newsfirstkannada.com

Ajith Kumar: ಅಸ್ವಸ್ಥಗೊಂಡ ಅಜಿತ್ ಕುಮಾರ್, ಚೆನ್ನೈನ ಆಸ್ಪತ್ರೆಗೆ ದಾಖಲು

Share :

Published March 8, 2024 at 8:42am

Update March 8, 2024 at 8:43am

    ಅಜಿತ್ ಕುಮಾರ್​ಗೆ ಕಾಡಿದ ಅನಾರೋಗ್ಯ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

    ‘ವಿಡವೇಲಿ’ ಚಿತ್ರೀಕರಣಕ್ಕೆ ಹೋಗಬೇಕಿದ್ದ ನಟ, ದಿಢೀರ್ ಕ್ಯಾನ್ಸಲ್

    ಆಘಾತಕ್ಕೆ ಒಳಗಾದ ಅಭಿಮಾನಿಗಳು, ಅಜಿತ್ ಕುಮಾರ್​​ಗೆ ಏನಾಗಿದೆ?

ತಮಿಳು ಹಿರಿಯ ನಟ ಅಜಿತ್ ಕುಮಾರ್ (52) ಅಭಿಮಾನಿಗಳಿಗೆ ಆತಂಕಕಾರಿ ಸುದ್ದಿಯೊಂದು ಬಂದಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಆಘಾತಕ್ಕೆ ಒಳಗಾಗಿ ಏನಾಗಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಮಾಧ್ಯಮಗಳ ವರದಿ ಪ್ರಕಾರ, ಅಜಿತ್ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.

ತಡವುವು ನಂತರ ಮಿಜ್ ತಿರುಮೇನಿ ನಿರ್ದೇಶನದ ‘ವಿಡವೇಲಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಚಿತ್ರೀಕರಣ ಅಜರ್‌ಬೈಜಾನ್‌ನಲ್ಲಿ ನಡೆಯುತ್ತಿದೆ. ಕಳೆದ ತಿಂಗಳು ಚೆನ್ನೈಗೆ ಬಂದಿದ್ದ ಅಜಿತ್ ಕುಮಾರ್ ಸೇರಿದಂತೆ ಚಿತ್ರತಂಡ ಮತ್ತೆ ಅಜರ್ ಬೈಜಾನ್​ಗೆ ಹೋಗಲು ಪ್ಲಾನ್ ಮಾಡಿತ್ತು. ಆದರೆ ಅಜಿತ್ ಕುಮಾರ್​ ತೀವ್ರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಪ್ಲಾನ್ ಕ್ಯಾನ್ಸಲ್ ಮಾಡಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.

ವರದಿಗಳ ಪ್ರಕಾರ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ತಪಾಸಣೆ ಪೂರ್ಣಗೊಳ್ಳಲು ಒಂದು ದಿನ ತೆಗೆದುಕೊಳ್ತಿರೋದ್ರಿಂದ ಅಡ್ಮಿಟ್ ಆಗಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ‘ವಿಡವೇಲಿ’ ಚಿತ್ರೀಕರಣದಿಂದ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ajith Kumar: ಅಸ್ವಸ್ಥಗೊಂಡ ಅಜಿತ್ ಕುಮಾರ್, ಚೆನ್ನೈನ ಆಸ್ಪತ್ರೆಗೆ ದಾಖಲು

https://newsfirstlive.com/wp-content/uploads/2024/03/AJITH-KUMAR.jpg

    ಅಜಿತ್ ಕುಮಾರ್​ಗೆ ಕಾಡಿದ ಅನಾರೋಗ್ಯ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

    ‘ವಿಡವೇಲಿ’ ಚಿತ್ರೀಕರಣಕ್ಕೆ ಹೋಗಬೇಕಿದ್ದ ನಟ, ದಿಢೀರ್ ಕ್ಯಾನ್ಸಲ್

    ಆಘಾತಕ್ಕೆ ಒಳಗಾದ ಅಭಿಮಾನಿಗಳು, ಅಜಿತ್ ಕುಮಾರ್​​ಗೆ ಏನಾಗಿದೆ?

ತಮಿಳು ಹಿರಿಯ ನಟ ಅಜಿತ್ ಕುಮಾರ್ (52) ಅಭಿಮಾನಿಗಳಿಗೆ ಆತಂಕಕಾರಿ ಸುದ್ದಿಯೊಂದು ಬಂದಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಆಘಾತಕ್ಕೆ ಒಳಗಾಗಿ ಏನಾಗಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಮಾಧ್ಯಮಗಳ ವರದಿ ಪ್ರಕಾರ, ಅಜಿತ್ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.

ತಡವುವು ನಂತರ ಮಿಜ್ ತಿರುಮೇನಿ ನಿರ್ದೇಶನದ ‘ವಿಡವೇಲಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಚಿತ್ರೀಕರಣ ಅಜರ್‌ಬೈಜಾನ್‌ನಲ್ಲಿ ನಡೆಯುತ್ತಿದೆ. ಕಳೆದ ತಿಂಗಳು ಚೆನ್ನೈಗೆ ಬಂದಿದ್ದ ಅಜಿತ್ ಕುಮಾರ್ ಸೇರಿದಂತೆ ಚಿತ್ರತಂಡ ಮತ್ತೆ ಅಜರ್ ಬೈಜಾನ್​ಗೆ ಹೋಗಲು ಪ್ಲಾನ್ ಮಾಡಿತ್ತು. ಆದರೆ ಅಜಿತ್ ಕುಮಾರ್​ ತೀವ್ರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಪ್ಲಾನ್ ಕ್ಯಾನ್ಸಲ್ ಮಾಡಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.

ವರದಿಗಳ ಪ್ರಕಾರ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ತಪಾಸಣೆ ಪೂರ್ಣಗೊಳ್ಳಲು ಒಂದು ದಿನ ತೆಗೆದುಕೊಳ್ತಿರೋದ್ರಿಂದ ಅಡ್ಮಿಟ್ ಆಗಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ‘ವಿಡವೇಲಿ’ ಚಿತ್ರೀಕರಣದಿಂದ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More