ಜುಲೈ 27 ರಿಂದ ಭಾರತ-ಶ್ರೀಲಂಕಾ T20 ಸರಣಿ
ಸೂರ್ಯ T20 ಕ್ಯಾಪ್ಟನ್ಸಿ ದರ್ಬಾರ್ಗೆ ಕ್ಷಣಗಣನೆ
ಫಸ್ಟ್ ಟಾಸ್ಕ್ನಲ್ಲೆ ಸ್ಕೈಗೆ ಸಾಲು ಸಾಲು ಚಾಲೆಂಜಸ್
ಇನ್ನೂ ಎರಡೇ ಎರಡು ದಿನ. ಟೀಮ್ ಇಂಡಿಯಾ T20 ತಂಡದಲ್ಲಿ ಸೂರ್ಯಕುಮಾರ್ ಯಾದವ್ ದರ್ಬಾರ್ ಶುರುವಾಗಲಿದೆ. ಹೊಸ ಕ್ಯಾಪ್ಟನ್ ಮೇಲೆ ಅಪಾರ ನಿರೀಕ್ಷೆಗಳಿವೆ. ಅಂತೆಯೇ ಹಲವು ಸವಾಲುಗಳು ಸೂರ್ಯನ ಮುಂದಿವೆ.
ಸೂರ್ಯ T20 ಕ್ಯಾಪ್ಟನ್ಸಿ ದರ್ಬಾರ್ಗೆ ಕ್ಷಣಗಣನೆ..!
ಶ್ರೀಲಂಕಾ ಎದುರಿನ ದ್ವಿಪಕ್ಷೀಯ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಜುಲೈ 27 ರಿಂದ ಇಂಡೋ-ಲಂಕಾ ಚುಟುಕು ದಂಗಲ್ ಆರಂಭಗೊಳ್ಳಲಿದ್ದು, ಮೆನ್ ಇನ್ ಬ್ಲೂ ಪಡೆ ಈಗಾಗ್ಲೇ ಸಿಂಹಳೀಯರ ನಾಡಿಗೆ ಕಾಲಿಟ್ಟಿದೆ. ಇಲ್ಲಿಂದಲೇ ಸೂರ್ಯಕುಮಾರ್ ಯಾದವ್ ಫುಲ್ಟೈಮ್ ಟಿ20 ಕ್ಯಾಪ್ಟನ್ ಆಗಿ ಅಧಿಕೃತವಾಗಿ ಚಾರ್ಜ್ ತೆಗೆದುಕೊಳ್ಳಲಿದ್ದಾರೆ. ಮೊದಲ ಟಾಸ್ಕ್ನಲ್ಲೇ ಸ್ಕೈಗೆ ಸಾಲು ಸಾಲು ಚಾಲೆಂಜಸ್ಗಳಿದ್ದು, ಹೇಗೆ ಮೆಟ್ಟಿ ನಿಲ್ತಾರೆ ಅನ್ನೋ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ಓದಿ:ನಟ ಡಾಲಿ ಧನಂಜಯ್ ಅವರ ಪ್ರೀತಿಯ ಅಜ್ಜಿ ಮಲ್ಲಮ್ಮ ನಿಧನ
ಚಾಲೆಂಜ್ ನಂ.1: ನಾಯಕನಾಗಿ ಸಾಮರ್ಥ್ಯ ನಿರೂಪಿಸೋದು
ಫುಲ್ ಟೈಮ್ ಕ್ಯಾಪ್ಟನ್ ಆಗಿ ಆಯ್ಕೆಯಾದ ಸೂರ್ಯಕುಮಾರ್ ಯಾದವ್ಗೆ ಹೆಚ್ಚು ತಂಡ ಮುನ್ನಡೆಸಿದ ಅನುಭವವಿಲ್ಲ. ಹಂಗಾಮಿ ಕ್ಯಾಪ್ಟನ್ ಆಗಿ ಈವರೆಗೆ 7 ಪಂದ್ಯಗಳಲ್ಲಿ ಭಾರತ ತಂಡವನ್ನ ಮುನ್ನಡೆಸಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ತಂಡದ ಚುಕ್ಕಾಣಿ ಹಿಡಿದಿರೋ ಸೂರ್ಯನ ಮುಂದೆ ಸಾಮರ್ಥ್ಯ ನಿರೂಪಿಸೋ ಚಾಲೆಂಜ್ ಇದೆ. ಹಾರ್ದಿಕ್ ಪಾಂಡ್ಯ ಬದಲಾಗಿ ನಾಯಕತ್ವ ಸೂರ್ಯನಿಗೆ ಸಿಕ್ಕಿರೋದ್ರಿಂದ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡು ತಾನು ನಾಯಕತ್ವಕ್ಕೆ ಅರ್ಹ ಎಂಬ ಸಂದೇಶವನ್ನು ರವಾನಿಸಬೇಕಿದೆ.
