ಸ್ಪಿನ್ ಟ್ವಿನ್ಸ್ ಮೊರೆ ಹೋಗುತ್ತಾ ಭಾರತ..?
ಭಾರತದ ಗೆಲುವಿಗೆ ಕುಲ್ಚಾ ಜೋಡಿ ಅನಿವಾರ್ಯನಾ..?
ಆಲ್ರೌಂಡರ್ ಜಡೇಜಾ-ಆಕ್ಷರ್ ಕಥೆ ಏನು..?
ಅಮೆರಿಕ ಆಯ್ತು. ಈಗ ಟೀಮ್ ಇಂಡಿಯಾ ಕೆರಿಬಿಯನ್ ನಾಡಿಗೆ ಶಿಫ್ಟ್ ಆಗಿದೆ. ಸೂಪರ್-8 ಕದನಕ್ಕೆ ಸಜ್ಜಾಗ್ತಿರುವ ರೋಹಿತ್ ಪಡೆ, ಗೆಲುವಿನ ಯಾನ ಮುಂದುವರಿಸುವ ಲೆಕ್ಕಾಚಾರದಲ್ಲಿದೆ. ಆದ್ರೆ ಗೆಲುವಿನ ಓಟ ಮುಂದುವರೆಸಬೇಕಂದ್ರೆ, ಟೀಮ್ ಇಂಡಿಯಾ ಕುಲ್ಚಾ ಜೋಡಿಯ ಮೋರೆ ಹೋಗಬೇಕಿದೆ.
ಟಿ20 ವಿಶ್ವಕಪ್ ಮಹಾ ಸಂಗ್ರಾಮದ ಕಾವೇರುತ್ತಿದೆ. ಗ್ರೂಪ್ ಸ್ಟೇಜ್ನಲ್ಲಿ ಅಬ್ಬರದ ಪರ್ಫಾಮೆನ್ಸ್ ನೀಡಿರುವ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ಗೆ ಕಾಲಿಟ್ಟಿದೆ. ಅಮೆರಿಕಾದಿಂದ ವೆಸ್ಟ್ ಇಂಡೀಸ್ಗೆ ಶಿಫ್ಟ್ ಆಗ್ತಿದ್ದಂತೆ ಪ್ಲೇಯಿಂಗ್ ಕಂಡೀಷನ್ಸ್ ಬದಲಾಗಿದ್ದು, ಸ್ಪಿನ್ ಫೇವರ್ ಪಿಚ್ನಲ್ಲಿ ಗೆಲ್ಲೋ ಸವಾಲಿದೆ. ಹೀಗಾಗಿ ಗೆಲುವಿನ ಯಾನ ಮುಂದುವರಿಯಬೇಕಾದ್ರೆ ತಂಡ ಸ್ಪಿನ್ ಟ್ವಿನ್ಸ್ ಕುಲ್ಚಾ ಮೊರೆ ಹೋಗಬೇಕಿದೆ.
ಇದನ್ನೂ ಓದಿ:RCBಗೆ ದುಬಾರಿ ಆಟಗಾರ.. ವಿಶ್ವಕಪ್ನಲ್ಲಿ 4 ಮೇಡಿನ್ ಓವರ್ ಮಾಡಿದ ಸ್ಟಾರ್..!
ಸೂಪರ್-8ನಲ್ಲಿ ಸ್ಪಿನ್ ಟ್ವಿನ್ಸ್ ಕುಲ್ಚಾ ಜೋಡಿ ಕಣಕ್ಕೆ..?
