ಮತ್ತೊಂದು ಸೇಡಿನ ಸಮರ.. ಯುದ್ಧಕ್ಕೆ ಟೀಮ್ ಇಂಡಿಯಾ ಸಿದ್ಧ
ಆಸಿಸ್ನೇ ಬಿಟ್ಟಿಲ್ಲ.. ನೀವ್ ಯಾವ ಲೆಕ್ಕ.. ನಿಮ್ಗೂ ಐತೆ ಹಬ್ಬ
ಇಂಗ್ಲೆಂಡ್ ಲಯನ್ಸ್ ಬೇಟೆಗೆ, ಇಂಡಿಯನ್ ಟೈಗರ್ಸ್ ಕಾತರ
ಟಿ 20 ವಿಶ್ವಕಪ್ ಟೂರ್ನಿ ಮತ್ತೊಂದು ಹೈವೋಲ್ಟೆಜ್ ಕದನಕ್ಕೆ ಸಜ್ಜಾಗಿದೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಕ್ರಿಕೆಟ್ ಲೋಕದ ಪವರ್ಹೌಸ್ಗಳ ಮುಖಾಮುಖಿಯಾಗಲಿದೆ. ಬಲಿಷ್ಠ ಟೀಮ್ ಇಂಡಿಯಾ, ಬಲಾಢ್ಯ ಇಂಗ್ಲೆಂಡ್ ನಡುವಿನ ಕಾಳಗದ ಮೇಲೆ ವಿಶ್ವ ಕ್ರಿಕೆಟ್ ಲೋಕದ ಕಣ್ಣಿದೆ. ಸೆಮಿಸ್ ಸಮರದಲ್ಲಿ ಯಾರು? ಯಾರನ್ನ ಸೋಲಿಸಿ ಫೈನಲ್ಗೆ ಎಂಟ್ರಿ ಕೊಡ್ತಾರೆ? ಎಂಬ ಕುತೂಹಲ ಕ್ರಿಕೆಟ್ ಲೋಕದ ಫೀವರ್ ಹೆಚ್ಚಿಸಿದೆ.
ಮತ್ತೊಂದು ಸೇಡಿನ ಸಮರ..
2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡನ್ನ ಟೀಮ್ ಇಂಡಿಯಾ ತೀರಿಸಿಕೊಂಡಿದ್ದಾಗಿದೆ. ಸೆಂಟ್ ಲೂಸಿಯಾದಲ್ಲಿ ಜಯಭೇರಿ ಬಾರಿಸಿ ಆಸ್ಟ್ರೇಲಿಯಾವನ್ನ ಕಿಕ್ಔಟ್ ಮಾಡಿದ್ದಾಯ್ತು. ಇದೀಗ ಗಯಾನದಲ್ಲಿ ಗೆದ್ದು ಆಂಗ್ಲರಿಗೆ ಗೇಟ್ಪಾಸ್ ನೀಡಲು ಟೀಮ್ ಇಂಡಿಯಾ ಸಜ್ಜಾಗಿದೆ. 2022ರ T20 ವಿಶ್ವಕಪ್ನ ಸೆಮಿಸ್ನಲ್ಲಿ ಹಿಗ್ಗಾಮುಗ್ಗಾ ಬಾರಿಸಿದ್ದ ಆಂಗ್ಲಪಡೆ, ಟೀಮ್ ಇಂಡಿಯಾವನ್ನ ನಾಕ್ಔಟ್ ಮಾಡಿತ್ತು. ಇದೀಗ ಪೇ ಬ್ಯಾಕ್ ಟೈಮ್ ಬಂದಾಗಿದೆ. ಇಂಡಿಯನ್ ಟೈಗರ್ಸ್, ಅಂಗ್ಲರನ್ನ ಬೇಟೆಯಾಡಲು ತುದಿಗಾಲಲ್ಲಿ ನಿಂತಿದ್ದಾರೆ.
ಇದನ್ನೂ ಓದಿ:‘ಪ್ಲೀಸ್ ಯಾರನ್ನೂ ಭೇಟಿಗೆ ಬಿಡಬೇಡಿ..’ ಜೈಲು ಅಧಿಕಾರಿಗಳ ಮುಂದೆ ದರ್ಶನ್ ಪಶ್ಚಾತಾಪದ ಮಾತುಗಳು..?