ಚಾಲೆಂಜ್ ನಂ.2: ರೋಹಿತ್ ಲೆಗಸಿ ಮುಂದುವರಿಸುವುದು
ನ್ಯೂ ಕ್ಯಾಪ್ಟನ್ ಸೂರ್ಯಕುಮಾರ್ಗೆ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾರ ಲೆಗಸಿ ಕಂಟಿನ್ಯೂ ಮಾಡಬೇಕಾದ ಒತ್ತಡ ಇದೆ. ರೋಹಿತ್ ಕಳೆದ 3 ವರ್ಷಗಳಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಯಾವುದೇ ವಿವಾದಕ್ಕೆ ಎಡೆ ಮಾಡಿಕೊಡದೇ ಪ್ಲೇಯರ್ಸ್ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದರು. ಇದೀಗ ಆ ಪರಂಪರೆಯನ್ನ ಉಳಿಸಿ, ಬೆಳೆಸುವ ಸವಾಲು ಸ್ಕೈ ಮುಂದಿದೆ.
ಇದನ್ನೂ ಓದಿ:ಪ್ರೇಮಿಗಳಿಗಾಗಿ ತಯಾರಾಗಿದೆ ಟು ಇನ್ ಒನ್ ಛತ್ರಿ.. ನಿಮ್ಮ ಪ್ರೇಯಸಿಗಾಗಿ ಖರೀದಿ ಮಾಡಿ!
ಚಾಲೆಂಜ್ ನಂ.3: ಕ್ಯಾಪ್ಟನ್ಸಿ ಅಂಡ್ ಫಾರ್ಮ್ ಬ್ಯಾಲೆನ್ಸ್
ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾ ಸಾರಥಿಯಾದ ಬಳಿಕ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಕ್ಯಾಪ್ಟನ್ಸಿ ಜೊತೆ ಫಾರ್ಮ್ ಕೂಡ ಬ್ಯಾಲೆನ್ಸ್ ಮಾಡಿಕೊಳ್ಳಬೇಕಿದೆ. ಬ್ಯಾಟಿಂಗ್ನಲ್ಲಿ ಸೂರ್ಯನ ಸ್ಥಿರ ಪ್ರದರ್ಶನ ಭಾರತಕ್ಕೆ ಅತಿ ಅವಶ್ಯಕ. ಕ್ಯಾಪ್ಟನ್ಸಿಯಿಂದ ಪರ್ಫಾಮೆನ್ಸ್ ಮೇಲೆ ಎಫೆಕ್ಟ್ ಆಗದಂತೆ ನೋಡಿಕೊಳ್ಳಬೇಕಿದೆ.
ಚಾಲೆಂಜ್ ನಂ.4: ಹಿರಿಯ ಅಂಡ್ ಕಿರಿಯರ ಸಮನ್ವಯತೆ..!
ತಂಡದ ಸಕ್ಸಸ್ನಲ್ಲಿ ಆಟಗಾರರ ನಡುವೆ ಸಮನ್ವಯತೆ ಬಹುಮುಖ್ಯ. ಟೀಮ್ ಇಂಡಿಯಾ ಹಿರಿಯ ಹಾಗೂ ಕಿರಿಯ ಆಟಗಾರರಿಂದ ಕೂಡಿದೆ. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ರಂತ ಸೀನಿಯರ್ ಪ್ಲೇಯರ್ಸ್ ಜತೆ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ರಂತ ಹಲವು ಯುವ ಆಟಗಾರರ ದಂಡಿದೆ. ಇವರ ನಡುವೆ ಸಮನ್ವಯತೆ ಸಾಧಿಸೋದು ಸ್ಕೈಗೆ ಬಿಗ್ಗೆಸ್ಟ್ ಚಾಲೆಂಜ್ ಆಗಿದೆ.