ಲೀಗ್ ಸ್ಟೇಜ್ ಮ್ಯಾಚ್ಗಳಿಗೆ ಹೋಲಿಸಿದ್ರೆ, ಈಗ ಟೀಮ್ ಇಂಡಿಯಾ ಇನ್ಮುಂದೆ ಆಡಲಿರುವ ಕಂಡೀಷನ್ಸ್ ಕಂಪ್ಲೀಟ್ ಚೇಂಜ್ ಆಗಿದೆ. ನ್ಯೂಯಾರ್ಕ್ ಪಿಚ್ ಕಂಪ್ಲೀಟ್ ಪೇಸ್ ಆ್ಯಂಡ್ ಬೌನ್ಸ್ನಿಂದ ಕೂಡಿತ್ತು. ಹೀಗಾಗಿ ಸ್ಪೆಷಲಿಸ್ಟ್ ಸ್ಪಿನ್ನರ್ಗಳ ಅವಶ್ಯಕತೆ ಟೀಮ್ ಇಂಡಿಯಾಗೆ ಬರಲಿಲ್ಲ. ಆದ್ರೀಗ ವೆಸ್ಟ್ ಇಂಡೀಸ್ ಸ್ಲೋ ಟ್ರ್ಯಾಕ್ಗಳಾಗಿದ್ದು, ಸ್ಪಿನ್ನರ್ಗಳೇ ಕ್ರೂಶಿಯಲ್ ರೋಲ್ ಪ್ಲೇ ಮಾಡ್ತಾರೆ. ಹೀಗಾಗಿ ಟೀಮ್ ಇಂಡಿಯಾ ಚೈನಾಮನ್ ಕುಲ್ದೀಪ್ ಯಾದವ್ & ಯಜುವೇಂದ್ರ ಚಹಲ್ಗೆ ಮಣೆ ಹಾಕಬೇಕಿದೆ.
ಕೆರಿಬಿಯನ್ ನಾಡಲ್ಲಿ ಕುಲ್ಚಾ ಜೋಡಿ ಕಮಾಲ್..!
ವೆಸ್ಟ್ ಇಂಡೀಸ್ನಲ್ಲಿ ಚೈನಾಮನ್ ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್ ಜೋಡಿ ಕಮಾಲ್ ಮಾಡಿದ್ದಾರೆ. ಹಿಂದೆ ಕೆರಿಬಿಯನ್ನರ ನಾಡಲ್ಲಿ ಆಡಿರುವ ಅನುಭವ, ವೈಟ್ ಬಾಲ್ ಕ್ರಿಕೆಟ್ನಲ್ಲಿ ನೀಡಿರುವ ಇಂಪ್ರೆಸ್ಸೀವ್ ಪರ್ಫಾಮೆನ್ಸ್ ತಂಡಕ್ಕೆ ನೆರವಾಗಲಿದೆ.
ಇದನ್ನೂ ಓದಿ:CM ಕನಸು ನನಸಿಗೆ ಡಿಕೆಶಿ ನಡೆ ತೀವ್ರ ಕುತೂಹಲ.. ಚೆನ್ನಪಟ್ಟಣ ವಿಚಾರದಲ್ಲಿ ಕಾಂಗ್ರೆಸ್ ಗೇಮ್ ಚೇಂಜ್..!
ವಿಂಡೀಸ್ನಲ್ಲಿ ವೈಟ್ಬಾಲ್ ಫಾರ್ಮೆಟ್ನಲ್ಲಿ ಪ್ರದರ್ಶನ
ಏಕದಿನ ಹಾಗೂ ಟಿ20 ಮಾದರಿಯಿಂದ ವೆಸ್ಟ್ ಇಂಡೀಸ್ನಲ್ಲಿ ಒಟ್ಟು 13 ಪಂದ್ಯಗಳನ್ನಾಡಿರುವ ಕುಲ್ದೀಪ್, 23 ವಿಕೆಟ್ ಉರುಳಿಸಿದ್ದಾರೆ. ಒಟ್ಟು 7 ಪಂದ್ಯಗಳನ್ನಾಡಿರುವ ಯಜುವೇಂದ್ರ ಚಹಲ್ 12 ವಿಕೆಟ್ ಉರುಳಿಸಿದ್ದಾರೆ. ಈ ಅಂಕಿಅಂಶಗಳು ವೆಸ್ಟ್ ಇಂಡೀಸ್ ಕಂಡೀಷನ್ಸ್ಗೆ ಕುಲ್ಚಾ ಜೋಡಿ ಅವಶ್ಯಕತೆ ಎಷ್ಟಿದೆ ಅನ್ನೋದನ್ನ ತೋರಿಸ್ತಿವೆ. ವಿಕೆಟ್ ಟೇಕಿಂಗ್ ಎಬಿಲಿಟಿ ಜೊತೆಗೆ ರನ್ ಗಳಿಕೆಗೆ ಕಡಿವಾಣಕ್ಕೆ ಹಾಕಿದ್ದಾರೆ. ಹೀಗಾಗಿ ಇವರಿಬ್ಬರ ಅವಶ್ಯಕತೆ ತಂಡಕ್ಕಿದೆ. ಐಪಿಎಲ್ನಲ್ಲೂ ಉತ್ತಮ ಲಯದಲ್ಲಿ ಪರ್ಫಾಮ್ ಮಾಡಿರೋ ಇವರು, ಬಿಗ್ ಮ್ಯಾಚ್ ವಿನ್ನರ್ಗಳು ಕೂಡ ಹೌದು.
