Advertisment

ರಾಮನಗರದಲ್ಲಿ ಶಿಕ್ಷಕರ ಮೃಗೀಯ ವರ್ತನೆ..! ವಿದ್ಯಾರ್ಥಿನಿಯ ಜಡೆಗೆ ಕತ್ತರಿ ಹಾಕಿ ವಿಕೃತಿ

author-image
AS Harshith
Updated On
ರಾಮನಗರದಲ್ಲಿ ಶಿಕ್ಷಕರ ಮೃಗೀಯ ವರ್ತನೆ..! ವಿದ್ಯಾರ್ಥಿನಿಯ ಜಡೆಗೆ ಕತ್ತರಿ ಹಾಕಿ ವಿಕೃತಿ
Advertisment
  • ಶಿಕ್ಷಕರಿಂದ ವಿದ್ಯಾರ್ಥಿನಿಯರ ಮೇಲೆ ಮೃಗೀಯ ವರ್ತನೆ
  • ಶಾಲೆಗೆ ಬರುವಾಗ ಎರಡು ಜಡೆ ಹಾಕದಿದ್ದಕ್ಕೆ ಕೂದಲಿಗೆ ಕತ್ತರಿ
  • ದೈಹಿಕ ಶಿಕ್ಷಕ, ಸಹಶಿಕ್ಷಕಿಯಿಂದ ಅಮಾನುಷ ಕೃತ್ಯ ಬೆಳಕಿಗೆ

ರಾಮನಗರ: ಶಿಕ್ಷಕರೇ ವಿದ್ಯಾರ್ಥಿನಿಯರ ಜಡೆ ಕತ್ತರಿಸಿದ ಘಟನೆ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಸರ್ಕಾರಿ ಫ್ರೌಡಶಾಲೆಯಲ್ಲಿ ನಡೆದಿದೆ. ಎರಡು ಜಡೆ ಹಾಕಿಲ್ಲ ಎಂದು ಕೂದಲಿಗೆ ಕತ್ತರಿ ಹಾಕಲಾಗಿದೆ.

Advertisment

ಶಾಲೆಗೆ ಬರುವಾಗ ಎರಡು ಜಡೆ ಹಾಕಿಲ್ಲ ಎಂದು ಮೂವರು ವಿದ್ಯಾರ್ಥಿನಿಯರ ಕೂದಲಿಗೆ ಕತ್ತರಿ ಹಾಕಲಾಗಿದೆ. 8ನೇ ತರಗತಿಯ ಮೂವರು ವಿದ್ಯಾರ್ಥಿಗಳ ಕೂದಲನ್ನು ಶಿಕ್ಷಕರು ಕತ್ತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ.. ​ಸವಾರ ಸ್ಥಳದಲ್ಲೇ ಸಾವು

ಶಾಲೆಯ ದೈಹಿಕ ಶಿಕ್ಷಕ ಶಿವಕುಮಾರ್, ಸಹ ಶಿಕ್ಷಕಿ ಪವಿತ್ರ ಅಮಾನುಷ ಕೃತ್ಯವೆಸಗಿದ್ದಾರೆ. ಶಿಕ್ಷಕರ ಕೃತ್ಯಕ್ಕೆ ಪೋಷಕರು ತೀವ್ರ ಆಕ್ರೋಶ ಹೊರಹಾಕಿದ್ದಲ್ಲದೆ, ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಅಕ್ಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment