newsfirstkannada.com

ಹೊಸಕೋಟೆ ಬಿರಿಯಾನಿಗೆ ಇದೆ ಸ್ಪೆಷಲ್ ಖದರ್; ದಿಢೀರ್ ತೆರಿಗೆ ಇಲಾಖೆ ಕಣ್ಣು ಬಿದ್ದಿದ್ದೇಕೆ..?

Share :

Published October 11, 2023 at 5:46am

    ಹೊಸಕೋಟೆ ಬಿರಿಯಾನಿ ಹೋಟೆಲ್​​ಗಳ ಮೇಲೆ ಸಖತ್ ಕ್ರೇಜ್

    ಜನಸಾಗರದ ವಿಡಿಯೋ ನೀಡಿದ್ರೆ ನಿಮಗೆ ನಿಜಕ್ಕೂ ಶಾಕ್ ಆಗುತ್ತದೆ

    ವರ್ಷಕ್ಕೆ ಕೋಟಿ ಕೋಟಿ ಹಣ ಗಳಿಸೋ ಮಾಲೀಕರು ಮಾಡಿದ ತಪ್ಪೇನು..?

ಐಟಿ ರೇಡ್ ಅಂದ್ರೆ ದೊಡ್ಡ ದೊಡ್ಡ ಕುಳಗಳು, ಕಂಪನಿಗಳು, ಸೆಲಬ್ರೆಟಿಗಳ ಮೇಲೆ ದಾಳಿ ಮಾಡೋದನ್ನ ನಾವು ನೋಡಿರುತ್ತೇವೆ. ಆದರೆ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಕಣ್ಣು ಬಿರಿಯಾನಿ ಹೋಟೆಲ್‌ಗಳ ಮೇಲೆ ಬಿದ್ದಿದೆ. ಸದ್ಯದ ಮಟ್ಟಿಗೆ ಬಿರಿಯಾನಿ ಹೋಟೆಲ್‌ಗಳ ಕ್ರೇಜ್‌ ಸಿಕ್ಕಾಪಟ್ಟೆ ಇದೆ. ಸೋಷಿಯಲ್ ಮೀಡಿಯಾ ಬೂಮ್ ಆದ್ಮೇಲಂತೂ, ಬಿರಿಯಾನಿ ಸೇಲ್‌ ಬೇಜಾನ್ ಆಗ್ತಿದೆ. ಹೌದು, ಹೊಸಕೋಟೆ ಅಂದಾಕ್ಷಣ ನೆನಪಾಗುವುದು ಬಿಸಿ ಬಿಸಿ ಬಿರಿಯಾನಿ. ಸೋಷಿಯಲ್‌ ಮೀಡಿಯಾ ಓಪನ್ ಮಾಡಿದ್ರೆ, ಹೊಸಕೋಟೆ ಬಿರಿಯಾನಿ ಖದರ್ ಗೊತ್ತಾಗುತ್ತೆ.

ಈ ಮೊದಲು ಪಲಾವ್‌ ಸಖತ್ ಟ್ರೆಂಡ್ ಸೃಷ್ಟಿಸಿತ್ತು. ಈಗ ಬಿರಿಯಾನಿ ಟ್ರೆಂಡ್. ಹೀಗಾಗಿಯೇ ಬಿರಿಯಾನಿ ಹೋಟೆಲ್‌ಗಳು ಲೆಕ್ಕಕ್ಕೆ ಸಿಗದಷ್ಟಿವೆ. ಪ್ರತಿ ಏರಿಯಾದಲ್ಲೂ ಸಿಕ್ಕಾಪಟ್ಟೆ ಇವೆ. ಎಷ್ಟೇ ಅಂಗಡಿಯಿದ್ದರೂ ಹೊಸಕೋಟೆ ಬಿರಿಯಾನಿಗೆ ಸಪರೇಟ್ ಫ್ಯಾನ್ಸ್ ಇದ್ದಾರೆ ಅಂದ್ರೆ ತಪ್ಪಾಗೋಲ್ಲ. ಇಷ್ಟು ದಿನ ಹೊಸಕೋಟೆ ಬಿರಿಯಾನಿ ಟೇಸ್ಟ್‌! ಜನ ಸಾಗರದ ಬಗ್ಗೆ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದ್ರೆ, ಇದು ನಿಮಗೆ ಶಾಕ್ ಆಗುವಂತಹ, ಸುದ್ದಿ. ಯಾಕಂದ್ರೆ, ಹೊಸಕೋಟೆಯ ಫೇಮಸ್‌ ಹೋಟೆಲ್‌ಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಹೋಟೆಲ್‌ ಮಾಲೀಕನ ಬಳಿ 1.47 ಕೋಟಿ ನಗದು ಪತ್ತೆ!