ಸೀಸನ್-7ರ ಐಪಿಎಲ್ ಪ್ರದರ್ಶನ
ವಿಶ್ವಕಪ್ಗೂ ಮುನ್ನ ನಡೆದ ಸೀಸನ್-17ರ ಐಪಿಎಲ್ನಲ್ಲಿ 11 ಪಂದ್ಯಗಳಿಂದ ಕುಲ್ದೀಪ್ 16 ವಿಕೆಟ್ ಉರುಳಿಸಿದ್ದು, 8.69ರ ಏಕನಾಮಿಯಲ್ಲಿ ರನ್ ನೀಡಿದ್ದಾರೆ. ಈ ಪೈಕಿ 55 ರನ್ ನೀಡಿ 4 ವಿಕೆಟ್ ಉರುಳಿಸಿರುವುದು ಬೆಸ್ಟ್ ಪರ್ಫಾಮೆನ್ಸ್ ಆಗಿದೆ. ಯುಜುವೇಂದ್ರ ಚಹಲ್ ಆಡಿರುವ 15 ಪಂದ್ಯಗಳಿಂದ 18 ವಿಕೆಟ್ ಬೇಟೆಯಾಡಿದ್ದಾರೆ. 11 ರನ್ ನೀಡಿ 3 ವಿಕೆಟ್ ಕಬಳಿಸಿರೋದು ಬೆಸ್ಟ್ ಪರ್ಫಾಮೆನ್ಸ್ ಆಗಿದ್ರೆ. 9.41ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ.
ಇದನ್ನೂ ಓದಿ:ಕಮಿಷನರ್ ಕಂಡ್ರೆ ಸಪ್ಪೆ ಮುಖ.. ದರ್ಶನ್ ನಡೆ ನುಡಿಯಲ್ಲಿ ಭಾರೀ ಬದಲಾವಣೆ.. ಕೊನೆಗೂ ಬಂತಾ ಬುದ್ಧಿ..?
ಆಲ್ರೌಂಡರ್ ಜಡೇಜಾ-ಆಕ್ಷರ್ ಕಥೆ ಏನು..?
ನಾಯಕನಾಗಿ ರೋಹಿತ್, ಗ್ರೂಪ್ ಸ್ಟೇಜ್ನಲ್ಲಿ ಜಡೇಜಾ ಹಾಗೂ ಆಕ್ಷರ್ ಪಟೇಲ್ನ ಅದ್ಬುತವಾಗೇ ಬಳಿಸಿಕೊಂಡಿದ್ದಾರೆ. ಈ ಪೈಕಿ ಜಡೇಜಾ ಕಳೆಪೆ ಪ್ರದರ್ಶನ ನೀಡಿದ್ದಾರೆ. ಆದ್ರೀಗ ಕಂಡೀಷನ್ಸ್ ಸಂಪೂರ್ಣ ಸ್ಪಿನ್ ಫ್ರೆಂಡ್ಲಿ. ಕುಲ್ದೀಪ್ ಯಾದವ್ ಹಾಗೂ ಚಹಲ್ ತಂಡದಲ್ಲಿದ್ದರೆ ಪ್ರಬಲ ಅಸ್ತ್ರವಾಗಬಲ್ಲರು. ಅಕ್ಷರ್ – ಜಡೇಜಾ ಆಟ ಇಲ್ಲಿ ವರ್ಕೌಟ್ ಆಗಲ್ಲ.
