/newsfirstlive-kannada/media/post_attachments/wp-content/uploads/2024/10/Kaveri-1.jpg)
[caption id="attachment_92337" align="alignnone" width="800"]
ತುಲಾ ಸಂಕ್ರಮಣದ ವಿಶೇಷ ಶುಭದಿನದಂದು ಕರುನಾಡ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವವಾಗಿದೆ. ಭಾಗಮಂಡಲದ ತಲಕಾವೇರಿಯಲ್ಲಿ ಈ ಪುಣ್ಯಕಾರ್ಯ ಸಾಕ್ಷಿಯಾಗಿದೆ.[/caption]
[caption id="attachment_92329" align="alignnone" width="800"]
ಇಂದು 17ರ ಮುಂಜಾನೆ 7 ಗಂಟೆ 40 ನಿಮಿಷಕ್ಕೆ ತೀರ್ಥೋದ್ಭವಾಗಿದೆ. ಸಹಸ್ರಾರು ಭಕ್ತರು ಈ ಪುಣ್ಯ ಕ್ಷಣವನ್ನ ಕಣ್ತುಂಬಿಕೊಂಡಿದ್ದಾರೆ.
[caption id="attachment_92338" align="alignnone" width="800"]
ಪ್ರತಿ ವರ್ಷದಂತೆ ಈ ವರ್ಷ ಕೂಡ ತಲಕಾವೇರಿಯಲ್ಲಿ ಸಹಸ್ರಾರು ಭಕ್ತರು ಕಾಣಿಸಿಕೊಂಡಿದ್ದಾರೆ. ಮಳೆ, ಚಳಿ ಎನ್ನದೆ ಪುಣ್ಯಕಾರ್ಯದಲ್ಲಿ ಭಾಗಿಗಳಾಗಿದ್ದಾರೆ. ಇನ್ನು ಒಂದು ತಿಂಗಳ ಕಾಲ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ನಡೆಯಲಿಕ್ಕಿದೆ.
[caption id="attachment_92330" align="alignnone" width="800"]
ಕಾವೇರಿ ಕೊಡಗಿನ ಕುಲದೇವತೆ. ಕನ್ನಡ ನಾಡಿನ ಜೀವನದಿ. ಕಾವೇರಿ ಹುಟ್ಟುವುದೇ ಇಲ್ಲಿಂದ. ದಕ್ಷಿಣ ಭಾರತದ ಗಂಗೆ ಎಂದೇ ಪೂಜಿಸಲ್ಪಡುವ ಕಾವೇರಿ ತೀರ್ಥದಲ್ಲಿ ಮಿಂದರೆ ಸಂಕಷ್ಟ ಪಾವನವಾಗುತ್ತದೆ ಎಂಬ ನಂಬಿಕೆ.
[caption id="attachment_92331" align="alignnone" width="800"]
ಕಾವೇರಿ ಹುಟ್ಟಿಗೆ ಪೌರಾಣಿಕ ಕಥೆಯಿದೆ. ಉತ್ತರದಲ್ಲಿದ್ದ ಅಗಸ್ತ್ಯ ಮಹರ್ಷಿಗಳು ದಕ್ಷಿಣಕ್ಕೆ ಆಗಮಿಸಿ ಇಲ್ಲೊಂದು ಅತ್ಯಂತ ಪುರಾತನ ಹಾಗೂ ಶ್ರೀಮಂತಿಕೆಯ ನಾಗರೀಕತೆಯನ್ನು ಹುಟ್ಟುಹಾಕಿದ ಕಥೆಯನ್ನು ಕಾವೇರಿ ಸಾರುತ್ತಾಳೆ.[/caption]
[caption id="attachment_92292" align="alignnone" width="800"]
