ಸೋಲಿಲ್ಲದ ಸರದಾರನಿಗೆ ಇದು ಹೊಸ ಆರಂಭ..!
ಕೆನಡಾ ಎದುರಿನ ಪಂದ್ಯದಲ್ಲಿ ಯಾರಿಗೆ ಸಿಗುತ್ತೆ ರೆಸ್ಟ್..?
ಇಂದು ವಿರಾಟ್ ಕೊಹ್ಲಿಗೆ ರೆಸ್ಟ್.. ಜೈಸ್ವಾಲ್ಗೆ ಸ್ಥಾನ..?
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಸೂಪರ್ 8 ಪ್ರವೇಶಿಸಿದೆ. ಅನ್ಸ್ಟಾಪಬಲ್ ಆಗಿ ಮುನ್ನುಗ್ಗುತ್ತಿರುವ ಟೀಮ್ ಇಂಡಿಯಾ, ಇಂದು ಕೆನಡಾ ವಿರುದ್ಧ ಆಡಲು ಸಜ್ಜಾಗಿದೆ. ಕೆನಡಾ ಎದುರು ಸುಲಭ ಗೆಲುವಿನ ನಿರೀಕ್ಷೆಯಲ್ಲೇ ಇದೆ. ಕ್ರಿಕೆಟ್ ಶಿಶುವನ್ನ ಅಷ್ಟು ಸುಲಭವಾಗಿ ಪರಿಗಣಿಸುವ ಹಾಗಿಲ್ಲ.
ಟಿ20 ವಿಶ್ವಕಪ್ನ ಮತ್ತೊಂದು ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಇಂದು ಕ್ರಿಕೆಟ್ ಶಿಶು ಕೆನಡಾ ಎದುರು ಕೊನೆ ಲೀಗ್ ಪಂದ್ಯವನ್ನಾಡಲಿದೆ. ದೈತ್ಯ ಟೀಮ್ ಇಂಡಿಯಾ ಹಾಗೂ ಕ್ರಿಕೆಟ್ ಶಿಶು ಕೆನಡಾದ ಪಂದ್ಯಕ್ಕೆ ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ವೇದಿಕೆಯಾಗಿದೆ. ಪಂದ್ಯದಲ್ಲಿ ಟೀಮ್ ಇಂಡಿಯಾ ಬದಲಾವಣೆಗಳೊಂದಿಗೆ ಕಣಕ್ಕಿಳಿಯೋದು ಕನ್ಫರ್ಮ್.
ಹ್ಯಾಟ್ರಿಕ್ ಗೆಲುವಿನೊಂದಿಗೆ ಸೂಪರ್ 8 ಗ್ರ್ಯಾಂಡ್ ಎಂಟ್ರಿ ನೀಡಿರುವ ಟೀಮ್ ಇಂಡಿಯಾಗೆ, ಕೆನಡಾ ಎದುರಿನ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹೀಗಾಗಿ ಸೂಪರ್-8ಗೂ ಮುನ್ನ ಕೆಲ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡೋ ಸಾಧ್ಯತೆ ದಟ್ಟವಾಗಿದೆ. ಕೆಲ ನ್ಯೂನ್ಯತೆ ಸರಿಪಡಿಸಿಕೊಳ್ಳುವ ಲೆಕ್ಕಚಾರದಲ್ಲಿದೆ.
ಇದನ್ನೂ ಓದಿ:Rain Alert: ರಾಜ್ಯದ 8 ಜಿಲ್ಲೆಗಳಲ್ಲಿ ಇಂದಿನಿಂದ ಭರ್ಜರಿ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ
ಇಂದು ಕೊಹ್ಲಿಗೆ ರೆಸ್ಟ್.. ಜೈಸ್ವಾಲ್ಗೆ ಸ್ಥಾನ..?