ವೆಸ್ಟ್ ಇಂಡೀಸ್ನಲ್ಲಿ ಪ್ರದರ್ಶನ
ವೆಸ್ಟ್ ಇಂಡೀಸ್ನಲ್ಲಿ ಏಕದಿನ ಹಾಗೂ ಟಿ20 ಸೇರಿ 27 ಪಂದ್ಯಗಳನ್ನಾಡಿರುವ ಜಡೇಜಾ, 33 ವಿಕೆಟ್ ಉರುಳಿಸಿದ್ದಾರೆ. ಅಕ್ಷರ್ ಪಟೇಲ್ 7 ಪಂದ್ಯಗಳಿಂದ ಒಟ್ಟು 4 ವಿಕೆಟ್ ಉರುಳಿಸಿದ್ದಾರೆ. ಚಹಲ್, ಕುಲ್ದೀಪ್ಗೆ ಹೋಲಿಸಿದ್ರೆ, ಇಬ್ಬರೂ ಕೂಡ ಸಪ್ಪೆಯಾಗಿದ್ದಾರೆ.
ಇದನ್ನೂ ಓದಿ:ರೇಣುಕಾಸ್ವಾಮಿ ಸತ್ತ ಮೇಲೂ ಕಾಡದ ಪಶ್ಚಾತಾಪ.. ಕೊಲೆ ಮಾಡಿದ ಬೆನ್ನಲ್ಲೇ ನಡೆದ ಎಣ್ಣೆ ಪಾರ್ಟಿಗಳು ಎಷ್ಟು ಗೊತ್ತಾ..!
ವೆಸ್ಟ್ ಇಂಡೀಸ್ ಕಂಡೀಷನ್ಸ್ಗೆ ಸ್ಪೆಷಲಿಸ್ಟ್ ಸ್ಪಿನ್ನರ್ನ ಅಗತ್ಯತೆ ಟೀಮ್ ಇಂಡಿಯಾಗಿದೆ. ಈ ನಿಟ್ಟಿನಲ್ಲಿ ರೋಹಿತ್, ಆಲ್ರೌಂಡರ್ಗಳಾದ ಆಕ್ಷರ್ ಪಟೇಲ್, ರವೀಂದ್ರ ಜಡೇಜಾ ಜೊತೆಗೆ ಕುಲ್ದೀಪ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಕಲ್ಪಿಸೋದು ಬೆಸ್ಟ್.! ಬ್ಯಾಟಿಂಗ್ ಡೆಪ್ತ್ನ ಜೊತೆ ಬೌಲಿಂಗ್ ಬಲವೂ ಹೆಚ್ಚಲಿದೆ. ಯುಜುವೇಂದ್ರ ಚಹಲ್ಗೆ ಚಾನ್ಸ್ ನೀಡಿದ್ರೆ, ಬೌಲಿಂಗ್ ಅತ್ಯಂತ ಬಲಿಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಯಾರನ್ನ ಡ್ರಾಪ್ ಮಾಡ್ತಾರೆ ಪ್ರಶ್ನೆ ಸಹಜವಾಗೇ ಹುಟ್ಟಲಿದೆ. ಹೀಗಾಗಿ ಕ್ಯಾಪ್ಟನ್ ರೋಹಿತ್, ನಿರ್ಣಯ ಏನಾಗಿರುತ್ತೆ ಅನ್ನೋದು ಕ್ಯೂರಿಯಾಸಿಟಿ ಹುಟ್ಟಿಸಿದೆ.
ಇದನ್ನೂ ಓದಿ:ಜೈಲಿನಿಂದ ಹೊರ ಬರ್ತಿದ್ದಂತೆ ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿ.. ಮತ್ತೆ ಕಂಬಿ ಹಿಂದೆ ಹೋದ ದರ್ಶನ್ ಆಪ್ತ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಸ್ಪಿನ್ ಟ್ವಿನ್ಸ್ ಮೊರೆ ಹೋಗುತ್ತಾ ಭಾರತ..?