ಇಂಗ್ಲೆಂಡ್ನ ಅದೃಷ್ಟದಾಟ
ಈ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಬೊಂಬಾಟ್ ಪರ್ಫಾಮೆನ್ಸ್ ನೀಡಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದನ್ನ ಬಿಟ್ರೆ, ಉಳಿದೆಲ್ಲಾ ಪಂದ್ಯಗಳಲ್ಲೂ ಪರ್ಫಾಮ್ ಮಾಡಿ ವಿಜಯ ಸಾಧಿಸಿದೆ. ಸೋಲಿಲ್ಲದ ಸರದಾರನಂತೆ ಸೆಮಿಸ್ಗೆ ಎಂಟ್ರಿ ಕೊಟ್ಟಿದೆ.
ಎದುರಾಳಿ ಇಂಗ್ಲೆಂಡ್ಗೆ ಅದೃಷ್ಟ ಕೈ ಹಿಡಿದಿದೆ. ಟೂರ್ನಿಯ ಮೊದಲ ಪಂದ್ಯ ಮಳೆಯಿಂದ ರದ್ದಾದ್ರೆ, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲ್ತು. ಅಂತಿಮವಾಗಿ ರನ್ರೇಟ್ ಲೆಕ್ಕಾಚಾರದಲ್ಲಿ ಸೂಪರ್ 8ಗೆ ಎಂಟ್ರಿ ಕೊಡ್ತು. ಸೂಪರ್ 8ನಲ್ಲೂ ಸೌತ್ ಆಫ್ರಿಕಾ ಎದುರು ಮುಖಭಂಗ ಅನುಭವಿಸಿತು. ಏಳು-ಬೀಳಿನ ಆಟದಲ್ಲಿ ಅದೃಷ್ಟ ಕೈ ಹಿಡಿದ ಪರಿಣಾಮ ಇಂದು ಸೆಮಿಸ್ ಅಖಾಡದಲ್ಲಿದೆ.
ಬ್ಯಾಟ್ & ಬಾಲ್ ನಡುವೆ ವಾರ್..!
ವಿಶ್ವಕಪ್ ಅಖಾಡದಲ್ಲಿ ಬ್ಯಾಟಿಂಗ್ಗಿಂತ ಬೌಲಿಂಗ್ ಡಿಪಾರ್ಟ್ಮೆಂಟ್ ಟೀಮ್ ಇಂಡಿಯಾ ಮ್ಯಾಚ್ ವಿನ್ನಿಂಗ್ ಸೀಕ್ರೆಟ್ ಆಗಿ ಮಾರ್ಪಟ್ಟಿದೆ. ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ವಿಭಾಗವೇ ಬಲವಾಗಿದೆ. ಆಂಗ್ಲ ಪಡೆ ಬ್ಯಾಟರ್ಸ್ ಅಬ್ಬರದ ಆಟವಾಡ್ತಿದ್ರೆ, ಇಂಡಿಯನ್ ಬೌಲರ್ಸ್ ರಣರಂಗದಲ್ಲಿ ಧೂಳೆಬ್ಬಿಸ್ತಿದ್ದಾರೆ. ಹೀಗಾಗಿ ಇಂದು ಬ್ಯಾಟ್ ಅಂಡ್ ಬಾಲ್ ನಡುವೆ ವಾರ್ ಏರ್ಪಡಲಿದೆ.
ಇದನ್ನೂ ಓದಿ:IND vs ENG ಸೆಮಿಫೈನಲ್ ಪಂದ್ಯ ಕ್ಯಾನ್ಸಲ್..? ವೆದರ್ ರಿಪೋರ್ಟ್ನಲ್ಲಿ ಶಾಕಿಂಗ್ ಮಾಹಿತಿ..!
