newsfirstkannada.com

ಮದುವೆ ಮಂಟಪಕ್ಕೆ ನುಗ್ಗಿ ಕಿಡ್ನಾಪ್; ಯುವತಿಯ ತಂದೆ ಕಾಲು, ಸಹೋದರನ ಕೈ ಮುರಿದು ಎಸ್ಕೇಪ್!

Share :

Published May 31, 2024 at 5:01pm

    ಮನೆಯವರು ನಿಶ್ಚಯದಂತೆ ಮದುವೆ ಮಾಡಿಕೊಳ್ಳುತ್ತಿದ್ದ ಯುವತಿ

    ಮದುವೆ ಮಂಟಪಕ್ಕೆ ನುಗ್ಗಿದ ಕಿರಾತಕರು ಮನೆಯವರ ಮೇಲೆ ಹಲ್ಲೆ

    ಪ್ರಕರಣವನ್ನು ದಾಖಲಿಸಿಕೊಳ್ಳಲು ಪೊಲೀಸರು ಮೊದಲು ಹಿಂದೇಟು

ಭೋಪಾಲ್: ಮದುವೆ ಮಾಡಿಕೊಳ್ಳುತ್ತಿದ್ದ ಯುವತಿಯನ್ನು ಗ್ಯಾಂಗ್​ವೊಂದು ಕಿಡ್ನಾಪ್ ಮಾಡಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಅಶೋಕ್ ನಗರದಲ್ಲಿ ನಡೆದಿದೆ. ಅಪಹರಣದ ವೇಳೆ ಯುವತಿ ಮನೆಯವರ ಮೇಲೆ ಹಲ್ಲೆ ನಡೆಸಿ, ತಂದೆಯ ಕಾಲು ಹಾಗೂ ಸಹೋದರನ ಕೈಯನ್ನು ಆರೋಪಿ ಕಡೆಯವರು ಮುರಿದಿದ್ದಾರೆ ಎಂದು ಹೇಳಲಾಗಿದೆ.

22 ವರ್ಷದ ಯುವತಿಯ ಮೇಲೆ ಕಲು ಅಲಿಯಾಸ್ ಸಲೀಂ ಖಾನ್ ಎನ್ನುವ ರೌಡಿ ಅತ್ಯಾಚಾರ ಎಸಗಿ, ವಿಡಿಯೋ ಮಾಡಿಕೊಂಡಿದ್ದನು. ಆದರೆ ಮನೆಯವರು ನಿಶ್ಚಯದಂತೆ ಯುವತಿ ಬೇರೊಬ್ಬರನ್ನ ಮದುವೆ ಆಗುತ್ತಿದ್ದಾಗ ಆರೋಪಿ ಸಲೀಂ ಖಾನ್ ತನ್ನ ಸಹಚರರೊಡನೆ ಕತ್ತಿಯನ್ನು ಹಿಡಿದುಕೊಂಡು ಬಂದು ಕಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾನೆ. ಆಕೆಯ ತಂದೆಯ ಕಾಲು ಮುರಿದಿರೋದಲ್ಲದೇ ಸಹೋದರನ ಕೈಯನ್ನು ಮುರಿದು ವಿಕೃತಿ ಮೆರೆದಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: BREAKING: ಪ್ರಜ್ವಲ್​ ರೇವಣ್ಣಗೆ ಬಿಗ್‌ ಶಾಕ್‌; ಕೋರ್ಟ್ ಮಹತ್ವದ ಆದೇಶ 

 

ಇನ್ನು, ಹಲ್ಲೆ ವೇಳೆ ಎಲ್ಲರೂ ಕಿರುಚಿಕೊಂಡಾಗ ಜನರು ಜಮಾಯಿಸಿದ್ದರಿಂದ ಎಳೆದುಕೊಂಡು ಹೋಗ್ತಿದ್ದ ಯುವತಿಯನ್ನು ಬಿಟ್ಟು ಗ್ಯಾಂಗ್ ಪರಾರಿಯಾಗಿದೆ. ಎಸ್ಕೇಪ್ ಆಗುವಾಗ ಯುವತಿಯ ಕುಟುಂಬಸ್ಥರಿಗೆ ಮತ್ತು ನಿಶ್ಚಿತಾರ್ಥ ಮಾಡಿಕೊಂಡ ಹುಡುಗನ ಕುಟುಂಬಕ್ಕೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಇನ್ನು ಈ ಸಂಬಂಧ ಪೊಲೀಸರು ಮೊದಲು ಕೇಸ್ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಆದ್ರೆ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಮಧ್ಯೆ ಪ್ರವೇಶದ ನಂತರ ಯುವತಿ ಮತ್ತು ತಂದೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಮಂಟಪಕ್ಕೆ ನುಗ್ಗಿ ಕಿಡ್ನಾಪ್; ಯುವತಿಯ ತಂದೆ ಕಾಲು, ಸಹೋದರನ ಕೈ ಮುರಿದು ಎಸ್ಕೇಪ್!