ಭಾರತದ ಗೆಲುವಿಗೆ ಕುಲ್ಚಾ ಜೋಡಿ ಅನಿವಾರ್ಯನಾ..?
ಆಲ್ರೌಂಡರ್ ಜಡೇಜಾ-ಆಕ್ಷರ್ ಕಥೆ ಏನು..?
ಅಮೆರಿಕ ಆಯ್ತು. ಈಗ ಟೀಮ್ ಇಂಡಿಯಾ ಕೆರಿಬಿಯನ್ ನಾಡಿಗೆ ಶಿಫ್ಟ್ ಆಗಿದೆ. ಸೂಪರ್-8 ಕದನಕ್ಕೆ ಸಜ್ಜಾಗ್ತಿರುವ ರೋಹಿತ್ ಪಡೆ, ಗೆಲುವಿನ ಯಾನ ಮುಂದುವರಿಸುವ ಲೆಕ್ಕಾಚಾರದಲ್ಲಿದೆ. ಆದ್ರೆ ಗೆಲುವಿನ ಓಟ ಮುಂದುವರೆಸಬೇಕಂದ್ರೆ, ಟೀಮ್ ಇಂಡಿಯಾ ಕುಲ್ಚಾ ಜೋಡಿಯ ಮೋರೆ ಹೋಗಬೇಕಿದೆ.
ಟಿ20 ವಿಶ್ವಕಪ್ ಮಹಾ ಸಂಗ್ರಾಮದ ಕಾವೇರುತ್ತಿದೆ. ಗ್ರೂಪ್ ಸ್ಟೇಜ್ನಲ್ಲಿ ಅಬ್ಬರದ ಪರ್ಫಾಮೆನ್ಸ್ ನೀಡಿರುವ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ಗೆ ಕಾಲಿಟ್ಟಿದೆ. ಅಮೆರಿಕಾದಿಂದ ವೆಸ್ಟ್ ಇಂಡೀಸ್ಗೆ ಶಿಫ್ಟ್ ಆಗ್ತಿದ್ದಂತೆ ಪ್ಲೇಯಿಂಗ್ ಕಂಡೀಷನ್ಸ್ ಬದಲಾಗಿದ್ದು, ಸ್ಪಿನ್ ಫೇವರ್ ಪಿಚ್ನಲ್ಲಿ ಗೆಲ್ಲೋ ಸವಾಲಿದೆ. ಹೀಗಾಗಿ ಗೆಲುವಿನ ಯಾನ ಮುಂದುವರಿಯಬೇಕಾದ್ರೆ ತಂಡ ಸ್ಪಿನ್ ಟ್ವಿನ್ಸ್ ಕುಲ್ಚಾ ಮೊರೆ ಹೋಗಬೇಕಿದೆ.
ಇದನ್ನೂ ಓದಿ:RCBಗೆ ದುಬಾರಿ ಆಟಗಾರ.. ವಿಶ್ವಕಪ್ನಲ್ಲಿ 4 ಮೇಡಿನ್ ಓವರ್ ಮಾಡಿದ ಸ್ಟಾರ್..!
ಸೂಪರ್-8ನಲ್ಲಿ ಸ್ಪಿನ್ ಟ್ವಿನ್ಸ್ ಕುಲ್ಚಾ ಜೋಡಿ ಕಣಕ್ಕೆ..?