ಅಗ್ರೆಸ್ಸಿವ್ ನಾಯಕರ ಮುಖಾಮುಖಿ, ಕದನ ಕುತೂಹಲ
ರೋಹಿತ್ ಶರ್ಮಾ-ಜೋಸ್ ಬಟ್ಲರ್.. ಇಬ್ಬರೂ ಅಗ್ರೆಸ್ಸಿವ್ ಕ್ಯಾಪ್ಟನ್ಸ್. ನುಗ್ಗಿ ಹೊಡೆಯೋದೇ ಇಬ್ಬರ ಮಂತ್ರ. ತಾವು ಅಗ್ರೆಸ್ಸಿವ್ ಇಂಟೆಂಟ್ನಲ್ಲಿ ಬ್ಯಾಟಿಂಗ್ ಮಾಡೋದಷ್ಟೇ ಅಲ್ಲ.. ಆನ್ಫೀಲ್ಡ್ನಲ್ಲಿದ್ದಷ್ಟು ಹೊತ್ತು ತಂಡ ಕೂಡ ಹಾಗೇ ಪರ್ಫಾಮ್ ಮಾಡಬೇಕು ಅನ್ನೋದು ಇಬ್ಬರ ನಿರೀಕ್ಷೆ. ಇಬ್ಬರು ಕ್ಯಾಪ್ಟನ್ಸ್ ನಾನಾ? ನೀನಾ? ಎಂಬಂತೆ ಫೈಟ್ ನಡೆಸೋದು ಕನ್ಫರ್ಮ್. ಹೀಗಾಗಿ ಇಂದಿನ ಕದನ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ.
ಗಯಾನದಲ್ಲಿ ಮೊದಲ ಪಂದ್ಯ, ಕಂಡೀಷನ್ಸ್ ಸವಾಲು
ಸೆಮಿಫೈನಲ್ ಕದನ ನಡೀತಿರೋ ಗಯಾನಾದಲ್ಲಿ ಇಂಡಿಯಾ-ಇಂಗ್ಲೆಂಡ್ ಎರಡೂ ತಂಡಗಳಿಗೂ ಕಂಡೀಷನ್ಸ್ನ ಸವಾಲಿದೆ. ಈ ಟೂರ್ನಿಯಲ್ಲಿ ಮೊದಲ ಬಾರಿ ಈ ಮೈದಾನದಲ್ಲಿ ಉಭಯ ತಂಡಗಳು ಕಣಕ್ಕಿಳೀತಾ ಇವೆ. ಹೈ ಸ್ಕೋರ್, ಲೋ ಸ್ಕೋರ್ ಎರಡೂ ಗೇಮ್ಗಳಿಗೆ ಈ ಪಿಚ್ ಸಾಕ್ಷಿಯಾಗಿದೆ. ಬ್ಯಾಟ್ಸ್ಮನ್ಗಳ ಜೊತೆ ಸ್ಪಿನ್ನರ್ಸ್ ಹಾಗೂ ಮೀಡಿಯಂ ಪೇಸರ್ಸ್ ಇಲ್ಲಿ ಮೇಲುಗೈ ಸಾಧಿಸಿದ್ದಾರೆ. ಈ ಕಂಡೀಷನ್ಸ್ಗೆ ಉಭಯ ತಂಡಗಳು ಹೇಗೆ ಹೊಂದಿಕೊಳ್ತವೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನ ಇಲ್ಲ.. ಮಳೆಯಿಂದ ಪಂದ್ಯ ರದ್ದಾದರೆ ಫೈನಲ್ಗೆ ಹೋಗೋದ್ಯಾರು?
ಮಳೆ ಬಂದ್ರೆ ಕಥೆ ಏನು? ಯಾರಿಗೆ ಫೈನಲ್ ಟಿಕೆಟ್?
ಇಂಡೋ-ಇಂಗ್ಲೆಂಡ್ ನಡೆಯೋ ಗಯಾನದಲ್ಲಿ ನಿನ್ನೆ ಮಳೆ ಸುರಿದಿದೆ. ಹವಮಾನ ಇಲಾಖೆ ಯೆಲ್ಲೋ ವಾರ್ನಿಂಗ್ ಕೂಡ ಘೋಷಣೆ ಮಾಡಿತ್ತು. ಇಂದು ಕೂಡ ವರುಣ ಆರ್ಭಟಿಸೋ ಸಾಧ್ಯತೆಯಿದ್ದು, ಪಂದ್ಯಕ್ಕೆ ಮಳೆಯ ಭೀತಿ ಕಾಡ್ತಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದ್ರೆ, ಟೀಮ್ ಇಂಡಿಯಾ ಫೈನಲ್ಗೆ ಎಂಟ್ರಿ ಕೊಡಲಿದೆ. ಟೂರ್ನಿಯಲ್ಲಿ ರೋಹಿತ್ ಪಡೆ ಸೋಲೆ ಕಂಡಿಲ್ಲ. ಇಂಗ್ಲೆಂಡ್ 2 ಪಂದ್ಯಗಳಲ್ಲಿ ಸೋತಿದೆ. ಈ ಲೆಕ್ಕಾಚಾರದಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಲಿದೆ.