https://newsfirstlive.com/wp-content/uploads/2024/05/MP_KIDNAP.jpg

    ಮನೆಯವರು ನಿಶ್ಚಯದಂತೆ ಮದುವೆ ಮಾಡಿಕೊಳ್ಳುತ್ತಿದ್ದ ಯುವತಿ

    ಮದುವೆ ಮಂಟಪಕ್ಕೆ ನುಗ್ಗಿದ ಕಿರಾತಕರು ಮನೆಯವರ ಮೇಲೆ ಹಲ್ಲೆ

    ಪ್ರಕರಣವನ್ನು ದಾಖಲಿಸಿಕೊಳ್ಳಲು ಪೊಲೀಸರು ಮೊದಲು ಹಿಂದೇಟು

ಭೋಪಾಲ್: ಮದುವೆ ಮಾಡಿಕೊಳ್ಳುತ್ತಿದ್ದ ಯುವತಿಯನ್ನು ಗ್ಯಾಂಗ್​ವೊಂದು ಕಿಡ್ನಾಪ್ ಮಾಡಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಅಶೋಕ್ ನಗರದಲ್ಲಿ ನಡೆದಿದೆ. ಅಪಹರಣದ ವೇಳೆ ಯುವತಿ ಮನೆಯವರ ಮೇಲೆ ಹಲ್ಲೆ ನಡೆಸಿ, ತಂದೆಯ ಕಾಲು ಹಾಗೂ ಸಹೋದರನ ಕೈಯನ್ನು ಆರೋಪಿ ಕಡೆಯವರು ಮುರಿದಿದ್ದಾರೆ ಎಂದು ಹೇಳಲಾಗಿದೆ.

22 ವರ್ಷದ ಯುವತಿಯ ಮೇಲೆ ಕಲು ಅಲಿಯಾಸ್ ಸಲೀಂ ಖಾನ್ ಎನ್ನುವ ರೌಡಿ ಅತ್ಯಾಚಾರ ಎಸಗಿ, ವಿಡಿಯೋ ಮಾಡಿಕೊಂಡಿದ್ದನು. ಆದರೆ ಮನೆಯವರು ನಿಶ್ಚಯದಂತೆ ಯುವತಿ ಬೇರೊಬ್ಬರನ್ನ ಮದುವೆ ಆಗುತ್ತಿದ್ದಾಗ ಆರೋಪಿ ಸಲೀಂ ಖಾನ್ ತನ್ನ ಸಹಚರರೊಡನೆ ಕತ್ತಿಯನ್ನು ಹಿಡಿದುಕೊಂಡು ಬಂದು ಕಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾನೆ. ಆಕೆಯ ತಂದೆಯ ಕಾಲು ಮುರಿದಿರೋದಲ್ಲದೇ ಸಹೋದರನ ಕೈಯನ್ನು ಮುರಿದು ವಿಕೃತಿ ಮೆರೆದಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: BREAKING: ಪ್ರಜ್ವಲ್​ ರೇವಣ್ಣಗೆ ಬಿಗ್‌ ಶಾಕ್‌; ಕೋರ್ಟ್ ಮಹತ್ವದ ಆದೇಶ 

 

ಇನ್ನು, ಹಲ್ಲೆ ವೇಳೆ ಎಲ್ಲರೂ ಕಿರುಚಿಕೊಂಡಾಗ ಜನರು ಜಮಾಯಿಸಿದ್ದರಿಂದ ಎಳೆದುಕೊಂಡು ಹೋಗ್ತಿದ್ದ ಯುವತಿಯನ್ನು ಬಿಟ್ಟು ಗ್ಯಾಂಗ್ ಪರಾರಿಯಾಗಿದೆ. ಎಸ್ಕೇಪ್ ಆಗುವಾಗ ಯುವತಿಯ ಕುಟುಂಬಸ್ಥರಿಗೆ ಮತ್ತು ನಿಶ್ಚಿತಾರ್ಥ ಮಾಡಿಕೊಂಡ ಹುಡುಗನ ಕುಟುಂಬಕ್ಕೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಇನ್ನು ಈ ಸಂಬಂಧ ಪೊಲೀಸರು ಮೊದಲು ಕೇಸ್ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಆದ್ರೆ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಮಧ್ಯೆ ಪ್ರವೇಶದ ನಂತರ ಯುವತಿ ಮತ್ತು ತಂದೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More