/newsfirstlive-kannada/media/post_attachments/wp-content/uploads/2024/07/SURYAKUMAR-YADAV-4.jpg)
ಇತ್ತೀಚೆಗೆ ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಕೊನೆಯ ಟಿ20 ಪಂದ್ಯ ಗೆದ್ದು ಟೀಮ್​ ಇಂಡಿಯಾ 4-1 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ. ಇಂಗ್ಲೆಂಡ್ ತಂಡದ​​ ವಿರುದ್ಧ ಟಿ20 ಸರಣಿ ಗೆದ್ರೂ ಟೀಮ್​​ ಇಂಡಿಯಾಗೆ ಒಂದು ಆತಂಕ ಕಾಡುತ್ತಲೇ ಇದೆ.
ಈಗಾಗಲೇ ಟೀಮ್​ ಇಂಡಿಯಾ ಸರಣಿ ಗೆದ್ದಾಗಿದೆ. ಆದ್ರೂ, ತಂಡದಲ್ಲಿ ಟೆನ್ಶನ್​ ತಪ್ಪಿಲ್ಲ. ಆಟಗಾರರ ಕಳಪೆ ಪರ್ಫಾಮೆನ್ಸ್​​ ಟೀಮ್​ ಮ್ಯಾನೇಜ್​ಮೆಂಟ್​ ಟೆನ್ಶನ್​ ಹೆಚ್ಚಿಸಿದೆ. ಈ ಟಿ20 ಸರಣಿ ಹಲವು ಆಟಗಾರರ ಭವಿಷ್ಯವನ್ನು ಬಹಿರಂಗಗೊಳಿಸಿದೆ.
ಟೀಮ್​ ಇಂಡಿಯಾ ಕ್ಯಾಪ್ಟನ್​​ ಸೂರ್ಯಕುಮಾರ್​ ಯಾದವ್​ ಟಿ20 ಕ್ರಿಕೆಟ್​ನ ಅಧಿಪತಿ ಅನ್ನಿಸಿಕೊಂಡಿದ್ದ ಆಟಗಾರ. ಆದ್ರೆ, ನಾಯಕನ ಪಟ್ಟಕ್ಕೇರಿದ ಬಳಿಕ ಸೂರ್ಯ ಶೈನ್​ ಆಗ್ತಿಲ್ಲ. ಆಫ್ರಿಕಾದಲ್ಲಿ ಫ್ಲಾಪ್​ ಆದ ಸೂರ್ಯ, ಇದೀಗ ಇಂಗ್ಲೆಂಡ್​ ಸರಣಿಯಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಕೇವಲ 6.50ರ ಹೀನಾಯ ಸರಾಸರಿಯಲ್ಲಿ ರನ್​ಗಳಿಸಿರೋ ಸೂರ್ಯನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎದ್ದಿದೆ. ಇವರು ಹೀಗೆ ಮುಂದಿನ ದಿನಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ರೆ ಸೂರ್ಯಕುಮಾರ್​ ಯಾದವ್​​​ ನಾಯಕತ್ವದಿಂದ ಕಣಕ್ಕಿಳಿಯೋ ಸಾಧ್ಯತೆ ಇದೆ.
ಸೂರ್ಯ ಪರ್ಫಾಮೆನ್ಸ್​ ನೀಡುವಲ್ಲಿ ಫೇಲ್​ ಆಗಿದ್ದಾರೆ. ಕ್ಯಾಪ್ಟನ್ಸಿ ಹೊರತುಪಡಿಸಿ ಬ್ಯಾಟಿಂಗ್​​ನಲ್ಲಿ ಫ್ಲಾಪ್​ ಆಗಿದ್ದಾರೆ. ಹೀಗಾಗಿ ಇವರ ಬದಲಿಗೆ ಹಾರ್ದಿಕ್​ ಪಾಂಡ್ಯಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ.
ಹಾರ್ದಿಕ್​ ಪಾಂಡ್ಯಗೆ ಕ್ಯಾಪ್ಟನ್ಸಿ
ಟೀಮ್​​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ. ಇವರು ಇಂಗ್ಲೆಂಡ್​ ವಿರುದ್ಧ ಟಿ20 ಸರಣಿಯಲ್ಲಿ ಆಲ್​ರೌಂಡರ್​ ಪರ್ಫಾಮೆನ್ಸ್​​ ನೀಡಿದ್ರು. ಬೌಲಿಂಗ್​ ಮತ್ತು ಬ್ಯಾಟಿಂಗ್​ನಲ್ಲೂ ಅಪಾರವಾದ ಕೊಡುಗೆ ನೀಡಿದ ಇವರು ಒಬ್ಬ ಲೀಡರ್​ ಕೂಡ ಹೌದು. ಹಾಗಾಗಿ ಇವರಿಗೆ ನಾಯಕತ್ವ ಪಟ್ಟ ಕಟ್ಟಲು ಬಿಸಿಸಿಐ ಪ್ಲ್ಯಾನ್​ ಮಾಡಿಕೊಂಡಿದೆ.
ಇದನ್ನೂ ಓದಿ:ದೇಶಕ್ಕಾಗಿ ಆಡುವುದು ಗ್ರೇಟ್ ಫೀಲಿಂಗ್.. 37 ಎಸೆತದಲ್ಲಿ ಸೆಂಚುರಿ ಸಿಡಿಸಿ ಅಭಿಷೇಕ್ ಶರ್ಮಾ ಏನ್ ಹೇಳಿದರು?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us