ ಮ್ಯಾನೇಜ್ಮೆಂಟ್ ಅವರನ್ನು ವಾಪಸ್​ ಪೆವಿಲಿಯನ್​​ಗೆ ಕರೆಸಿಕೊಂಡಿತು. ಪರಿಣಾಮ ಮುಂಬೈ 12 ರನ್​ಗಳ ಅಂತರದಿಂದ ಸೋಲನ್ನು ಕಂಡಿತು. ಇದೀಗ ತಿಲಕ್ ವರ್ಮಾರನ್ನು ಮಧ್ಯದಲ್ಲೇ ಕರೆಸಿಕೊಂಡಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಎಲ್​ಎಸ್​ಜಿ ವಿರುದ್ಧ ಗೆಲುವು ನಿರೀಕ್ಷಿಸಿದ್ದ ಸೂರ್ಯ ಕುಮಾರ್ ಯಾದವ್, ತಂಡದ ಮ್ಯಾನೇಜ್ಮೆಂಟ್ ನಿರ್ಧಾರಕ್ಕೆ ಶಾಕ್ ಆಗಿದ್ದಾರೆ. ಪೆವಿಲಿಯನ್​ನಲ್ಲಿ ಕೂತಿದ್ದ ಸೂರ್ಯಗೆ ಏನು ನಡೆಯುತ್ತಿದೆ ಎಂದು ಗೊತ್ತಾಗಲಿಲ್ಲ. ಏಕಾಏಕಿ ಕ್ರೀಸ್​ನಿಂದ ಹೊರ ಬರುತ್ತಿರುವ ತಿಲಕ್ ವರ್ಮಾರನ್ನ ನೋಡಿ ಏನಾಯ್ತು, ಏನಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ಆಗ ದೌಡಾಯಿಸುವ ಮುಂಬೈ ಇಂಡಿಯನ್ಸ್ ಕೋಚ್​ ಮಹೇಲಾ ಜಯವರ್ಧನೆ, ತಂಡದ ನಿರ್ಧಾರದ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸೂರ್ಯ ಫುಲ್ ಗರಂ ಆಗಿಯೇ ಇದ್ದರು. ಸೂರ್ಯಕುಮಾರ್ ಯಾದವ್ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Retired out! ತಿಲಕ್ ವರ್ಮಾಗೆ ದೊಡ್ಡ ಅವಮಾನ.. ಕ್ರೀಸ್​ನಿಂದ ವಾಪಸ್ ಕರೆಸಿದ ಮುಂಬೈ ಇಂಡಿಯನ್ಸ್..!
/newsfirstlive-kannada/media/post_attachments/wp-content/uploads/2025/04/Tilak-verma-pandya.jpg)
ನಿನ್ನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಅದ್ಭುತ ಆಟವಾಡಿದರು. 155.81 ಸ್ಟ್ರೈಕ್​ರೇಟ್​ನಲ್ಲಿ 43 ಬಾಲ್​ಗಳನ್ನು ಎದುರಿಸಿ ಒಂದು ಸಿಕ್ಸರ್​, ಒಂಬತ್ತು ಬೌಂಡರಿಗಳೊಂದಿಗೆ 67 ರನ್​ಗಳಿಸಿದ್ದರು. ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ ಔಟ್ ಆದರು. 16.1ನೇ ಓವರ್​ಗೆ ಸೂರ್ಯ ಔಟ್ ಆಗಿದ್ದಾಗ ತಂಡದ ಮೊತ್ತ ಮೂರು ನಾಲ್ಕು ವಿಕೆಟ್ ಕಳೆದುಕೊಂಡು 152 ರನ್​ಗಳಿಸಿತ್ತು. ಅಂದರೆ 23 ಬಾಲ್​ನಲ್ಲಿ 52 ರನ್​ಗಳ ಅಗತ್ಯ ಇತ್ತು. ಹೀಗಾಗಿ ತಂಡದ ಗೆಲುವಿನ ನಿರೀಕ್ಷೆಯಲ್ಲಿ ಸೂರ್ಯಕುಮಾರ್ ಯಾದವ್ ಇದ್ದರು.
#SuryakumarYadav 🚨🚨 is reportedly disappointed with #TilakVarma being retired out by the management.
Not a good sign for #MumbaiIndians#tilakvarma | #tilakvermahttps://t.co/xO5OuPgGoY— Cinemazic (@Cinemazic) April 5, 2025
ನಿನ್ನೆಯ ಆಟ ಹೇಗಿತ್ತು..?
ಸ್ಫೋಟಕ ಬ್ಯಾಟಿಂಗ್​ಗೆ ಹೆಸರು ಆಗಿರುವ ತಿಲಕ್ ವರ್ಮಾ, ನಿನ್ನೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದರು. ಆದರೆ ಕ್ರೀಸ್​ನಲ್ಲಿ ರನ್ ಗಳಿಸಲು ಅವರು ಪರದಾಡಿದರು. 23 ಎಸೆತದಲ್ಲಿ ಕೇವಲ 2 ಬೌಂಡರಿ ಬಾರಿಸಿ 25 ರನ್​​ಗಳಿಸಿ ಅಚ್ಚರಿ ಮೂಡಿಸಿದರು. ಕೊನೆ ಕ್ಷಣದಲ್ಲಿ ಅಂದರೆ ಮುಂಬೈ ಇಂಡಿಯನ್ಸ್​ಗೆ ಗೆಲ್ಲಲು 7 ಬಾಲ್​ನಲ್ಲಿ 24 ರನ್​ಗಳ ಅಗತ್ಯ ಇತ್ತು. ಆಗ ಮುಂಬೈ ಇಂಡಿಯನ್ಸ್​ ಮ್ಯಾನೇಜ್ಮೆಂಟ್, ತಿಲಕ್ ವರ್ಮಾ ರಿಟೈರ್ಡ್ ಔಟ್ ಎಂದು ಘೋಷಣೆ ಮಾಡಿತು. ಈ ವಿಚಾರ ದೊಡ್ಡ ಚರ್ಚೆ ಆಗ್ತಿದೆ.
ಇದನ್ನೂ ಓದಿ: ತಿಲಕ್ ವರ್ಮಾ Retiring Out; ಅಸಲಿ ಕಾರಣ ರಿವೀಲ್ ಮಾಡಿದ ನಾಯಕ ಪಾಂಡ್ಯ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us