ಟೀಮ್ ಇಂಡಿಯಾ ಲೀಗ್ನ ಸ್ಟೇಜ್ನಲ್ಲಿ ಸೋಲಿಲ್ಲದ ಸರದಾರ ನಿಜ. ಕೆಲ ವೈಫಲ್ಯಗಳು ಟೀಮ್ ಇಂಡಿಯಾಗೆ ಕಾಡ್ತಾನೇ ಇದೆ. ಈ ಪೈಕಿ ಮೊದಲನೆಯದ್ದೇ ಓಪನರ್ಸ್ ಸಮಸ್ಯೆ. ಹೀಗಾಗಿ ಸೂಪರ್-8ರ ಪಂದ್ಯಕ್ಕೂ ಮುನ್ನ ಕೆನಡಾ ಎದುರು ಹೊಸ ಆರಂಭಿಕ ಜೋಡಿಯನ್ನ ಕಣಕ್ಕಿಳಿಯೋ ಸಾಧ್ಯತೆ ಇದ್ದು, ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ವಿಫಲರಾಗಿರುವ ವಿರಾಟ್ಗೆ ರೆಸ್ಟ್ ನೀಡಿ ಯಶಸ್ವಿ ಜೈಸ್ವಾಲ್ ಅಥವಾ ಸಂಜು ಸ್ಯಾಮ್ಸನ್ಗೆ ಚಾನ್ಸ್ ನೀಡೋ ಸಾಧ್ಯತೆ ಹೆಚ್ಚಿದೆ.
ಬೂಮ್ರಾಗೆ ವಿಶ್ರಾಂತಿ.. ಸ್ಪಿನ್ನರ್ಗೆ ಚಾನ್ಸ್..?
ಇಂದಿನ ಪಂದ್ಯದಲ್ಲಿ ಸ್ಟಾರ್ ಬೌಲರ್ ಜಸ್ಪ್ರೀತ್ ಬೂಮ್ರಾಗೆ ಟೀಮ್ ಮ್ಯಾನೇಜ್ಮೆಂಟ್ ವಿಶ್ರಾಂತಿ ನೀಡೋ ಚಿಂತನೆ ನಡೆಸಿದೆ. ಸೂಪರ್-8ನ ಮಹತ್ವದ ಪಂದ್ಯಗಳಿಗೆ ಬೂಮ್ರಾ, ಕ್ರೂಶಿಯಲ್.. ಹೀಗಾಗಿ ಬೂಮ್ರಾರನ್ನ ಫ್ರೆಶ್ ಆಗಿ ಇರಿಸಿಕೊಳ್ಳುವ ಉದ್ದೇಶ ಹೊಂದಿರುವ ಮ್ಯಾನೇಜ್ಮೆಂಟ್, ಕುಲ್ದೀಪ್ ಯಾದವ್ ಅಥವಾ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಿಸುವ ಉದ್ದೇಶ ಹೊಂದಿದೆ. ಇದಕ್ಕೆ ಕಾರಣವೂ ಇದೆ.
ಇದನ್ನೂ ಓದಿ:‘ಅಲ್ಲಿ ಏನಾಗ್ತಿದೆ ಅನ್ನೋದು ನನಗೆ ಗೊತ್ತೇ ಇಲ್ಲ, ಸರ್..’ ಅಧಿಕಾರಿಗಳ ಮುಂದೆ ದರ್ಶನ್ ಮತ್ತೊಂದು ಹೇಳಿಕೆ
ಮುಂದಿನ ಎಲ್ಲಾ ಪಂದ್ಯಗಳನ್ನ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ನಲ್ಲೇ ಆಡಲಿದೆ. ಇಲ್ಲಿನ ಪಿಚ್ಗಳು ಸ್ಪಿನ್ನರ್ಗಳಿಗೆ ನೆರವಾಗಲಿದೆ. ಹೀಗಾಗಿ ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್ರನ್ನ ನೇರ ಸೂಪರ್-8ನಲ್ಲಿ ಕಣಕ್ಕಿಳಿಸುವ ಬದಲಾಗಿ ಕೆನಡಾ ಎದುರು ಕಣಕ್ಕಿಳಿಸುವ ಲೆಕ್ಕಚಾರ ಇದೆ.