ಲೀಗ್ ಸ್ಟೇಜ್ ಮ್ಯಾಚ್ಗಳಿಗೆ ಹೋಲಿಸಿದ್ರೆ, ಈಗ ಟೀಮ್ ಇಂಡಿಯಾ ಇನ್ಮುಂದೆ ಆಡಲಿರುವ ಕಂಡೀಷನ್ಸ್ ಕಂಪ್ಲೀಟ್ ಚೇಂಜ್ ಆಗಿದೆ. ನ್ಯೂಯಾರ್ಕ್ ಪಿಚ್ ಕಂಪ್ಲೀಟ್ ಪೇಸ್ ಆ್ಯಂಡ್ ಬೌನ್ಸ್ನಿಂದ ಕೂಡಿತ್ತು. ಹೀಗಾಗಿ ಸ್ಪೆಷಲಿಸ್ಟ್ ಸ್ಪಿನ್ನರ್ಗಳ ಅವಶ್ಯಕತೆ ಟೀಮ್ ಇಂಡಿಯಾಗೆ ಬರಲಿಲ್ಲ. ಆದ್ರೀಗ ವೆಸ್ಟ್ ಇಂಡೀಸ್ ಸ್ಲೋ ಟ್ರ್ಯಾಕ್ಗಳಾಗಿದ್ದು, ಸ್ಪಿನ್ನರ್ಗಳೇ ಕ್ರೂಶಿಯಲ್ ರೋಲ್ ಪ್ಲೇ ಮಾಡ್ತಾರೆ. ಹೀಗಾಗಿ ಟೀಮ್ ಇಂಡಿಯಾ ಚೈನಾಮನ್ ಕುಲ್ದೀಪ್ ಯಾದವ್ & ಯಜುವೇಂದ್ರ ಚಹಲ್ಗೆ ಮಣೆ ಹಾಕಬೇಕಿದೆ.
ಕೆರಿಬಿಯನ್ ನಾಡಲ್ಲಿ ಕುಲ್ಚಾ ಜೋಡಿ ಕಮಾಲ್..!
ವೆಸ್ಟ್ ಇಂಡೀಸ್ನಲ್ಲಿ ಚೈನಾಮನ್ ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್ ಜೋಡಿ ಕಮಾಲ್ ಮಾಡಿದ್ದಾರೆ. ಹಿಂದೆ ಕೆರಿಬಿಯನ್ನರ ನಾಡಲ್ಲಿ ಆಡಿರುವ ಅನುಭವ, ವೈಟ್ ಬಾಲ್ ಕ್ರಿಕೆಟ್ನಲ್ಲಿ ನೀಡಿರುವ ಇಂಪ್ರೆಸ್ಸೀವ್ ಪರ್ಫಾಮೆನ್ಸ್ ತಂಡಕ್ಕೆ ನೆರವಾಗಲಿದೆ.
ಇದನ್ನೂ ಓದಿ:CM ಕನಸು ನನಸಿಗೆ ಡಿಕೆಶಿ ನಡೆ ತೀವ್ರ ಕುತೂಹಲ.. ಚೆನ್ನಪಟ್ಟಣ ವಿಚಾರದಲ್ಲಿ ಕಾಂಗ್ರೆಸ್ ಗೇಮ್ ಚೇಂಜ್..!
ವಿಂಡೀಸ್ನಲ್ಲಿ ವೈಟ್ಬಾಲ್ ಫಾರ್ಮೆಟ್ನಲ್ಲಿ ಪ್ರದರ್ಶನ
ಏಕದಿನ ಹಾಗೂ ಟಿ20 ಮಾದರಿಯಿಂದ ವೆಸ್ಟ್ ಇಂಡೀಸ್ನಲ್ಲಿ ಒಟ್ಟು 13 ಪಂದ್ಯಗಳನ್ನಾಡಿರುವ ಕುಲ್ದೀಪ್, 23 ವಿಕೆಟ್ ಉರುಳಿಸಿದ್ದಾರೆ. ಒಟ್ಟು 7 ಪಂದ್ಯಗಳನ್ನಾಡಿರುವ ಯಜುವೇಂದ್ರ ಚಹಲ್ 12 ವಿಕೆಟ್ ಉರುಳಿಸಿದ್ದಾರೆ. ಈ ಅಂಕಿಅಂಶಗಳು ವೆಸ್ಟ್ ಇಂಡೀಸ್ ಕಂಡೀಷನ್ಸ್ಗೆ ಕುಲ್ಚಾ ಜೋಡಿ ಅವಶ್ಯಕತೆ ಎಷ್ಟಿದೆ ಅನ್ನೋದನ್ನ ತೋರಿಸ್ತಿವೆ. ವಿಕೆಟ್ ಟೇಕಿಂಗ್ ಎಬಿಲಿಟಿ ಜೊತೆಗೆ ರನ್ ಗಳಿಕೆಗೆ ಕಡಿವಾಣಕ್ಕೆ ಹಾಕಿದ್ದಾರೆ. ಹೀಗಾಗಿ ಇವರಿಬ್ಬರ ಅವಶ್ಯಕತೆ ತಂಡಕ್ಕಿದೆ. ಐಪಿಎಲ್ನಲ್ಲೂ ಉತ್ತಮ ಲಯದಲ್ಲಿ ಪರ್ಫಾಮ್ ಮಾಡಿರೋ ಇವರು, ಬಿಗ್ ಮ್ಯಾಚ್ ವಿನ್ನರ್ಗಳು ಕೂಡ ಹೌದು.
