/newsfirstlive-kannada/media/post_attachments/wp-content/uploads/2025/05/tanvi-rao.jpg)
ಕನ್ನಡದ ಜನಪ್ರಿಯ ಧಾರಾವಾಹಿ ಲಕ್ಷ್ಮೀ ಬಾರಮ್ಮ ಸೀರಿಯಲ್​ ಇತ್ತೀಚೆಗಷ್ಟೇ ಅಂತ್ಯ ಕಂಡಿದೆ. ತರಾತುರಿಯಲ್ಲಿ ಧಾರಾವಾಹಿ ಮುಗಿಸಿದ್ದಕ್ಕೆ ವೀಕ್ಷಕರು ಬೇಸರ ಹೊರ ಹಾಕಿದ್ದರು. ಅಷ್ಟೇ ಅಲ್ಲದೇ ದಿಢೀರ್ ಅಂತ ಧಾರಾವಾಹಿ ವೈಂಡಪ್ ಆಗಿದ್ದಕ್ಕೆ ನಟಿ ತನ್ವಿ ರಾವ್​ ಕೂಡ ಬೇಸರ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಪಾಕ್​ನ ಬಣ್ಣ ಬಯಲು ಮಾಡಿದ NIA.. ಪಹಲ್ಗಾಮ್ ದಾಳಿ ತನಿಖೆಗೆ ಹೊಸ ತಿರುವು..!
ಹೌದು, ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ನಟಿ ತನ್ವಿ ರಾವ್ ​ಸಖತ್​ ಫೇಮಸ್​ ಆಗಿದ್ದಾರೆ. ಇದೇ ಸೀರಿಯಲ್​ನಲ್ಲಿ ಕೀರ್ತಿ ಪಾತ್ರದಲ್ಲಿ ಭರ್ಜರಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ನಟಿ ತನ್ವಿ ರಾವ್​. ಸೀರಿಯಲ್​ ಮುಕ್ತಾಯದ ಬಳಿಕ ನ್ಯೂಸ್​ಫಸ್ಟ್​ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಹಲವಾರು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಅದರಲ್ಲೂ ನಟಿ ತನ್ವಿ ರಾವ್​ ಲಕ್ಷ್ಮೀ ಬಾರಮ್ಮ ಸೀರಿಯಲ್​ಗೆ ಬಂದಿದ್ದೇ ಒಂದು ರೋಚಕ ಕಥೆ ಅಂತಲೇ ಹೇಳಬಹುದು.
ಈ ಬಗ್ಗೆ ನ್ಯೂಸ್​ ಫಸ್ಟ್​ ಸಂದರ್ಶನದಲ್ಲಿ ಮಾತಾಡಿದ ನಟಿ ತನ್ವಿ ರಾವ್, ನಾನು ಸೀರಿಯಲ್​ನಿಂದ ನನ್ನ ನಟನೆ ಬೆಳವಣಿಗೆ ಕಂಡಿದೆ. ನಾನು ರಾಧೆ ಶಾಮ ಧಾರಾವಾಹಿಯಲ್ಲಿ ತುಂಬಾ ಸೆಟಲ್ ಆಗಿ ನಟನೆ ಮಾಡಬೇಕು, ಆದಷ್ಟು ಕಣ್ಣಲ್ಲೇ ಎಲ್ಲಾ ಹೇಳಬೇಕು, ಓವರ್​ ಌಕ್ಟಿಂಗ್​ ಮಾಡಬಾರದು ಅಂತ ಟ್ರೀಟ್​ ಮಾಡ್ತಾ ಇದ್ದರು. ಚೌಕಟ್​ನಲ್ಲಿ ನಟನೆ ಮಾಡೋ ಕ್ಯಾರೆಕ್ಟರ್​ನಿಂದ ಸೀದಾ ಏನೋ ಬೌಂಡರಿ ಇಲ್ಲದೇ ಇರೋ ಹಾಗೇ ಜಪ್​ ಹೊಡೆದಿದ್ದು ನನಗೆ ದೊಡ್ಡ ಅನುಭವ ಆಗಿದೆ. 3 ವರ್ಷಗಳ ಕಾಲ ನಾನು ಹೇಗೆ ಕಾಣುತ್ತೇನೆ ಅಂತ ಕಂಡಿದ್ದೇನೆ. ಅದರಲ್ಲೂ ಕೀರ್ತಿ ಪಾತ್ರ ಎಲ್ಲವನ್ನು ತೋರಿಸಬೇಕಾಗಿತ್ತು. ಈ ಪಾತ್ರದಿಂದ ತುಂಬಾ ಕಲಿತ್ತೀದ್ದೀನಿ. ನಾನು ಲಕ್ಷ್ಮೀ ಪಾತ್ರಕ್ಕೆ ಲುಕ್​ ಟೆಸ್ಟ್​ ಕೊಟ್ಟಿದ್ದೆ. ಆ ಪಾತ್ರಕ್ಕೆ ವರ್ಕೌಟ್​ ಆಗಿಲ್ಲ ಅಂತ ಎಷ್ಟೋ ತಿಂಗಳುಗಳ ಬಳಿಕ ಕೀರ್ತಿ ಪಾತ್ರಕ್ಕೆ ನನ್ನ ಕರೆದಿದ್ದರು. ಅವರು ನನ್ನ ಮೇಲೆ ಇಟ್ಟುಕೊಂಡಿದ್ದ ನಂಬಿಕೆಗೆ ನಾನು ಆ ಪಾತ್ರದಲ್ಲಿ ಇಷ್ಟು ಚೆನ್ನಾಗಿ ಅಭಿನಯಿಸೋದಕ್ಕೆ ಆಯ್ತು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us