ಫ್ಯಾನ್ಸ್ಗೆ ಈಗ ವಿಂಡೀಸ್ ಕಂಡೀಷನ್ಸ್ ಚಿಂತೆ
ಗ್ರೂಪ್ ಸ್ಟೇಜ್ನ ಮೊದಲ 3 ಪಂದ್ಯಗಳನ್ನ ಟೀಮ್ ಇಂಡಿಯಾ ಗೆದ್ದಿದೆ ನಿಜ. ಐರ್ಲೆಂಡ್, ಪಾಕಿಸ್ತಾನ, ಅಮೆರಿಕಾ ವಿರುದ್ಧ ಟೀಮ್ ಇಂಡಿಯಾ ನೀಡಿದ ಪ್ರದರ್ಶನ ಫ್ಯಾನ್ಸ್ ಮನದಲ್ಲಿ ಆತಂಕ ಮೂಡಿಸಿದೆ. ಕ್ರಿಕೆಟ್ ಶಿಶುಗಳ ಎದುರೇ ದೈತ್ಯ ಬ್ಯಾಟರ್ಗಳು ಪರದಾಡಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ನ ಸ್ಲೋ ಟ್ರ್ಯಾಕ್ನಲ್ಲಿ ಯಾವ ರೀತಿಯ ಪ್ರದರ್ಶನ ನೀಡ್ತಾರೆ ಅನ್ನೋದು ಅಭಿಮಾನಿಗಳಿಗೆ ಚಿಂತೆಯಾಗಿದೆ.
ಸೂಪರ್-8ನಲ್ಲಿ ಕಾದಿದೆ ರಿಯಲ್ ಟೆಸ್ಟ್..!
ಬ್ಯಾಟಿಂಗ್ ವೈಫಲ್ಯದ ನಡುವೆಯೂ ಟೀಮ್ ಇಂಡಿಯಾ ನಿರಾಯಾಸವಾಗಿ ಸೂಪರ್-8ಕ್ಕೆ ಕಾಲಿಟ್ಟಿದೆ. ಆದ್ರೆ, ಇದೇ ಸೂಪರ್-8ನಲ್ಲೇ ಟೀಮ್ ಇಂಡಿಯಾಗೆ ರಿಯಲ್ ಟೆಸ್ಟ್ ಕಾದಿದೆ. ಯಾಕಂದ್ರೆ, ಸೂಪರ್-8ನಲ್ಲಿ ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶದೊಂದಿಗೆ ಪೈಪೋಟಿ ನಡೆಸಲಿದೆ. ಗ್ರೂಪ್ ಸ್ಟೇಜ್ನಲ್ಲಿ ಅದ್ಬುತ ಆಟವಾಡಿರುವ ಈ ತಂಡಗಳು, ಯಾವುದೇ ಕ್ಷಣದಲ್ಲಾದರೂ ಟೀಮ್ ಇಂಡಿಯಾಗೆ ಟಕ್ಕರ್ ನೀಡಬಲ್ಲವು. ಹೀಗಾಗಿ ಇಂದಿನ ಕೆನಡಾ ಎದುರಿನ ಪಂದ್ಯದಲ್ಲೇ ಟೀಮ್ ಇಂಡಿಯಾ ಎಲ್ಲವನ್ನು ಸರಿಪಡಿಸಿಕೊಳ್ಳಬೇಕಿದೆ. ಇಲ್ಲ ಸೋಲು ಫಿಕ್ಸ್..
ಇದನ್ನೂ ಓದಿ:Watch: ‘ಕೊನೆ ಸಲ ಅಪ್ಪನ ನೋಡುತ್ತಾನೆ ಕರೆಸಿ ಸಾರ್..’ ದರ್ಶನ್ ಕೇಸ್ನಲ್ಲಿ ಅರೆಸ್ಟ್ ಆಗಿರೋ ಅನು ಅಕ್ಕ ಕಣ್ಣೀರು
ಒಟ್ನಲ್ಲಿ..! ನ್ಯೂಯಾರ್ಕ್ಗಿಂತ ವಿಭಿನ್ನ ಕಂಡೀಷನ್ಸ್ನಲ್ಲಿ ಟೀಮ್ ಇಂಡಿಯಾ ಹೊಸ ಆಧ್ಯಾಯ ಆರಂಭಿಸಲಿದ್ದು, ಈ ಕಂಡೀಷನ್ಸ್ನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತೆ ಅನ್ನೋದು ಕಾದುನೋಡಬೇಕಿದೆ.
ಇದನ್ನೂ ಓದಿ:ದರ್ಶನ್ಗೆ ಕಾಡಿತ್ತು ಪಶ್ಚತಾಪ.. ‘ಡೆವಿಲ್ ಶೂಟಿಂಗ್ನಲ್ಲಿ ನಟ ಹೇಗಿದ್ದರು ಅಂದರೆ..’