ಸೀಸನ್-7ರ ಐಪಿಎಲ್ ಪ್ರದರ್ಶನ
ವಿಶ್ವಕಪ್ಗೂ ಮುನ್ನ ನಡೆದ ಸೀಸನ್-17ರ ಐಪಿಎಲ್ನಲ್ಲಿ 11 ಪಂದ್ಯಗಳಿಂದ ಕುಲ್ದೀಪ್ 16 ವಿಕೆಟ್ ಉರುಳಿಸಿದ್ದು, 8.69ರ ಏಕನಾಮಿಯಲ್ಲಿ ರನ್ ನೀಡಿದ್ದಾರೆ. ಈ ಪೈಕಿ 55 ರನ್ ನೀಡಿ 4 ವಿಕೆಟ್ ಉರುಳಿಸಿರುವುದು ಬೆಸ್ಟ್ ಪರ್ಫಾಮೆನ್ಸ್ ಆಗಿದೆ. ಯುಜುವೇಂದ್ರ ಚಹಲ್ ಆಡಿರುವ 15 ಪಂದ್ಯಗಳಿಂದ 18 ವಿಕೆಟ್ ಬೇಟೆಯಾಡಿದ್ದಾರೆ. 11 ರನ್ ನೀಡಿ 3 ವಿಕೆಟ್ ಕಬಳಿಸಿರೋದು ಬೆಸ್ಟ್ ಪರ್ಫಾಮೆನ್ಸ್ ಆಗಿದ್ರೆ. 9.41ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ.
ಇದನ್ನೂ ಓದಿ:ಕಮಿಷನರ್ ಕಂಡ್ರೆ ಸಪ್ಪೆ ಮುಖ.. ದರ್ಶನ್ ನಡೆ ನುಡಿಯಲ್ಲಿ ಭಾರೀ ಬದಲಾವಣೆ.. ಕೊನೆಗೂ ಬಂತಾ ಬುದ್ಧಿ..?
ಆಲ್ರೌಂಡರ್ ಜಡೇಜಾ-ಆಕ್ಷರ್ ಕಥೆ ಏನು..?
ನಾಯಕನಾಗಿ ರೋಹಿತ್, ಗ್ರೂಪ್ ಸ್ಟೇಜ್ನಲ್ಲಿ ಜಡೇಜಾ ಹಾಗೂ ಆಕ್ಷರ್ ಪಟೇಲ್ನ ಅದ್ಬುತವಾಗೇ ಬಳಿಸಿಕೊಂಡಿದ್ದಾರೆ. ಈ ಪೈಕಿ ಜಡೇಜಾ ಕಳೆಪೆ ಪ್ರದರ್ಶನ ನೀಡಿದ್ದಾರೆ. ಆದ್ರೀಗ ಕಂಡೀಷನ್ಸ್ ಸಂಪೂರ್ಣ ಸ್ಪಿನ್ ಫ್ರೆಂಡ್ಲಿ. ಕುಲ್ದೀಪ್ ಯಾದವ್ ಹಾಗೂ ಚಹಲ್ ತಂಡದಲ್ಲಿದ್ದರೆ ಪ್ರಬಲ ಅಸ್ತ್ರವಾಗಬಲ್ಲರು. ಅಕ್ಷರ್ – ಜಡೇಜಾ ಆಟ ಇಲ್ಲಿ ವರ್ಕೌಟ್ ಆಗಲ್ಲ.