ನಿನ್ನೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಕ್ಷಯ್‌ ಧಮ್ ಬಿರಿಯಾನಿ, ರಾಜ್ ಧಮ್ ಬಿರಿಯಾನಿ, ಮಣಿ ಧಮ್‌ ಬಿರಿಯಾನಿ, ಆನಂದ್ ಧಮ್‌ ಬಿರಿಯಾನಿ ಮೇಲೆ ದಾಳಿ ಮಾಡಿದ್ದಾರೆ. ವಂಚನೆ ಆರೋಪದ ಮೇಲೆ ದಾಳಿ ನಡೆದಿದ್ದು, ರಾಜ್‌ ಧಮ್ ಬಿರಿಯಾನಿ ಮಾಲೀಕರಾದ ಶ್ರೀನಿವಾಸ್ ಮತ್ತು ರಾಜ್ ಅವರ ಮನೆಯಲ್ಲಿ 1 ಕೋಟಿ 40 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ ಎಂದು ಮಾಹಿತಿ ಸಿಕ್ಕಿದೆ. ಸರಿಯಾದ ಲೆಕ್ಕಪತ್ರ ನಿರ್ವಹಿಸಿದೇ, ತೆರಿಗೆ ವಂಚನೆ ಮಾಡ್ತಿದ್ದರು ಅನ್ನೋ ಆರೋಪ ಕೇಳಿಬಂದಿದೆ. ಸದ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ತನಿಖೆ ಮಾಡ್ತಿದ್ದಾರೆ. ಈ ಪ್ರಕರಣದ ಬಗ್ಗೆ ಇಲಾಖೆಯಿಂದ ಸದ್ಯದಲ್ಲಿಯೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸಕೋಟೆ ಬಿರಿಯಾನಿಗೆ ಇದೆ ಸ್ಪೆಷಲ್ ಖದರ್; ದಿಢೀರ್ ತೆರಿಗೆ ಇಲಾಖೆ ಕಣ್ಣು ಬಿದ್ದಿದ್ದೇಕೆ..?

https://newsfirstlive.com/wp-content/uploads/2023/10/biriyani-2.jpg

    ಹೊಸಕೋಟೆ ಬಿರಿಯಾನಿ ಹೋಟೆಲ್​​ಗಳ ಮೇಲೆ ಸಖತ್ ಕ್ರೇಜ್

    ಜನಸಾಗರದ ವಿಡಿಯೋ ನೀಡಿದ್ರೆ ನಿಮಗೆ ನಿಜಕ್ಕೂ ಶಾಕ್ ಆಗುತ್ತದೆ

    ವರ್ಷಕ್ಕೆ ಕೋಟಿ ಕೋಟಿ ಹಣ ಗಳಿಸೋ ಮಾಲೀಕರು ಮಾಡಿದ ತಪ್ಪೇನು..?

ಐಟಿ ರೇಡ್ ಅಂದ್ರೆ ದೊಡ್ಡ ದೊಡ್ಡ ಕುಳಗಳು, ಕಂಪನಿಗಳು, ಸೆಲಬ್ರೆಟಿಗಳ ಮೇಲೆ ದಾಳಿ ಮಾಡೋದನ್ನ ನಾವು ನೋಡಿರುತ್ತೇವೆ. ಆದರೆ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಕಣ್ಣು ಬಿರಿಯಾನಿ ಹೋಟೆಲ್‌ಗಳ ಮೇಲೆ ಬಿದ್ದಿದೆ. ಸದ್ಯದ ಮಟ್ಟಿಗೆ ಬಿರಿಯಾನಿ ಹೋಟೆಲ್‌ಗಳ ಕ್ರೇಜ್‌ ಸಿಕ್ಕಾಪಟ್ಟೆ ಇದೆ. ಸೋಷಿಯಲ್ ಮೀಡಿಯಾ ಬೂಮ್ ಆದ್ಮೇಲಂತೂ, ಬಿರಿಯಾನಿ ಸೇಲ್‌ ಬೇಜಾನ್ ಆಗ್ತಿದೆ. ಹೌದು, ಹೊಸಕೋಟೆ ಅಂದಾಕ್ಷಣ ನೆನಪಾಗುವುದು ಬಿಸಿ ಬಿಸಿ ಬಿರಿಯಾನಿ. ಸೋಷಿಯಲ್‌ ಮೀಡಿಯಾ ಓಪನ್ ಮಾಡಿದ್ರೆ, ಹೊಸಕೋಟೆ ಬಿರಿಯಾನಿ ಖದರ್ ಗೊತ್ತಾಗುತ್ತೆ.