ಚಾಲೆಂಜ್ ನಂ.5: ಕೊಹ್ಲಿ-ರೋಹಿತ್ ಕೊರತೆ
ಕಿಂಗ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರಂತ ದಿಗ್ಗಜ ಆಟಗಾರರು ಟಿ20 ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ. ಇಬ್ಬರೂ ತಂಡಕ್ಕೆ ಆಧಾರ ಸ್ತಂಭವಾಗಿದ್ರು. ಇವರಿಲ್ಲದೇ ಭಾರತ ತಂಡ ಮೊದಲ ಸರಣಿ ಆಡುತ್ತಿದೆ. ಆನ್ಫೀಲ್ಡ್ ಇರಬಹುದು, ಆಫ್ ದ ಫೀಲ್ಡ್ ಇರಬಹುದು. ಡ್ರೆಸ್ಸಿಂಗ್ ರೂಮ್ನಲ್ಲಿ ಜೋಡೆತ್ತುಗಳ ಕೊರತೆ ಕಾಡೇ ಕಾಡುತ್ತೆ. ಆಟದ ಜೊತೆ ಅವರ ಅನುಭವವನ್ನ ತಂಡ ಕಳೆದುಕೊಳ್ಳಲಿದ್ದು, ನ್ಯೂ ಕ್ಯಾಪ್ಟನ್ ಇದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.
ಇದನ್ನೂ ಓದಿ:ಪಾರಿವಾಳ ಉಳಿಸಲು ಹೋಗಿ ನರಳಿ ನರಳಿ ಪ್ರಾಣ ಬಿಟ್ಟ ಬಾಲಕ.. ಅಲ್ಲಿ ಆಗಿದ್ದೇನು..?
ಸರ್ಪ್ರೈಸ್ ರೀತಿಯಲ್ಲಿ ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ಸಿ ಪಟ್ಟಕ್ಕೇರಿದ ಸೂರ್ಯಕುಮಾರ್ ಮುಂದಿರೋ ಹಾದಿಯಂತೂ ಸುಲಭ ಇಲ್ಲ. ಹಲವು ಸವಾಲುಗಳನ್ನ ಮೆಟ್ಟಿನಿಂತರೆ ಮಾತ್ರ ಯಶಸ್ಸು ಸಿಗಲಿದೆ. ಚಾಲೆಂಜಸ್ ನೂತನ ಕ್ಯಾಪ್ಟನ್ ಹೇಗೆ ನಿಭಾಯಿಸ್ತಾರೆ ಅನ್ನೋದನ್ನು ಕಾದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಜುಲೈ 27 ರಿಂದ ಭಾರತ-ಶ್ರೀಲಂಕಾ T20 ಸರಣಿ
ಸೂರ್ಯ T20 ಕ್ಯಾಪ್ಟನ್ಸಿ ದರ್ಬಾರ್ಗೆ ಕ್ಷಣಗಣನೆ
ಫಸ್ಟ್ ಟಾಸ್ಕ್ನಲ್ಲೆ ಸ್ಕೈಗೆ ಸಾಲು ಸಾಲು ಚಾಲೆಂಜಸ್
ಇನ್ನೂ ಎರಡೇ ಎರಡು ದಿನ. ಟೀಮ್ ಇಂಡಿಯಾ T20 ತಂಡದಲ್ಲಿ ಸೂರ್ಯಕುಮಾರ್ ಯಾದವ್ ದರ್ಬಾರ್ ಶುರುವಾಗಲಿದೆ. ಹೊಸ ಕ್ಯಾಪ್ಟನ್ ಮೇಲೆ ಅಪಾರ ನಿರೀಕ್ಷೆಗಳಿವೆ. ಅಂತೆಯೇ ಹಲವು ಸವಾಲುಗಳು ಸೂರ್ಯನ ಮುಂದಿವೆ.
ಸೂರ್ಯ T20 ಕ್ಯಾಪ್ಟನ್ಸಿ ದರ್ಬಾರ್ಗೆ ಕ್ಷಣಗಣನೆ..!