ವೆಸ್ಟ್ ಇಂಡೀಸ್ನಲ್ಲಿ ಪ್ರದರ್ಶನ
ವೆಸ್ಟ್ ಇಂಡೀಸ್ನಲ್ಲಿ ಏಕದಿನ ಹಾಗೂ ಟಿ20 ಸೇರಿ 27 ಪಂದ್ಯಗಳನ್ನಾಡಿರುವ ಜಡೇಜಾ, 33 ವಿಕೆಟ್ ಉರುಳಿಸಿದ್ದಾರೆ. ಅಕ್ಷರ್ ಪಟೇಲ್ 7 ಪಂದ್ಯಗಳಿಂದ ಒಟ್ಟು 4 ವಿಕೆಟ್ ಉರುಳಿಸಿದ್ದಾರೆ. ಚಹಲ್, ಕುಲ್ದೀಪ್ಗೆ ಹೋಲಿಸಿದ್ರೆ, ಇಬ್ಬರೂ ಕೂಡ ಸಪ್ಪೆಯಾಗಿದ್ದಾರೆ.
ಇದನ್ನೂ ಓದಿ:ರೇಣುಕಾಸ್ವಾಮಿ ಸತ್ತ ಮೇಲೂ ಕಾಡದ ಪಶ್ಚಾತಾಪ.. ಕೊಲೆ ಮಾಡಿದ ಬೆನ್ನಲ್ಲೇ ನಡೆದ ಎಣ್ಣೆ ಪಾರ್ಟಿಗಳು ಎಷ್ಟು ಗೊತ್ತಾ..!
ವೆಸ್ಟ್ ಇಂಡೀಸ್ ಕಂಡೀಷನ್ಸ್ಗೆ ಸ್ಪೆಷಲಿಸ್ಟ್ ಸ್ಪಿನ್ನರ್ನ ಅಗತ್ಯತೆ ಟೀಮ್ ಇಂಡಿಯಾಗಿದೆ. ಈ ನಿಟ್ಟಿನಲ್ಲಿ ರೋಹಿತ್, ಆಲ್ರೌಂಡರ್ಗಳಾದ ಆಕ್ಷರ್ ಪಟೇಲ್, ರವೀಂದ್ರ ಜಡೇಜಾ ಜೊತೆಗೆ ಕುಲ್ದೀಪ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಕಲ್ಪಿಸೋದು ಬೆಸ್ಟ್.! ಬ್ಯಾಟಿಂಗ್ ಡೆಪ್ತ್ನ ಜೊತೆ ಬೌಲಿಂಗ್ ಬಲವೂ ಹೆಚ್ಚಲಿದೆ. ಯುಜುವೇಂದ್ರ ಚಹಲ್ಗೆ ಚಾನ್ಸ್ ನೀಡಿದ್ರೆ, ಬೌಲಿಂಗ್ ಅತ್ಯಂತ ಬಲಿಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಯಾರನ್ನ ಡ್ರಾಪ್ ಮಾಡ್ತಾರೆ ಪ್ರಶ್ನೆ ಸಹಜವಾಗೇ ಹುಟ್ಟಲಿದೆ. ಹೀಗಾಗಿ ಕ್ಯಾಪ್ಟನ್ ರೋಹಿತ್, ನಿರ್ಣಯ ಏನಾಗಿರುತ್ತೆ ಅನ್ನೋದು ಕ್ಯೂರಿಯಾಸಿಟಿ ಹುಟ್ಟಿಸಿದೆ.
ಇದನ್ನೂ ಓದಿ:ಜೈಲಿನಿಂದ ಹೊರ ಬರ್ತಿದ್ದಂತೆ ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿ.. ಮತ್ತೆ ಕಂಬಿ ಹಿಂದೆ ಹೋದ ದರ್ಶನ್ ಆಪ್ತ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್