ಈ ಮೊದಲು ಪಲಾವ್‌ ಸಖತ್ ಟ್ರೆಂಡ್ ಸೃಷ್ಟಿಸಿತ್ತು. ಈಗ ಬಿರಿಯಾನಿ ಟ್ರೆಂಡ್. ಹೀಗಾಗಿಯೇ ಬಿರಿಯಾನಿ ಹೋಟೆಲ್‌ಗಳು ಲೆಕ್ಕಕ್ಕೆ ಸಿಗದಷ್ಟಿವೆ. ಪ್ರತಿ ಏರಿಯಾದಲ್ಲೂ ಸಿಕ್ಕಾಪಟ್ಟೆ ಇವೆ. ಎಷ್ಟೇ ಅಂಗಡಿಯಿದ್ದರೂ ಹೊಸಕೋಟೆ ಬಿರಿಯಾನಿಗೆ ಸಪರೇಟ್ ಫ್ಯಾನ್ಸ್ ಇದ್ದಾರೆ ಅಂದ್ರೆ ತಪ್ಪಾಗೋಲ್ಲ. ಇಷ್ಟು ದಿನ ಹೊಸಕೋಟೆ ಬಿರಿಯಾನಿ ಟೇಸ್ಟ್‌! ಜನ ಸಾಗರದ ಬಗ್ಗೆ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದ್ರೆ, ಇದು ನಿಮಗೆ ಶಾಕ್ ಆಗುವಂತಹ, ಸುದ್ದಿ. ಯಾಕಂದ್ರೆ, ಹೊಸಕೋಟೆಯ ಫೇಮಸ್‌ ಹೋಟೆಲ್‌ಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಹೋಟೆಲ್‌ ಮಾಲೀಕನ ಬಳಿ 1.47 ಕೋಟಿ ನಗದು ಪತ್ತೆ!

ನಿನ್ನೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಕ್ಷಯ್‌ ಧಮ್ ಬಿರಿಯಾನಿ, ರಾಜ್ ಧಮ್ ಬಿರಿಯಾನಿ, ಮಣಿ ಧಮ್‌ ಬಿರಿಯಾನಿ, ಆನಂದ್ ಧಮ್‌ ಬಿರಿಯಾನಿ ಮೇಲೆ ದಾಳಿ ಮಾಡಿದ್ದಾರೆ. ವಂಚನೆ ಆರೋಪದ ಮೇಲೆ ದಾಳಿ ನಡೆದಿದ್ದು, ರಾಜ್‌ ಧಮ್ ಬಿರಿಯಾನಿ ಮಾಲೀಕರಾದ ಶ್ರೀನಿವಾಸ್ ಮತ್ತು ರಾಜ್ ಅವರ ಮನೆಯಲ್ಲಿ 1 ಕೋಟಿ 40 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ ಎಂದು ಮಾಹಿತಿ ಸಿಕ್ಕಿದೆ. ಸರಿಯಾದ ಲೆಕ್ಕಪತ್ರ ನಿರ್ವಹಿಸಿದೇ, ತೆರಿಗೆ ವಂಚನೆ ಮಾಡ್ತಿದ್ದರು ಅನ್ನೋ ಆರೋಪ ಕೇಳಿಬಂದಿದೆ. ಸದ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ತನಿಖೆ ಮಾಡ್ತಿದ್ದಾರೆ. ಈ ಪ್ರಕರಣದ ಬಗ್ಗೆ ಇಲಾಖೆಯಿಂದ ಸದ್ಯದಲ್ಲಿಯೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More