ಮಳೆ ಭೀತಿ ನಡುವೆಯೋ ಇಂದಿನ ಪಂದ್ಯ ನಡೆಯಲಿ ಅನ್ನೋದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಸೆಯಾಗಿದೆ. ಸೇಡಿನ ಸಮರದಲ್ಲಿ ಇಂಡಿಯನ್ ಟೈಗರ್ಸ್, ಥ್ರಿ ಲಯನ್ಸ್ನ ಚಿಂದಿ ಉಡಾಯಿಸೋದನ್ನ ನೋಡೋ ಆಸೆ ಫ್ಯಾನ್ಸ್ಗಿದೆ. ಗಯಾನದಲ್ಲಿ ಟೀಮ್ ಇಂಡಿಯಾ ಆರ್ಭಟಿಸಲಿ. ಹಳೆ ಸೇಡನ್ನ ತೀರಿಸಿಕೊಂಡು, ಫೈನಲ್ಗೆ ರಾಜನಂತೆ ಎಂಟ್ರಿ ಕೊಡಲಿ ಅನ್ನೋದು ನಮ್ಮ ಆಶಯವೂ ಕೂಡ.
ಇದನ್ನೂ ಓದಿ:ಇಂಗ್ಲೆಂಡ್, ಅಫ್ಘಾನಿಸ್ತಾನ್ ಯಾವುದೂ ಅಲ್ಲ.. ಈ ತಂಡ ವಿಶ್ವಕಪ್ ಗೆಲ್ಲುತ್ತೆ ಎಂದ ಮಾಜಿ ಕ್ರಿಕೆಟಿಗ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಮತ್ತೊಂದು ಸೇಡಿನ ಸಮರ.. ಯುದ್ಧಕ್ಕೆ ಟೀಮ್ ಇಂಡಿಯಾ ಸಿದ್ಧ
ಆಸಿಸ್ನೇ ಬಿಟ್ಟಿಲ್ಲ.. ನೀವ್ ಯಾವ ಲೆಕ್ಕ.. ನಿಮ್ಗೂ ಐತೆ ಹಬ್ಬ
ಇಂಗ್ಲೆಂಡ್ ಲಯನ್ಸ್ ಬೇಟೆಗೆ, ಇಂಡಿಯನ್ ಟೈಗರ್ಸ್ ಕಾತರ
ಟಿ 20 ವಿಶ್ವಕಪ್ ಟೂರ್ನಿ ಮತ್ತೊಂದು ಹೈವೋಲ್ಟೆಜ್ ಕದನಕ್ಕೆ ಸಜ್ಜಾಗಿದೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಕ್ರಿಕೆಟ್ ಲೋಕದ ಪವರ್ಹೌಸ್ಗಳ ಮುಖಾಮುಖಿಯಾಗಲಿದೆ. ಬಲಿಷ್ಠ ಟೀಮ್ ಇಂಡಿಯಾ, ಬಲಾಢ್ಯ ಇಂಗ್ಲೆಂಡ್ ನಡುವಿನ ಕಾಳಗದ ಮೇಲೆ ವಿಶ್ವ ಕ್ರಿಕೆಟ್ ಲೋಕದ ಕಣ್ಣಿದೆ. ಸೆಮಿಸ್ ಸಮರದಲ್ಲಿ ಯಾರು? ಯಾರನ್ನ ಸೋಲಿಸಿ ಫೈನಲ್ಗೆ ಎಂಟ್ರಿ ಕೊಡ್ತಾರೆ? ಎಂಬ ಕುತೂಹಲ ಕ್ರಿಕೆಟ್ ಲೋಕದ ಫೀವರ್ ಹೆಚ್ಚಿಸಿದೆ.
