/newsfirstlive-kannada/media/post_attachments/wp-content/uploads/2024/11/TANISHA.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಅವರು ಎಷ್ಟು ಕ್ಲೋಸ್ ಫ್ರೆಂಡ್ ಅಂತ ಎಲ್ಲರಿಗೂ ಗೊತ್ತಿದೆ. ಬಿಗ್ಬಾಸ್ ಸೀಸನ್ 10ರ ಬಳಿಕ ಸಿಕ್ಕಾಪಟ್ಟೆ ಸುದ್ದಿಯಲ್ಲಿರೋ ಜೋಡಿ ಇದು.
ಇದನ್ನೂ ಓದಿ:BBK11: ಬಿಗ್ಬಾಸ್ ಮನೆಗೆ ಮತ್ತೆರೆಡು ವೈಲ್ಡ್ ಕಾರ್ಡ್ ಎಂಟ್ರಿ; ಯಾರವರು?
ಬಿಗ್ಬಾಸ್ ಮುಗಿದ ಬಳಿಕ ಸಾಕಷ್ಟು ಬಾರಿ ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಅವರು ಭೇಟಿಯಾಗಿದ್ದಾರೆ. ಆಗಾಗ ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಭೇಟಿಯಾಗುತ್ತಲೇ ಇರುತ್ತಾರೆ. ಆದರೆ ಇದರ ಮಧ್ಯೆ ನಿನ್ನೆ ನಡೆದ GKVK ಕಾರ್ಯಕ್ರಮದಲ್ಲಿ ವರ್ತೂರು ಸಂತೋಷ್, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್ ಹಾಗೂ ಮಾನಸ ಬಂದಿದ್ದರು.
View this post on Instagram
ಜಿಕೆವಿಕೆ ಕೃಷಿ ಮೇಳದಲ್ಲಿ ಭಾಗಿಯಾಗಿದ್ದ ತನಿಷಾ ಹಾಗೂ ವರ್ತೂರು ಸಂತೋಷ್ ಅವರು ಒಂದೇ ಎತ್ತಿನಗಾಡಿ ಮೇಲೆ ಹೋಗುತ್ತಿದ್ದರು. ಇದೇ ಎತ್ತಿನಗಾಡಿ ಮೇಲೆ ಹೋಗುತ್ತಿದ್ದಾಗ ನೂಕುನುಗ್ಗಲು ಉಂಟಾಗಿದೆ. ಆಗ ಎತ್ತಿನಗಾಡಿ ಮೇಲೆ ನಿಂತುಕೊಂಡಿದ್ದವರ ಬ್ಯಾಲೆನ್ಸ್ ತಪ್ಪಿದೆ. ಆಗ ತನಿಷಾ ಕುಪ್ಪಂಡ ಅವರು ಏಕಾಏಕಿ ವರ್ತೂರು ಸಂತೋಷ್ ಅವರ ಮೇಲೆ ಬಿದ್ದಿದ್ದಾರೆ. ಸದ್ಯ ತನಿಷಾ ಕುಪ್ಪಂಡ ಏನೂ ಆಗಿಲ್ಲ. ಆದರೆ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