ಶ್ರೀಲಂಕಾ ಎದುರಿನ ದ್ವಿಪಕ್ಷೀಯ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಜುಲೈ 27 ರಿಂದ ಇಂಡೋ-ಲಂಕಾ ಚುಟುಕು ದಂಗಲ್ ಆರಂಭಗೊಳ್ಳಲಿದ್ದು, ಮೆನ್ ಇನ್ ಬ್ಲೂ ಪಡೆ ಈಗಾಗ್ಲೇ ಸಿಂಹಳೀಯರ ನಾಡಿಗೆ ಕಾಲಿಟ್ಟಿದೆ. ಇಲ್ಲಿಂದಲೇ ಸೂರ್ಯಕುಮಾರ್ ಯಾದವ್ ಫುಲ್ಟೈಮ್ ಟಿ20 ಕ್ಯಾಪ್ಟನ್ ಆಗಿ ಅಧಿಕೃತವಾಗಿ ಚಾರ್ಜ್ ತೆಗೆದುಕೊಳ್ಳಲಿದ್ದಾರೆ. ಮೊದಲ ಟಾಸ್ಕ್ನಲ್ಲೇ ಸ್ಕೈಗೆ ಸಾಲು ಸಾಲು ಚಾಲೆಂಜಸ್ಗಳಿದ್ದು, ಹೇಗೆ ಮೆಟ್ಟಿ ನಿಲ್ತಾರೆ ಅನ್ನೋ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ಓದಿ:ನಟ ಡಾಲಿ ಧನಂಜಯ್ ಅವರ ಪ್ರೀತಿಯ ಅಜ್ಜಿ ಮಲ್ಲಮ್ಮ ನಿಧನ
ಚಾಲೆಂಜ್ ನಂ.1: ನಾಯಕನಾಗಿ ಸಾಮರ್ಥ್ಯ ನಿರೂಪಿಸೋದು
ಫುಲ್ ಟೈಮ್ ಕ್ಯಾಪ್ಟನ್ ಆಗಿ ಆಯ್ಕೆಯಾದ ಸೂರ್ಯಕುಮಾರ್ ಯಾದವ್ಗೆ ಹೆಚ್ಚು ತಂಡ ಮುನ್ನಡೆಸಿದ ಅನುಭವವಿಲ್ಲ. ಹಂಗಾಮಿ ಕ್ಯಾಪ್ಟನ್ ಆಗಿ ಈವರೆಗೆ 7 ಪಂದ್ಯಗಳಲ್ಲಿ ಭಾರತ ತಂಡವನ್ನ ಮುನ್ನಡೆಸಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ತಂಡದ ಚುಕ್ಕಾಣಿ ಹಿಡಿದಿರೋ ಸೂರ್ಯನ ಮುಂದೆ ಸಾಮರ್ಥ್ಯ ನಿರೂಪಿಸೋ ಚಾಲೆಂಜ್ ಇದೆ. ಹಾರ್ದಿಕ್ ಪಾಂಡ್ಯ ಬದಲಾಗಿ ನಾಯಕತ್ವ ಸೂರ್ಯನಿಗೆ ಸಿಕ್ಕಿರೋದ್ರಿಂದ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡು ತಾನು ನಾಯಕತ್ವಕ್ಕೆ ಅರ್ಹ ಎಂಬ ಸಂದೇಶವನ್ನು ರವಾನಿಸಬೇಕಿದೆ.
ಚಾಲೆಂಜ್ ನಂ.2: ರೋಹಿತ್ ಲೆಗಸಿ ಮುಂದುವರಿಸುವುದು
ನ್ಯೂ ಕ್ಯಾಪ್ಟನ್ ಸೂರ್ಯಕುಮಾರ್ಗೆ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾರ ಲೆಗಸಿ ಕಂಟಿನ್ಯೂ ಮಾಡಬೇಕಾದ ಒತ್ತಡ ಇದೆ. ರೋಹಿತ್ ಕಳೆದ 3 ವರ್ಷಗಳಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಯಾವುದೇ ವಿವಾದಕ್ಕೆ ಎಡೆ ಮಾಡಿಕೊಡದೇ ಪ್ಲೇಯರ್ಸ್ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದರು. ಇದೀಗ ಆ ಪರಂಪರೆಯನ್ನ ಉಳಿಸಿ, ಬೆಳೆಸುವ ಸವಾಲು ಸ್ಕೈ ಮುಂದಿದೆ.
ಇದನ್ನೂ ಓದಿ:ಪ್ರೇಮಿಗಳಿಗಾಗಿ ತಯಾರಾಗಿದೆ ಟು ಇನ್ ಒನ್ ಛತ್ರಿ.. ನಿಮ್ಮ ಪ್ರೇಯಸಿಗಾಗಿ ಖರೀದಿ ಮಾಡಿ!