ಮಕ್ಕಳಿಲ್ಲದ ಮಹರ್ಷಿ ಕವೇರ ಬ್ರಹ್ಮಗಿರಿಯಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಾರೆ. ಅವರ ಕಠೋರ ತಪಸ್ಸಿಗೆ ಪ್ರತ್ಯಕ್ಷನಾದ ಬ್ರಹ್ಮದೇವರು ನಿನ್ನಲ್ಲಿ ಪೂರ್ವಜನ್ಮದ ಪಾಪದ ಫಲವಿರುವುದರಿಂದ ನಿನಗೆ ಸಂತಾನ ಭಾಗ್ಯವಿಲ್ಲ. ಹೀಗಾಗಿ ನನ್ನ ಮಾನಸ ಪುತ್ರಿ ಲೋಪಮುದ್ರೆಯನ್ನೇ ನಿನಗೆ ಮಗಳಾಗಿ ನೀಡುತ್ತೇನೆಂದು ಲೋಪಮುದ್ರೆಯನ್ನು ಕವೇರನಿಗೆ ನೀಡಿತ್ತಾರೆ ಬ್ರಹ್ಮದೇವರು.[/caption]
[caption id="attachment_92294" align="alignnone" width="800"]
ಕವೇರನ ಮಗಳು ಮುಂದೆ ಕಾವೇರಿಯಾಗಿ ಲೋಕಪ್ರಸಿದ್ಧಿ ಪಡೆದಳು. ಉತ್ತರದಿಂದ ದಕ್ಷಿಣದ ಕ್ರೋಡದೇಶಕ್ಕೆ ಬಂದಿದ್ದ ಮಹರ್ಷಿ ಅಗಸ್ತ್ಯ ಕಣ್ಣಿಗೆ ಕಾವೇರಿ ಬೀಳುತ್ತಾಳೆ. ಅವಳ ಲೋಕೋದ್ಧಾರಕ್ಕಾಗಿ ಬಂದಿರುವ ಹಾಗೂ ಆಕೆಯ ಜೀವನುದ್ದೇಶವನ್ನು ತಮ್ಮ ತಪೋಬಲದಿಂದ ಕಂಡುಕೊಂಡ ಅಗಸ್ತ್ಯ ಮಹರ್ಷಿಗಳು ಕಾವೇರಿಯನ್ನು ಮದುವೆಯಾಗುವುದಾಗಿ ಕವೇರನ ಬಳಿ ಕೇಳಿಕೊಳ್ಳುತ್ತಾರೆ.[/caption]
[caption id="attachment_92346" align="alignnone" width="800"]
ಕವೇರ ಒಪ್ಪಿಕೊಂಡರೂ ಕೂಡ ಕಾವೇರಿ ಮಾತ್ರ, ನಾನು ಇವರನ್ನು ಮದುವೆಯಾಗುತ್ತೇನೆ, ಆದ್ರೆ ಇವರು ಎಂದಿಗೂ ಕೂಡ ನನ್ನನ್ನು ಬಿಟ್ಟು ಹೋಗಬಾರದು ಎಂದು ಷರತ್ತು ವಿಧಿಸುತ್ತಾಳೆ. ಇದಕ್ಕೆ ಒಪ್ಪಿದ ಅಗಸ್ತ್ಯರು ಕಾವೇರಿಯನ್ನು ವರಿಸುತ್ತಾರೆ. ಲೋಕಕಲ್ಯಾಣಕ್ಕೇ ಎಂದು ಬಂದಿದ್ದ ಲೋಪಮುದ್ರೆ ಒಂದೇ ಒಂದು ನಿಮಿತ್ಯಕ್ಕಾಗಿ ಕಾಯುತ್ತಿರುತ್ತಾಳೆ.[/caption]
[caption id="attachment_92347" align="alignnone" width="800"]
ಆ ಒಂದು ನಿಮಿತ್ಯ ಬಂದೇ ಬಿಡುತ್ತದೆ. ಒಂದು ದಿನ ಕಾವೇರಿಯನ್ನು ಕಮಂಡಲದಲ್ಲಿಟ್ಟು ಅಗಸ್ತ್ಯ ಮುನಿಗಳು ಸ್ನಾನಕ್ಕೆಂದು ಹೋಗುತ್ತಾರೆ. ಅದನ್ನೇ ಕಾಯುತ್ತಿದ್ದ ಕಾವೇರಿ ಕಮಂಡಲದಿಂದ ಉಕ್ಕಿ ಹರಿಯಲು ಶುರು ಮಾಡುತ್ತಾಳೆ.[/caption]
[caption id="attachment_92348" align="alignnone" width="800"]
ಆ ಒಂದು ನಿಮಿತ್ಯ ಬಂದೇ ಬಿಡುತ್ತದೆ. ಒಂದು ದಿನ ಕಾವೇರಿಯನ್ನು ಕಮಂಡಲದಲ್ಲಿಟ್ಟು ಅಗಸ್ತ್ಯ ಮುನಿಗಳು ಸ್ನಾನಕ್ಕೆಂದು ಹೋಗುತ್ತಾರೆ. ಅದನ್ನೇ ಕಾಯುತ್ತಿದ್ದ ಕಾವೇರಿ ಕಮಂಡಲದಿಂದ ಉಕ್ಕಿ ಹರಿಯಲು ಶುರು ಮಾಡುತ್ತಾಳೆ.