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಸೋಲಿಲ್ಲದ ಸರದಾರನಿಗೆ ಇದು ಹೊಸ ಆರಂಭ..!
ಕೆನಡಾ ಎದುರಿನ ಪಂದ್ಯದಲ್ಲಿ ಯಾರಿಗೆ ಸಿಗುತ್ತೆ ರೆಸ್ಟ್..?
ಇಂದು ವಿರಾಟ್ ಕೊಹ್ಲಿಗೆ ರೆಸ್ಟ್.. ಜೈಸ್ವಾಲ್ಗೆ ಸ್ಥಾನ..?
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಸೂಪರ್ 8 ಪ್ರವೇಶಿಸಿದೆ. ಅನ್ಸ್ಟಾಪಬಲ್ ಆಗಿ ಮುನ್ನುಗ್ಗುತ್ತಿರುವ ಟೀಮ್ ಇಂಡಿಯಾ, ಇಂದು ಕೆನಡಾ ವಿರುದ್ಧ ಆಡಲು ಸಜ್ಜಾಗಿದೆ. ಕೆನಡಾ ಎದುರು ಸುಲಭ ಗೆಲುವಿನ ನಿರೀಕ್ಷೆಯಲ್ಲೇ ಇದೆ. ಕ್ರಿಕೆಟ್ ಶಿಶುವನ್ನ ಅಷ್ಟು ಸುಲಭವಾಗಿ ಪರಿಗಣಿಸುವ ಹಾಗಿಲ್ಲ.
ಟಿ20 ವಿಶ್ವಕಪ್ನ ಮತ್ತೊಂದು ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಇಂದು ಕ್ರಿಕೆಟ್ ಶಿಶು ಕೆನಡಾ ಎದುರು ಕೊನೆ ಲೀಗ್ ಪಂದ್ಯವನ್ನಾಡಲಿದೆ. ದೈತ್ಯ ಟೀಮ್ ಇಂಡಿಯಾ ಹಾಗೂ ಕ್ರಿಕೆಟ್ ಶಿಶು ಕೆನಡಾದ ಪಂದ್ಯಕ್ಕೆ ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ವೇದಿಕೆಯಾಗಿದೆ. ಪಂದ್ಯದಲ್ಲಿ ಟೀಮ್ ಇಂಡಿಯಾ ಬದಲಾವಣೆಗಳೊಂದಿಗೆ ಕಣಕ್ಕಿಳಿಯೋದು ಕನ್ಫರ್ಮ್.
ಹ್ಯಾಟ್ರಿಕ್ ಗೆಲುವಿನೊಂದಿಗೆ ಸೂಪರ್ 8 ಗ್ರ್ಯಾಂಡ್ ಎಂಟ್ರಿ ನೀಡಿರುವ ಟೀಮ್ ಇಂಡಿಯಾಗೆ, ಕೆನಡಾ ಎದುರಿನ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹೀಗಾಗಿ ಸೂಪರ್-8ಗೂ ಮುನ್ನ ಕೆಲ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡೋ ಸಾಧ್ಯತೆ ದಟ್ಟವಾಗಿದೆ. ಕೆಲ ನ್ಯೂನ್ಯತೆ ಸರಿಪಡಿಸಿಕೊಳ್ಳುವ ಲೆಕ್ಕಚಾರದಲ್ಲಿದೆ.
ಇದನ್ನೂ ಓದಿ:Rain Alert: ರಾಜ್ಯದ 8 ಜಿಲ್ಲೆಗಳಲ್ಲಿ ಇಂದಿನಿಂದ ಭರ್ಜರಿ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ
ಇಂದು ಕೊಹ್ಲಿಗೆ ರೆಸ್ಟ್.. ಜೈಸ್ವಾಲ್ಗೆ ಸ್ಥಾನ..?
