/newsfirstlive-kannada/media/post_attachments/wp-content/uploads/2025/04/Rana_Extradition_1.jpg)
ನವದೆಹಲಿ: ವಾಣಿಜ್ಯ ನಗರಿ ಮುಂಬೈ ಮೇಲೆ 2008 ನವೆಂಬರ್ 26 ರಂದು ನಡೆದಿದ್ದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ತಹವ್ವೂರ್ ರಾಣಾನನ್ನು ಅಮೆರಿಕದಿಂದ ದೆಹಲಿಗೆ ಎನ್ಐಎ ಅಧಿಕಾರಿಗಳು ಕರೆತಂದಿದ್ದಾರೆ. 17 ವರ್ಷಗಳ ಭಾರತದ ರಾಜತಾಂತ್ರಿಕ ಹೋರಾಟಕ್ಕೆ ಜಯ ಸಿಕ್ಕಿದೆ.
ಭಯೋತ್ಪಾದಕ ತಹವ್ವೂರ್ ರಾಣಾನನ್ನು ದೆಹಲಿಗೆ ಕರೆತಂದಿರುವ ಎನ್ಐಎ ಅಧಿಕಾರಿಗಳು ತಿಹಾರ್ ಜೈಲಿನ ಸ್ಪೆಷಲ್ ಸೆಲ್ನಲ್ಲಿ ಕೂಡಿ ಹಾಕಲಿದ್ದಾರೆ. ಜೈಲಿನ ನೆಲಮಹಡಿ ಕೊಠಡಿ ಇದಾಗಿರಲಿದ್ದು ಈ ಕೊಠಡಿಗೆ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ ಇರುತ್ತದೆ. ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ರಾಣಾ ಇರುವಂತ ಕೊಠಡಿ ಬಳಿಗೆ ಯಾರನ್ನೂ ಬಿಡುವುದಿಲ್ಲ. ಎನ್ಐಎ ಮುಖ್ಯಸ್ಥ ಸದಾನಂದ ದಾಟೆ ಸೇರಿ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ ಇರುತ್ತದೆ. ಕೋರ್ಟ್ ತಹವ್ವೂರ್ ರಾಣಾಗೆ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಜೈಲಿಗೆ ವರ್ಗಾಯಿಸಲಾಗುತ್ತದೆ.
ಎನ್ಐಎ ವಿಚಾರಣೆ ಹೇಗಿರುತ್ತೆ..?
ಎನ್ಐಎ ಅಧಿಕಾರಿಗಳು ಮೊದಲಿಗೆ ತಹವ್ವೂರ್ ರಾಣಾನನ್ನು ವಶಕ್ಕೆ ಪಡೆಯಲಿದ್ದಾರೆ. ಇದಾದ ಮೇಲೆ ಬಂಧನದ ಪ್ರಕ್ರಿಯೆಗಳನ್ನ ಪೂರ್ಣಗೊಳಿಸುವರು. ಈ ಪ್ರಕ್ರಿಯೆ ಮುಗಿದ ನಂತರ ರಿಮ್ಯಾಂಡ್ ಅರ್ಜಿಯ ಸಿದ್ಧತೆ ಮಾಡಿ, ವಿಶೇಷ ನ್ಯಾಯಾಲಯದ ಎದುರು ತಹವ್ವೂರ್ ರಾಣಾನನ್ನು ಹಾಜರು ಪಡಿಸಲಿದ್ದಾರೆ. ಈ ಎಲ್ಲ ಪ್ರಕ್ರಿಯೆ ಮುಗಿದ ಮೇಲೆಯೇ ಎನ್ಐಎ ಅಧಿಕಾಗಳು ರಾಣಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವರು.
ಇದನ್ನೂ ಓದಿ:ಮುಂಬೈ 26/11 ದಾಳಿಯ ಮಾಸ್ಟರ್ ಮೈಂಡ್ ಗಡಿಪಾರು.. ಇಂದು ಮಧ್ಯಾಹ್ನ ಭಾರತಕ್ಕೆ ರಾಣಾ!
ಈಗಾಗಲೇ ಮುಂಬೈ ದಾಳಿ ಕುರಿತು ತನಿಖೆಯನ್ನ ಮಾಡಲಾಗಿದ್ದರಿಂದ ಮೊದಲಿನ ಸಾಕ್ಷ್ಯಾಧಾರಗಳ ಮೇಲೆ ಎನ್ಐಎ ತಹವ್ವೂರು ರಾಣಾನನ್ನು ವಿಚಾರಣೆ ಮಾಡಲಿದೆ. ವಿಚಾರಣೆ ವೇಳೆ ದಾಳಿಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು. ಈ ಹಿಂದೆ ಎಷ್ಟು ಬಾರಿ ಭಾರತಕ್ಕೆ ಬಂದು ಹೋಗಿದ್ದಾನೆ. ಯಾರ ಯಾರ ಸಂಪರ್ಕಗಳು ಇದ್ದವು. ದಾಳಿ ಹೇಗೆ ಮಾಡಲಾಯಿತು ಎನ್ನುವ ಪ್ರಶ್ನೆಗಳನ್ನು ಎನ್ಐಎ ಅಧಿಕಾರಿಗಳು ಕೇಳಲಿದ್ದಾರೆ.
ರಾಣಾ ನೆಟ್ವರ್ಕ್ ಅನ್ನು ಅಧಿಕಾರಿಗಳು ಬಹಿರಂಗ ಪಡಿಸಲು ಪ್ರಯತ್ನ ಮಾಡಲಿದ್ದಾರೆ. ಉಗ್ರ ಬೆಂಬಲಿಗರು, ಸ್ಲೀಪರ್ ಸೆಲ್ಗಳ ಬಗ್ಗೆಯೂ ವಿಚಾರಣೆ ನಡೆಸುವರು. ಸದ್ಯದ ಪರಿಸ್ಥಿತಿಯಲ್ಲಿ ರಾಣಾ ಎಷ್ಟು ಌಕ್ಟಿವ್ ಇದ್ದಾನೆ, ಈಗಲೂ ಭಯೋತ್ಪಾದಕರ ಜೊತೆ ಸಂಪರ್ಕದಲ್ಲಿ ಇದ್ದಾನಾ ಎಂದು ಎಲ್ಲ ಆಯಾಮಗಳಿಂದಲೂ ವಿಚಾರಣೆ ಮಾಡಲಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