ಚಾಲೆಂಜ್ ನಂ.3: ಕ್ಯಾಪ್ಟನ್ಸಿ ಅಂಡ್ ಫಾರ್ಮ್ ಬ್ಯಾಲೆನ್ಸ್
ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾ ಸಾರಥಿಯಾದ ಬಳಿಕ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಕ್ಯಾಪ್ಟನ್ಸಿ ಜೊತೆ ಫಾರ್ಮ್ ಕೂಡ ಬ್ಯಾಲೆನ್ಸ್ ಮಾಡಿಕೊಳ್ಳಬೇಕಿದೆ. ಬ್ಯಾಟಿಂಗ್ನಲ್ಲಿ ಸೂರ್ಯನ ಸ್ಥಿರ ಪ್ರದರ್ಶನ ಭಾರತಕ್ಕೆ ಅತಿ ಅವಶ್ಯಕ. ಕ್ಯಾಪ್ಟನ್ಸಿಯಿಂದ ಪರ್ಫಾಮೆನ್ಸ್ ಮೇಲೆ ಎಫೆಕ್ಟ್ ಆಗದಂತೆ ನೋಡಿಕೊಳ್ಳಬೇಕಿದೆ.
ಚಾಲೆಂಜ್ ನಂ.4: ಹಿರಿಯ ಅಂಡ್ ಕಿರಿಯರ ಸಮನ್ವಯತೆ..!
ತಂಡದ ಸಕ್ಸಸ್ನಲ್ಲಿ ಆಟಗಾರರ ನಡುವೆ ಸಮನ್ವಯತೆ ಬಹುಮುಖ್ಯ. ಟೀಮ್ ಇಂಡಿಯಾ ಹಿರಿಯ ಹಾಗೂ ಕಿರಿಯ ಆಟಗಾರರಿಂದ ಕೂಡಿದೆ. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ರಂತ ಸೀನಿಯರ್ ಪ್ಲೇಯರ್ಸ್ ಜತೆ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ರಂತ ಹಲವು ಯುವ ಆಟಗಾರರ ದಂಡಿದೆ. ಇವರ ನಡುವೆ ಸಮನ್ವಯತೆ ಸಾಧಿಸೋದು ಸ್ಕೈಗೆ ಬಿಗ್ಗೆಸ್ಟ್ ಚಾಲೆಂಜ್ ಆಗಿದೆ.
ಚಾಲೆಂಜ್ ನಂ.5: ಕೊಹ್ಲಿ-ರೋಹಿತ್ ಕೊರತೆ
ಕಿಂಗ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರಂತ ದಿಗ್ಗಜ ಆಟಗಾರರು ಟಿ20 ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ. ಇಬ್ಬರೂ ತಂಡಕ್ಕೆ ಆಧಾರ ಸ್ತಂಭವಾಗಿದ್ರು. ಇವರಿಲ್ಲದೇ ಭಾರತ ತಂಡ ಮೊದಲ ಸರಣಿ ಆಡುತ್ತಿದೆ. ಆನ್ಫೀಲ್ಡ್ ಇರಬಹುದು, ಆಫ್ ದ ಫೀಲ್ಡ್ ಇರಬಹುದು. ಡ್ರೆಸ್ಸಿಂಗ್ ರೂಮ್ನಲ್ಲಿ ಜೋಡೆತ್ತುಗಳ ಕೊರತೆ ಕಾಡೇ ಕಾಡುತ್ತೆ. ಆಟದ ಜೊತೆ ಅವರ ಅನುಭವವನ್ನ ತಂಡ ಕಳೆದುಕೊಳ್ಳಲಿದ್ದು, ನ್ಯೂ ಕ್ಯಾಪ್ಟನ್ ಇದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.
ಇದನ್ನೂ ಓದಿ:ಪಾರಿವಾಳ ಉಳಿಸಲು ಹೋಗಿ ನರಳಿ ನರಳಿ ಪ್ರಾಣ ಬಿಟ್ಟ ಬಾಲಕ.. ಅಲ್ಲಿ ಆಗಿದ್ದೇನು..?
ಸರ್ಪ್ರೈಸ್ ರೀತಿಯಲ್ಲಿ ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ಸಿ ಪಟ್ಟಕ್ಕೇರಿದ ಸೂರ್ಯಕುಮಾರ್ ಮುಂದಿರೋ ಹಾದಿಯಂತೂ ಸುಲಭ ಇಲ್ಲ. ಹಲವು ಸವಾಲುಗಳನ್ನ ಮೆಟ್ಟಿನಿಂತರೆ ಮಾತ್ರ ಯಶಸ್ಸು ಸಿಗಲಿದೆ. ಚಾಲೆಂಜಸ್ ನೂತನ ಕ್ಯಾಪ್ಟನ್ ಹೇಗೆ ನಿಭಾಯಿಸ್ತಾರೆ ಅನ್ನೋದನ್ನು ಕಾದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