ಮತ್ತೊಂದು ಸೇಡಿನ ಸಮರ..
2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡನ್ನ ಟೀಮ್ ಇಂಡಿಯಾ ತೀರಿಸಿಕೊಂಡಿದ್ದಾಗಿದೆ. ಸೆಂಟ್ ಲೂಸಿಯಾದಲ್ಲಿ ಜಯಭೇರಿ ಬಾರಿಸಿ ಆಸ್ಟ್ರೇಲಿಯಾವನ್ನ ಕಿಕ್ಔಟ್ ಮಾಡಿದ್ದಾಯ್ತು. ಇದೀಗ ಗಯಾನದಲ್ಲಿ ಗೆದ್ದು ಆಂಗ್ಲರಿಗೆ ಗೇಟ್ಪಾಸ್ ನೀಡಲು ಟೀಮ್ ಇಂಡಿಯಾ ಸಜ್ಜಾಗಿದೆ. 2022ರ T20 ವಿಶ್ವಕಪ್ನ ಸೆಮಿಸ್ನಲ್ಲಿ ಹಿಗ್ಗಾಮುಗ್ಗಾ ಬಾರಿಸಿದ್ದ ಆಂಗ್ಲಪಡೆ, ಟೀಮ್ ಇಂಡಿಯಾವನ್ನ ನಾಕ್ಔಟ್ ಮಾಡಿತ್ತು. ಇದೀಗ ಪೇ ಬ್ಯಾಕ್ ಟೈಮ್ ಬಂದಾಗಿದೆ. ಇಂಡಿಯನ್ ಟೈಗರ್ಸ್, ಅಂಗ್ಲರನ್ನ ಬೇಟೆಯಾಡಲು ತುದಿಗಾಲಲ್ಲಿ ನಿಂತಿದ್ದಾರೆ.
ಇದನ್ನೂ ಓದಿ:‘ಪ್ಲೀಸ್ ಯಾರನ್ನೂ ಭೇಟಿಗೆ ಬಿಡಬೇಡಿ..’ ಜೈಲು ಅಧಿಕಾರಿಗಳ ಮುಂದೆ ದರ್ಶನ್ ಪಶ್ಚಾತಾಪದ ಮಾತುಗಳು..?
ಇಂಗ್ಲೆಂಡ್ನ ಅದೃಷ್ಟದಾಟ
ಈ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಬೊಂಬಾಟ್ ಪರ್ಫಾಮೆನ್ಸ್ ನೀಡಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದನ್ನ ಬಿಟ್ರೆ, ಉಳಿದೆಲ್ಲಾ ಪಂದ್ಯಗಳಲ್ಲೂ ಪರ್ಫಾಮ್ ಮಾಡಿ ವಿಜಯ ಸಾಧಿಸಿದೆ. ಸೋಲಿಲ್ಲದ ಸರದಾರನಂತೆ ಸೆಮಿಸ್ಗೆ ಎಂಟ್ರಿ ಕೊಟ್ಟಿದೆ.
ಎದುರಾಳಿ ಇಂಗ್ಲೆಂಡ್ಗೆ ಅದೃಷ್ಟ ಕೈ ಹಿಡಿದಿದೆ. ಟೂರ್ನಿಯ ಮೊದಲ ಪಂದ್ಯ ಮಳೆಯಿಂದ ರದ್ದಾದ್ರೆ, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲ್ತು. ಅಂತಿಮವಾಗಿ ರನ್ರೇಟ್ ಲೆಕ್ಕಾಚಾರದಲ್ಲಿ ಸೂಪರ್ 8ಗೆ ಎಂಟ್ರಿ ಕೊಡ್ತು. ಸೂಪರ್ 8ನಲ್ಲೂ ಸೌತ್ ಆಫ್ರಿಕಾ ಎದುರು ಮುಖಭಂಗ ಅನುಭವಿಸಿತು. ಏಳು-ಬೀಳಿನ ಆಟದಲ್ಲಿ ಅದೃಷ್ಟ ಕೈ ಹಿಡಿದ ಪರಿಣಾಮ ಇಂದು ಸೆಮಿಸ್ ಅಖಾಡದಲ್ಲಿದೆ.
ಬ್ಯಾಟ್ & ಬಾಲ್ ನಡುವೆ ವಾರ್..!
