/newsfirstlive-kannada/media/post_attachments/wp-content/uploads/2025/05/tanvi-rao.jpg)
ಕನ್ನಡದ ಜನಪ್ರಿಯ ಧಾರಾವಾಹಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಇತ್ತೀಚೆಗಷ್ಟೇ ಅಂತ್ಯ ಕಂಡಿದೆ. ತರಾತುರಿಯಲ್ಲಿ ಧಾರಾವಾಹಿ ಮುಗಿಸಿದ್ದಕ್ಕೆ ವೀಕ್ಷಕರು ಬೇಸರ ಹೊರ ಹಾಕಿದ್ದರು. ಅಷ್ಟೇ ಅಲ್ಲದೇ ದಿಢೀರ್ ಅಂತ ಧಾರಾವಾಹಿ ವೈಂಡಪ್ ಆಗಿದ್ದಕ್ಕೆ ನಟಿ ತನ್ವಿ ರಾವ್ ಕೂಡ ಬೇಸರ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಪಾಕ್ನ ಬಣ್ಣ ಬಯಲು ಮಾಡಿದ NIA.. ಪಹಲ್ಗಾಮ್ ದಾಳಿ ತನಿಖೆಗೆ ಹೊಸ ತಿರುವು..!
ಹೌದು, ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ನಟಿ ತನ್ವಿ ರಾವ್ ಸಖತ್ ಫೇಮಸ್ ಆಗಿದ್ದಾರೆ. ಇದೇ ಸೀರಿಯಲ್ನಲ್ಲಿ ಕೀರ್ತಿ ಪಾತ್ರದಲ್ಲಿ ಭರ್ಜರಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ನಟಿ ತನ್ವಿ ರಾವ್. ಸೀರಿಯಲ್ ಮುಕ್ತಾಯದ ಬಳಿಕ ನ್ಯೂಸ್ಫಸ್ಟ್ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಹಲವಾರು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಅದರಲ್ಲೂ ನಟಿ ತನ್ವಿ ರಾವ್ ಲಕ್ಷ್ಮೀ ಬಾರಮ್ಮ ಸೀರಿಯಲ್ಗೆ ಬಂದಿದ್ದೇ ಒಂದು ರೋಚಕ ಕಥೆ ಅಂತಲೇ ಹೇಳಬಹುದು.
ಈ ಬಗ್ಗೆ ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಮಾತಾಡಿದ ನಟಿ ತನ್ವಿ ರಾವ್, ನಾನು ಸೀರಿಯಲ್ನಿಂದ ನನ್ನ ನಟನೆ ಬೆಳವಣಿಗೆ ಕಂಡಿದೆ. ನಾನು ರಾಧೆ ಶಾಮ ಧಾರಾವಾಹಿಯಲ್ಲಿ ತುಂಬಾ ಸೆಟಲ್ ಆಗಿ ನಟನೆ ಮಾಡಬೇಕು, ಆದಷ್ಟು ಕಣ್ಣಲ್ಲೇ ಎಲ್ಲಾ ಹೇಳಬೇಕು, ಓವರ್ ಌಕ್ಟಿಂಗ್ ಮಾಡಬಾರದು ಅಂತ ಟ್ರೀಟ್ ಮಾಡ್ತಾ ಇದ್ದರು. ಚೌಕಟ್ನಲ್ಲಿ ನಟನೆ ಮಾಡೋ ಕ್ಯಾರೆಕ್ಟರ್ನಿಂದ ಸೀದಾ ಏನೋ ಬೌಂಡರಿ ಇಲ್ಲದೇ ಇರೋ ಹಾಗೇ ಜಪ್ ಹೊಡೆದಿದ್ದು ನನಗೆ ದೊಡ್ಡ ಅನುಭವ ಆಗಿದೆ. 3 ವರ್ಷಗಳ ಕಾಲ ನಾನು ಹೇಗೆ ಕಾಣುತ್ತೇನೆ ಅಂತ ಕಂಡಿದ್ದೇನೆ. ಅದರಲ್ಲೂ ಕೀರ್ತಿ ಪಾತ್ರ ಎಲ್ಲವನ್ನು ತೋರಿಸಬೇಕಾಗಿತ್ತು. ಈ ಪಾತ್ರದಿಂದ ತುಂಬಾ ಕಲಿತ್ತೀದ್ದೀನಿ. ನಾನು ಲಕ್ಷ್ಮೀ ಪಾತ್ರಕ್ಕೆ ಲುಕ್ ಟೆಸ್ಟ್ ಕೊಟ್ಟಿದ್ದೆ. ಆ ಪಾತ್ರಕ್ಕೆ ವರ್ಕೌಟ್ ಆಗಿಲ್ಲ ಅಂತ ಎಷ್ಟೋ ತಿಂಗಳುಗಳ ಬಳಿಕ ಕೀರ್ತಿ ಪಾತ್ರಕ್ಕೆ ನನ್ನ ಕರೆದಿದ್ದರು. ಅವರು ನನ್ನ ಮೇಲೆ ಇಟ್ಟುಕೊಂಡಿದ್ದ ನಂಬಿಕೆಗೆ ನಾನು ಆ ಪಾತ್ರದಲ್ಲಿ ಇಷ್ಟು ಚೆನ್ನಾಗಿ ಅಭಿನಯಿಸೋದಕ್ಕೆ ಆಯ್ತು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