ಟೀಮ್ ಇಂಡಿಯಾ ಲೀಗ್ನ ಸ್ಟೇಜ್ನಲ್ಲಿ ಸೋಲಿಲ್ಲದ ಸರದಾರ ನಿಜ. ಕೆಲ ವೈಫಲ್ಯಗಳು ಟೀಮ್ ಇಂಡಿಯಾಗೆ ಕಾಡ್ತಾನೇ ಇದೆ. ಈ ಪೈಕಿ ಮೊದಲನೆಯದ್ದೇ ಓಪನರ್ಸ್ ಸಮಸ್ಯೆ. ಹೀಗಾಗಿ ಸೂಪರ್-8ರ ಪಂದ್ಯಕ್ಕೂ ಮುನ್ನ ಕೆನಡಾ ಎದುರು ಹೊಸ ಆರಂಭಿಕ ಜೋಡಿಯನ್ನ ಕಣಕ್ಕಿಳಿಯೋ ಸಾಧ್ಯತೆ ಇದ್ದು, ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ವಿಫಲರಾಗಿರುವ ವಿರಾಟ್ಗೆ ರೆಸ್ಟ್ ನೀಡಿ ಯಶಸ್ವಿ ಜೈಸ್ವಾಲ್ ಅಥವಾ ಸಂಜು ಸ್ಯಾಮ್ಸನ್ಗೆ ಚಾನ್ಸ್ ನೀಡೋ ಸಾಧ್ಯತೆ ಹೆಚ್ಚಿದೆ.
ಬೂಮ್ರಾಗೆ ವಿಶ್ರಾಂತಿ.. ಸ್ಪಿನ್ನರ್ಗೆ ಚಾನ್ಸ್..?
ಇಂದಿನ ಪಂದ್ಯದಲ್ಲಿ ಸ್ಟಾರ್ ಬೌಲರ್ ಜಸ್ಪ್ರೀತ್ ಬೂಮ್ರಾಗೆ ಟೀಮ್ ಮ್ಯಾನೇಜ್ಮೆಂಟ್ ವಿಶ್ರಾಂತಿ ನೀಡೋ ಚಿಂತನೆ ನಡೆಸಿದೆ. ಸೂಪರ್-8ನ ಮಹತ್ವದ ಪಂದ್ಯಗಳಿಗೆ ಬೂಮ್ರಾ, ಕ್ರೂಶಿಯಲ್.. ಹೀಗಾಗಿ ಬೂಮ್ರಾರನ್ನ ಫ್ರೆಶ್ ಆಗಿ ಇರಿಸಿಕೊಳ್ಳುವ ಉದ್ದೇಶ ಹೊಂದಿರುವ ಮ್ಯಾನೇಜ್ಮೆಂಟ್, ಕುಲ್ದೀಪ್ ಯಾದವ್ ಅಥವಾ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಿಸುವ ಉದ್ದೇಶ ಹೊಂದಿದೆ. ಇದಕ್ಕೆ ಕಾರಣವೂ ಇದೆ.
ಇದನ್ನೂ ಓದಿ:‘ಅಲ್ಲಿ ಏನಾಗ್ತಿದೆ ಅನ್ನೋದು ನನಗೆ ಗೊತ್ತೇ ಇಲ್ಲ, ಸರ್..’ ಅಧಿಕಾರಿಗಳ ಮುಂದೆ ದರ್ಶನ್ ಮತ್ತೊಂದು ಹೇಳಿಕೆ
ಮುಂದಿನ ಎಲ್ಲಾ ಪಂದ್ಯಗಳನ್ನ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ನಲ್ಲೇ ಆಡಲಿದೆ. ಇಲ್ಲಿನ ಪಿಚ್ಗಳು ಸ್ಪಿನ್ನರ್ಗಳಿಗೆ ನೆರವಾಗಲಿದೆ. ಹೀಗಾಗಿ ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್ರನ್ನ ನೇರ ಸೂಪರ್-8ನಲ್ಲಿ ಕಣಕ್ಕಿಳಿಸುವ ಬದಲಾಗಿ ಕೆನಡಾ ಎದುರು ಕಣಕ್ಕಿಳಿಸುವ ಲೆಕ್ಕಚಾರ ಇದೆ.