ವಿಶ್ವಕಪ್ ಅಖಾಡದಲ್ಲಿ ಬ್ಯಾಟಿಂಗ್ಗಿಂತ ಬೌಲಿಂಗ್ ಡಿಪಾರ್ಟ್ಮೆಂಟ್ ಟೀಮ್ ಇಂಡಿಯಾ ಮ್ಯಾಚ್ ವಿನ್ನಿಂಗ್ ಸೀಕ್ರೆಟ್ ಆಗಿ ಮಾರ್ಪಟ್ಟಿದೆ. ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ವಿಭಾಗವೇ ಬಲವಾಗಿದೆ. ಆಂಗ್ಲ ಪಡೆ ಬ್ಯಾಟರ್ಸ್ ಅಬ್ಬರದ ಆಟವಾಡ್ತಿದ್ರೆ, ಇಂಡಿಯನ್ ಬೌಲರ್ಸ್ ರಣರಂಗದಲ್ಲಿ ಧೂಳೆಬ್ಬಿಸ್ತಿದ್ದಾರೆ. ಹೀಗಾಗಿ ಇಂದು ಬ್ಯಾಟ್ ಅಂಡ್ ಬಾಲ್ ನಡುವೆ ವಾರ್ ಏರ್ಪಡಲಿದೆ.
ಇದನ್ನೂ ಓದಿ:IND vs ENG ಸೆಮಿಫೈನಲ್ ಪಂದ್ಯ ಕ್ಯಾನ್ಸಲ್..? ವೆದರ್ ರಿಪೋರ್ಟ್ನಲ್ಲಿ ಶಾಕಿಂಗ್ ಮಾಹಿತಿ..!
ಅಗ್ರೆಸ್ಸಿವ್ ನಾಯಕರ ಮುಖಾಮುಖಿ, ಕದನ ಕುತೂಹಲ
ರೋಹಿತ್ ಶರ್ಮಾ-ಜೋಸ್ ಬಟ್ಲರ್.. ಇಬ್ಬರೂ ಅಗ್ರೆಸ್ಸಿವ್ ಕ್ಯಾಪ್ಟನ್ಸ್. ನುಗ್ಗಿ ಹೊಡೆಯೋದೇ ಇಬ್ಬರ ಮಂತ್ರ. ತಾವು ಅಗ್ರೆಸ್ಸಿವ್ ಇಂಟೆಂಟ್ನಲ್ಲಿ ಬ್ಯಾಟಿಂಗ್ ಮಾಡೋದಷ್ಟೇ ಅಲ್ಲ.. ಆನ್ಫೀಲ್ಡ್ನಲ್ಲಿದ್ದಷ್ಟು ಹೊತ್ತು ತಂಡ ಕೂಡ ಹಾಗೇ ಪರ್ಫಾಮ್ ಮಾಡಬೇಕು ಅನ್ನೋದು ಇಬ್ಬರ ನಿರೀಕ್ಷೆ. ಇಬ್ಬರು ಕ್ಯಾಪ್ಟನ್ಸ್ ನಾನಾ? ನೀನಾ? ಎಂಬಂತೆ ಫೈಟ್ ನಡೆಸೋದು ಕನ್ಫರ್ಮ್. ಹೀಗಾಗಿ ಇಂದಿನ ಕದನ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ.