[caption id="attachment_92349" align="alignnone" width="800"]
ಅಗಸ್ತ್ಯರು ತಡೆದರು, ಊರ ಜನರು ತಡೆದರು ನಿಲ್ಲದ ಕಾವೇರಿ ಧುಮ್ಮಿಕ್ಕಿ ಹರಿಯುತ್ತಲೇ ಸಾಗುತ್ತಾಳೆ. ಆಕೆಯ ಜನ್ಮರಹಸ್ಯ ಅರಿತಿದ್ದ ಅಗಸ್ತ್ಯರು ಸಮುದ್ರದವರೆಗೆ ಅವಳನ್ನು ಹಿಂಬಾಲಿಸುತ್ತಾ ಓಡಿ ಹೋದರು.[/caption]
[caption id="attachment_92350" align="alignnone" width="800"]
ಕಾವೇರಿ ಅದಾಗಲೇ ಹರಿದು ಹೋಗಿದ್ದಳು. ಲೋಪಮುದ್ರೆಯಾದ ಕಾವೇರಿ ಲೋಕಪಾವನೆಯಾಗಿದ್ದಳು. ವರ್ಷಕ್ಕೊಮ್ಮೆ ಕ್ರೋಢದ ಜನರಿಗೆ ದರ್ಶನ ನೀಡುವುದಾಗ ವರವಿತ್ತಳು. ಹೀಗೆ ಹರಿದು ಹೋದ ಕಾವೇರಿ ಭಾಗಮಂಡಲದಲ್ಲಿ ಕನ್ನಿಕೆ ಹಾಗೂ ಸುಜ್ಯೋತಿ ನದಿಯನ್ನು ಕೂಡಿ ಅಲ್ಲಿಂದ ಲೋಕಕಲ್ಯಾಣಕ್ಕಾಗಿ ಹರಿದು ಸಮುದ್ರ ಸೇರುತ್ತಾಳೆ. ಹೀಗೆ ಮೂರು ಪವಿತ್ರ ನದಿಗಳು ಸೇರುವ ಸ್ಥಳ ತ್ರೀವೇಣಿ ಸಂಗಮವಾಗಿ ಪುಣ್ಯಕ್ಷೇತ್ರವಾಗಿ ಮಾರ್ಪಡುತ್ತದೆ.[/caption]
[caption id="attachment_92337" align="alignnone" width="800"]
ಅಂದಿನಿಂದ ಇಂದಿನವರೆಗೂ ಕಾವೇರಿ ತಾನು ಕೊಟ್ಟ ಮಾತಿನಂತೆ ತುಲಾ ಮಾಸ ಸಮೀಪಿಸುತ್ತಿದ್ದಂತೆ ತೀರ್ಥರೂಪಿಣಿಯಾಗಿ ದರ್ಶನ ನೀಡುತ್ತಿದ್ದಾಳೆ. ಕೊಡವರ ಪಾಲಿಗೆ ಕುಲದೇವರಾಗಿ ಪೂಜಿಸಲ್ಪಡುತ್ತಿದ್ದಾಳೆ.[/caption]
[caption id="attachment_92351" align="alignnone" width="800"]
ವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲಾ ತೊಳೆದು ಹೋಗುತ್ತವೆ ಎಂಬ ನಂಬಿಕೆ ಇದೆ. ಇಲ್ಲಿ ಪಿಂಡಪ್ರಧಾನ ಮಾಡುವುದರಿಂದ ಮಡಿದವರು ಸ್ವರ್ಗಸೇರುತ್ತಾರೆ ಎಂಬ ನಂಬಿಕೆಯೂ ಇದೆ. ಈ ಎಲ್ಲಾ ಕಾರಣಗಳಿಗಾಗಿ ಕಾವೇರಿ ಇಂದಿಗೂ ಪೂಜ್ಯನೀಯವಾಗಿ, ಲೋಕಪಾವನೆಯಾಗಿ ಸಹಸ್ರಾರು ವರ್ಷಗಳಿಂದ ಈ ನೆಲದಲ್ಲಿ ಪೂಜಿಕೊಂಡು ಬರುತ್ತಿದ್ದಾಳೆ.[/caption]
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us