ಫ್ಯಾನ್ಸ್ಗೆ ಈಗ ವಿಂಡೀಸ್ ಕಂಡೀಷನ್ಸ್ ಚಿಂತೆ
ಗ್ರೂಪ್ ಸ್ಟೇಜ್ನ ಮೊದಲ 3 ಪಂದ್ಯಗಳನ್ನ ಟೀಮ್ ಇಂಡಿಯಾ ಗೆದ್ದಿದೆ ನಿಜ. ಐರ್ಲೆಂಡ್, ಪಾಕಿಸ್ತಾನ, ಅಮೆರಿಕಾ ವಿರುದ್ಧ ಟೀಮ್ ಇಂಡಿಯಾ ನೀಡಿದ ಪ್ರದರ್ಶನ ಫ್ಯಾನ್ಸ್ ಮನದಲ್ಲಿ ಆತಂಕ ಮೂಡಿಸಿದೆ. ಕ್ರಿಕೆಟ್ ಶಿಶುಗಳ ಎದುರೇ ದೈತ್ಯ ಬ್ಯಾಟರ್ಗಳು ಪರದಾಡಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ನ ಸ್ಲೋ ಟ್ರ್ಯಾಕ್ನಲ್ಲಿ ಯಾವ ರೀತಿಯ ಪ್ರದರ್ಶನ ನೀಡ್ತಾರೆ ಅನ್ನೋದು ಅಭಿಮಾನಿಗಳಿಗೆ ಚಿಂತೆಯಾಗಿದೆ.
ಸೂಪರ್-8ನಲ್ಲಿ ಕಾದಿದೆ ರಿಯಲ್ ಟೆಸ್ಟ್..!
ಬ್ಯಾಟಿಂಗ್ ವೈಫಲ್ಯದ ನಡುವೆಯೂ ಟೀಮ್ ಇಂಡಿಯಾ ನಿರಾಯಾಸವಾಗಿ ಸೂಪರ್-8ಕ್ಕೆ ಕಾಲಿಟ್ಟಿದೆ. ಆದ್ರೆ, ಇದೇ ಸೂಪರ್-8ನಲ್ಲೇ ಟೀಮ್ ಇಂಡಿಯಾಗೆ ರಿಯಲ್ ಟೆಸ್ಟ್ ಕಾದಿದೆ. ಯಾಕಂದ್ರೆ, ಸೂಪರ್-8ನಲ್ಲಿ ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶದೊಂದಿಗೆ ಪೈಪೋಟಿ ನಡೆಸಲಿದೆ. ಗ್ರೂಪ್ ಸ್ಟೇಜ್ನಲ್ಲಿ ಅದ್ಬುತ ಆಟವಾಡಿರುವ ಈ ತಂಡಗಳು, ಯಾವುದೇ ಕ್ಷಣದಲ್ಲಾದರೂ ಟೀಮ್ ಇಂಡಿಯಾಗೆ ಟಕ್ಕರ್ ನೀಡಬಲ್ಲವು. ಹೀಗಾಗಿ ಇಂದಿನ ಕೆನಡಾ ಎದುರಿನ ಪಂದ್ಯದಲ್ಲೇ ಟೀಮ್ ಇಂಡಿಯಾ ಎಲ್ಲವನ್ನು ಸರಿಪಡಿಸಿಕೊಳ್ಳಬೇಕಿದೆ. ಇಲ್ಲ ಸೋಲು ಫಿಕ್ಸ್..
ಇದನ್ನೂ ಓದಿ:Watch: ‘ಕೊನೆ ಸಲ ಅಪ್ಪನ ನೋಡುತ್ತಾನೆ ಕರೆಸಿ ಸಾರ್..’ ದರ್ಶನ್ ಕೇಸ್ನಲ್ಲಿ ಅರೆಸ್ಟ್ ಆಗಿರೋ ಅನು ಅಕ್ಕ ಕಣ್ಣೀರು
ಒಟ್ನಲ್ಲಿ..! ನ್ಯೂಯಾರ್ಕ್ಗಿಂತ ವಿಭಿನ್ನ ಕಂಡೀಷನ್ಸ್ನಲ್ಲಿ ಟೀಮ್ ಇಂಡಿಯಾ ಹೊಸ ಆಧ್ಯಾಯ ಆರಂಭಿಸಲಿದ್ದು, ಈ ಕಂಡೀಷನ್ಸ್ನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತೆ ಅನ್ನೋದು ಕಾದುನೋಡಬೇಕಿದೆ.
ಇದನ್ನೂ ಓದಿ:ದರ್ಶನ್ಗೆ ಕಾಡಿತ್ತು ಪಶ್ಚತಾಪ.. ‘ಡೆವಿಲ್ ಶೂಟಿಂಗ್ನಲ್ಲಿ ನಟ ಹೇಗಿದ್ದರು ಅಂದರೆ..’
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್