ಗಯಾನದಲ್ಲಿ ಮೊದಲ ಪಂದ್ಯ, ಕಂಡೀಷನ್ಸ್ ಸವಾಲು
ಸೆಮಿಫೈನಲ್ ಕದನ ನಡೀತಿರೋ ಗಯಾನಾದಲ್ಲಿ ಇಂಡಿಯಾ-ಇಂಗ್ಲೆಂಡ್ ಎರಡೂ ತಂಡಗಳಿಗೂ ಕಂಡೀಷನ್ಸ್ನ ಸವಾಲಿದೆ. ಈ ಟೂರ್ನಿಯಲ್ಲಿ ಮೊದಲ ಬಾರಿ ಈ ಮೈದಾನದಲ್ಲಿ ಉಭಯ ತಂಡಗಳು ಕಣಕ್ಕಿಳೀತಾ ಇವೆ. ಹೈ ಸ್ಕೋರ್, ಲೋ ಸ್ಕೋರ್ ಎರಡೂ ಗೇಮ್ಗಳಿಗೆ ಈ ಪಿಚ್ ಸಾಕ್ಷಿಯಾಗಿದೆ. ಬ್ಯಾಟ್ಸ್ಮನ್ಗಳ ಜೊತೆ ಸ್ಪಿನ್ನರ್ಸ್ ಹಾಗೂ ಮೀಡಿಯಂ ಪೇಸರ್ಸ್ ಇಲ್ಲಿ ಮೇಲುಗೈ ಸಾಧಿಸಿದ್ದಾರೆ. ಈ ಕಂಡೀಷನ್ಸ್ಗೆ ಉಭಯ ತಂಡಗಳು ಹೇಗೆ ಹೊಂದಿಕೊಳ್ತವೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನ ಇಲ್ಲ.. ಮಳೆಯಿಂದ ಪಂದ್ಯ ರದ್ದಾದರೆ ಫೈನಲ್ಗೆ ಹೋಗೋದ್ಯಾರು?
ಮಳೆ ಬಂದ್ರೆ ಕಥೆ ಏನು? ಯಾರಿಗೆ ಫೈನಲ್ ಟಿಕೆಟ್?
ಇಂಡೋ-ಇಂಗ್ಲೆಂಡ್ ನಡೆಯೋ ಗಯಾನದಲ್ಲಿ ನಿನ್ನೆ ಮಳೆ ಸುರಿದಿದೆ. ಹವಮಾನ ಇಲಾಖೆ ಯೆಲ್ಲೋ ವಾರ್ನಿಂಗ್ ಕೂಡ ಘೋಷಣೆ ಮಾಡಿತ್ತು. ಇಂದು ಕೂಡ ವರುಣ ಆರ್ಭಟಿಸೋ ಸಾಧ್ಯತೆಯಿದ್ದು, ಪಂದ್ಯಕ್ಕೆ ಮಳೆಯ ಭೀತಿ ಕಾಡ್ತಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದ್ರೆ, ಟೀಮ್ ಇಂಡಿಯಾ ಫೈನಲ್ಗೆ ಎಂಟ್ರಿ ಕೊಡಲಿದೆ. ಟೂರ್ನಿಯಲ್ಲಿ ರೋಹಿತ್ ಪಡೆ ಸೋಲೆ ಕಂಡಿಲ್ಲ. ಇಂಗ್ಲೆಂಡ್ 2 ಪಂದ್ಯಗಳಲ್ಲಿ ಸೋತಿದೆ. ಈ ಲೆಕ್ಕಾಚಾರದಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಲಿದೆ.
ಮಳೆ ಭೀತಿ ನಡುವೆಯೋ ಇಂದಿನ ಪಂದ್ಯ ನಡೆಯಲಿ ಅನ್ನೋದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಸೆಯಾಗಿದೆ. ಸೇಡಿನ ಸಮರದಲ್ಲಿ ಇಂಡಿಯನ್ ಟೈಗರ್ಸ್, ಥ್ರಿ ಲಯನ್ಸ್ನ ಚಿಂದಿ ಉಡಾಯಿಸೋದನ್ನ ನೋಡೋ ಆಸೆ ಫ್ಯಾನ್ಸ್ಗಿದೆ. ಗಯಾನದಲ್ಲಿ ಟೀಮ್ ಇಂಡಿಯಾ ಆರ್ಭಟಿಸಲಿ. ಹಳೆ ಸೇಡನ್ನ ತೀರಿಸಿಕೊಂಡು, ಫೈನಲ್ಗೆ ರಾಜನಂತೆ ಎಂಟ್ರಿ ಕೊಡಲಿ ಅನ್ನೋದು ನಮ್ಮ ಆಶಯವೂ ಕೂಡ.
ಇದನ್ನೂ ಓದಿ:ಇಂಗ್ಲೆಂಡ್, ಅಫ್ಘಾನಿಸ್ತಾನ್ ಯಾವುದೂ ಅಲ್ಲ.. ಈ ತಂಡ ವಿಶ್ವಕಪ್ ಗೆಲ್ಲುತ್ತೆ ಎಂದ ಮಾಜಿ ಕ್ರಿಕೆಟಿಗ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್