/newsfirstlive-kannada/media/post_attachments/wp-content/uploads/2025/01/RANA.jpg)
ಮುಂಬೈ ದಾಳಿಯ ಭಯೋತ್ಪಾದಕ, ಅಪರಾಧಿ ತಹವ್ವುರ್ ರಾಣಾನನ್ನು (Tahawwur Rana) ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಸುಪ್ರೀಂ ಕೋರ್ಟ್ (US Supreme Court) ಅನುಮೋದನೆ ನೀಡಿದೆ.
ಯಾರು ಈ ರಾಣಾ..?
ಪಾಕಿಸ್ತಾನಿ ಮೂಲದ ಕೆನಡಾ ಪ್ರಜೆ ತಹವ್ವುರ್ ರಾಣಾನನ್ನು ಹಸ್ತಾಂತರಿಸುವಂತೆ ತುಂಬಾ ದಿನಗಳಿಂದ ಭಾರತ ಒತ್ತಾಯಿಸುತ್ತಿತ್ತು. 2008ರ ಮುಂಬೈ ಅಟ್ಯಾಕ್ ಪ್ರಕರಣದಲ್ಲಿ ತಹವ್ವುರ್ ರಾಣಾ ಭಾರತಕ್ಕೆ ಬೇಕಾಗಿದ್ದಾನೆ. ಭಾರತಕ್ಕೆ ಹಸ್ತಾಂತರಿಸುವ ವಿರುದ್ಧ ಆತ ಕಾನೂನು ಹೋರಾಟ ನಡೆಸಿದ್ದ.
ಇದನ್ನೂ ಓದಿ: BIGG BOSS ಗ್ರ್ಯಾಂಡ್ ಫಿನಾಲೆ ಸ್ಟೇಜ್ ಮೇಲೆ ಕಿಚ್ಚ ಸುದೀಪ್ ಸಖತ್ ಸ್ಟೆಪ್ಸ್.. ಫುಲ್ ಕ್ಲಾಸ್ ಈ ‘ಮ್ಯಾಕ್ಸ್’
ಕೆಳನ್ಯಾಯಾಲಯಗಳಲ್ಲಿ ಹಿನ್ನಡೆಯಾದ ಕಾರಣ ಅಮೆರಿಕದ ಸುಪ್ರೀಂ ಕೋರ್ಟ್ಗೆ ಹೋಗಿದ್ದ. ಆತನಿಗಿದ್ದ ಕೊನೆಯ ಅವಕಾಶ ಕೂಡ ಇದೀಗ ಮುಚ್ಚಿದೆ. ಅಮೆರಿಕದ ಫೆಡರಲ್ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟದಲ್ಲಿ ಸೋತ ನಂತರ ಸುಪ್ರೀಂ ಕೋರ್ಟ್ಗೆ ಹೋಗಿದ್ದ.
ಆರೋಪಗಳು ಏನು?
26/11 ದಾಳಿ ಮಾಸ್ಟರ್ ಮೈಂಡ್ಗಳಲ್ಲಿ ಅಮೆರಿಕನ್ ಉಗ್ರ ಡೇವಿಡ್ ಹೆಡ್ಲಿ ಕೂಡ ಹೌದು. ಈತನಿಗೆ ರಾಣಾ ಸಹಾಯ ಮಾಡಿದ್ದಾನೆ. 60 ವರ್ಷದ ರಾಣಾನನ್ನು 2009ರಲ್ಲಿ ಚಿಕಾಗೋದಲ್ಲಿ ಬಂಧಿಸಲಾಗಿತ್ತು. ಸದ್ಯ ಲಾಸ್ ಏಂಜಲಿಸ್ನ ಜೈಲಿನಲ್ಲಿದ್ದಾನೆ. ಐಎಸ್ಐ ಮತ್ತು ಲಷ್ಕರ್-ಎ-ತೊಯ್ಬಾ ಜತೆ ನಿಟಕ ಸಂಬಂಧ ಹೊಂದಿರುವ ಆರೋಪ ಇದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸದಸ್ಯ ಕೂಡ ಹೌದು.
2008ರಲ್ಲಿ ಮುಂಬೈನಲ್ಲಿ ದಾಳಿ
ನವೆಂಬರ್ 26, 2008 ರಂದು ಮುಂಬೈನಲ್ಲಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಆರು ಅಮೆರಿಕನ್ನರು ಸೇರಿದಂತೆ ಒಟ್ಟು 166 ಮಂದಿ ಜೀವ ಕಳೆದುಕೊಂಡಿದ್ದಾರೆ. 10 ಪಾಕಿಸ್ತಾನಿ ಭಯೋತ್ಪಾದಕರು ಮುಂಬೈನ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು 60 ಗಂಟೆಗೂ ಹೆಚ್ಚು ಕಾಲ ಸರಣಿ ದಾಳಿ ಮಾಡಿದ್ದರು.
ಇದನ್ನೂ ಓದಿ: ಲಾಯರ್ ಜಗದೀಶ್, ಮಗ, ಗನ್ಮ್ಯಾನ್ ಅರೆಸ್ಟ್.. ಕೋರ್ಟ್ಗೆ ಹಾಜರು ಪಡಿಸಲಿರೋ ಪೊಲೀಸರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